Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಚೆನ್ನಂಡ ಎ ಕುಟ್ಟಪ್ಪ

ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ಅತ್ಯುತ್ತಮ ಬ್ಯಾಕ್ಸಿಂಗ್ ಪಟು. ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಕೋಚ್.
ಮೈಸೂರು ಮೂಲದವರಾದ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ೧೯೭೯ರ ಮಾರ್ಚ್ ೫ರಂದು ಜನಿಸಿದವರು.ಬಿ.ಎ ಪದವೀಧರರು. ಬಾಲ್ಯದಿಂದಲೂ ಬೆನ್ನತ್ತಿದ್ದ ಕ್ರೀಡಾಸಕ್ತಿಯನ್ನೇ ಸಾಧನೆಯ ದಾರಿದೀಪ ಮಾಡಿಕೊಂಡವರು. ಬ್ಯಾಕ್ಸಿಂಗ್ ಅಂದರೆ ಪಂಚಪ್ರಾಣ. ಬ್ಯಾಕ್ಸಿಂಗ್‌ನಲ್ಲಿ ಎನ್‌ಐಎಸ್ ಡಿಪ್ಲೋಮಾ, ರೋಟಿಕ್‌ನಲ್ಲಿ ಎಐಬಿಎ ಸ್ಟಾರ್ ೨ ಕೋಚಿಂಗ್‌ ಹಾಗೂ ಉಚ್ಚೇಕಿಸ್ತಾನ್‌ನಲ್ಲಿ ಎಐಬಿಎ ಕುಟಮನ್ ಕೋರ್ಸ್‌ಗಳನ್ನು ಪೂರೈಸಿದವರು.ಆನಂತರ ಭಾರತೀಯ ಸೇನೆಗೆ ಸೇರ್ಪಡೆಯಾದ ಕುಟ್ಟಪ್ಪ ವೃತ್ತಿಯಲ್ಲಿ ಸುಭೆದಾರ್, ಪ್ರವೃತ್ತಿಯಲ್ಲಿ ಬ್ಯಾಕ್ಸಿಂಗ್ ಕೋಚ್. ರಾಷ್ಟ್ರಮಟ್ಟದ ೨೩ ಬ್ಯಾಕ್ಸಿಂಗ್‌ ಸ್ಪರ್ಧೆಗಳಲ್ಲಿ ೯ ಬಾರಿ ಚಿನ್ನದ ಪದಕ, ನಾಲ್ಕು ಬಾರಿ ರಜತ ಹಾಗೂ ಕಂಚಿನ ಪದಕ ಪಡೆದಿರುವ ಕ್ರೀಡಾಪ್ರತಿಭೆ, ಜರ್ಮನಿ, ಬ್ಯಾಂಕಾಕ್, ಕ್ಯೂಬಾ, ಬ್ರಿಜಿಲ್, ಜೆಕ್ ಗಣರಾಜ್ಯ, ಥ್ಯಾಯ್ಲೆಂಡ್, ಐಲ್ಯಾಂಡ್, ಚೀನಾ, ಇಂಗ್ಲೆಂಡ್, ಸ್ಕಾಟ್ಯಾಂಡ್ ಮುಂತಾದೆಡೆ ಜರುಗಿದ ಸುಮಾರು ೪೦ಕ್ಕೂ ಹೆಚ್ಚು ಬ್ಯಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತೀಯ ಬ್ಯಾಕ್ಸಿಂಗ್ ತಂಡದ ಕೋಚ್ ಆಗಿ ತಂಡದ ಯಶಸ್ಸಿಗೆ ದುಡಿದು ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಹಿರಿಮೆಯ ಕುಟ್ಟಪ್ಪ ನಿಜಕ್ಕೂ ಮಾದರಿ ಕ್ರೀಡಾಪಟು.