Categories
ಆದಿವಾಸಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮದಲ್ಲಿ ಮಾದಯ್ಯ

ಮೈಸೂರು ಜಿಲ್ಲೆ. ಎಚ್.ಡಿ.ಕೋಟೆ ತಾಲ್ಲೂಕಿನ ಜಾಗನಕೋಟೆಯ ಮದಲ್ಲಿ ಮಾದಯ್ಯ ಅವರು ಬೆಟ್ಟಕುರುಬ ಆದಿವಾಸಿ ಗಿರಿಜನ ಸಮುದಾಯದ ಯಜಮಾನರಾಗಿದ್ದಾರೆ. ಪಾರಂಪರಿಕವಾಗಿ ಬಂದ ಕಲೆ,ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ಬೆಟ್ಟ ಕುರುಬ ಜನಾಂಗವನ್ನು ಈಗಿನ ಜಾಗನಕೋಟೆ ಹಾಡಿಗೆ ಅರಣ್ಯ ಇಲಾಖೆಯವರು ಸ್ಥಳಾಂತರಿಸಿದರು. ಆದರೆ ಯಾವುದೆ ಪುನರ್ವಸತಿ ಕಲ್ಪಿಸಲಿಲ್ಲ. ಶ್ರೀಮದಲ್ಲಿ ಮಾದಯ್ಯ ಅವರು ಆದಿವಾಸಿ ಸಮುದಾಯದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿದರು. ಇದರ ಫಲವಾಗಿ ೧೫೪ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಯಿತು. ಶ್ರೀಯುತರು ಈಗಲೂ ಬೆಟ್ಟಕುರುಬ ಸಮುದಾಯದ ಸಂಪ್ರದಾಯದಂತೆ ಜೀವನ ನಡೆಸುತ್ತಿದ್ದಾರೆ.