Loading Events

« All Events

ಡಾ. ಸರೋಜಿನಿ ಶಿಂತ್ರಿ

July 4

೦೪.೦೭.೧೯೩೦ ಶತಶತಮಾನಗಳಿಂದಲೂ ಕತ್ತಲೆಯ ಬದುಕಿನಲ್ಲೇ ಕಳೆದ ಮಹಿಳೆಯರ ಶೋಷಣೆ, ಏಳುಬೀಳು, ಸೋಲು ಗೆಲವುಗಳಿಂದ ಸ್ಫೂರ್ತಿ ಪಡೆದು, ಸಮಾಜ ಸೇವೆ-ಶಿಕ್ಷಣ-ಮಹಿಳೆಯರ ಜಾಗೃತಿಗಾಗಿ ಜೀವನದುದ್ದಕ್ಕೂ ದುಡಿಯುತ್ತಾ ಬಂದಿರುವ ಸರೋಜಿನಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಕ ತಾಲ್ಲೂಕಿನ ಮಿಶ್ರಿ ಕೋಟಿ ಎಂಬಲ್ಲಿ. ತಂದೆ ಬಸಪ್ಪ ಶಿಂತ್ರಿಯವರು ಶಿಕ್ಷಕರಾಗಿ, ವಿದ್ಯಾಧಿಕಾರಿಗಳಾಗಿ ಸಮಯಪಾಲನೆ, ಅಧ್ಯಯನ ಶೀಲತೆ, ತತ್ತ್ವಾದರ್ಶಗಳಿಗೆ ಹೆಸರಾಗಿದ್ದು ‘ಶಿಂತ್ರಿ ಮಾಸ್ತರ’ ಎಂದೇ ಪ್ರಸಿದ್ಧರಾಗಿದ್ದವರು. ತಾಯಿ ಗಂಗಮ್ಮ. ಶಾಲೆಗಳು ವಿರಳವಾಗಿದ್ದ ಕಾಲದಲ್ಲಿ, ಸ್ತ್ರೀಯರಿಗೆ ಶಿಕ್ಷಣ ಅನಗತ್ಯವೆನ್ನುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾಗಿದ್ದ ಬಸಪ್ಪನವರು ಹೆಣ್ಣು ಮಕ್ಕಳೆಂದು ಅನಾದರ ಮಾಡದೆ ವಿದ್ಯೆ ಕಲಿಯಲು ಉತ್ತೇಜನ ನೀಡಿದರು. ಪ್ರಾರಂಭಿಕ ಶಿಕ್ಷಣ ಬಿಜಾಪುರದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ. ಧಾರವಾಡದ ಎ.ಕೆ.ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಾಕೆ. ೧೯೪೯ರಲ್ಲಿ ಬಿ.ಎ. ಪದವಿ (ಇಂಗ್ಲಿಷ್) ಹಾಗೂ ೧೯೫೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಮನೆತನಕ್ಕೆ ಬಂದ ಬಳುವಳಿಯಂತೆ ಶಿಕ್ಣಣ ಕ್ಷೇತ್ರವನ್ನೇ ಆಯ್ಕೆಮಾಡಿಕೊಂಡು ಓದಿದ ಕರ್ನಾಟಕ ಕಾಲೇಜಿನಲ್ಲಿಯೇ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಸೇರಿದರು. ಪ್ರೊ. ಆರ್ಮೆಂಡೋ ಮೆನಜಿಸ್ ಹಾಗೂ ವಿ.ಕೃ. ಗೋಕಾಕರ ಮೆಚ್ಚಿನ ಶಿಷ್ಯೆ. ಮೆನೆಜಿಸ್‌ರವರ ಮಾರ್ಗದರ್ಶನದಲ್ಲಿ ‘ವುಮೆನ್ ಕ್ಯಾರಕ್ಟರ್ಸ್‌ ಇನ್ ಶೇಕ್ಸಪಿಯರ್’ ಎಂಬ ವಿಷಯದಲ್ಲಿ ಅಧ್ಯಯನ ಕೈಗೊಂಡು ಪಡೆದ ಡಾಕ್ಟರೇಟ್ ಪದವಿ. ಸೇವಾವಧಿಯಲ್ಲಿ ಹಲವಾರು ಉನ್ನತ ಹುದ್ಧೆಗಳನ್ನು ಅಲಂಕರಿಸಿದ್ದು ೧೯೬೯ರಲ್ಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾಗಿ, ಕಲಾ ವಿಭಾಗದ ಡೀನ್ ಆಗಿ, ನಾಲ್ಕು ದಶಕಗಳ ಕಾಲದ ಸೇವೆಯ ನಂತರ ೧೯೯೧ರಲ್ಲಿ ನಿವೃತ್ತಿ. ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಸ್ತರಗಳಲ್ಲಿ ದುಡಿದರು. ಚುನಾಯಿತ ಸೆನೆಟ್ ಸದಸ್ಯೆಯಾಗಿ, ಸಿಂಡಿಕೇಟ್ ಸದಸ್ಯೆಯಾಗಿಯೂ ಶ್ರಮಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಶ್ರಮಿಸಿದ್ದಲ್ಲದೆ ಸಂಸ್ಥೆಯ ಅಧ್ಯಕ್ಷೆಯಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿ, ಗೌರವಾಧ್ಯಕ್ಷೆಯಾಗಿಯೂ ದುಡಿದಿದ್ದಾರೆ. ಮಹಿಳೆಯರ ವ್ಯಕ್ತಿತ್ವ ವಿಕಾಸ, ಸ್ತ್ರೀ ಪುರುಷರ ಸಮಾನತೆ, ಸ್ತ್ರೀ ಶೋಷಣೆಯ ನಿರ್ಮೂಲನೆ ಮುಂತಾದ ವಿಷಯಗಳಲ್ಲಿ ಆಳವಾಗಿ ಅಧ್ಯಯನ ನಡೆಸಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸ್ತ್ರೀ ನಡೆದು ಬಂದ ದಾರಿ (೧೯೭೪), ಮಹಿಳೆ ನಡೆದು %E

Details

Date:
July 4
Event Category: