Categories
ಕ್ರೀಡೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಕೃಷ್ಣ ಅಮೋಗೆಪ್ಪ ನಾಯ್ಕಡಿ

ಕೃಷ್ಣ ಅಮೋಗೆಪ್ಪ ನಾಯ್ಕಡಿ ನಾಡಿನ ಉದಯೋನ್ಮುಖ ಸೈಕಲ್ ಸವಾರರಲ್ಲಿ ಒಬ್ಬರು. ರಾಷ್ಟ್ರೀಯ ಸೀನಿಯರ್ ಟ್ರ್ಯಾಕ್ ಸೈಕ್ಲಿಂಗ್ ಬಂಗಾರದ ಪದಕ ಗಳಿಸಿ ಇತಿಹಾಸ ಸೃಷ್ಟಿಸಿರುವ ಕೃಷ್ಣ ಅವರು ಈಗಾಗಲೇ ಅನೇಕ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್ಷಿಪ್ಪುಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಏಷಿಯನ್ ಸೈಕ್ಲಿಂಗ್ ಜ್ಯೂನಿಯರ್ ಚಾಂಪಿಯನ್ಷಿಪ್ನಲ್ಲಿಯೂ ಪಾಲ್ಗೊಂಡಿದ್ದು, ಕೊರಿಯಾದಲ್ಲಿ ತರಬೇತಿ ಪಡೆದಿರುವ ಕೃಷ್ಣ ಅವರು ಪ್ರಸ್ತುತ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.