Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಲಿಂಗ ಕಾಪಸೆ

೧೯೨೮ರಲ್ಲಿ ಬಿಜಾಪುರ ಜಿಲ್ಲೆಯ ಹಿರೇಲೋಣಿ ಎಂಬ ಕುಗ್ರಾಮದಲ್ಲಿ ಬಡ ರೈತ ಮಗನಾಗಿ ಜನಿಸಿದ ಡಾ. ಗುರುಲಿಂಗ ಕಾಪಸೆಯವರು ಎಲೆಮರೆಯ ಫಲದಂತೆ ಬೆಳೆದುಬಂದ ಸರಳ-ಸಜ್ಜನಿಕೆಯ ಅಪರೂಪದ ಸಾಹಿತಿ.
ವಿಮರ್ಶೆ, ಜೀವನಚರಿತ್ರೆ, ಪ್ರವಾಸ ಕಥನ, ಸಂಪಾದನೆ, ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕ್ಷೇತ್ರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ಗುರುಲಿಂಗ ಕಾಪಸೆಯವರು ವಿಶೇಷ ಸಂಚಿಕೆ ಹಾಗೂ ನಿಯತಕಾಲಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಡಾ. ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್, ಮುಂಬೈ ಕರ್ನಾಟಕ ಸಂಘದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೌಲಿಕವಾದ ಯೋಜನೆಗಳ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೀಡಿದ ಶ್ರೀ ಕಾಪಸೆಯವರು ಪ್ರಚಾರಗಳಿಂದ ಗಾವುದ ದೂರವೇ ಉಳಿಯುವವರು.
ಮೃದು ಸ್ವಭಾವ, ಶಿಷ್ಯವಾತ್ಸಲ್ಯ, ಕನ್ನಡ-ಮರಾಠಿ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿರುವ ಹಾಗೂ ಬರಹ, ಭಾಷಣಗಳಲ್ಲಿ ಅಪಾರವಾದ ಒಳನೋಟಗಳನ್ನು ನೀಡುವ ಮೂಲಕ ತಲಸ್ಪರ್ಶಿಯಾದ ವಿದ್ವತ್ ವಿವೇಚನೆಗೆ ಹೆಸರಾದ ವಿದ್ವಾಂಸರಾದ ಡಾ. ಗುರುಲಿಂಗ ಕಾಪಸೆಯವರು.