Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಮೂರ್ತಿ ಪೆಂಡಕೂರು

ಪ್ರವಾಸ ಸಾಹಿತ್ಯ, ಅನುವಾದ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಡಾ. ಗುರುಮೂರ್ತಿ ಪೆಂಡಕೂರು ಅವರು.
ಬಳ್ಳಾರಿ ಜಿಲ್ಲೆಯ ನಾರಾಯಣ ದೇವರ ಕೆರೆಯಲ್ಲಿ ೧೯೩೮ರಲ್ಲಿ ಜನನ, ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್), ಬಿ.ಕಾಂ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಹಾಗೂ’ ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು’ ವಿಷಯ ಕುರಿತ ಸಂಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬಹುರೂಪಾ ವಸುಂಧರಾ, ಆಂಧ್ರಪ್ರಪಂಚ, ಓ ಕೆನಡಾ, ಅವಕಾಶಗಳ ಅಮರಾವತಿ ಅಮೆರಿಕಾ (ಪ್ರವಾಸ ಸಾಹಿತ್ಯ), ದಿಗಂಬರ ಕಾವ್ಯ, ತೆಲುಗು ಕಾವ್ಯಮಾಲೆ, ಪಂಚಮವೇದ, ಕಲ್ಯಾಣ ಸಂಸ್ಕೃತಿ, ಸಮಗ್ರ ದಿಗಂಬರ ಕಾವ್ಯ ನೀರವ ನಿಮಿಷಗಳು (ಅನುವಾದ) ಕಂಠೀಸರ ಪಂಪಾ ತುಂತುರು, ಜಾನಪದ ಸಂಚಯ (ಸಂಪಾದನೆ) ಇವು ಶ್ರೀಯುತರ ಪ್ರಮುಖ ಕೃತಿಗಳು.
ಯೂರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಶಿಯಾ, ಅಮೆರಿಕಾ, ಕೆನಡಾ, ಜಪಾನ್ ಇಲ್ಲೆಲ್ಲ ಪ್ರವಾಸ ಮಾಡಿರುವ ಶ್ರೀಯುತರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಯುವಕರ ಸಂಘ ಪ್ರಕಾಶನ ಸಂಸ್ಥೆ ಸ್ಥಾಪಕರಾಗಿದ್ದು, ಆ ಸಂಸ್ಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಉತ್ತಮ ಪ್ರಕಾಶನ ಸಂಸ್ಥೆ ಮನ್ನಣೆ ಪಡೆದಿದೆ.