Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರೋಹನ್ ಬೋಪಣ್ಣ

ಭಾರತದ ಅಗ್ರಗಣ್ಯ ಟೆನ್ನಿಸ್ ಆಟಗಾರರಲ್ಲಿ ಶ್ರೀ ರೋಹನ್ ಬೋಪಣ್ಣ ಒಬ್ಬರು. ಮೊಟ್ಟ ಮೊದಲ ಬಾರಿಗೆ ೨೦೦೨ ರಲ್ಲಿ ಇವರು ಭಾರತವನ್ನು ಪ್ರತಿನಿಧಿಸಿ ವಿಜಯ ಪತಾಕೆಯನ್ನು ಹಾರಿಸುತ್ತ ಬಂದಿದ್ದಾರೆ. ೨೦೧೮ ರಲ್ಲಿ ಇವರಿಗೆ ಕ್ರೀಡಾಪಟುಗಳಿಗೆ ಕೊಡಮಾಡುವ ‘ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ಪುರುಷರ ಡಬಲ್ಸ್ ಪಂದ್ಯದಲ್ಲಿ ಕತಾರ್ ಮತ್ತು ಕೆನಡಾ ಓಪನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಷ್ಯನ್ ಗೇಮ್ಸ್ ೨೦೧೮ ರಲ್ಲಿ ಚಿನ್ನದಪದಕ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ೨೦೦೫ ರಲ್ಲಿ ‘ಏಕಲವ್ಯ ಪ್ರಶಸ್ತಿ’ ದೊರೆತಿದೆ.

ತಾವೇ ಒಬ್ಬ ಪ್ರಭಾವಿ ಟೆನ್ನಿಸ್ ಕ್ರೀಡಾಪಟುವಾಗಿದ್ದು ಮುಂದಿನ ಪೀಳಿಗೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತಿದ್ದಾರೆ. ಟೆನ್ನಿಸ್ ತರಬೇತಿ ಕೇಂದ್ರಗಳನ್ನು ತೆರೆದು ಆಟಗಾರರು ಭಾರತವನ್ನು ಪ್ರತಿನಿಧಿಸುವಷ್ಟು ಸಾಮರ್ಥ್ಯ ಪಡೆಯುವತ್ತ ಶ್ರಮಿಸುತ್ತಿದ್ದಾರೆ.