ಕೃತಿ:ನನ್ನ ಗೋಪಾಲ
ಲೇಖಕರು: ಕುವೆಂಪು
ಕೃತಿ – ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ಪುಷ್ಪರಾಣಿ, ಕಿಟ್ಟೀ ಕಥೆ, ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು, ಕಾಸಿಗೊಂದು ಸೇರು
ಲೇಖಕರು – ಚಂದ್ರಶೇಖರ ಕಂಬಾರ
[ವನದೆಡೆ ಹುಡುಗನೊಬ್ಬನು ಸುತ್ತಲೂ ನೋಡುತ್ತ ಬಂದು, ನೀಲ ಗಗನದ ಕಡೆ ನೋಡಿ ಮಂದಸ್ಮಿತನಾಗಿ ಸಂತೋಷವನ್ನು ತೋರ್ಪಡಿಸಿ, ಅಲ್ಲಿ ಒಂಟಿಯಾಗಿ ತೇಲುತ್ತಿದ್ದ ಮೋಡವನ್ನು ಸಂಬೊಧಿಸುತ್ತಾನೆ.]
ಹುಡುಗ
ಓ ಮೋಡಣ್ಣಾ, ಓ ಮೊಡಣ್ಣಾ,
ನಾನು ಬರುವೆನೊ ಕೈ ನೀಡಣ್ಣ!
ಮೋಡ
‘ಮೇಲಿಂದ ಉತ್ತರ ಕೊಡುತ್ತದೆ.’
ಬರಬೇಡಣ್ಣಾ! ಬರಬೇಡಣ್ಣಾ!
ಅವ್ವನು ಬೈವಳು ನೀ ನೋಡಣ್ಣಾ!