Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ನ್ಯಾ. ಎಂ.ಎನ್. ವೆಂಕಟಾಚಲಯ್ಯ

ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಎಂ.ಎನ್. ವೆಂಕಟಾಚಲಯ್ಯನವರು ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಹಲವಾರು ಮಹತ್ವದ ತೀರ್ಮಾನಗಳನ್ನು ನೀಡುವ ಮೂಲಕ ಖ್ಯಾತಿ ಪಡೆದವರು.

ನಿವೃತ್ತಿಯ ನಂತರ ಕೆಲವು ಸರ್ಕಾರದ ಹಲವು ಆಯೋಗಗಳ ಮುಖ್ಯಸ್ಥರಾಗಿಯೂ, ಭಾರತೀಯ ವಿದ್ಯಾಭವನದಂತಹ ಸಾರ್ವಜನಿಕ ಸಂಸ್ಥೆಗಳ ನಿಕಟವರ್ತಿಯಾಗಿಯೂ ಕೆಲಸ ಮಾಡಿರುವ ವೆಂಕಟಾಚಲಯ್ಯನವರು ನ್ಯಾಯಾಂಗ ಕುರಿತ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕಾನೂನು ಶಾಸ್ತ್ರ ಕುರಿತಂತೆ ಹಲವಾರು ಪ್ರೌಢ ಲೇಖನಗಳನ್ನು ಪ್ರಕಟಿಸಿರುವ ವೆಂಕಟಾಚಲಯ್ಯನವರು ದೇಶ-ವಿದೇಶಗಳಲ್ಲಿ ಕಾನೂನು ಕುರಿತಂತೆ ಅನೇಕ ಸಮ್ಮೇಳನಗಳಲ್ಲಿ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಉನ್ನತ ಗೌರವ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.