Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಬಿ. ಎಸ್. ಲೋಹಿತಾಶ್ವ

ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವ ಪ್ರೊ. ಟಿ. ಎಸ್. ಲೋಹಿತಾಶ್ವ ಅವರು ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರು.
ತುಮಕೂರು ಜಿಲ್ಲೆ ತೊಂಡಗೆರೆಯವರಾದ ಲೋಹಿತಾಶ್ವ ಸಮುದಾಯ ನಾಟಕ ಚಳವಳಿಯ ಮೂಲಕ ಮನೆಮಾತಾದವರು. ನಾಡಿನುದ್ದಕ್ಕೂ ಪ್ರಗತಿಪರ ಚಿಂತನೆಯ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡ ಲೋಹಿತಾಶ್ವ ‘ಕತ್ತಲೆ ದಾರಿ ದೂರ’, ‘ಮಾರೀಚನ ಬಂಧುಗಳು’ ಮೊದಲಾದ ಸತ್ವಯುತ ನಾಟಕಗಳ ನಿರ್ದೆಶಕರು.
ಹುತ್ತವ ಬಡಿದರೆ, ಪಂಚಮ, ಗೆಲಿಲಿಯೊ, ಕುಬಿ ಮತ್ತು ಇಯಾಲ, ದಂಗೆಯ ಮುಂಚಿನ ದಿನಗಳು ಮೊದಲಾದ ನಾಟಕಗಳ ಅಭಿನಯದಿಂದ ಜನಮನ ಸೇರಿರುವ ಪ್ರೊ. ಲೋಹಿತಾಶ್ವ ೪೫೦ಕ್ಕೂ ಚಲನಚಿತ್ರಗಳಲ್ಲಿ ನಟಿಸಿದವರು.
ಕರ್ನಾಟಕ ಸಾಂಸ್ಕೃತಿಕ ಜಗತ್ತಿನಲ್ಲಿ ಮಿಂದೆದ್ದಿರುವ ಲೋಹಿತಾಶ್ವ ನಾಟಕಗಳ ರಚನಕಾರರು, ಅಂಕಣ ಬರವಣಿಗೆಯಲ್ಲೂ ನಿಪುಣರಾದ ಇವರು ಕೆಲವು ಚಲನಚಿತ್ರಗಳಿಗೆ ಸಂಭಾಷಣೆ, ಹಾಡುಗಳನ್ನು ಬರೆದಿದ್ದಾರೆ.
ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಪ್ರೊ. ಲೋಹಿತಾಶ್ವ ಅವರು ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.