Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಯಶವಂತ ತಿಪ್ಪಾಜಿರಾವ್‌ ಹಿಬಾರೆ

ಬಡತನದ ಬೇಗೆಯಲ್ಲಿ ನೊಂದು ಬೆಂದರೂ ಛಾಯಾಚಿತ್ರ ಲೋಕದಲ್ಲಿ ಅರಳಿದ ಪ್ರತಿಭೆ ಯಶವಂತ ತಿಪ್ಪಾಜಿರಾವ್‌
ಹಿಬಾರೆ ಅವರು.
ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿ ಜನನ. ಕುಂಚಕಲೆ ಮತ್ತು ಛಾಯಾಚಿತ್ರ ಕಲಾ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಹಿಬಾರೆ ಅಪ್ಪಟ ಗ್ರಾಮೀಣ ಪ್ರತಿಭೆ.
೬೭ ವರ್ಷದ ಹಿಬಾರೆಯವರಿಗೆ ಕುಂಚಕಲೆ ದೈವದತ್ತವಾಗಿ ಒಲಿದು ಬಂದ ಕಲೆ. ಎಳೆವೆಯಿಂದಲೇ ಅದರ ಕಡೆ ಒಲವು ಹೆಚ್ಚು. ಬಾಲ್ಯದಲ್ಲಿ ಅವರ ಆಸೆ-ಆಸಕ್ತಿಗಳನ್ನು ಗಮನಿಸಿ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸಿದವರು ಅವರ ತಂದೆ. ಕನಸುಗಳಿಗೆ ಕುಂಚದಿಂದ ಬಣ್ಣ ತುಂಬಿ ಉತ್ತಮ ಕಲಾಕೃತಿಗಳನ್ನು ರಚಿಸಿ ಹಿರಿಯರಿಂದ ಭೇಷ್ ಎನಿಸಿಕೊಂಡವರು. ತಮ್ಮ ಒಂಬತ್ತನೇ ವಯಸ್ಸಿಗೇ ಉತ್ತಮ ಕಲಾವಿದರಾಗಿ ರೂಪುಗೊಂಡರು.
ಕಳೆದ ೪೨ ವರ್ಷದಿಂದ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಯಶವಂತ ತಿಪ್ಪಾಜಿರಾವ್‌ ಹಿಬಾರೆ ಎಲೆಮರೆಯ ಕಾಯಿಯಂತೆ ನೇಪಥ್ಯದಲ್ಲುಳಿದ ಅಪ್ರತಿಮ ಕಲಾ ಪ್ರತಿಭೆ.