Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಉಷಾರಾಣಿ ಎನ್.

ಕರ್ನಾಟಕ ಕಂಡ ಪ್ರತಿಭಾವಂತ ಕ್ರೀಡಾಪಟು ಉಷಾರಾಣಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕಗಳ ಭೇಟೆಯಾಡಿದ ಕಬಡ್ಡಿ ಪಟು.
ಮೂಲತಃ ಮಂಡ್ಯದವರಾದ ಉಷಾರಾಣಿ ಬಿ.ಎ. ಪದವೀಧರರು. ವೃತ್ತಿಯಲ್ಲಿ ಪೊಲೀಸ್ ಪೇದೆ. ಸದ್ಯ ಕೋರಮಂಗಲದ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರತರು. ಬಾಲ್ಯದಿಂದಲೂ ಕಬಡ್ಡಿ ಪ್ರೇಮ. ಇಲಾಖೆಯಲ್ಲಿ ಸಿಕ್ಕ ಪ್ರೋತ್ಸಾಹವೇ ಸಾಧನೆಗೆ ಹಾದಿ. ಒಂದೂವರೆ ದಶಕಗಳ ಕ್ರೀಡಾ ಜೀವನದಲ್ಲಿ ಸಾಧಿಸಿದ್ದು ಅಪಾರ, ಬೇಟೆಯಾಡಿದ ಪದಕಗಳು ಅನೇಕಾನೇಕ. ಕರ್ನಾಟಕ ಪೊಲೀಸ್ ಮಹಿಳಾ ಕಬ್ಬಡಿ ತಂಡಕ್ಕೆ ನಾಲ್ಕು ಬಾರಿ ನಾಯಕಿಯಾಗಿದ್ದ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬಾರಿ ಪದಕ ಗೆದ್ದ ಕ್ರೀಡಾಚೇತನ. ಅಖಿಲ ಭಾರತ, ರಾಜ್ಯಮಟ್ಟದ, ದಕ್ಷಿಣವಲಯ ಮಟ್ಟದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಹತ್ತಕ್ಕೂ ಹೆಚ್ಚು ಚಿನ್ನ, ಅನೇಕ ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡದ ಪ್ರತಿಭಾವಂತೆ, ಅನೇಕ ಬಾರಿ ಅತ್ಯುತ್ತಮ ಆಟಗಾರ ಪ್ರಶಸ್ತಿ, ನಾಲ್ಕು ಬಾರಿ ವರ್ಷದ ಅತ್ಯುತ್ತಮ ಕ್ರೀಡಾವ್ಯಕ್ತಿ ಗೌರವ ಹಾಗೂ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಹೆಮ್ಮೆಯ ಕ್ರೀಡಾಪಟು.