Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಕೆ. ಅನಂತರಾಮು

ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಪ್ರತಿಭೆ ಬೆಳಗಿಸಿದ ಅನಂತರಾಮು ಅವರು ಒಳ್ಳೆಯ ಅಧ್ಯಯನಶೀಲ ವಿದ್ಯಾರ್ಥಿಯೆನಿಸಿ ಅಂದಿನ ಮೈಸೂರು ಸರ್ಕಾರದಿಂದ ಜಪಾನಿನಲ್ಲಿ ನಡೆದ ‘ಎಕ್ಸ್ಪ್ರೆ ೭೦’ ಮೇಳಕ್ಕೆ ಆಯ್ಕೆಗೊಂಡ ಪ್ರತಿಭಾವಂತ.
ಲೌಕಿಕ ಶಿಕ್ಷಣದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾದರೂ ಭಾಷಾಶಾಸ್ತ್ರದ ಕಡೆಗೆ ಮನವೊಲಿದು ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ.ಪದವಿಗಳಿಸಿ ಅನಂತರ “ಕವಿಬ್ರಹ್ಮಶಿವ ಒಂದು ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ. ಗಳಿಕೆ. ಮುಂದೆ ಸಾಹಿತಿಯಾಗಿ, ಸಂಶೋಧಕರಾಗಿ, ಸಾಹಿತ್ಯ ಸೋಪಾನವನ್ನು ಏರುತ್ತಲೇ ಹೋದರು. ಜಪಾನ್ ಪ್ರವಾಸ ಕಥನ, ಉದಯರವಿ ನಾಡಿನಲ್ಲಿ’, ಮಂಡ್ಯದ ಹಳ್ಳಿಗಳನ್ನು ಸುತ್ತಿ ರಚಿಸಿದ ‘ಸಕ್ಕರೆ ಸೀಮೆ’, ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ‘ದಕ್ಷಿಣದ ಸಿರಿ’ ಗ್ರಂಥಗಳಿಗೆ ಸತತವಾಗಿ ಮೂರು ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಿಟ್ಟಿಸಿ ಹ್ಯಾಟ್ರಿಕ್ ಪಡೆದ ಅಪರೂಪದ ಸಾಹಿತಿ ಡಾ. ಕೆ. ಅನಂತರಾಮು ಅವರು.