Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಕೆ. ರಾಮನಾಥ್

ನಟ, ನಿರ್ದೇಶಕ, ನಾಟಕಕಾರ, ಅಧ್ಯಾಪಕ, ಲೇಖಕರಾದ ಡಾ.ಎಚ್.ಕೆ. ರಾಮನಾಥ್ ಅವರದು ಬಹುಮುಖ ಪ್ರತಿಭೆ. ರಂಗದ ಬಹುರೂಪಿ. ಆರು ದಶಕಕ್ಕೂ ಮೀರಿದ ರಂಗಸೇವೆಯ ಹಿರಿಮೆಯ ರಂಗಕರ್ಮಿ.
ಮೈಸೂರು ವಿ.ವಿ ಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪ್ರದರ್ಶಕ ಕಲೆಯಲ್ಲಿ ಪಿ.ಎಚ್.ಡಿ ಪದವಿ ಪಡೆದ ರಾಮನಾಥ್ ಕನ್ನಡ ಅಧ್ಯಾಪಕರು, ದೆಹಲಿಯ ಎನ್.ಸಿ.ಇ.ಆರ್.ಟಿ ಯ ನಿವೃತ್ತ ಶ್ರವಣ ಕಾರ್ಯಕ್ರಮ ನಿರ್ಮಾಪಕರು. ಬಾಲ್ಯದಲ್ಲೇ ಬಣ್ಣದ ಬೆಡಗಿಗೆ ಮನಸೋತವರು, ಮೈಸೂರಿನ ಸಮತಂತೋ, ಕಲಾಪ್ರಿಯ, ಅಮರ ಕಲಾಸಂಘ, ಶಿವಮೊಗ್ಗದ ಕಲಾಸೇವಾಸಂಘ ಮತ್ತಿತರ ಹವ್ಯಾಸಿ ತಂಡಗಳಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ.ಆಕಾಶವಾಣಿಯಲ್ಲೂ ನಟನಾಪರ್ವ, ಹಲವು ಮಕ್ಕಳ ನಾಟಕಗಳ ನಿರ್ದೇಶಕರು. ರಂಗಭೂಮಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಲೇಖನಗಳು-ವಿಮರ್ಶೆಗಳ ರಚನೆ, ನಾಟಕ ಸ್ಪರ್ಧೆಗಳು-ಕಾರ್ಯಾಗಾರಗಳ ಆಯೋಜನೆ, ಉಪನ್ಯಾಸದಲ್ಲಿ ಸದಾ ನಿರತರು. ನಾಲ್ಕು ಮಕ್ಕಳ ನಾಟಕಗಳು ಸೇರಿ ೧೮ ಕೃತಿಗಳ ಕರ್ತೃ.ರಾಜ್ಯ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.