Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ತುಳಸಿ ರಾಮಚಂದ್ರ

ಕಲೆ ಇವರಿಗೆ ಹುಟ್ಟಿನಿಂದಲೇ ಬಂದದ್ದು ತಂದೆ ಹೆಸರಾಂತ ರಂಗ ಕಲಾವಿದರಾಗಿದ್ದ ತಮಾಷ್ ಮಾಧವರಾಯರೆಂದೇ ಪ್ರಸಿದ್ದರಾಗಿದ್ದ ಎಮ್.ಎಸ್.ಮಾಧವರಾಯರು. ಮಾವ ಗಮಕ ಭಗೀರಥರಲ್ಲಿ ಒಬ್ಬರೆನೆಸಿದ್ದ ಗಮಕ ರಸಋಷಿ ಮೈಸೂರಿನ ಕೃಷ್ಣಗಿರಿ ಕೃಷ್ಣರಾಯರು, ನೃತ್ಯಾಭಿನಯ ಕಲೆ ಇವರನ್ನ ತಾನೇ ತಾನಾಗಿ ಬಂದು ಬಾಚಿಕೊಂಡಿತು. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಇವರ ಗುರುಗಳೂ ಸಹ. ಕೇವಲ ಭರತ ನಾಟ್ಯವೇ ಅಲ್ಲದೆ ದೆಹಲಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಪಂ. ತಿರ್ಥರಾಮ್ ಅಜಾದ್ ಅವರಲ್ಲಿ ಕಥಕ್, ಅಹಮದಾಬಾದಿನ ದರ್ಪಣ ನಾಟ್ಯಶಾಲೆಯಲ್ಲಿ ಆಚಾರ್ಯ ಸಿ.ಆರ್. ಆಚಾರ್ಯುಲು ಅವರಲ್ಲಿ ಕೂಚಿಪುಡಿ ಶೈಲಿಯ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.
ಮುಂದೆ ಮೈಸೂರಿಗೆ ಬಂದು ನೆಲಸಿದ ಮೇಲೆ ನೃತ್ಯಕಲೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಹಾಗೂ ಇನ್ನಿತರ ಹಿರಿಯರ ಮಾರ್ಗದರ್ಶನ ಪಡೆದು ನೃತ್ಯಕಲೆ ಪರಂಪರೆ ಕುರಿತು ಮಹಾ ಪ್ರಭಂಧವನ್ನು ಬರೆದು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಳಿಸಿದ್ದಾರೆ.
ರಾಜ್ಯ, ಹೊರರಾಜ್ಯ ಹಾಗೂ ಹೊರ ರಾಷ್ಟ್ರಗಳಲ್ಲೆಲ್ಲಾ ಸಂಚರಿಸಿ ಆನೇಕ ಕಾರ್ಯಕ್ರಮಗಳನ್ನು ನೀಡಿ ಯಶಸ್ಸು ಪಡೆದಿರುವ ಡಾ.ತುಳಸಿ ರಾಮಚಂದ್ರ ಅವರು ಪ್ರಸ್ತುತ ಮೈಸೂರಿನಲ್ಲಿ ನೃತ್ಯಾಲಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.