Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಜಿ.ಎನ್. ಸುರೇಶ್

ಬಿ.ಎನ್.ಸುರೇಶ ಅವರು ಪ್ರತಿಷ್ಠಿತ ವಿಕ್ರಮ ಸಾರಾಭಾಯ್ ಅಂತರಿಕ್ಷ ಕೇಂದ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಭಾರತೀಯ ಪ್ರಸಿದ್ದ ಅಂತರಿಕ್ಷ ವಿಜ್ಞಾನಿ. ಸ್ಯಾಟಲೈಟ್ ಉಡ್ಡಯನ ಯಂತ್ರದ ವಿನ್ಯಾಸಗೊಳಿಸುವಲ್ಲಿ ನೈಪುಣ್ಯತೆ ಸಾಧಿಸಿರುವ ಬಿ.ಎನ್.ಸುರೇಶ ಅವರು ಭಾರತೀಯ ಅಂತರಿಕ್ಷ ವಿಜ್ಞಾನ ಸಂಸ್ಥೆಯ ಸ್ಥಾಪಕ ನಿರ್ದೇಶಕರು.

ದೇಶದ ಪ್ರಸಿದ್ಧ ಐಐಟಿ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳಲ್ಲಲಿ ಪ್ರಾಧ್ಯಾಪಕರಾಗಿದ್ದ ಬಿ.ಎನ್. ಸುರೇಶ ಅವರು ಸ್ಪೇನ್ ಕ್ಯಾಪ್ಸಲ್ ರಿಕವರಿ ಎಕ್ವಿಪ್‌ಮೆಂಟ್ ತಯಾರಿಕೆಯಲ್ಲಿ ನೀಡಿರುವ ಕೊಡುಗೆ ಅಪಾರವಾದುದು. ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿರುವ ಸುರೇಶ ಅವರು ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.