Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಖಾದ್ರಿ ಎಸ್. ಅಚ್ಯುತನ್

ಭಾರತೀಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ಖಾದ್ರಿ ಎಸ್.ಅಚ್ಯುತನ್ ದೂರದರ್ಶನ, ಆಕಾಶವಾಣಿ, ಸೆನ್ಸಾರ್ ಬೋರ್ಡ್ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದವರು. ಅಂಡಮಾನ್‌ನಲ್ಲಿಯೂ ಆಕಾಶವಾಣಿ ಪ್ರತಿನಿಧಿಯಾಗಿದ್ದ ಖಾದ್ರಿ ಅಚ್ಯುತನ್ ಅವರು ಕ್ಷೇತ್ರ ಪ್ರಚಾರ ವಿಭಾಗದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡವರು.

ದೂರದರ್ಶನ ಮತ್ತು ಆಕಾಶವಾಣಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಅಚ್ಯುತನ್ ಅನೇಕ ಹೊಸ ಹೊಸ ವಿಚಾರಗಳನ್ನು ಸುದ್ದಿ ವಿಭಾಗದಲ್ಲಿ ಅಳವಡಿಸಿಕೊಂಡು ಕೇಳುಗರಿಗೆ ಹಾಗೂ ನೋಡುಗರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.