Categories
ಜಾನಪದ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರತನ್ ಸಿಂಗ್ ಭೀಮಸಿಂಗ್ ನಾಯಕ

ವಿಜಯಪುರ ಜಿಲ್ಲೆಯ ಶ್ರೀ. ಆರ್. ಬಿ. ನಾಯಕ್ ಬಂಜಾರ ಜಾನಪದ ಗಾಯಕರು. ತಮ್ಮ ಬಂಜಾರ ಜಾನಪದ ಗೀತ ಗಾಯನ ಕಲೆಯಿಂದ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಬಂಜಾರ ಜಾನಪದ ಗೀತೆಗಳ ರಚನೆ ಹಾಗೂ ಗಾಯನ ಇವರ ನಿತ್ಯಕಾಯಕ.
ಶ್ರೀ. ಆರ್. ಬಿ. ನಾಯಕ್ ಅವರ ಪ್ರತಿಭೆಗೆ ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳು ದೊರೆತಿವೆ. ಕಳೆದ ನಾಲ್ಕು ದಶಕಗಳಿಂದ ಜಾನಪದ ಗೀತ ಗಾಯನ ನಿರಂತರವಾಗಿ ನಡೆದಿದೆ. ಆಲ್ ಇಂಡಿಯ ರೇಡಿಯೋ ಇವರನ್ನು ಗುರುತಿಸಿ ಲಂಬಾಣಿ ಜಾನಪದ ಗೀತೆಗಳನ್ನು ಹಾಡಲು ಅವಕಾಶ ಮಾಡಿಕೊಟ್ಟಿದೆ.
ಶ್ರೀ.ಆರ್. ಬಿ. ನಾಯಕ್ ಅವರು ಲಂಬಾಣಿ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ೧೯೯೯ ನೇ ಸಾಲಿನ ಜಾನಪದ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬಂಜಾರ ಕಲಾರತ್ನ ‘ಸಂತ ಶ್ರೀ ಸೇವಾಲಾಲ್ ಪ್ರಶಸ್ತಿ ೨೦೧೦ ಪ್ರಶಸ್ತಿಗಳು ಲಭ್ಯವಾಗಿವೆ.