Categories
ಅಂಕಣಗಳು ಕನ್ನಡ ಕಲೆ ರಂಗಭೂಮಿ ಸಂಗೀತ

ರಂಗಭೂಮಿಯ ನಡಿಗೆ

ವೃತ್ತಿರಂಗಭೂಮಿಯು ಪ್ರಚಲಿತವಾಗಿ ಎಲ್ಲ ಕಡೆ ಚಾಚಿಕೊಂಡು ಕೆಲಸ ನಿರ್ವಹಿಸುತ್ತಾ ಇದ್ದ ಕಾಲದಲ್ಲೇ ಇದನ್ನು ನೋಡುತ್ತಾ ಬಂದ ಒಂದು ಸಮೂಹ ಇದರ ಬಗ್ಗೆ ಯೋಚನೆ ಮಾಡುವ, ಈ ರಂಗಭೂಮಿಯ ಪ್ರಯೋಗಗಳ ವಸ್ತುವಿನ ಕುರಿತಾಗಿ ಅವುಗಳ ಅಭಿವ್ಯಕ್ತಿಯ ಕುರಿತಾಗಿ ಚರ್ಚಿಸುವ ಸಲುವಾಗಿ ಒಂದು ಕಡೆ ಕಲೆತವು. ಈ ಬಗೆಯ ರಂಗಭೂಮಿಯ ಕುರಿತಾಗಿ ಆ ಮನಸ್ಸುಗಳಲ್ಲಿ ಒಂದು ಸಣ್ಣ ಅತೃಪ್ತಿ ಕೆಲಸ ಮಾಡಲು ಪ್ರಾರಂಭಿಸಿತ್ತು. ಅವುಗಳ ಫಲವಾಗಿ ಮತ್ತೊಂದು ಬಗೆಯ ರಂಗಭೂಮಿ ಜೀವ ತಳೆಯಲು ಸಿದ್ಧವಾಯಿತು. ಅಂದಿನ ವೃತ್ತಿ ರಂಗಭೂಮಿ ಪ್ರದರ್ಶಿಸುತ್ತಿದ್ದ ನಾಟಕಗಳ ವಸ್ತು ಆಗಿರಬಹುದು, ಅದರ ರೀತಿಯಾಗಿರಬಹುದು, ಅವು ಸಮಕಾಲೀನ ಸ್ಪರ್ಶವನ್ನು ಪಡೆದುಕೊಳ್ಳದೇ ಹೋಗಿದ್ದ ಕಾರಣಕ್ಕಾಗಿ, ಅಂದಿನ ಜನಜೀವನದ ಆಶೋತ್ತರಗಳನ್ನು ಬಿಂಬಿಸೋಕೆ ಸಾಧ್ಯವಾಗುವಂತಹ ರಂಗಭೂಮಿಯ ಹುಡುಕಾಟದಲ್ಲಿ ಫಲಿಸಿದ್ದೇ ಆಧುನಿಕ ರಂಗಭೂಮಿ.

ಇಲ್ಲಿ ಇವರು ಜೀವನೋಪಾಯಕ್ಕಾಗಿ ರಂಗಭೂಮಿಯನ್ನು ಆಶ್ರಯಿಸಿಕೊಳ್ಳಲಿಲ್ಲ. ಕೇವಲ ಸಂತೋಷಕ್ಕೆ, ಅವರು ತಮ್ಮ ಭೌದ್ಧಿಕ ಚಿಂತನೆಗೆ, ಹೊಸ ಹುಡುಕಾಟಕ್ಕೆ ಪ್ರಚಲಿತವಾಗಿದ್ದಂತಹ ಪೌರಾಣಿಕ ನಾಟಕಗಳ ಮರು ಓದಿಗೆ, ಆಧುನಿಕೆ ಓದಿಗೆ, ಅದರ ಕ್ರಿಯಾಶೀಲ ಚಿಂತನೆಗೆ ಮತ್ತು ಆಧುನಿಕ ಅಭಿವ್ಯಕ್ತಿಗೆ ಹಾತೊರೆದಿದ್ದರು. ಅಂತಹ ಸಂದರ್ಭದಲ್ಲಿ ಹುಟ್ಟಿದ್ದು ಹವ್ಯಾಸಿ ರಂಗಭೂಮಿ. ಆದರೆ ಹವ್ಯಾಸಿ ರಂಗಭೂಮಿಯ ಪ್ರೇಕ್ಷಕರು ಕೇವಲ ಪಟ್ಟಣಿಗರು, ವಿದ್ಯಾವಂತರು, ನಗರವಾಸಿಗಳು, ಮಧ್ಯಮ ವರ್ಗದವರು ಮಾತ್ರವೇ ಆಗಿದ್ದರು. ಈ ರಂಗಭೂಮಿಯ ಕೇಂದ್ರ ಕಾಲೇಜುಗಳಾಗಿದ್ದವು. ಹಾಗಾಗಿ ಕಾಲೇಜು ಅಧ್ಯಾಪಕರು, ಸಂಸ್ಥಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು, ಸರಕಾರಿ ಕಛೇರಿಗಳ ನೌಕರರು, ಬ್ಯಾಂಕ್ ಉದ್ಯೋಗಿಗಳು. ಇವರೆಲ್ಲರೂ ಸೇರಿಕೊಂಡು ರಂಗಚಟುವಟಿಕೆಗಳನ್ನು ನಗರಗಳಲ್ಲಿ ಸಂಜೆಯ ಹೊತ್ತು ಹಮ್ಮಿಕೊಳ್ಳೋಕೆ ಪ್ರಾರಂಭಿಸಿದರು. ಸಾಮಾಜಿಕವಾದ ಸಮಕಾಲೀನ ವಸ್ತುಗಳಿಗೆ ಆದ್ಯತೆ ಇರುತ್ತಿತ್ತು. ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ ವಸ್ತುಗಳೂ ಕೂಡ ಸಮಕಾಲೀನವಾಗಿ ಪ್ರಸಕ್ತ ಆಗುವ ಹಾಗೆ ರಚಿತಗೊಂಡವು. ಈ ಸಂದರ್ಭದಲ್ಲಿ ನಾಟಕಕಾರ ಕೇಂದ್ರವ್ಯಕ್ತಿಯಾದ. ಆತ ಬರೆದ ಹಾಗೆ ನಾಟಕಗಳನ್ನು ಆಡಿಸಬೇಕಾಗುತ್ತಿತ್ತು. ವೃತ್ತಿರಂಗಭೂಮಿಯ ಆಡಂಬರದ ರಂಗಸಜ್ಜಿಕೆಗೆ, ವಸ್ತ್ರಗಳ ಬದಲಾಗಿ ವಾಸ್ತವ ಮಾರ್ಗದ ರಂಗಸಜ್ಜಿಕೆ, ಪ್ರಯೋಗಗಳು ಬಳಕೆಗೆ ಬಂದವು. ಈ ಸಂದರ್ಭದಲ್ಲಿ ಇಂಥಹ ರಂಗಮಾರ್ಗಕ್ಕೆ ಕಾರಣರಾದವರು ಟಿ.ಪಿ.ಕೈಲಾಸಂ, ಶ್ರೀರಂಗರು ಮತ್ತು ಪರ್ವತವಾಣಿ.

ಬೆಂಗಳೂರಿನಲ್ಲಿ ಇಂಥಹ ಒಂದು ರಂಗಭೂಮಿಯ ಅಂಕುರಾರ್ಪಣವಾದದ್ದು 1909 ರಲ್ಲಿ. The ameatur democratic association ಸ್ಥಾಪನೆಯಾಯಿತು. ನಂತರದ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ, ಹಳೇ ಮೈಸೂರಿನ ಕಡೆಗಳಲ್ಲಿ ಇದರ ಗಾಳಿ ಬೀಸತೊಡಗಿತು. ಪಾಶ್ಚಾತ್ಯ ವಿದ್ಯಾಭ್ಯಾಸದ ಪದ್ಧತಿಯಿಂದ ಪ್ರಭಾವಿತರಾಗಿ, ಇಂಗ್ಲೆಂಡಿನಲ್ಲಿ ಉಚ್ಚ ಶಿಕ್ಷಣ ಪಡೆದು ಬಂದಂತಹ ಶ್ರೀರಂಗರು, ಟಿ.ಪಿ.ಕೈಲಾಸಂ ಅವರುಗಳು ತಾಯ್ನಾಡಿಗೆ ಮರಳಿದ ಮೇಲೆ ಆಗ ಪ್ರಚಲಿತವಾಗಿದ್ದ ರಂಗಭೂಮಿಯನ್ನು ಕಂಡು ರೋಸಿ ಹೋಗಿ, ಹೊಸ ಮಾದರಿಯ ರಂಗಭೂಮಿ ನಿರ್ಮಿಸಲು ಪ್ರಯತ್ನಿಸಿದರು. ಸಾಮಾಜಿಕ ನಾಟಕಗಳ ಕಡೆ ಎಲ್ಲರ ಗಮನ ಸೆಳೆದರು. ನಂತರ ಪರ್ವತವಾಣಿಯವರು ಸಹ ಆ ಸಾಲಿಗೇ ಸೇರ್ಪಟ್ಟರು. ವಸ್ತು, ತಂತ್ರಗಾರಿಕೆ, ಅಭಿನಯ ಶೈಲಿ ಎಲ್ಲವೂ ಬದಲಾದವು. ಪಾಶ್ಚಾತ್ಯ ನಾಟಕಗಳ ಅನುವಾದಗಳು, ರಂಗರೂಪಗಳು, ಸ್ವತಂತ್ರ ಕೃತಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದವು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಸಿ.ಕೆ.ವೆಂಕಟರಾಮಯ್ಯ, ಲಕ್ಷ್ಮಣರಾವ್ ಬೇಂದ್ರೆ, ನಾರಾಯಣ ರಾವ್ ಹುಯಿಲಗೋಳ್ ಎಲ್ಲರೂ ಈ ಕೈಂಕರ್ಯಕ್ಕೆ ಕೈ ಜೋಡಿಸಿದರು. ಆದರೆ ಎಲ್ಲವೂ ಮಾತಿಗೆ ಪ್ರಾಶಸ್ತ್ಯ ಇರುವಂತಹ ನಾಟಕಗಳಾಗಿ ಹೊರಹೊಮ್ಮಿದವು. ಮಾತಿನ ಚಮತ್ಕಾರದ ವ್ಯಾಮೋಹದಿಂದ ವಿದ್ಯಾವಂತ ಜನಗಳನ್ನು ಸೆಳೆಯುವಲ್ಲಿ ಸಮರ್ಥವಾಯಿತು. ಹಾಡು, ಕುಣಿತ, ವೈಭವಗಳೆಲ್ಲ ಮರೆಯಾದವು. ನಿರ್ದೇಶಕನ ಕೈ ಚಳಕವೆಂಬುದು ಕಾಣೆಯಾಗಿತ್ತು.

ಇದು ಹೀಗೆ ಬಹಳಷ್ಟು ವರ್ಷಗಳ ಕಾಲ ನಡೆಯಿತು. ನಂತರದ ಅವಧಿಯಲ್ಲಿ ದೇಶದಲ್ಲಿ ಒಂದು ಕ್ರಾಂತಿಕಾರಕ ಬೆಳವಣಿಗೆಯಾಯಿತು. ಕಮಲಾದೇವಿ ಚಟ್ಟೋಪಾದ್ಯಾಯ ಅವರ ಬಹುದಿನದ ಕನಸು “National school of Drama” ಸ್ಥಾಪಿತಗೊಂಡಿತು. ರಂಗಭೂಮಿಯನ್ನು ಶೈಕ್ಷಣಿಕವಾಗಿ ಕಲಿಯುವಂತಹ ಒಂದು ವ್ಯವಸ್ಥೆ ಜಾರಿಯಾಯಿತು. ಈ ಸಂಸ್ಥೆಯಲ್ಲಿ ಕರ್ನಾಟಕದಿಂದಲೂ ಬಹಳಷ್ಟು ಜನ ಅಲ್ಲಿಗೆ ತೆರಳಿ ಕಲಿತುಬಂದರು. ಅಲ್ಲಿಂದ ಕಲಿತುಬಂದವರಲ್ಲಿ ಬಿ.ವಿ.ಕಾರಂತರು ಪ್ರಾಯೋಗಿಕ ರಂಗಭೂಮಿಯ ಅಭ್ಯುದಯಕ್ಕೆ ಕಾರಣರಾದರು. ಜೊತೆಗೇ ಬಿ.ಚಂದ್ರಶೇಖರ್, ಆರ್.ನಾಗೇಶ್, ಪ್ರಸನ್ನ, ಸಿ.ಜಿ.ಕೃಷ್ಣಸ್ವಾಮಿ, ನರಸಿಂಹನ್, ಮೈಸೂರಿನ ಸಿಂಧುವಳ್ಳಿ ಅನಂತಮೂರ್ತಿ, ನ.ರತ್ನ, ವಿಶ್ವನಾಥ ಮಿರ್ಲೆ, ಹೀಗೇ ಹಲವರು ಇಂತಹ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಬಂದರು. ಹೀಗೆ ಬೆಂಗಳೂರಿನಲ್ಲಿ ಕೆಲಸ ಮಾಡಿದವರದ್ದೊಂದು ದೊಡ್ಡ ಪಟ್ಟಿಯೇ ನೀಡಬಹುದು.

ರಂಗಭೂಮಿಯ ಸುವರ್ಣಯುಗ ಎಂದೇ ಕರೆಯಲ್ಪಡುವ 1970-80 ರ ದಶಕದ ನಾಟಕಗಳಂತು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಹಾಡು, ಕುಣಿತದ ಜೊತೆ ಜೊತೆಯಲ್ಲೇ ಆಧುನಿಕ ಚಿಂತನೆಯೂ ಬೆರೆತುಕೊಂಡಿತು. ಹಲವಾರು ಜಾನಪದ ಪ್ರಕಾರಗಳನ್ನು ನಾಟಕದೊಳಗೆ ಮಿಳಿತಗೊಳ್ಳುವ ಹಾಗೆ ನಿರ್ದೇಶಕರು ಹೊಸತನವನ್ನು ತಂದರು. ರಂಗಭೂಮಿ ಎಂಬುದು ಸಂಭ್ರಮದ ಚಟುವಟಿಕೆಯಾಗಿ ಪರಿಣಮಿಸಿತು. ಇದರ ಪ್ರಭಾವ ಇಡೀ ಕರ್ನಾಟಕದಾದ್ಯಂತ ಹರಡಿತು. ಗಿರೀಶ್ ಕಾರ್ನಾಡ್, ಲಂಕೇಶ್ ಮತ್ತು ಚಂದ್ರಶೇಖರ ಕಂಬಾರರ ಭರಾಟೆ ಶುರುವಾಗಿದ್ದು ಇದೇ ಕಾಲಘಟ್ಟದಲ್ಲಿ. ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಆಯಸ್ಕಾಂತದಂತಹ ಸೆಳೆತ ಪ್ರಾರಂಭವಾಯಿತು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡ್ಯಾನ್ಸ್,ಡ್ರಾಮಾ, ಮ್ಯೂಸಿಕ್ ವಿಭಾಗ ತೆರೆಯಲ್ಪಟ್ಟಿತು. ಕಾಲೇಜು ಕಾಲೇಜುಗಳ ನಡುವೆ ನಾಟಕ ಸ್ಪರ್ಧೆಗಳು ಏರ್ಪಟ್ಟವು. ರಂಗ ಶಿಬಿರಗಳು ಹಮ್ಮಿ ಕೊಂಡವು. ರಂಗಭೂಮಿಗೆ ಒಂದಲ್ಲ ಒಂದು ರೀತಿಯಲ್ಲಿ ವೃತ್ತಿಪರತೆಯ ಸಮೀಕರಣವೊಂದು ಅಗತ್ಯ – ಎಂಬ ಸ್ಪಷ್ಟವಾದ ಅರಿವೊಂದು ಕಾಣಿಸಕೊಳ್ಳತೊಡಗಿತು.

ಇಂಥ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಬಿ.ವಿ.ಕಾರಂತರ ರಂಗಪ್ರಯೋಗಗಳು ಕನ್ನಡ ಹವ್ಯಾಸಿ ರಂಗಭೂಮಿಗೆ ಹೊಸ ದಿಕ್ಕೊಂದನ್ನು ತೆರೆಸಿದವು. ೧೯೬೭ ರಲ್ಲಿ ಶ್ರೀರಂಗರ ನೀಕೊಡೆ ನಾ ಬಿಡೆ ಪ್ರಯೋಗದಿಂದ ಆರಂಭಿಸಿದ ಕಾರಂತರು ಮುಂದಿನ ಐದಾರು ವರ್ಷಗಳಲ್ಲಿ ನಿರ್ದೇಶನ ಮತ್ತು ಅನೌಪಚಾರಿಕ ರಂಗಶಿಕ್ಷಣಗಳಿಗೆ ಸಂಬಂದಿಸಿದ ಮುಖ್ಯ ಕೆಲಸಗಳನ್ನು ಮಾಡಿದರು. ೧೯೭೨ ರಲ್ಲಿ ಅವರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರಯೋಗಿಸಿದ ಸಂಕ್ರಾಂತಿ, ಜೋಕುಮಾರಸ್ವಾಮಿ ಮತ್ತು ಈಡಿಪಸ್ ಪ್ರಯೋಗಗಳು ಒಂದು ಪ್ರಮುಖ ಮೈಲಿಗಲ್ಲೆಂದು ಪರಿಗಣಿತವಾಗಿವೆ. ಒಂದೇ ಮಾತಿನಲ್ಲಿ ಬಿ.ವಿ.ಕಾರಂತರ ರಂಗ ಆವಿಷ್ಕಾರವನ್ನು ಸಂಗ್ರಹಿಸಿ ಹೇಳುವುದಾದರೆ ಅದು ವೃತ್ತಿ ಮತ್ತು ಹವ್ಯಾಸಿ ರಂಗಮಾರ್ಗಗಳೆರಡರ ಪರಿಣಾಮಕಾರಿ ಸಮೀಕರಣ, ಅರ್ಥಾತ್, ಆದ್ಯರಂಗಾಚಾರ್ಯರು ತಾತ್ವಿಕವಾಗಿ ಏನನ್ನು ಹೇಳಿದ್ದರೋ ಅದನ್ನು ಕಾರಂತ ಪ್ರಯೋಗಗಳು ಕಲಾತ್ಮಕವಾಗಿ ಸಾಕ್ಷಾತ್ಕರಿಸಿ ತೋರಿಸಿದವು. ಮೊದಲನೆಯದಾಗಿ ಈ ಪ್ರಯೋಗಗಳಲ್ಲಿ ದೃಶ್ಯವೈಭವ ಮರಳಿ ಬಂತು.ಸಂಗೀತ ನೃತ್ಯಗಳೂ ಮತ್ತೊಮ್ಮೆ ರಂಗಕ್ಕೆ ಬಂದವು. ಕಾರಂತರದ್ದೇ ವಿಶಿಷ್ಟ ಛಾಪಿನ ಸಂಗೀತದಲ್ಲಿ ಮಾತು- ಗೀತಗಳೆರಡನ್ನೂ ಸಮರ್ಥವಾಗಿ ಮೇಳೈಸಿಕೊಂಡ ಕಂಪೆನಿ ಸಂಗೀತದ ಸೃಜನಶೀಲ ಪುನರಾವಿಷ್ಕಾರ ಸಾಧಿತವಾಯಿತು.

ಪ್ರಸನ್ನ ಅವರು ರಂಗಭೂಮಿಯನ್ನು ಚಳುವಳಿಯಾಗಿ ಮಾರ್ಪಡಿಸಿ ಸಮುದಾಯ ಸಂಸ್ಥೆ ಕಟ್ಟಿದರು. ಆ ಮೂಲಕ ಪ್ರಗತಿಪರ ಆಧುನಿಕ ಚಿಂತನೆಯೊಂದು ರಾಜ್ಯಾದ್ಯಂತ ಹರಡಿತು. ರಾಜಕೀಯ ನಾಟಕಗಳೂ ರೂಪುಗೊಂಡವು. ಬೀದಿ ನಾಟಕಗಳ ಮೂಲಕ ಆಳುವ ವರ್ಗಕ್ಕೆ ಸಡ್ಡು ಹೊಡೆದರು. ಈ ನಡುವೆ ಎ.ಎಸ್.ಮೂರ್ತಿಯವರೂ ಕೂಡ ತಮ್ಮ ಚಿತ್ರಾ ತಂಡದೊಂದಿಗೆ ಜನರಲ್ಲಿ ಜಾಗೃತಿ ಮೂಡುವಂತಹ ವಿಷಯಗಳ ಕುರಿತಾಗಿ ಬೀದಿ ನಾಟಕಗಳನ್ನು ಆಡುವುದರ ಮೂಲಕ ನಾಟಕಗಳಿಗೊಂದು ಹೊಸ ಆಯಾಮ ಕೊಡುತ್ತಿದ್ದರು.

ಭೂಪಾಲ್, ಎನ್.ಎಸ್.ಡಿ ರೆಪರ್ಟರಿ ನಾಟಕಗಳು ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದವು. ಅದರಿಂದಾಗಿ ನಗರಗಳಲ್ಲಿನ ಕಲಾವಿದರು ಭಾರತೀಯ ರಂಗಭೂಮಿಯ ಅನುಭವಗಳಿಗೆ ತೆರೆದುಕೊಂಡರು.ಅದೇ ವೇಳೆ ಹೆಗ್ಗೋಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೆ.ವಿ.ಸುಬ್ಬಣ್ಣ ಅವರಿಂದ ನೀನಾಸಂ ತಿರುಗಾಟ ದ ಕಲ್ಪನೆಯ ರೆಪರ್ಟರಿಯು ಕರ್ನಾಟಕದಾದ್ಯಂತ ತಿರುಗಾಟ ಮಾಡುತ್ತಿತ್ತು. ವರುಷಕ್ಕೊಮ್ಮೆ ಬೆಂಗಳೂರಿಗೆ ಭೇಟಿ ನೀಡಲು ಆರಂಭಿಸಿದವು.

ಆಗ ರಂಗಭೂಮಿ ಮತ್ತಷ್ಟು ಶಿಸ್ತಿಗೆ ಒಳಪಡಲು ಪ್ರಾರಂಭವಾಯಿತು. ಹೆಚ್ಚು ಹೆಚ್ಚು ಜನ ರಂಗಭೂಮಿಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ಹಾತೊರೆದರು. ಬಿ.ವಿ.ಕಾರಂತರು ಮೈಸೂರಿನಲ್ಲಿ ರಂಗಾಯಣವನ್ನು ಪ್ರಾರಂಭಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ರಂಗಭೂಮಿಗೆ ನಗರಗಳಲ್ಲಿ ಒಂದು ದೊಡ್ಡ ಸಮಸ್ಯೆ ಎದುರಾಯಿತು. ಟಿ.ವಿ. ಚಾನೆಲ್ ಗಳು ಒಂದಾದ ಮೇಲೊಂದರಂತೆ ಬರಲು ಪ್ರಾರಂಭವಾದವು. ಕಾರ್ಯಕ್ರಮಗಳು ರೂಪುಗೊಳ್ಳತೊಡಗಿದವು. ಆಗ ಕಲಾವಿದರಿಗೆ ಬೇಡಿಕೆ ಹೆಚ್ಚಾಯಿತು. ಇಂಥಹ ಬೇಡಿಕೆಗಳನ್ನು ಈಡೇರಿಸಲು ನಗರದ ಕಲಾವಿದರೆಲ್ಲ ಸಾಲುಗಟ್ಟಿ ನಿಂತರು. ಬೆಂಗಳೂರಿನವರದ್ದೇ ದೊಡ್ಡಪಾಲು. ಆ ಸಂದರ್ಭದಲ್ಲಿ ರಂಗಭೂಮಿಯ ಕಡೆಗೆ ಒಲವಿದ್ದರೂ ಕೆಲಸದ, ಕಾಸಿನ ಆಕರ್ಷಣೆಯಿಂದಾಗಿ ಟಿ.ವಿ ಕಾರ್ಯಕ್ರಮಗಳಿಗೆ ಮನಸೋತರು. ಜನರು ಅವರನ್ನು ಗುರುತಿಸಲು ಆರಂಭಿಸಿದರು. ಆಗ ನಟ ತನ್ನೊಳಗೆ ಮೆಲ್ಲಗೆ ತಾನು ಶ್ರೇಷ್ಟನೆಂಬ ನಂಬಿಕೆಯನ್ನು ನಂಬುತ್ತಾ ಸಾಗಿದ. ರಂಗಭೂಮಿಯೆಡೆಗೆ ಬರಲು ಪುರುಸೊತ್ತು ಇಲ್ಲದ ಹಾಗಾಯಿತು. ಬಂದರೂ ತಡವಾಗಿ ಬರುವುದು, ಒಂದು ದಿನ ಬಂದರೆ ಮತ್ತೊಂದು ದಿನ ಬಾರದೇ ಇರುವುದು ಪ್ರಾರಂಭವಾಯಿತು. ಹಾಗಾಗಿ ಬೆಂಗಳೂರಿನಲ್ಲಿ ರಂಗಭೂಮಿ ನರಳಲು ಪ್ರಾರಂಭಿಸಿತು. ಬರುವವರೂ ಕೂಡ ಟಿ.ವಿ.ಗಳಲ್ಲಿ ಅವಕಾಶ ಸಿಗಬಹುದೆಂಬ ಆಸೆಯಿಂದ ಬರತೊಡಗಿದರು. ಹಾಗಾಗಿ ಕಲಾವಿದರ ಆಸಕ್ತಿ ರಂಗಭೂಮಿಯ ಆಚೆಗೆ ವಿಸ್ತರಿಸಿಕೊಂಡಿತು.

ಆದರೆ ಇದೇ ಸಂದರ್ಭದಲ್ಲಿ ನೀನಾಸಂ ಸಂಸ್ಥೆಯಿಂದ ಡಿಪ್ಲಮೋ ಪಡೆದಂತಹ ಬಹಳಷ್ಟು ಜನ ವಿದ್ಯಾರ್ಥಿಗಳು ಮತ್ತು ರಂಗಭೂಮಿಯಲ್ಲಿ ಸಾತ್ವಿಕ ಆಸಕ್ತಿ ಉಳ್ಳಂತಹ ಕೆಲವು ಹವ್ಯಾಸೀ ನಿರ್ದೇಶಕರು ಕಾಲೇಜು ರಂಗಭೂಮಿಯಲ್ಲಿ ಸಕ್ರಿಯರಾದರು. ಬೆಂಗಳೂರಿನ ಕಾಲೇಜು ನಾಟಕೋತ್ಸವವಂತೂ ಡಿಪ್ಲಮೋ ಪಡೆದು ಬಂದಿರುವ ವಿದ್ಯಾರ್ಥಿಗಳಿಗೆ ಲ್ಯಾಬೋರೇಟರಿಗಳಂತಾಗಿಬಿಟ್ಟವು. ಕಾಲೇಜುಗಳೂ ಕೂಡ ಲಕ್ಷಗಟ್ಟಲೆ ಖರ್ಚು ಮಾಡಿ ಕಾಲೇಜಿನಲ್ಲಿ ನಾಟಕಗಳನ್ನು ಆಯೋಜಿಸುತ್ತಿದ್ದರು. ಇದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತಹ ಒಂದು ಬದಲಾವಣೆಯನ್ನು ತಂದಿತು. ಅಲ್ಲಿ ಅತ್ಯಂತ ಆಸಕ್ತಿದಾಯಕವಾದ ನಾಟಕಗಳು ರೂಪುಗೊಂಡವು. ಈ ಸಂಚಲನದಿಂದಾಗಿ ಮತ್ತೆ ಕನ್ನಡ ರಂಗಭೂಮಿ ಚಿಗುರಿಕೊಂಡಿತು. ಬೇರೆ ಬೇರೆ ನಗರಗಳಲ್ಲೂ ಕಾಲೇಜು ರಂಗೋತ್ಸವಗಳು ಪ್ರಾರಂಭವಾದವು.

೨೦೦೦ ದಿಂದೀಚೆಗೆ ಹೆಚ್ಚು ಕಡಿಮೆ ಎಲ್ಲ ನಗರಗಳಲ್ಲೂ ರಂಗತಂಡಗಳ ಸಂಖ್ಯೆ ಜಾಸ್ತಿಯಾಯಿತು. ನಿರ್ದೇಶಕರೆಲ್ಲ ಒಂದೊಂದು ತಂಡ ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಹಳೇ ತಂಡಗಳೆಲ್ಲ ೩೦ ವರುಷ ೪೦ ವರುಷದ ಆಚರಣೆಯಲ್ಲಿ ತೊಡಗಿದ್ದರೆ ಇನ್ನು ಹಲವು ತಂಡಗಳು ದಶಮಾನೋತ್ಸವದ ಸಂಭ್ರಮದಲ್ಲಿದ್ದಾರೆ. ಸಣ್ಣ ಪುಟ್ಟ ತಂಡಗಳು ಅಣಬೆಗಳ ಹಾಗೆ ಎಲ್ಲ ಕಡೆ ತಲೆ ಎತ್ತಿ ನಿಂತಿವೆ. ರೆಪರ್ಟರಿಗಳ ಸಮಕ್ಕೂ ನಾಟಕಗಳ ಸಂಖ್ಯೆ ಏರುತ್ತಿದೆ. ಮೈಸೂರು, ಬೆಂಗಳೂರಿನಲ್ಲಂತೂ ೨೫-೩೦ ರಂಗತಂಡಗಳಿವೆ. ಎಲ್ಲರೂ ನಾಟಕ ಮಾಡುತ್ತಿದ್ದಾರೆ. ಆದರೆ ನಾಟಕ ಕೃತಿಗಳು ಹುಟ್ಟುತ್ತಿಲ್ಲ ಎಂಬ ಕೂಗಿದೆ. ಕೆಲವರು ಕತೆ, ಕಾದಂಬರಿ, ಇವುಗಳನ್ನೇ ನಾಟಕವಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ರಂಗಮಂದಿರಗಳಿಗೆ ಕ್ಯೂ ನಿಲ್ಲಬೇಕಾಗಿದೆ. ರಂಗ ಮಂದಿರಗಳ ಕೊರತೆ ಕಾಣುತ್ತಿದೆ. ಕಲಾಕ್ಷೇತ್ರ ತುಂಬುವಷ್ಟು ಜನರನ್ನು ಸೇರಿಸುವುದು ಕಷ್ಟದ ಕೆಲಸವಾಗ್ತಿದೆ. ಹಾಗಾಗಿ ಬಡಾವಣಾ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನಸಂದಣಿ, ಟ್ರಾಫಿಕ್ ಜಾಮ್ ಗಳ ಮದ್ಯೆ, ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದೇ ಕಷ್ಟಕರವಾಗಿದೆ. ಸಿನಿಮಾ ಮಂದಿರಗಳು ಖಾಲಿ ಹೊಡೆಯಬಹುದು, ಆದರೆ ಬೆಂಗಳೂರಿನಲ್ಲೀಗ ಶನಿವಾರ, ಭಾನುವಾರಗಳಂತೂ ನಾಟಕಗಳಿಗೆ ಜನಕ್ಕೆ ಬರವಿಲ್ಲ. ಹವ್ಯಾಸಿ ರಂಗಭೂಮಿ ಎಲ್ಲ ಸಂಕಷ್ಟಗಳ ಮಧ್ಯೆಯೂ ಇಂದು ಜೀವಂತವಾಗಿರುವುದಕ್ಕೆ ಇದಲ್ಲದೇ ಬೇರೇನು ಸಾಕ್ಷಿ?

(ಲೇಖಕರು ನಾಟಕ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ರಂಗಕರ್ಮಿಗಳು)

Categories
ಕಲೆ ಕಲೆ ಮತ್ತು ಮನರಂಜನೆ ಜನಪದ ಮತ್ತು ಪ್ರದರ್ಶನ ಕಲೆ ವಿಶ್ಲೇಷಣೆ ಮತ್ತು ಸಂಶೋಧನೆ ಶಿಕ್ಷಣ

ರಂಗ ಪರದೆಗಳು

ಕೃತಿ:ರಂಗ ಪರದೆಗಳು
ಲೇಖಕರು:ಶ್ರೀ ಜಿ.ಎಸ್. ಉಜನಪ್ಪ
ಕೃತಿಯನ್ನು ಓದಿ

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಲೀಲಾ ರಾಮನಾಥನ್

ಕೃತಿ:ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ), ಕನ್ನಡ, ಕಲೆ, ನೃತ್ಯ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಡಾ. ಉಷಾಕಿರಣ್
ಕೃತಿಯನ್ನು ಓದಿ

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಲಲಿತಾ ಶ್ರೀನಿವಾಸನ್

ಕರ್ನಾಟಕದ ನೃತ್ಯ ರಂಗವನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಹಿರಿಮೆ ಲಲಿತಾ ಶ್ರೀನಿವಾಸನ್ ಅವರದು. ಸ್ವತಃ ನರ್ತಕಿಯಾಗಿ, ನೃತ್ಯ ಸಂಯೋಜಕಿಯಾಗಿ, ನೃತ್ಯ ಶಿಕ್ಷಕಿಯಾಗಿ ನಾಡಿನ ನೃತ್ಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿಕೊಂಡಿರುವ ತನ್ನ ಪ್ರಾರಂಭಿಕ ನೃತ್ಯ ಶಿಕ್ಷಣವನ್ನು ಗುರು ಹೆಚ್. ಆರ್.ಕೇಶವಮೂರ್ತಿಯವರಿಂದ ಪಡೆದರು. ನಂತರ ಅಭಿನಯ ವಿಶಾರದೆ ಡಾ|| ಕೆ. ವೆಂಕಟಲಕ್ಷ್ಮಮ್ಮ. ಮೂಗೂರು ಜೇಜಮ್ಮ, ಗುರು ನರ್ಮದಾ ಮುಂತಾದವರಿಂದ ಹೆಚ್ಚಿನ ಶಿಕ್ಷಣ ಪಡೆದು ನೃತ್ಯದ ವಿದ್ಯುತ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದ ಈ ಕಲಾವಿದೆ ೧೯೬೦ರಲ್ಲಿ ರಂಗ ಪ್ರವೇಶ ಮಾಡಿದರು. ಅಲ್ಲಿಂದ ಮುಂದೆ ಭಾರತದ ಬಹುತೇಕ ಎಲ್ಲ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಲಿತ ಶ್ರೀನಿವಾಸನ್ ಅವರ ನೃತ್ಯ ಶಾಲೆ. “ನೂಪುರ” ಅನೇಕ ಒಳ್ಳೆಯ ನೃತ್ಯ ಕಲಾವಿದರನ್ನು ತಯಾರು ಮಾಡಿದೆ. “ನೂಪುರ” ದ ವಾರ್ಷಿಕ “ನಿತ್ಯ ನೃತ್ಯ” ಮಹೋತ್ಸವ ನಾಡಿನ ನೃತ್ಯ ರಂಗದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. “ಶೃಂಗಾರ ನಾಯಿಕಾ”, “ಶೃಂಗಾರನಾಯಿಕಾ”, “ಕೃಷ್ಣ ಪಾರಿಜಾತ”, “ಕೌಶಿಕ ಸುಕೃತಂ”, “ಬೀಬಿ ನಾಚಿಯಾರ್”, “ನೌಕಾ ಚರಿತ್ರೆ” ಲಾಸ್ಯೋತ್ಸವ ಮುಂತಾದ ಅನೇಕ ನೃತ್ಯ ರೂಪಕಗಳು ಈ ಕಲಾವಿದೆಯ ಮಹತ್ವದ ಕೊಡುಗೆ. ಹಾಗೆಯೇ ’ಸುಳಾದಿ ನೃತ್ಯ’ಗಳನ್ನು ಪುನರುತ್ಥಾನ ಮಾಡಿದ ಹಿರಿಮೆ ಇವರದು. ಅಮೇರಿಕೆಯಲ್ಲಿ ನೃತ್ಯ ಕಲೆಯ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿದ ಕೀರ್ತಿ ಇವರದು.

ಬಹುಮುಖ ಪ್ರತಿಭೆಯ ಈ ನೃತ್ಯ ಕಲಾವಿದೆಗೆ ಕೇಂದ್ರ ಸರ್ಕಾರದ ಮಾವನ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಫೆಲೋಶಿಪ್ ದೊರೆತಿವೆ. ಲಲಿತಾ ಅವರು ಕರ್ನಾಟಕ ನೃತ್ಯ ಶಿಲ್ಪಗಳು ಹಾಗೂ ಮೈಸೂರು ಅರಮನೆಯಲ್ಲಿ ನೃತ್ಯದ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಪದವಿ ಹಾಗೂ ಸಂಸ್ಕೃತದಲ್ಲಿ “ಕೋವಿದ” ಪದವಿ ಇವರಿಗೆ ಲಭ್ಯವಾಗಿವೆ.

ರಾಷ್ಟ್ರಪತಿಗಳಿಂದ “ಶಿರೋಮಣಿ ಪ್ರಶಸ್ತಿ” ಹಾಗೂ ಮಾನವ ಸಂಪನ್ಮೂಲ ಮಂತ್ರಿಗಳಿಂದ “ಪ್ರಿಯದರ್ಶಿನಿ” ಅಲ್ಲದೇ ಲಲಿತಾರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿಯನ್ನು ’ಕರ್ನಾಟಕ ಕಲಾ ತಿಲಕ’ ಬಿರುದಿನೊಂದಿಗೆ ಲಲಿತಾ ಶ್ರೀನಿವಾಸನ್ ಅವರಿಗೆ ನೀಡಿ ಗೌರವಿಸಿದೆ.

 

 

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಮೋಹನಕುಮಾರ್ ಉಳ್ಳಾಲ

 

 

 

 

 

 

ಮಂಗಳೂರಿನ ಕೋಟೆಕಾರ್‌ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ. “ನಾಟ್ಯ ನಿಕೇತನ”ದ ಭೋದಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಪ್ರಸಾರ -ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದಲ್ಲೂ ವಿದೇಶಗಳಲ್ಲೂ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ತಮ್ಮ ಪಾಂಡಿತ್ಯವನ್ನು ಬಳಸಿದ್ದಾರೆ. ಕಾಮದಹನ, ಶ್ರೀ ಕೃಷ್ಣ ಪಾರಿಜಾತ, ಪರಶುರಾಮ, ಶ್ರೀ ಕೃಷ್ಣಲೀಲೆ, ಪಳನಿ ಮಹಾತ್ಮೆ, ದಶಾವತಾರ ಮುಂತಾದ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತುಳುವಿನಲ್ಲೂ ನೃತ್ಯ ರೂಪಕವನ್ನು ಸಂಯೋಜಿಸಿರುವುದೊಂದು ವಿಶೇಷ. ಕೆಲ ಸಾಕ್ಷ್ಯಚಿತ್ರಗಳಿಗೂ ನಾಟ್ಯ ಸಂಯೋಜನೆ ಮಾಡಿರುವ ಶ್ರೀಯುತರಿಗೆ ಈ ಹಿಂದೆ ಅಕಾಡೆಮಿಯ ಪುರಸ್ಕಾರವೂ, ತಮ್ಮ ಹುಟ್ಟೂರಿನಲ್ಲಿ “ನಾಟ್ಯ ಮೋಹನ” ಎಂಬ ಅಭಿನಂದನಾ ಗ್ರಂಥವೂ ಸಮರ್ಪಣೆಯಾಗಿದೆ. ಈ ನಾಟ್ಯಾಚಾರ್ಯರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೧-೯೨ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ವಸುಂಧರ ದೊರೆಸ್ವಾಮಿ

ಶ್ರೀಮತಿ ವಸುಂಧರ ದೊರೆಸ್ವಾಮಿಯವರು ದಿವಂಗತ ಕೆ. ರಾಜರತ್ನಂ ಪಿಳ್ಳೆಯವರಲ್ಲಿ ಶಿಕ್ಷಣ ಪಡೆದು, ವಿದ್ವತ್‌ನಲ್ಲಿ ಪ್ರಥಮ ಶ್ರೇಣಿ  ಪಡೆದಿರುವರಲ್ಲದೆ, ಪಂಡನಲ್ಲೂರು ಶೈಲಿಯ ಇಂದಿನ ಪ್ರಮುಖ ನರ್ತಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯ, ರಾಷ್ಟ್ರದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ನರ್ತಿಸಿರುವ ಶ್ರೀಮತಿಯವರು ಸಿಂಗಾಪುರ್‌ನಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದ ರಾಷ್ಟ್ರೀಯ ಜಾಲದಲ್ಲೂ ಇವರ ನೃತ್ಯ ಬಿತ್ತರಗೊಂಡಿದೆ. “ಯೋಗ ಮತ್ತು ಭರತನಾಟ್ಯ” ಕುರಿತು ಕೌಲನಿಕ ಅಧ್ಯಯನ ಮಾಡಿರುವ ಈಕೆ ಹಲವಾರು ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಮೈಸೂರಿನ “ವಸುಂಧರಾ ಫರ್‌ಫಾರ್ಮಿಂಗ್ ಆಟ್ಸ್‌! ಸೆಂಟರ್” ಮೂಲಕ ಕಿರಿಯರಿಗೆ ನೃತ್ಯ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಎರಡು ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಆಗಿದ್ದ ವಸುಂಧರಾ ಅವರಿಗೆ ಸುರ ಸಿಂಗಾರ ಸಂಸದ್‌ನ ’ಶಿಂಗಾರ ಮಣಿ’ ಬಿರುದೂ ಸಂದಿದೆ. ಕ್ರಿಯಾಶೀಲ ನರ್ತಕಿ ಶ್ರೀಮತಿ ವಸುಂಧರ ದೊರೆಸ್ವಾಮಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ರ ಪ್ರಶಸ್ತಿಯನ್ನು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ನೀಡಿ ಗೌರವಿಸಿದೆ.

 

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ರಾಧಾ ಶ್ರೀಧರ್

ತನ್ನ ರಜತ ಮಹೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಬೆಂಗಳೂರಿನ ವೆಂಕಟೇಶ ನಾಟ್ಯ ಮಂದಿರದ ನಿರ್ದೇಶಕಿ ರಾಧಾ ಶ್ರೀಧರ್ ನಾಡಿನ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಬಿ.ಎ., ಬಿ.ಎಡ್ ಪದವೀಧರೆಯಾದ ಇವರು ತಮ್ಮ ಭರತನಾಟ್ಯ ಶಿಕ್ಷಣವನ್ನು ಹೆಚ್. ಆರ್. ಕೇಶವಮೂರ್ತಿಯವರಲ್ಲಿ ಪ್ರಾರಂಭಿಸಿ, ಪ್ರೊ. ಕೃಷ್ಣರಾವ್-ಚಂದ್ರಭಾಗಾದೇವಿ, ಮುತ್ತಯ್ಯ ಪಿಳ್ಳೆ ಮತ್ತು ಡಾ. ಕೆ. ವೆಂಕಟಲಕ್ಷ್ಮಮ್ಮನವರುಗಳಲ್ಲಿ ಮುಂದುವರಿಸಿ, ನೃತ್ಯ ಕಲೆಯ ವಿವಿಧ ಅಂಗಗಳಲ್ಲಿ ಪರಿಣತಿ ಸಂಪಾದಿಸಿಕೊಂಡರು.

ನೃತ್ಯ ಪ್ರದರ್ಶನಕ್ಕಿಂತ ನೃತ್ಯ ಶಿಕ್ಷಣಕ್ಕೇ ತಮ್ಮನ್ನು ತೊಡಗಿಸಿಕೊಂಡ ರಾಧಾ ೧೯೬೯ ರ ಸುಮಾರಿನಲ್ಲಿ ತಮ್ಮ ನೃತ್ಯ ಶಾಲೆಯನ್ನು ಪ್ರಾರಂಭಿಸಿ, ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರುಗಳಲ್ಲಿ ಅವರ ಪುತ್ರಿ ಇಂದ್ರಾಣಿ ಪಾರ್ಥಸಾರಥಿ, ಪೂರ್ಣಿಮಾ ಅಶೋಕ್, ರಾಮು, ರೂಪಾ ಶಾಂಸುಂದರ್, ಸವಿತಾ ಶೇಖರ್‌ರಂಥವರು, ತಮಗೆ ತಮ್ಮ ಗುರುಗಳಿಗೆ ಒಳ್ಳೆಯ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಧಾ ವಿಶ್ವವಿದ್ಯಾಲಯ ಮಟ್ಟದ ಹಾಗೂ ವಿದ್ಯಾ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಯ ಮುಖಾಂತರ ಇವರು ನಡೆಸಿರುವ ನೃತ್ಯ ಕಾರ್ಯಗಾರಗಳು ಉಪಯುಕ್ತವಾಗಿ ಪರಿಣಮಿಸಿವೆ. ರಾಧಾ ನೃತ್ಯ ಸಂಯೋಜನೆಯಲ್ಲಿ ಪಳಗಿದ ಕೈ, ಹತ್ತಕ್ಕೂ ಮೀರಿ ನಿರ್ಮಾಣಗೊಂಡಿರುವ ಇವರ ನೃತ್ಯ-ನಾಟಕಗಳಲ್ಲಿ ಹಲವು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ “ಗೀತ ಗೋವಿಂದ”, “ಕೋಡೂರು ಕೊಡಗೂಸು”, “ಶ್ರೀನಿವಾಸ ಕಲ್ಯಾಣ” ಹೆಚ್ಚು ಜನಪ್ರಿಯವಾದುವುಗಳು. ರಾಧಾರಿಗೆ ಸನ್ಮಾನಗಳೂ ಕಡಿಮೆ ಇಲ್ಲ. ಅವುಗಳಲ್ಲಿ ಗಾಯನ ಸಮಾಜದ. ವಿಶ್ವ ಹಿಂದೂ ಪರಿಷತ್ತಿನ ಪ್ರಶಸ್ತಿಗಳು, ಮೀನಾಕ್ಷಿ ಸುಂದರಂ ಸಾಂಸ್ಕೃತಿಕ ಕೇಂದ್ರದ, ಶೇಷಾದ್ರಿಪುರಂ ಸ್ತ್ರೀ ಸಮಾಜದ, “ಮಹಾ ಮಾಯ” ದ ಸನ್ಮಾನಗಳು ಸೇರಿದೆ. ಇವರಿಗೆ ನಮ್ಮ ಅಕಾಡೆಮಿ ತನ್ನ ೧೯೯೨-೯೩ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.

Categories
ಕನ್ನಡ ಕರ್ನಾಟಕ ಸಂಗೀತ ಕಲೆ ವ್ಯಕ್ತಿ ಪರಿಚಯ ಸಂಗೀತ

ವ್ಯಕ್ತಿ ಪರಿಚಯ – ಇ.ಪಿ. ಅಲಮೇಲು

೬-೪-೧೯೩೬ ರಂದು ಮದ್ರಾಸಿನಲ್ಲಿ ಜನಿಸಿದ ಅಲಮೇಲು ಅವರು ಬೆಂಗಳೂರಿನ ‘ಗಾನ ಮಂದಿರಂ’ ಸಂಗೀತಾಲಯದಲ್ಲಿ ಜಿ. ಚೆನ್ನಮ್ಮನವರಿಂದಲೂ ಮುಂದೆ ಆರ್.ಕೆ. ಶ್ರೀನಿವಾಸಮೂರ್ತಿಯವರಲ್ಲೂ ವೀಣಾ ವಾದನವನ್ನು ಅಭ್ಯಾಸ ಮಾಡಿದರು. ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು. ಗಾನ ಮಂದಿರಂನಲ್ಲಿ ಉಪಾಧ್ಯಾಯರಾಗಿ, ಪ್ರಾಂಶುಪಾಲರಾಗಿ ಅನೇಕಾನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ವೀಣಾ ವಾದನ ಪ್ರಸಾರವಾಗುತ್ತಿರುತ್ತದೆ. ‘ಸಂಸ್ಕೃತ ಸೌರಭ’ಕ್ಕಾಗಿ ಕೆಲವು ರೂಪಕಗಳನ್ನೂ ನೀಡಿದ್ದಾರೆ.

ರಮಣಾಂಜಲಿ ತಂಡದೊಡನೆ ಅಮೆರಿಕಾ, ಇಂಗ್ಲೆಂಡ್‌, ಸಿಂಗಾಪುರ್, ಯೂರೋಪ್‌, ಫಿಲಿಫೈನ್ಸ್‌, ಮಲೇಷಿಯಾ, ಹಾಂಗ್‌ಕಾಂಗ್‌, ಸಿಲೋನ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿರುವ ಅನುಭವಿ ಕಲಾವಿದರು. ಇವರ ತನಿ ವಾದನದ ‘ದಿ ಎಕ್ಸ್ಟೆಸಿ ಆಫ್‌ ಸಿಕಾಡೆಸ್‌’ ಧ್ವನಿಸುರುಳಿ ಯೂರೋಪ್‌ನಲ್ಲಿ ಬಿಡುಗಡೆ ಕಂಡಿದೆ. ಹಲವಾರು ಧ್ವನಿಸುರುಳಿಗಳಿಗೆ ವೀಣೆಯಲ್ಲಿ ಸಹಕಾರ ನೀಡಿರುತ್ತಾರೆ.

ಗಾಯನ ಸಮಾಜದ ಸಮಿತಿಯ ಸದಸ್ಯೆಯಾಗಿ, ಗಾಯನ ಸಾಮ್ರಾಜ್ಯದ ಸಂಪಾದಕಿಯಾಗಿ, ರಾಜ್ಯ ಪರೀಕ್ಷಾ ಮಂಡಲಿಯಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿಯ ಸದಸ್ಯೆಯಾಗಿ ಹಲವಾರು ರೀತಿಯಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿಯವರಿಗೆ ‘ಸಂಗೀತ ಕಲಾರವಿಂದ’, ‘ಸೇವಾ ರತ್ನ’, ‘ವೀಣಾ ಪಾಣಿ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಹಲವು ಸನ್ಮಾನಗಳೂ, ಪ್ರಶಸ್ತಿಗಳೂ ದೊರಕಿವೆ.

ಗುರುರಾಜ ಮಹಿಮೆ, ಶ್ರೀನಿವಾಸ ಕಲ್ಯಾಣ, ಬನಶಂಕರಿ ಮಹಾತ್ಮೆ, ಗಣೇಶ ಪುರಾಣ, ಹನುಮದ್ವಿಲಾಸ – ಸಂಗೀತ ರೂಪಕಗಳನ್ನು ರಾಘವೇಂದ್ರ ಸ್ವಾಮಿಗಳ ರಚನೆಗಳನ್ನು ರಾಗ ತಾಳ ಪ್ರಸಾರದೊಡನೆಯೂ ಪ್ರಕಟಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳೂ ಮುದ್ರಿತವಾಗಿರುತ್ತವೆ.


Categories
ಕನ್ನಡ ವ್ಯಕ್ತಿಚಿತ್ರ ಸಂಗೀತ

ವ್ಯಕ್ತಿಚಿತ್ರ – ಪದ್ಮಶ್ರೀ ಪಂ.ಬಸವರಾಜ ರಾಜಗುರು

ಕೃತಿ : ವ್ಯಕ್ತಿಚಿತ್ರ – ಪದ್ಮಶ್ರೀ ಪಂ.ಬಸವರಾಜ ರಾಜಗುರು

ಲೇಖಕರು: ಕರ್ನಾಟಕ ವಿಶ್ವವಿದ್ಯಾಲಯ

ಕೃತಿಯನ್ನು ಓದಿ     |     Download

Categories
ಕಲೆ ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು) ಪುಸ್ತಕಗಳಿಂದ ಸಂಗೀತ ಹಿಂದುಸ್ತಾನಿ ಸಂಗೀತ

ಭಾರತೀಯ ಸಂಗೀತ ವೈಭವ

ಕೃತಿ-ಭಾರತೀಯ ಸಂಗೀತ ವೈಭವ
ಸಂಪಾದಕರು-ಪಂ. ಸಿದ್ಧರಾಮಯ್ಯ ಮಠಪತಿ ಗೊರಟಾ
ಸರಣಿ-ಕಲೆ, ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು), ಪುಸ್ತಕಗಳಿಂದ, ಸಂಗೀತ, ಹಿಂದುಸ್ತಾನಿ ಸಂಗೀತ
ಕೃತಿಯನ್ನು ಓದಿ

Categories
ಕನ್ನಡ ಕಲೆ ಕಲೆ ಮತ್ತು ಮನರಂಜನೆ ಸಂಗೀತ

ನೃತ್ಯ ದರ್ಪಣ

ಕೃತಿ :   ನೃತ್ಯ ದರ್ಪಣ

ಸಂಪಾದಕರು : ಕೆ. ರಾಮಮೂರ್ತಿ ರಾವ್

ಕೃತಿಯನ್ನು ಓದಿ     |     Download

Categories
ಕಥಾ ಕೀರ್ತನೆ ಕಲೆ ಪುಸ್ತಕಗಳಿಂದ ವ್ಯಕ್ತಿ ಪರಿಚಯ ಸಂಗೀತ

ವ್ಯಕ್ತಿ ಪರಿಚಯ – ಬೇಲೂರು ಕೇಶವದಾಸರು

ಕೃತಿ: ಕಥಾ ಕೀರ್ತನೆ, ಕಲೆ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಕಥಾ ಕೀರ್ತನೆ, ಕಲೆ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ, ಸಂಗೀತ
ಕೃತಿಯನ್ನು ಓದಿ

Categories
ಕಲೆ ನೃತ್ಯ ಭರತನಾಟ್ಯ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಎಚ್‌.ಆರ್. ಕೇಶವಮೂರ್ತಿ

ಚಿಕ್ಕಮಗಳೂರು ತಾಲೂಕಿನ ಹೋಚಿಹಳ್ಳಿ ಗ್ರಾಮದಲ್ಲಿ ೧೯೧೯ರಲ್ಲಿ ಶ್ರೀ ಬಿ. ರಾಮಸ್ವಾಮಿ ಮತ್ತು ಶ್ರೀಮತಿ ಸೀತಮ್ಮನವರ ಪುತ್ರರಾಗಿ ಕೇಶವಮೂರ್ತಿಯವರು ಜನಿಸಿದರು. ಬಡತನದ ದೆಸೆಯಿಂದ ಪ್ರಾಥಮಿಕ ಹಂತದಲ್ಲೇ ವಿದ್ಯಾಭ್ಯಾಸಕ್ಕೆ ಸಂಚಕಾರ ಬಂದರೂ ಧೃತಿಗೆಡದೆ ತುಮಕೂರಿನಲ್ಲಿ ಚಿಕ್ಕಪ್ಪ ಮೊಸಳೆ ನರಸಿಂಹಯ್ಯನವರ ಮನೆಯಲ್ಲಿ ದೈನಂದಿನ ವೆಚ್ಚದ ಸಲುವಾಗಿ ಶ್ರಮಜೀವನ ನಡೆಸುತ್ತಾ ಎಸ್‌.ಎಸ್‌.ಎಲ್‌.ಸಿ. ಮುಗಿಸಿದರು. ಜತೆಗೆ ಚಿಕ್ಕಪ್ಪ ನರಸಿಂಹಯ್ಯನವರಿಂದ ಅಲ್ಪ ಸ್ವಲ್ಪ ಸಂಸ್ಕೃತ ಪಾಠವೂ ಆಯಿತು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣದ ಮುಗ್ಗಟ್ಟು  ಬಹಳವಾಗಿ ತಲೆದೋರಿದ್ದರಿಂದ ಓದಿಗೆ ತಿಲಾಂಜಲಿಯಿತ್ತು ಸಂಪಾದನೆಗಾಗಿ ಬೇರೆ ದಾರಿ ಹುಡುಕುವುದು ಅನಿವಾರ್ಯವಾಯಿತು.

ತಮ್ಮ ಸ್ನೇಹಿತರ ಜೊತೆಗೂಡಿ ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸಿ.ಎಸ್‌. ಶ್ರೀನಿವಾಸಮೂರ್ತಿ ಅವರಲ್ಲಿ ಕೊಳಲು ವಾದನ ಕಲಿಯಲು ಪ್ರಾರಂಭಿಸಿದರು. ತುಮಕೂರಿನ ನಾಟಕ ಸಂಘಗಳ ಸಂಪರ್ಕ ಹಾಗೂ ಸಂಗೀತದ ಪಾಠ ಕೇಶವಮೂರ್ತಿಯವರಲ್ಲಿ ನೃತ್ಯದ ಗೀಳನ್ನೂ ಹುಟ್ಟು ಹಾಕಿರಬಹುದು. ಹೀಗಾಗಿ ೧೯೪೩ರಲ್ಲಿ ನೃತ್ಯಾಸಕ್ತರಾಗಿ ಬೆಂಗಳೂರಿಗೆ ವಲಸೆ ಬಂದರು. ಈ ಹೊತ್ತಿಗೆ ಅವರಿಗೆ ಮದುವೆಯೂ ಆಗಿತ್ತು. ಪತ್ನಿ ಶಾರದಮ್ಮನವರ ಜೊತೆಗೂಡಿ ಬೆಂಗಳೂರಿನಲ್ಲಿ ವಾಸಿಸುತ್ತಾ ಸಂಸಾರ ನಿರ್ವಹಣೆಗಾಗಿ ಶಾಲೆಯೊಂದರಲ್ಲಿ ಅಧ್ಯಾಪಕ ಗಳಿಸಿದರು.

ಮೊದಲಿಗೆ ಉತ್ತರದ ಸುಪ್ರಸಿದ್ಧ ಕಥಕ್‌ನೃತ್ಯ ಕಲಾವಿದ ಸೋಹನ್‌ಲಾಲ್‌ರವರಿಂದ ಕಥಕ್‌ಕಲಿತರು. ಮುಂದೆ ಭರತನಾಟ್ಯದ ವೈವಿಧ್ಯತೆಗೆ ಮಾರುಹೋಗಿ ನಟುವನಾರ್ ಗುಂಡಪ್ಪನವರ ಶಿಷ್ಯರಾಗಿ ಅವರಿಂದ ಭರತನಾಟ್ಯ ಕಲೆಯಲ್ಲೂ ಸಾಕಷ್ಟು ಪಾಂಡಿತ್ಯ ಗಳಿಸಿದರು.

ಕೇಶವಮೂರ್ತಿಯವರು ೧೯೪೯ರಲ್ಲಿ ತಮ್ಮದೇ ಆದ ಕೇಶವ ನೃತ್ಯಶಾಲೆಯನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ವಿದ್ಯಾರ್ಥಿನಿಯರನ್ನು ನಾಟ್ಯಕಲೆಯಲ್ಲಿ ತಯಾರು ಮಾಡಿ ನಾಟ್ಯಾಚಾರ್ಯರೆನಿಸಿದರು. ಮಕ್ಕಳಾದ ವಸಂತಲಕ್ಷ್ಮಿ, ಸುಮಿತ್ರಾ, ಶ್ಯಾಂಪ್ರಕಾಶ್‌, ಹಾಗೂ ರಾಮ್ ಕುಮಾರ್ ಅವರುಗಳೂ ಸಹ ನೃತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಪ್ರತಿವರ್ಷವೂ ತಪ್ಪದೆ ವಾರ್ಷಿಕೋತ್ಸವವನ್ನು ನಡೆಸುತ್ತಾ ವಿದ್ಯಾರ್ಥಿಗಳಿಂದ ನಾಟ್ಯ ಮಾಡಿಸಿ ಹುರಿದುಂಬಿಸುತ್ತಿದ್ದಾರೆ. ಕರ್ನಾಟಕ ಸೆಕೆಂಡರಿ ಎಜುಕೇಷನ್‌ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಅಲ್ಲದೆ ತಮ್ಮ ಶಾಲೆಯ ವತಿಯಿಂದ ಸರ್ಟಿಫಿಕೇಟ್‌ಕೋರ್ಸ್, ಡಿಪ್ಲೊಮಾ ಕೋರ್ಸ್ ಮತ್ತು ಡಿಗ್ರಿ ಕೋರ್ಸ್‌ಗಳನ್ನೂ ನೀಡಲು ಪ್ರಾರಂಭಿಸಿದರು.

ರಾಜ್ಯಾದ್ಯಂತ-ರಾಷ್ಟ್ರಾದ್ಯಂತ ಅನೇಕ ಸಂಘ ಸಂಸ್ಥೆಗಳ ಆಹ್ವಾನದ ಮೇರೆಗೆ ಕೇಶವ ನೃತ್ಯ ಶಾಲೆಯು ನೂರಾರು ಕಾರ್ಯಕ್ರಮಗಳು ನಡೆಯುತ್ತಾ ಬಂದವು. ಕೇಶವ ನೃತ್ಯ ಶಾಲೆಯ ವಿಭಿನ್ನತೆ ಇರುವುದೇ ನೃತ್ಯನಾಟಕಗಳಲ್ಲಿ ಒಂದಕ್ಕಿಂತ ಒಂದು ಅಮೋಘವಾದ ನೃತ್ಯ ನಾಟಕಗಳು ಸಭಿಕರನ್ನು ಕೈಬೀಸಿ ಕರೆದು ರಸದೌತಣ ನೀಡುವಲ್ಲಿ ಯಶಸ್ವಿಯಾದವು. ಇಂತಹ ನೃತ್ಯನಾಟಕಗಳ ಪ್ರದರ್ಶನಕ್ಕೆ, ಸಂಯೋಜನೆಗೆ ಕೇಶವಮೂರ್ತಿಯವರು ವಹಿಸಿದ ಶ್ರಮ ಅಪಾರ. ಸುಮಾರು ೩೬ ಕ್ಕೂ ಹೆಚ್ಚು ಪೌರಾಣಿಕ, ಸಾಮಾಜಿಕ, ಚಾರಿತ್ರಿಕ, ಜಾನಪದ ವಸ್ತು ವಿಶೇಷವುಳ್ಳ ನೃತ್ಯನಾಟಕಗಳು ಹಲವಾರು ಬಾರಿ ಪ್ರದರ್ಶನಗೊಂಡಿರುವುದು ಗಮನಾರ್ಹ. ಇವೆಲ್ಲಕ್ಕೂ ಕಲಶಪ್ರಾಯದಂತೆ ಕಳೆದ ಹತ್ತುವರ್ಷಗಳಿಂದ ಕನ್ನಡ ಕವಿ ಕಾವ್ಯ ಪರಂಪರೆ ಮಾಲಿಕೆಯ ಅಡಿಯಲ್ಲಿ ಆದಿಕವಿ ಪಂಪನಿಂದ ಹಿಡಿದು ಹೆಸರಾಂತ ಕವಿಗಳ ಕಾವ್ಯವನ್ನು ರಂಗದ ಮೇಲೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಸುವರ್ಣವರ್ಷ ಮಹೋತ್ಸವ: ೧೯೪೯ರಲ್ಲಿ ಪ್ರಾರಂಭವಾದ ಕೇಶವ ನೃತ್ಯಶಾಲೆ ೧೯೯೯ರಲ್‌ಇ ೫೦ ವರ್ಷಗಳನ್ನು ಪೂರೈಸಿದ ಮಹತ್ತರ ಸಾಧನೀಯ ವರ್ಷ. ಏನೇ ಅಡಚಣೆ, ಎಡರು ತೊಡರುಗಳ ನಡುವೆಯೂ ನಿರಂತರವಾಗಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವತ್ತ ಮತ್ತು ನೃತ್ಯ ಪ್ರದರ್ಶನಗಳತ್ತ ಸತತವಾಗಿ ಶ್ರಮಿಸಿದ ಹಾದಿ ಅನುಕರಣೀಯ.

ಸುವರ್ಣವರ್ಷದ ಆಚರಣೆ ಅದ್ವಿತೀಯವಾಗಿ ಪ್ರಾರಂಭವಾಯಿತು. ಸುಮಾರು ೫೦೦ಕ್ಕೂ ಹೆಚ್ಚು ನರ್ತಕ ನರ್ತಕಿಯವರು ಪಾಲ್ಗೊಂಡು, ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಸಾದರ ಪಡಿಸಿದರು. ಏಕ ವ್ಯಕ್ತಿ ನೃತ್ಯ ಪ್ರದರ್ಶನ, ದ್ವಂದ್ವ ನೃತ್ಯ ಪ್ರದರ್ಶನ, ನೃತ್ಯನಾಟಕಗಳು ಪ್ರದರ್ಶಿತಗೊಂಡವು . ಪ್ರತಿತಿಂಗಳೂ ನೃತ್ಯ ಕಾರ್ಯಾಗಾರಗಳು ನಡೆದು ಸುವರ್ಣ ಮಹೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗುವಂತೆ ಮಾಡಿದವು.

ಸಮಾರೋಪ ಸಮಾರಂಭದ ದಿನ ನೃತ್ಯಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಮಹನೀಯರಿಗೆ ಸನ್ಮಾನ ಮಾಡಿ ಆ ಮೂಲಕ ಕೇಶವ ನೃತ್ಯಶಾಲೆ ತನ್ನ ಘನತೆಯನ್ನೂ ಹೆಚ್ಚಿಸಿಕೊಂಡಿತು.

ಕನ್ನಡ ಕವಿಕಾವ್ಯ ಪರಂಪರೆ: ಆದಿಕವಿ ಪಂಪನಿಂದ ಪ್ರಾರಂಭವಾಗಿ ನವೋದಯದವರೆಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಕಾವ್ಯ ಕೃತಿಗಳ ಮೂಲಕ ಅಪಾರವಾದ ಹೆಸರು ಮಾಡಿರುವ ಸುಮಾರು ಇಪ್ಪತ್ತು ಕವಿವರ್ಯರ ಕೃತಿಗಳನ್ನು ನೃತ್ಯದ ಮೂಲಕ ರಂಗಕ್ಕೆ ತರಬೇಕೆಂಬ ಆ ಯೋಜನೆ ೧೯೫ರಲ್ಲಿ ಪ್ರಾರಂಭವಾಯಿತು. ಈ ಮಾಲಿಕೆಯ ಅಡಿಯಲ್ಲಿ ಈಗಾಗಲೇ ಹನ್ನೊಂದು ಕವಿಗಳ ಕಾವ್ಯಗಳನ್ನು ರಂಗದ ಮೇಲೆ ತಂದಿದ್ದು ಇನ್ನೂ ಆರು ಕವಿಗಳ ಕಾವ್ಯಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುತ್ತಿದ್ದಾರೆ.

ಮುಖ್ಯವಾಗಿ ಆದಿಕವಿ ಪಂಪನ ಭರತ ಬಾಹುಬಲಿ, ರನ್ನನ, ಗದಾಯುದ್ಧ, ನಾಗವರ್ಮನ ಕಾದಂಬರಿ, ಜನ್ನನ ಯಶೋಧರ ಚರಿತೆ, ನಾಗಚಂದ್ರನ ರಾಮಚಂದ್ರ ಚರಿತ ಪುರಾಣ, ನೇವಿ ಚಂದ್ರನ ಲೀಲಾವತಿ ಪ್ರಬಂಧ, ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಚಾಮರಸನ ಪ್ರಭುಲಿಂಗಲೀಲೆ, ನಾರಣಪ್ಪನ ಕುಮಾರವ್ಯಾಸ ಭಾರತ ಮುಂತಾದ ನೃತ್ಯ ನಾಟಕಗಳು ಜನಮನ್ನಣೆಗೆ ಪಾತ್ರವಗಿವೆ. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯ ಉಳ್ಳ ೩೦ಕ್ಕೂ ಹೆಚ್ಚು ನೃತ್ಯ ನಾಟಕಗಳನ್ನು ಸಂಯೋಜಿಸಿ ಪ್ರದರ್ಶಿಸಿದ ಹೆಗ್ಗಳಿಕೆಯೂ ಕೇಶವಮೂರ್ತಿ ಅವರದ್ದಾಗಿದೆ. ಶ್ರೀ ಎಚ್‌.ಆರ್. ಕೇಶವಮೂರ್ತಿ ಅವರ ಪತ್ನಿ ಶಾರದಮ್ಮ, ಕೆಲಮಟ್ಟಿಗೆ ವೀಣಾ ವಾದನದಲ್ಲಿ ಪರಿಶ್ರಮ ಉಳ್ಳವರಾಗಿದ್ದಾರೆ. ಪುತ್ರಿ ವಸಂತ ಲಕ್ಷ್ಮಿ ತಮ್ಮದೇ ಆದ ವಿಶ್ರುತ ನೃತ್ಯ ಶಾಲೆ ನಡೆಸುತ್ತಿದ್ದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ಪ್ರಾಧ್ಯಾಪಕಿ ಆಗಿದ್ದಾರೆ, ಮತ್ತೊಬ್ಬ ಪುತ್ರಿ ಸುಮಿತ್ರಾ ದೇವಿ ಕೇಶವಮೂರ್ತಿ ಅವರೇ ನಡೆಸುತ್ತಿರುವ ವೆಂಕಟೇಶ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯಿನಿ, ಹಿರಿಯ ಪುತ್ರ ಬಿ.ಕೆ. ಶ್ಯಾಂಪ್ರಕಾಶ್‌ಆಕಾಶವಾಣಿ ನಿಲಯದ ವೀಣಾ ಕಲಾವಿದೆ. ಮತ್ತಿಬ್ಬರು ಪುತ್ರರಾದ ರಾಮ್‌ಕುಮರ ಮತ್ತು ರವಿಶಂಕರ ರೂಪಾ ಉತ್ತಮ ನೃತ್ಯ ಪಟುವಾಗಿದ್ದಾರೆ.

ಸಾಂಘಿಕ-ಚಟುವಟಿಕೆಗಳು: ತಮ್ಮ ಐವತ್ತೈದು ವರ್ಷದ ಕಲಾಜೀವನದಲ್ಲಿ ಗುರು-ಶ್ರೀ ಕೇಶವಮೂರ್ತಿಯವರು ತಮ್ಮ ನೃತ್ಯಶಾಲೆ ಮಾತ್ರವಲ್ಲದೆ ನೃತ್ಯಕ್ಕೆ ಸಂಬಂಧ ಪಟ್ಟ ಹಲವಾರು ಸಂಘ ಸಂಸ್ಥೆಗಳಲ್ಲೂ ಪಾತ್ರ ವಹಿಸಿದ್ದಾರೆ. ನೃತ್ಯ ಕಲಾವಿದರ ಏಳಿಗೆಗಾಗಿ ಕರ್ನಾಟಕ ನೃತ್ಯ ಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸೆಕೆಂಡರಿ ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳ ಪಠ್ಯವಸ್ತು ಸಮಿತಿಗೆ ಅಧ್ಯಕ್ಷರಾಗಿ ನೃತ್ಯಕ್ಕೆ ಸಂಬಂಧಿಸಿದಂತೆ ಪಠ್ಯವನ್ನು ನಿರ್ದಿಷ್ಟಗೊಳಿಸಿದ್ದಾರೆ. ಭರತನಾಟ್ಯದ ಮಾಧ್ಯಮಿಕ ದರ್ಜೆ ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷರಾಗಿದ್ದು ಪುಸ್ತಕ ಹೊರತಂದಿದ್ದಾರೆ. ಹಲವಾರು ವರ್ಷ ನೃತ್ಯ ಪರೀಕ್ಷೆಗಳ ಮೌಲ್ಯ ಮಾಪನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನೃತ್ಯದ ಬಗ್ಗೆ ಹಲವಾರು ಸೋದಾಹರಣ ಭಾಷಣಗಳನ್ನೂ,ಪ್ರಾತ್ಯ ಕ್ಷಿಕೆಗಳನ್ನೂ ನಡೆಸಿಕೊಟ್ಟಿರುವ ಶ್ರೀಯುತರು ನಾಟ್ಯವಿಚಾರ ಸಂಗ್ರಹ ಎಂಬ ಪುಸ್ತಕದಲ್ಲಿ ತಮ್ಮ ಅನೇಕ-ಚಿಂತನೆಗಳನ್ನು, ಭಾಷಣಗಳನ್ನು ಉದಾಹರಿಸಿದ್ದಾರೆ.

ಭರತನಾಟ್ಯಕ್ಕೆ ಬೇಕಾದ ಜತಿಸ್ವರ, ಶೃಂಗಾರ ಪದಗಳು, ಶಬ್ದ, ವರ್ಣ, ತಿಲ್ಲಾನ, ನವರಸ ರಾಮಾಯಣಗಳನ್ನು ರಚಿಸಿರುವುದಲ್ಲದೆ ಹಲವಾರು ನೃತ್ಯನಾಟಕಗಳಿಗೆ ತಮ್ಮ ಸಾಹಿತ್ಯವನ್ನು ಅಳವಡಿಸಿದ್ದಾರೆ.

ಇವರಿಗೆ ೧೯೮೧ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ೧೯೯೦ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ, ೨೦೦೦ದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಗಳಲ್ಲದೆ ೧೯೯೦ರಲ್ಲಿ ಕರ್ನಾ ಟಕ ನೃತ್ಯ ಕಲಾಪರಿಷತ್ತಿನ ನೃತ್ಯ ಕಲಾಶಿರೋಮಣಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ನವೋದಯದ ಅಚಲ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

Categories
ಕಲೆ ನೃತ್ಯ ಭರತನಾಟ್ಯ

ಪದ್ಮಕೋಶ ಹಸ್ತ

ಲಕ್ಷಣ: ಎಲ್ಲ ಬೆರಳುಗಳನ್ನು ವಿರಳವಾಗಿ ಮಾಡಿ ಬೆರಳುಗಳ ತುದಿಯನ್ನು ಸ್ವಲ್ಪವಾಗಿ ಮಡಿಸಿ ಒಂದಕ್ಕೊಂದು ಸೇರುವಂತೆ, ಧನುಸ್ಸಿನಂತೆ ಬಗ್ಗಿಸಿದರೆ ಪದ್ಮಕೋಶ ಎಂದರೆ ಕಮಲದ ಮೊಗ್ಗು, ಅಥವಾ ಪೂರ್ಣವಾಗಿ ಅರಳದ ಕಮಲ ಎಂದರ್ಥ. ದಿನನಿತ್ಯ ಜೀವನದಲ್ಲಿ ಉಗುರು ಸೂಚಿಸಲು, ಚಿಕ್ಕದು ಎನ್ನಲು, ಗುಂಡಗಿರುವುದು, ಚೆಂಡು, ಊಟ ಮಾಡುವಾಗ ಮುಂತಾದವುಗಳ ಸಂವಹನ ಮಾಡಲು ಉಪಯೋಗಿಸಲಾಗುವುದು. ಮಣಿಪುರಿ ನೃತ್ಯದಲ್ಲಿ ಈ ಹಸ್ತಕ್ಕೆ ಶಾರ್ದೂಲಸ್ಯವೆಂದೂ ಕರೆಯುತ್ತಾರೆ.

ಪದ್ಮಕೋಶವನ್ನು ಹೋಲುವ ಮತ್ತೊಂದು ಅಸಂಯುತ ಹಸ್ತವಿದೆ. ಅದೇ ಕದಂಬ ಹಸ್ತ. ಇದರಲ್ಲಿ ಐದು ಬೆರಳುಗಳ ತುದಿಗಳನ್ನು ಸೇರಿಸಿ ಹಿಡಿಯುತ್ತಾರೆ. ಸಾಮಾನ್ಯವಾಗಿ ಪದ್ಮಕೋಶದ ವಿನಿಯೋಗಗಳನ್ನು ಇಲ್ಲಿ ಉಪಯೋಗಿಸಬಹುದು. ಹಸ್ತ ಮುಕ್ತಾವಳಿಯಲ್ಲಿ ಇದು ಉಲ್ಲೇಖಿತವಾಗಿದೆ.
ವಿನಿಯೋಗ: ಬಿಲ್ವ ಮತ್ತು ಬೇಲದ ಹಣ್ಣುಗಳು, ಸ್ತನಗಳು, ವರ್ತುಲ (ಗುಂಡಗೆ), ಚೆಂಡಿನಿಂದ ಆಡುವುದು, ಕುಡಕೆ (ಭರಣಿ), ಊಟ ಮಾಡುವುದು, ಹೂವಿನ ಮಧ್ಯಭಾಗ, ಮಾವಿನ ಹಣ್ಣು, ಹೂಮಳೆ, ಹೂಗುಚ್ಚ, ಜಪಭಾವವನ್ನು ಸೂಚಿಸುವುದು, ಘಂಟಾರೂಪವನ್ನು ತೋರಿಸುವುದು, ಹುತ್ತ, ನೈದಿಲೆ, ಮೊಟ್ಟೆ, ಅಲಂಕಾರ ಭೂಷಣ. ನಾರಂಗಿವೃಕ್ಷ.
ಇತರೆ ವಿನಿಯೋಗ: ಮಿಂಚು, ಗಿರಿಕರ್ಣಿಕಾ ಪುಷ್ಪ, ರೆಂಬೆ ಬಗ್ಗಿರುವುದು, ಚಿನ್ನದ ಪಾತ್ರೆ, ಚಕೋರ ಪಕ್ಷಿ, ಯಜ್ಞಗಳಲ್ಲಿಯ ಆಮಿಷ, ದೇವತೆಗಳ ಪೂಜೆಗಾಗಿ ಕೊಡುವ ಬಲಿ, ಅಗ್ರಪಿಂಡ, ಹೂಗಳನ್ನು ಚೆಲ್ಲುವುದು, ಗಡ್ಡಧಾರಿ, ಕಾಣಿಕೆ, ತಟ್ಟೆ, ಪಿಂಡ, ನೈದಿಲೆ, ೫ ತಲೆಹಾವು, ಕಲ್ಲೆಸೆಯುವುದು, ಪಾರ್ವತಿ-ಚಾಮುಂಡಿಯರೇ ಮೊದಲಾದ ದೇವಿಯರ ದರ್ಶನ.
ಪದ್ಮಕೋಶ ಹಸ್ತವನ್ನು ಕಂಪಿಸುತ್ತಲೇ ಕೆಳಕ್ಕೆ ಹಿಡಿಯುವುದು ಸಪ್ತ ಸ್ವರಗಳಲ್ಲಿ ಒಂದಾದ ನಿಷಾದದ ಸಂಕೇತ. ಪದ್ಮಕೋಶಹಸ್ತವನ್ನು ಸಣ್ಣಗೆ ಅಲ್ಲಾಡಿಸುವುದು ೨೭ ನಕ್ಷತ್ರಗಳ ಪೈಕಿ ಒಂದಾದ ವಿಶಾಖಾ ಎಂತಲೂ, ಪದ್ಮಕೋಶವನ್ನು ಕೆಳಮುಖವಾಗಿ ಹಿಡಿಯುವುದು ಜ್ಯೇಷ್ಠ ನಕ್ಷತ್ರವೆಂದೂ, ಪದ್ಮಕೋಶ ಹಸ್ತಗಳನ್ನು ಬೆಸೆದು ಹೆಬ್ಬೆರಳು ಮತ್ತು ಕಿರುಬೆರಳನ್ನು ಜೋಡಿಸುವುದು ಕುಂಭರಾಶಿಯೆಂದೂ, ಪದ್ಮಕೋಶಗಳನ್ನು ಸ್ವಸ್ತಿಕವಾಗಿರಿಸುವುದು ಪುಗ ವೃಕ್ಷದ ಸಂಕೇತವೆಂದೂ ಅರ್ಥೈಸಲಾಗಿದೆ. ಎಡಕೈಯಲ್ಲಿ ಪದ್ಮಕೋಶವನ್ನು ಕೆಳಮುಖವಾಗಿ ಹಿಡಿದು, ಬಲಗೈಯಲ್ಲಿ ಪತಾಕವನ್ನು ಅದರ ಹಿಂದೆ ಹಿಡಿಯುವುದು ಕರಡಿ ಎಂದು ಸೂಚಿಸುತ್ತದೆ. ಸಂಕರ ಹಸ್ತ ವಿಭಾಗದಲ್ಲಿ ಪದ್ಮಕೋಶವನ್ನು ಮೇಲ್ಭಾಗದಲ್ಲಿ ಹಿಡಿದರೆ ಚಂದ್ರನೆಂದು ಅರ್ಥ.

ಕಥಕ್ಕಳಿಯಲ್ಲಿ ಪದ್ಮಕೋಶವನ್ನು ಊರ್ಣನಾಭವೆಂದು ಕರೆಯುವುದು ವಾಡಿಕೆ. ಊರ್ಣನಾಭ ಎಂದರೆ ಜೇಡರ ಹುಳು ಎಂದು ಅರ್ಥ. ಪದ್ಮಕೋಶದ ಎಲ್ಲಾ ಬೆರಳುಗಳನ್ನು ಇನ್ನೂ ಸ್ವಲ್ಪ ಅಂಗೈಯೊಳಗೆ ಬಾಗಿಸುವುದೇ ಊರ್ಣನಾಭ.

ಊರ್ಣನಾಭದ ವಿನಿಯೋಗ: ಕೂದಲಿನಲ್ಲಿ ಹೇನುಗಳಿದ್ದರೆ ತುರಿಸಿಕೊಳ್ಳುವುದು, ಜಿಂಕೆ೦‌ು ಮುಖ, ಕಪಿ, ಸಿಂಹ, ಕೂರ್ಮ, ತಲೆಯನ್ನು ಕೆರೆದುಕೊಳ್ಳುವುದು, ಕಳ್ಳತನ, ಆಮೆ, ಸ್ತನಗಳು, ಕ್ಷತ್ರಿಯ,ಜಾತಿ, ಕಲಶ, ಜೇಡರಹುಳು, ಕೂದಲು ಹಿಡಿಯುವುದು, ರಕ್ತಕೆಂಪು ಕರ್ಣಿಕಾರ ಹೂ, ತಲೆಬಾಚುವುದು, ಪಂಜವುಳ್ಳ ಮೃಗಗಳು, ನರಸಿಂಹಾವತಾರ, ಕುಷ್ಠ. ಯಕ್ಷಗಾನದಲ್ಲಿ ಕ್ರೂರಮೃಗಗಳು, ರೌದ್ರರಸಕ್ಕೆ ಉಪಯೋಗಿಸುತ್ತಾರೆ. ನಿತ್ಯಜೀವನದಲ್ಲಿ ಭಯಂಕರ, ಕ್ರೂರ, ಕುಷ್ಠ, ಹುಳ, ಕಿರಿಕಿರಿ, ತಲೆಕೆರೆತ ಇತ್ಯಾದಿಗೆ ಬಳಸುತ್ತಾರೆ.

ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದವಾದ ನೃತ್ತ ಹಸ್ತಗಳ ಪೈಕಿ ನಳಿನೀ ಪದ್ಮಕೋಶವೆಂಬ ಹಸ್ತವಿದೆ. ಪದ್ಮಕೋಶ ಹಸ್ತಗಳನ್ನು ವ್ಯಾವೃತ್ತ (ಪಾರ್ಶ್ವಗಳಲ್ಲಿ ಕೈಗಳನ್ನು ಮೇಲಕ್ಕೆತ್ತುವುದು) ಮತ್ತು ಪರಿವರ್ತಿತ(ನಾಟ್ಯಕಾಲದಲ್ಲಿ ಪಾರ್ಶ್ವಗಳಿಂದ ಹಸ್ತಗಳನ್ನು ಮುಂಭಾಗಕ್ಕೆ ತರುವುದು) ವಾಗಿ ತಿರುಗಿಸಿ ಸುತ್ತು ಹಾಕಿಸುವುದೇ ಇದರ ಲಕ್ಷಣ:
ನಳಿನೀ ಪದ್ಮಕೋಶದ ವಿನಿಯೋಗ: ನಾಗಬಂಧ, ಮೊಗ್ಗು, ಸಮನಾಗಿ, ಹಂಚುವುದು, ಹೂಗೊಂಚಲು, ಹತ್ತು ಎನ್ನುವುದಕ್ಕೆ ಮತ್ತು ಗಂಡಭೇರುಂಡ ಪಕ್ಷಿ.

Categories
ಕಲೆ ನೃತ್ಯ ಭರತನಾಟ್ಯ

ಮೃಗಶೀರ್ಷ ಹಸ್ತ

ಕೃತಿ: : ಕಲೆ, ನೃತ್ಯ, ಭರತನಾಟ್ಯ
ಲೇಖಕರು: ಕಲೆ, ನೃತ್ಯ, ಭರತನಾಟ್ಯ
ಕೃತಿಯನ್ನು ಓದಿ