Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸುರೇಶ್ ರಾವ್

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಡಾ.ಸುರೇಶ್ ರಾವ್, ಹುಟ್ಟೂರು ಕಟೀಲು ಆದರೂ ಸಹ ಅವರ ಕರ್ಮಭೂಮಿ ಮುಂಬೈ. ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕೆಂದು ಬಯಸಿದ ಅವರು ೧೯೮೮ ರಲ್ಲಿ ‘ಸಂಜೀವಿನಿ’ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಸಮಾಜದಲ್ಲಿ ಕೆಳಸ್ತರದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕಡಿಮೆ ವೆಚ್ಚದಲ್ಲಿ ಪ್ರತಿ ತಿಂಗಳು ೩೦೦ ಡಯಾಲಿಸಿಸ್‌ಗಳು ಇವರ ಆಸ್ಪತ್ರೆಯಲ್ಲಿ ನಡೆಯುತ್ತಿದೆ.