Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಕಾಶೀನಾಥ ಶಿಲ್ಪ

ಸಿಮೆಂಟ್ ಮಾಧ್ಯಮ ಬಳಸಿ ಶಿಲ್ಪಗಳನ್ನು ರಚಿಸುವ ಕಾಶೀನಾಥ ಶಿಲ್ಪಿ ಅವರು ನೂರಾರು ಅಡಿ ಎತ್ತರದ ಸಿಮೆಂಟ್ ಶಿಲ್ಪಗಳನ್ನು ರಚಿಸಿದ್ದಾರೆ. ಮುರ್ಡೇಶ್ವರದ ೧೨೦ ಅಡಿ ಎತ್ತರ ಧ್ಯಾನಸ್ಥ ಶಿವ ಮೂರ್ತಿ, ಹಿಮಾಚಲದ ಆಂಜನೇಯ, ಅಹಮದಾಬಾದ್ ಪ್ರಸನ್ನಾಂಜನೇಯ, ಶಿರಸಿ ಮಾರಿಕಾಂಬ ದೇವಾಲಯದ ಗೋಪುರ ಸೇರಿದಂತೆ ಹಲವು ಮಹತ್ವದ ನಿರ್ಮಾಣಗಳನ್ನು ಮಾಡಿದ್ದಾರೆ.
ಪರಂಪರೆಯಿಂದ ಬಂದ ಶಿಲ್ಪ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವ ಕಾಶೀನಾಥ ಅವರು ಸಿಮೆಂಟ್ ಶಿಲ್ಪಗಳ ಪ್ರಕಾರದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಜಕಣಾಚಾರಿ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.