Categories
ಜಾನಪದ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಎಲೆಕೊಪ್ಪದ ಶ್ರೀ ಬಸವೇಗೌಡ

ಬಯಲು ಸೀಮೆಯ ಅಪೂರ್ವ ಜಾನಪದ ಕಲೆ ಭಾಗವಂತಿಕೆ ಕಲೆಯಲ್ಲಿ ಎಲೆಕೊಪ್ಪದ ಶ್ರೀ ಬಸವೇಗೌಡರದು ಬಹು ದೊಡ್ಡ

ಹೆಸರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಎಲೆಕೊಪ್ಪದಲ್ಲಿ ಜನಿಸಿದ ಇವರು ಸುಮಾರು ನಾಲ್ಕು ದಶಕಗಳಿಂದಲೂ

ಭಾಗವಂತಿಕೆ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಡುಗಾರಿಕೆಯಿಂದ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ, ಹಾಡುಗಾರಿಕೆಗೆ ಪ್ರತಿ ಸಲವೂ ಹೊಸ ಹೊಸ ಅನುಭವವನ್ನುಂಟುಮಾಡುವ ಕಲಾನೈಪುಣ್ಯತೆ ಇವರದು. ದೇಶಾದ್ಯಂತ ಭಾಗವಂತಿಕೆ ಕಲೆಯನ್ನು ವಿಸ್ತರಿಸಿ ಜನಮೆಚ್ಚುಗೆ ಪಡೆದಿರುವ ಇವರಿಗೆ ಮೂವತ್ತೈದಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ೧೯೮೫ರಲ್ಲಿ ಪ್ರಶಸ್ತಿ ಪತ್ರ ಸಮರ್ಪಣೆ, ಡಾ. ಜೀಶಂಪ ಸನ್ಮಾನ ಸಮಿತಿಯಿಂದ ೧೯೯೮ರಲ್ಲಿ ಸನ್ಮಾನ, ಮೈಸೂರು ದಸರಾ ಪ್ರಶಸ್ತಿ-೧೯೯೯, ಮಂಡ್ಯ ಜಿಲ್ಲಾ ಜಾನಪದ

ಪರಿಷತ್ತಿನಿಂದ ಸನ್ಮಾನ, ಕರ್ನಾಟಕ ಜಾನಪದ ಮತ್ತು ಯಕಗಾನ ಅಕಾಡೆಮಿಯಿಂದ ೧೯೯೯ರಲ್ಲಿ ಸನ್ಮಾನ, ಅದೇ

ಅಕಾಡೆಮಿಯಿಂದ ಜಾನಪದ ಪ್ರಶಸ್ತಿ-೨೦೦೦, ಕರ್ನಾಟಕ ಜಾನಪದ ಪರಿಷತ್ತಿನಿಂದ ೨೦೦೦ದ ಸಾಲಿನಲ್ಲಿ ಜಾನಪದ ಲೋಕ ಪ್ರಶಸ್ತಿ ಪುರಸ್ಕಾರ. ಹೀಗೆ ಅನೇಕ ಪ್ರಶಸ್ತಿ ಬಹುಮಾನಗಳು ಅವರ ಕಲೆಯ ವೈಭವವನ್ನು ನಾಡಿನುದ್ದಕ್ಕೂ ಸಾರುತ್ತಿವೆ.

ಕರ್ನಾಟಕ ಜಾನಪದ ಪರಂಪರೆಯನ್ನು ದೇಶದುದ್ದಗಲಕ್ಕೂ ಪ್ರದರ್ಶಿಸುವುದರ ಮೂಲಕ ಶ್ರೀ ಎಲೆಕೊಪ್ಪ ಬಸವೇಗೌಡರು ಕನ್ನಡ ನಾಡಿನ ಅಪರೂಪದ ಸಾಂಸ್ಕೃತಿಕ ವಕ್ತಾರರೆನಿಸಿದ್ದಾರೆ.