Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಚ್.ಬಿ. ಮಂಜುನಾಥ್

ತಮ್ಮ ವಕ್ರರೇಖೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೊನಚು ವ್ಯಂಗ್ಯಚಿತ್ರಕಾರರಲ್ಲಿ ಪ್ರಮುಖರು ಎಚ್.ಬಿ.ಮಂಜುನಾಥ್,

ಪ್ರಜಾವಾಣಿ ಪತ್ರಿಕೆಯ ಚಿನಕುರಳಿ, ಕನ್ನಡ ಪ್ರಭದ ಸಿಡಿಮದ್ದು, ಸಂಯುಕ್ತ ಕರ್ನಾಟಕದ ಚುಚ್ಚುಮದ್ದು ಅಂಕಣಗಳ ಮೂಲಕ ಸುಮಾರು ೧೭,೦೦೦ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಅರಳಿಸಿದ್ದಾರೆ. ರೇಖೆಗಳೇ ಅಲ್ಲದೆ ಛಾಯಾಚಿತ್ರಕಲೆಯಲ್ಲಿಯೂ ತಮ್ಮ ಛಾಪು ಮೂಡಿಸಿರುವ ಇವರು ತೆಗೆದ ೮೦೦೦ಕ್ಕೂ ಹೆಚ್ಚು ಛಾಯಾಚಿತ್ರಗಳು ಇವರ ಸೃಜನಶೀಲತೆಯ ಪ್ರತೀಕವಾಗಿದೆ.

ದೇಶ ವಿದೇಶಗಳಲ್ಲಿಯೂ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ, ಮತ್ತು ಪ್ರದರ್ಶನಗಳನ್ನು ನೀಡಿರುವ ಇವರಿಗೆ ರಂಭಾಪುರಿ ಪೀಠದಿಂದ ಚಿತ್ರಕಲಾಕೋವಿದ ಪ್ರಶಸ್ತಿ, ದಾವಣಗೆರೆ ಜಿಲ್ಲಾಡಳಿತದ ಗೌರವ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವ ಸಮ್ಮಾನಗಳು ಇವರಿಗೆ ಲಭಿಸಿವೆ.