Categories
ಬಯಲಾಟ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕೆ. ಪಂಪಾಪತಿ

ಬಯಲಾಟಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಾರಿ ಸಾರಥಿ ಪಾತ್ರ ಮಾಡಿರುವ ಕೆ.ಪಂಪಾಪತಿ ಅವರು ಬಳ್ಳಾರಿಯ ಹತ್ತಿಗಿರಣಿಯ ಕಾರ್ಮಿಕರಾಗಿ ದುಡಿದಿದ್ದಾರೆ.

ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪಂಪಾಪತಿ ಅನೇಕ ಬಯಲಾಟಗಳಲ್ಲಿ ಸಾರಥಿ ಪಾತ್ರದ ಜೊತೆಗೆ ಪ್ರಮುಖ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ.

ಪಾಂಡುವಿಜಯ, ಅಭಿಮನ್ಯು ಕಾಳಗ, ಸುಂದೋಪಸುಂದರ ರತಿ ಕಲ್ಯಾಣ, ಗಿರಿಜಾ ಕಲ್ಯಾಣ ಮೊದಲಾದ ಬಯಲಾಟಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಪಂಪಾಪತಿ ಅವರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.