Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು

ಕೃಷಿಕರಾಗಿದ್ದು ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಕೇತದವರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ಚಿಕ್ಕಂದಿನಿಂದಲೂ ಸಹಕಾರಿ ಚಳವಳಿಯಲ್ಲಿ ಅತ್ಯಂತ ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀ ಆಳ್ವ ಅವರು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಕಾರಣರಾದವರು.

ದೇಶ ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ಕೃತಿಗಳು ಹತ್ತಕ್ಕೂ ಹೆಚ್ಚು. ಇವರು ರಚಿಸಿದ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮೈಸೂರು ಹಾಗೂ ಮದ್ರಾಸು ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ ಪಠ್ಯಪುಸ್ತಕವಾಗಿತ್ತು.

ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹಕರಾಗಿ ಕೆಲಸ ಮಾಡಿರುವ ಶ್ರೀ ಆಳ್ವ ಅವರು ಸದಭಿರುಚಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಆರಂಭಿಸಲಾದ ಮಂಗಳ ಫಿಲ್ಡ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ನಮ್ಮ ಬಂಟ್ವಾಳ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹಲವಾರು.

Categories
ಯುವಜನ ಸೇವಾ ಶಿಕ್ಷಣ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಕೆ. ಆರ್. ಸುಶೀಲೆಗೌಡ

ಶಿಕ್ಷಕರಾಗಿದ್ದು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಹಾಸನದ ಪೊ. ಕೆ.ಆರ್. ಸುಶೀಲೇಗೌಡ ಅವರು.
ಕಾಲೇಜು ಶಿಕ್ಷಕರಾಗಿ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ಶ್ರೀ. ಸುಶೀಲೇಗೌಡ ಅವರು ಹಾಸನದ ನೆಹರೂ ಯುವಕ ಕೇಂದ್ರದ ಸಮನ್ವಯಾಧಿಕಾರಿಯಾಗಿ ಯುವ ಚಟುವಟಿಕೆಗಳಿಗೆ ಹೊಸತನ ತಂದವರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳನ್ನು ಬಲ್ಲ ಶ್ರೀ. ಸುಶೀಲೇಗೌಡರು ಸೇವಾದಳ, ಹಿಂದಿ ಪ್ರಚಾರಸಭಾ, ಸಂಸ್ಕೃತ ಸಂಘ ಮೊದಲಾದ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿ ಪತ್ರಿಕೆಗಳನ್ನು ತರಲು ಪ್ರೋತ್ಸಾಹ ನೀಡಿರುವ ಶ್ರೀ. ಸುಶೀಲೇಗೌಡರು ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಉತ್ತಮ ಕಾರ್ಯಕರ್ತರೆಂಬ ಪ್ರಶಸ್ತಿಗೆ ಪಾತ್ರರಾದವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಡಾ. ಮಹೇಶ್ ಜೋಷಿ

ಶಕ್ತಿಶಾಲಿ ಸಂವಹನ ವಾಹಕಗಳಾದ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಲವಲವಿಕೆಯಿಂದ ಜನರ ಬಳಿಗೆ ತರುವಲ್ಲಿ ಯಶ ಕಂಡವರು ಡಾ. ಮಹೇಶ್ ಜೋಷಿ ಅವರು.
ಪ್ರಸಾರ ಭಾರತಿಯ ಪ್ರಾದೇಶಿಕ ವಾಹಿನಿಗಳಲ್ಲಿ ಕನ್ನಡದ ‘ಚಂದನ’ಕ್ಕೆ ಹೊಸ ರೂಪ ನೀಡಿ ದೇಶದ 2 ಅತ್ಯುತ್ತಮ ವಾಹಿನಿಯನ್ನಾಗಿ ಅಣಿಗೊಳಿಸಿದ ಡಾ. ಮಹೇಶ್ ಜೋಷಿ ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ೨೦೦೫ರ ಸಾಲಿನ ಶ್ರೇಷ್ಟ ಕೇಂದ್ರವೆಂಬ ಪ್ರಶಸ್ತಿ ತಂದುಕೊಟ್ಟವರಲ್ಲಿ ಪ್ರಮುಖರು.
ಕಾರ್ಮಿಕ ಕಾನೂನು, ಪತ್ರಿಕೋದ್ಯಮ, ಕೈಗಾರಿಕಾ ಸಮನ್ವಯ ಹೀಗೆ ನಾಲ್ಕಾರು ವಿಷಯಗಳಲ್ಲಿ ಸ್ನಾತಕ ಪದವಿ ಪಡೆದಿರುವ ಮಹೇಶ್ ಜೋಷಿ ಅವರು ಮಾನವ ಹಕ್ಕು ಹಾಗೂ ಮಾಧ್ಯಮ ಕುರಿತು ಸಿದ್ಧಪಡಿಸಿದ ಪ್ರೌಢಪ್ರಬಂಧಕ್ಕೆ ಅಮೇರಿಕಾ ವಿಶ್ವವಿದ್ಯಾನಿಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದೂರದರ್ಶನವನ್ನು ಸಮೀಪದರ್ಶನವಾಗಿಸುವ ಧೈಯವಿಟ್ಟುಕೊಂಡ ಮಹೇಶ್ ಜೋಷಿ ನೇರಪ್ರಸಾರ, ನೇರ ಸಂವಾದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಜನತೆಯ ಸಮೀಪಕ್ಕೆ ದೂರದರ್ಶನವನ್ನು ಕೊಂಡೊಯ್ದಿದ್ದಾರೆ. ಬೆಂಗಳೂರು ದೂರದರ್ಶನದ ನಿರ್ದೆಶಕ ಡಾ. ಮಹೇಶ್ ಜೋಷಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಸಂಯೋಜಿಸಿದ್ದು ಅವರ ಪುರಸ್ಕಾರಗಳು ಹತ್ತು ಹಲವು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಸಂತ ಕುಷ್ಟಗಿ

ಸಾಹಿತ್ಯ, ಸಂಶೋಧನೆ ಜೊತೆ ಶೈಕ್ಷಣಿಕ ಆಡಳಿತದಲ್ಲೂ ದುಡಿದು ಹೆಸರಾದವರು ವಸಂತ ಕುಷ್ಟಗಿ ಅವರು.

ಸ್ನಾತಕೋತ್ತರ ಪದವಿಯ ನಂತರ ಹಲವು ಕಾಲೇಜುಗಳ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ವಸಂತ ಕುಷ್ಟಗಿ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಮೊದಲ ನಿರ್ದೆಶಕರು,

ಕಾವ್ಯ, ಗದ್ಯ, ಮಕ್ಕಳ ಸಾಹಿತ್ಯ ಸಂಶೋಧನೆ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಕುಷ್ಟಗಿಯವರು ರಚಿಸಿರುವ ಕೃತಿಗಳು, ೪೦ಕ್ಕೂ ಹೆಚ್ಚು.

ಅನೇಕ ಕೃತಿಗಳನ್ನು ಸಂಪಾದಿಸಿರುವ ವಸಂತ ಕುಷ್ಟಗಿಯವರು ಹತ್ತಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದವರು.

ಏಳೆಂಟು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ವಸಂತ ಕುಷ್ಟಗಿಯವರು ಗಳಿಸಿರುವ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು.

 

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎ. ವಿ. ಸೋಮನಾಥ ದೀಕ್ಷಿತ

ಸಾಮವೇದದಲ್ಲಿ ಪರಿಣತಿ ಪಡೆದು ಕಾಲೇಜು ಪ್ರಾಧ್ಯಾಪಕರಾಗಿದ್ದ ಶ್ರೀ ಎ. ವಿ. ಸೋಮನಾಥ ದೀಕ್ಷಿತ್ ಅವರು ಈಗ ಶೃಂಗೇರಿಯ ಶಾರದಾ ಪೀಠದಲ್ಲಿ ಆಸ್ಥಾನ ವಿದ್ವಾಂಸರು.
ಸಾಮವೇದ ಪರೀಕ್ಷೆಗಳ ರಹಸ್ಯಾಂತ ಸಾಮವೇದ, ಶೌತ ಪ್ರಯೋಗ, ಸ್ಮಾರ್ತ ಪ್ರಯೋಗ ಮುಂತಾದ ವಿಭಾಗಗಳಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಪಾಠ ಹೇಳಿದವರು ಶ್ರೀ ಎ. ವಿ. ಸೋಮನಾಥ ದೀಕ್ಷಿತ್ ಅವರು.
ಸಾಮವೇದದ ಮೇಲಿನ ಸಂಶೋಧನೆಗೆ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶ್ರೀ ದೀಕ್ಷಿತ್ ಅವರು ಬರೆದ ಸಂಶೋಧನಾತ್ಮಕ ಲೇಖನಗಳು ಹಲವು.
ಅನೇಕ ವೇದ ಸಮ್ಮೇಳನಗಳಲ್ಲಿ ಗೌರವಕ್ಕೆ ಪಾತ್ರರಾಗಿರುವ ಶ್ರೀ ಸೋಮನಾಥ ದೀಕ್ಷಿತ್ ಅವರು ಈಗ ಶೃಂಗೇರಿಯ ದಕ್ಷಿಣಾಶಾಮ್ನಾಯ ಶಾರದಾ ಪೀಠದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದಾರೆ.

Categories
ನೀರಾವರಿ ತಜ್ಞ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎನ್. ದೇಸಾಯಿ

ನಾಡಿನ ಹಲವು ನೀರಾವರಿ ಯೋಜನೆಗಳಿಗೆ ನಿರ್ದಿಷ್ಟ ರೂಪುರೇಷೆ ನೀಡಿದ ನೀರಾವರಿ ತಜ್ಞರು ಡಿ.ಎನ್‌. ದೇಸಾಯಿ ಅವರು.
ಏಕೀಕರಣದ ನಂತರ ಕರ್ನಾಟಕದಲ್ಲಿ ನಿರ್ಮಾಣಗೊಂಡ ತುಂಗಭದ್ರ, ಹಿಡ್ಕಲ್, ಹೇಮಾವತಿ, ವರಾಹಿ ಭೂಗತ ಜಲವಿದ್ಯುತ್‌ ಯೋಜನೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಡಿ. ಎನ್. ದೇಸಾಯಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಟಾನದಲ್ಲೂ ಸಕ್ರಿಯ ಪಾತ್ರವಹಿಸಿದರು. ಲೋಕೋಪಯೋಗಿ ಕಾರ್ಯದರ್ಶಿಗಳಾಗಿ ನಿವೃತ್ತರಾದ ನಂತರ ಆಲಮಟ್ಟಿ ಅಣೆಕಟ್ಟು ಕ್ರೈಸ್ಟ್ ಗೇಟ್ ವಿನ್ಯಾಸದ ತಜ್ಞರ ಸಮಿತಿ ಅಧ್ಯಕ್ಷರಾಗಿದ್ದ ಡಿ. ಎನ್. ದೇಸಾಯಿ ಅವರು ಪ್ರಸ್ತುತ ಕರ್ನಾಟಕ ನೀರಾವರಿ ನಿಗಮ ಹಾಗೂ ಜಲಭಾಗ್ಯ ನಿಗಮದ ನಿರ್ದೆಶಕರು.
ಈಗ ಕೃಷ್ಣಾ ಜಲ ವಿವಾದ ಕುರಿತ ಕರ್ನಾಟಕ ತಾಂತ್ರಿಕ ಸಮಿತಿಯ ಪ್ರಧಾನ ಸಲಹೆಗಾರರಾಗಿದ್ದಾರೆ ಡಿ. ಎನ್. ದೇಸಾಯಿ ಅವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಹೊರನಾಡ ಕನ್ನಡ ಸಂಘ

ಕರ್ನಾಟಕ ಸಂಘ ಮುಂಬೈ

ಮುಂಬೈ ಮಹಾನಗರದಲ್ಲಿ ಏಳು ದಶಕಗಳಿಂದ ಕನ್ನಡಿಗರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಶ್ರೇಯಸ್ಸಿಗಾಗಿ ಕಟಿ ಬದ್ಧವಾಗಿರುವ ಸಂಸ್ಥೆಯೇ ಕರ್ನಾಟಕ ಸಂಘ.
ಸಾಹಿತ್ಯ ಚಟುವಟಿಕೆ, ಸಾಂಸ್ಕೃತಿಕ ಉತ್ಸವ ಆಚರಿಸಲು ೧೯೩೩ರಲ್ಲಿ ಪ್ರಾರಂಭವಾದ ಮುಂಬೈ ಕರ್ನಾಟಕ ಸಂಘದ ಕಾರ್ಯತತ್ಪರತೆಯಿಂದ ಮುಂಬೈನ ಕೆಲವು ಮುನಿಸಿಪಲ್ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಲಿಸಲು ಸಾಧ್ಯವಾಗಿದೆ.
ಕನ್ನಡ ಶಿಕ್ಷಣಕ್ಕಾಗಿ ಹಲವು ಹಂತಗಳಲ್ಲಿ ರಚನಾತ್ಮಕ ಕಾರ್ಯನಿರ್ವಹಿಸಿರುವ ಕರ್ನಾಟಕ ಸಂಘ ಒತ್ತಾಸೆಯಿಂದ ಪ್ರೌಢಶಾಲೆಯ ಹಂತದಲ್ಲಿ ಕನ್ನಡ ಭಾಷೆ ಕಲಿಯಲು ಅವಕಾಶವಿದ್ದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ‘ಕನ್ನಡ ಪೀಠ’ ಆರಂಭಿಸಲು ಕಾರಣವಾಯಿತು.
ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವನ್ನು ಕರ್ನಾಟಕ ಸಂಘ ರೂಪಿಸಿದ್ದು ಮುಂಬೈನಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ.
ಮುಂಬೈನಲ್ಲಿ ಎರಡು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ (೧೯೩೫ ಹಾಗೂ ೧೯೫೧) ಹೊಣೆ ಹೊತ್ತುಕೊಂಡಿದ್ದ ಕರ್ನಾಟಕ ಸಂಘ ಹಲವಾರು ಸಾಹಿತ್ಯ ಕೃತಿಗಳನ್ನು ಹೊರತಂದಿದೆ.
ಭಾರತರತ್ನ ಡಾ. ಎಂ. ವಿಶ್ವೇಶ್ವರಯ್ಯ ಸ್ಮಾರಕ ಮಂದಿರವನ್ನು ನಿರ್ಮಿಸಿರುವ ಕರ್ನಾಟಕ ಸಂಘ ಅತ್ಯುತ್ತಮ ಕನ್ನಡ ಕೃತಿಗಳನ್ನು, ಗ್ರಂಥಾಲಯವನ್ನು ಹೊಂದಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಹೊರದೇಶದ ಕನ್ನಡ ಸಂಘ

ಅಬುಧಾಬಿ ಕರ್ನಾಟಕ ಸಂಘ

ಅರಬ್ ರಾಷ್ಟ್ರಗಳಲ್ಲಿರುವ ಕನ್ನಡ ಸಂಸ್ಥೆಗಳನ್ನು ಒಗ್ಗೂಡಿಸಿ ಕನ್ನಡ ನಾಡು ನುಡಿಯನ್ನು ಪಸರಿಸುತ್ತಿರುವ ಸಂಸ್ಥೆ ಅಬುಧಾಬಿ ಕರ್ನಾಟಕ ಸಂಘ.
ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಬುಧಾಬಿ ಕರ್ನಾಟಕ ಸಂಘ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಅಪರೂಪದ ಸಂಘ.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ತೆರೆದುಕೊಳ್ಳುವ ಅಬುಧಾಬಿ ಕರ್ನಾಟಕ ಸಂಘ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಸಮ್ಮಾನಿಸುವ ಕಾರ್ಯವನ್ನು ಮಾಡುತ್ತ ಬ೦ದಿದೆ.
ಕರ್ನಾಟಕದಿಂದ ಗಣ್ಯ ಸಾಹಿತಿ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವ ಅಬುಧಾಬಿ ಕರ್ನಾಟಕ ಸಂಘ ಯು.ಎ.ಇ. ನಲ್ಲಿರುವ ಎಲ್ಲಾ ಕನ್ನಡ ಸಂಘ ಸಂಸ್ಥೆಗಳನ್ನು ಒಂದುಗೂಡಿಸಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ೨೦೦೪ರಲ್ಲಿ ವೈವಿಧ್ಯಮಯವಾಗಿ ನಡೆಸಿತು.
ತಾಯ್ಲೆಲದ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವ ಅಬುಧಾಬಿ ಕರ್ನಾಟಕ ಸಂಘ ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳ ಆರಂಭಕ್ಕೆ ಪ್ರೇರೇಪಣೆ ನೀಡಿದ್ದು ಕ್ರೀಡಾ ಪಂದ್ಯಾವಳಿಗಳನ್ನೂ ವ್ಯವಸ್ಥೆಮಾಡುತ್ತಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಾದಲ್ ಚಂದ್ ಜೊರ್ಡಿಯಾ ಟ್ರಸ್ಟ್

ಹೃದ್ರೋಗದಿಂದ ಬವಣೆಪಡುವ ಅಸಹಾಯಕರಿಗೆ ಆಸರೆ ದೀಪವಾಗಿ ನಿಂತಿದೆ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್.
ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಡವರಿಗೆ ಸಂಪೂರ್ಣ ವೆಚ್ಚವನ್ನು ಭರಿಸುವ ಶ್ರೀ ಬಾದಲ್ ಚಂದ್ ಚೊರ್ಡಿಯಾ ಟ್ರಸ್ಟ್ (ಚೆನ್ನೈ) ಈವರೆಗೆ ನೂರಾರು ರೋಗಿಗಳ ನೆರವಿಗೆ ಬಂದಿದೆ.
ಚೆನ್ನೈನಲ್ಲಿರುವ ಈ ಟ್ರಸ್ಟ್ ತನ್ನ ದತ್ತಿ ನಿಧಿಯಿಂದ ಪ್ರತಿ ತಿಂಗಳು ೧೦-೧೫ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿದ್ದು ಕರ್ನಾಟಕದ ಕಡೂರು ಸೇರಿದಂತೆ ೧೧ ಕಡೆಗಳಲ್ಲಿ ಶಾಲಾ ಕಟ್ಟಡ ನಿರಾಣಕ್ಕೂ ಸಹಾಯ ಹಸ್ತ ನೀಡಿದೆ.
ಚೊರ್ಡಿಯಾ ಟ್ರಸ್ಟ್‌ನ ಪರವಾಗಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಶ್ರೀ ಶಾಂತಿಲಾಲ್ ಕಂಕರಿಯಾ ಜೈನ್ ರಾಜಾಸ್ತಾನ್ ಯೂತ್ ಅಸೋಸಿಯೇಷನ್ ಮೂಲಕ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ವಿದ್ಯಾರ್ಥಿ ವೇತನ ವಿತರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಚೊರ್ಡಿಯಾ ಟ್ರಸ್ಟ್‌ನಿಂದ ಈವರೆಗೆ ಕರ್ನಾಟಕದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಅಶಕ್ತರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಪೂರ್ಣ ಧನಸಹಾಯ ನೀಡಲಾಗಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ರುಡ್‌ಸೆಟ್‌, ಧರ್ಮಸ್ಥಳ

ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿಗಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶೈಕ್ಷಣಿಕ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್, ಕೆನರಾಬ್ಯಾಂಕ್ ಸಾರ್ಡ್ ಫೌಂಡೇಷನ್, ಸಿಬಿಪಿಜೆಆರ್‌ಡಿ ಟ್ರಸ್ಟ್ ಸಂಯುಕ್ತವಾಗಿ ೧೯೮೨ರಲ್ಲಿ ಪ್ರಾರಂಭಿಸಿದ ಸಂಸ್ಥೆಯೇ ‘ರುಡ್‌ಸೆಟ್’.
ಕರ್ನಾಟಕದ ಉಜಿರೆಯಲ್ಲಿ ಕೇಂದ್ರ ಸ್ಥಾನವಿರುವ ರುಡ್‌ಸೆಟ್ ದೇಶದಾದ್ಯಂತ ೨೦ ಶಾಖೆಗಳನ್ನು ಹೊಂದಿದ್ದು ಗ್ರಾಮೀಣ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವಕಾಶ ಒದಗಿಸುತ್ತಾ ಬಂದಿದೆ.
ಪ್ರಧಾನ ಮಂತ್ರಿಗಳ ರೋಜ್ಜಾರ್ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತರಬೇತಿ ನೀಡುವ ‘ರುಡ್‌ಸೆಟ್’ ಮಾದರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಎಲ್ಲಾ ರಾಜ್ಯಗಳಲ್ಲೂ ಇದರ ಜಾರಿಗೆ ಆದೇಶಿಸಿದೆ.
ಕರ್ನಾಟಕದ ನಾಲ್ಕು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಕ್ಷೇತ್ರಾಧಿಕಾರಿಗಳಿಗೆ ‘ಸ್ವಶಕ್ತಿ ಯೋಜನೆಯಡಿ ತರಬೇತಿ ನೀಡಿರುವ ‘ರುಡ್ ಸೆಟ್’ ರಾಜ್ಯದ ವೃತ್ತಿಪರ ಕಾಲೇಜುಗಳ ಅಧಿಕಾರಿಗಳಿಗೆ ಮಾನವ ಸಂಪನ್ಮೂಲ ಬಳಕೆ ಕುರಿತ ತರಬೇತಿಯನ್ನು ವ್ಯವಸ್ಥೆ ಮಾಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗದ ಸೂಕ್ತ ಅವಕಾಶಗಳನ್ನು ಗುರುತಿಸಿ ಅವುಗಳ ಅನುಷ್ಟಾನಕ್ಕೆ ತರಬೇತಿ ನೀಡುತ್ತಿರುವ ‘ರುಡ್‌ಸೆಟ್’ ಹಳ್ಳಿಗಾಡಿನ ಯುವ ಸಮುದಾಯದ ದಾರಿದೀಪ.

Categories
ರಾಜ್ಯೋತ್ಸವ 2006 ಸಮಾಜಸೇವೆ

ಶ್ರೀ ಎಚ್. ಜಿ. ಗೋವಿಂದಗೌಡ

ರಾಜಕಾರಣದಲ್ಲಿದ್ದೂ ಸರಳತೆ, ಪ್ರಾಮಾಣಿಕತೆ ಹಾಗೂ ತತ್ವನಿಷ್ಠೆಗಳಿಂದ ಜನಮನ ಗೆದ್ದ ಅಪರೂಪದ ರಾಜಕಾರಣಿ ಶ್ರೀ ಎಚ್.ಜಿ. ಗೋವಿಂದ ಗೌಡ ಅವರು.
ಹಸಿರು ಚಿಮ್ಮುವ ಮಲೆನಾಡಿನ ಕಾನೂರಿನಲ್ಲಿ ಜನಿಸಿದ ಗೋವಿಂದಗೌಡರು ಜೀವನ ಶಿಕ್ಷಣ ಪಡೆದದ್ದು ಸ್ವಾತಂತ್ರ ಹೋರಾಟದ ಪಾಠಶಾಲೆಯಲ್ಲಿ, ಕಡಿದಾಳು ಮಂಜಪ್ಪನವರ ಗರಡಿಯಲ್ಲಿದ್ದುಕೊಂಡು ಪುಟ್ಟ ಅಂಗಡಿ ಆರಂಭಿಸಿದ ಗೋವಿಂದಗೌಡರು ಕೊಪ್ಪ ಪುರಸಭೆಯ ಅಧಿಕಾರೇತರ ಅಧ್ಯಕ್ಷನಾಗುವ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟರು.
ಜನಹಿತ ಕಾಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಗೋವಿಂದಗೌಡರು ತಾಲ್ಲೂಕು ಅಭಿವೃದ್ಧಿ ಮಂಡಲಿ ಹಾಗೂ ಕೃಷಿ ವ್ಯವಸಾಯೋತ್ಪನ್ನ ಸಮಿತಿ ಅಧ್ಯಕ್ಷರಾಗಿದ್ದು ನಂತರ ವಿಧಾನಸಭೆ ಪ್ರವೇಶಿಸಿದರು.
ಪ್ರಾಥಮಿಕ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಎಚ್.ಜಿ. ಗೋವಿಂದಗೌಡ ವಿದ್ಯಾ ಇಲಾಖೆಯಲ್ಲಿ ತಂದ ಸುಧಾರಣೆಗಳು ಹತ್ತಾರು. ಶಿಕ್ಷಕರ ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ಅವರು ರೂಪಿಸಿದ ಪಾರದರ್ಶಕ ವಿಧಾನ ಅನುಕರಣೀಯ.
ದೀರ್ಘಕಾಲದ ರಾಜಕೀಯ ಜೀವನದಲ್ಲಿ ಯಾವುದೇ ವಿವಾದಕ್ಕೊಳಗಾಗದೆ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿ ಬಾಳುತ್ತಿರುವ ಶ್ರೀ ಗೋವಿಂದಗೌಡರು ಆದರ್ಶಪ್ರಾಯರು.

Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಗಂಗಾಧರನ್

ವಕೀಲ ವೃತ್ತಿ-ರಾಜಕಾರಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು ಶ್ರೀ ಎಚ್. ಗಂಗಾಧರನ್ ಅವರು.
ತುಮಕೂರು ಜಿಲ್ಲೆ ಹಿಂಡಿಸಗೆರೆಯಲ್ಲಿ ಹುಟ್ಟಿ ಈಗ ಮೈಸೂರಿನಲ್ಲಿ ನೆಲೆಸಿರುವ ಶ್ರೀ ಎಚ್. ಗಂಗಾಧರನ್ ಮೈಸೂರು ಕೃಷ್ಣರಾಜಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದವರು.
ಜೆ.ಎಸ್.ಎಸ್. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಶ್ರೀ ಎಚ್. ಗಂಗಾಧರನ್ ಅವರು ಕಾರ್ಮಿಕ ಸಂಘಟನೆ, ಸಹಕಾರ ಸಂಘ, ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರು.
ಸಾಹಿತ್ಯದಲ್ಲಿ ಅಭಿರುಚಿಯುಳ್ಳ ಶ್ರೀ ಎಚ್.ಗಂಗಾಧರನ್ ಅವರು ಅನೇಕ ಧಾರ್ಮಿಕ, ದಾರ್ಶನಿಕ ಕೃತಿಗಳನ್ನು ಹಾಗೂ ಕಾದಂಬರಿಗಳನ್ನು ರಚಿಸಿದ್ದಾರೆ.
ನಾಡಿನ ಅನೇಕ ಪ್ರಸಿದ್ಧ ದೇವಾಲಯಗಳ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಚ್. ಗಂಗಾಧರನ್ ಅವರು ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ. ಎಚ್. ಹನುಮಂತರಾಯ

ವಕೀಲ ವೃತ್ತಿಯೊಡನೆ ಜನಪರ ಹೋರಾಟ ಹಾಗೂ ಸಾಹಿತ್ಯದ ಒಡನಾಟ ಇಟ್ಟುಕೊಂಡ ಅಪರೂಪದ ವಕೀಲರಲ್ಲಿ ಸಿ. ಎಚ್. ಹನುಮಂತರಾಯ ಒಬ್ಬರು.
ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ ಪದವಿ ಗಳಿಸಿ ಕಾನೂನು ವ್ಯಾಸಂಗ ಮಾಡಿ ಪ್ರಸಿದ್ಧ ಕ್ರಿಮಿನಲ್ ವಕೀಲರೆಂದು ಹೆಸರು ಮಾಡಿರುವ ಹನುಮಂತರಾಯ ಅವರು ಸೀಮಾತೀತ ಕ್ರಿಮಿನಲ್ ವಕೀಲ ಪಿ. ಎಸ್. ದೇವದಾಸ್ ಅವರಲ್ಲಿ ಪಳಗಿದವರು.
ಉಗುರು ಸ್ವಾಮಿ ಕೊಲೆ ಪ್ರಕರಣ, ಬೀನಾ ಕೊಲೆ ಮೊಕದ್ದಮೆ, ಸತ್ಯದೇವ್ ಹತ್ಯಾ ಪ್ರಕರಣ ಹೀಗೆ ಹಲವಾರು ಕುತೂಹಲ ಕೆರಳಿಸಿದ ಪ್ರಕರಣಗಳಲ್ಲಿ ತಮ್ಮ ಕಾನೂನು ನೈಪುಣ್ಯತೆ ತೋರಿ ಗಮನ ಸೆಳೆದ ಸಿ. ಎಚ್. ಹನುಮಂತರಾಯ ಅವರು ಅನೇಕ ಕನ್ನಡಪರ ಹೋರಾಟಗಾರರ ಪರವಾಗಿ ಮೊಕದ್ದಮೆಗಳಲ್ಲಿ ವಕಾಲತ್ತು ನಡೆಸಿದ್ದಾರೆ.
ನ್ಯಾಯಾಲಯಗಳಲ್ಲಿ ವಾದಿಸಿದಂತೆ ಅನೇಕ ಸಾಹಿತ್ಯ ಸಮಾವೇಶಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿರುವ ಹನುಮಂತರಾಯ ಅವರು ಅನೇಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆಗಳ ಕನ್ನಡ ಸಂಘಗಳ ಅಧ್ಯಕ್ಷರು.
ವೃತ್ತಿ ಅನುಭವವನ್ನು ಆಪ್ಯಾಯವಾಗಿ ಬರವಣಿಗೆಯಲ್ಲಿ ತೆರೆದಿಡುವ ಸಿ. ಎಚ್. ಹನುಮಂತರಾಯ ಅನೇಕ ಕಾನೂನು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು.

Categories
ಕ್ರೀಡೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜನ್ ಉತ್ತಪ್ಪ

ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ೮೬ ರನ್ ಬಾರಿಸಿದ ಕ್ರಿಕೆಟ್ ಕಲಿ ಶ್ರೀ ರಾಬಿನ್ ಉತ್ತಪ್ಪ.
ಎಳೆಯ ವಯಸ್ಸಿನಿಂದಲೇ ಕ್ರಿಕೆಟ್ ಮೋಹ ಬೆಳೆಸಿಕೊಂಡ ರಾಬಿನ್ ಉತ್ತಪ್ಪ ಹದಿಹರೆಯದಲ್ಲೇ ಕರ್ನಾಟಕ ತಂಡಕ್ಕೆ ಸೇರಿ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದರು.
ಆಲ್‌ರೌಂಡ್ ಆಟಗಾರನಾಗಿ ಕ್ರಿಕೆಟ್ ಅಂಗಳದಲ್ಲಿ ಚಿಗುರಿರುವ ಈ ಕರ್ನಾಟಕದ ಆಟಗಾರ ಈಗಾಗಲೇ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದು ಉತ್ತಮ ಭವಿಷ್ಯ ಹೊಂದಿರುವ ಆಟಗಾರನೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ರಣಜಿ, ದುಲಿಪ್ ಟ್ರೋಫಿ, ೧೯ ವರ್ಷದೊಳಗಿನ ಭಾರತ ತಂಡ, ಹೀಗೆ ಯಾವುದೇ ತಂಡದಲ್ಲಿದ್ದರೂ ಉತ್ತಮ ಬ್ಯಾಟುದಾರನೆಂಬ ಪ್ರಶಂಸೆ ಪಡೆದಿರುವ ರಾಬಿನ್ ಉತ್ತಪ್ಪ ಈಗ ಪದವಿ ತರಗತಿಯಲ್ಲಿರುವ ವಿದ್ಯಾರ್ಥಿ.

Categories
ಕ್ರೀಡೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್

ವಿಶ್ವ ಕ್ರಿಕೆಟ್ ಲೋಕಕ್ಕೆ ಕರ್ನಾಟಕ ನೀಡಿದ ಕೊಡುಗೆಗಳಲ್ಲೊಬ್ಬರು ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್. ಭಾರತ ಕ್ರಿಕೆಟ್ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ವೆಂಕಟೇಶ್ ಪ್ರಸಾದ್ ೧೯೯೪ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ೧೯೯೬ ಹಾಗೂ ೧೯೯೯ರ ವಿಶ್ವಕಪ್‌ಗಳಲ್ಲಿ ಭಾರತ ತಂಡದಲ್ಲಿದ್ದ ವೆಂಕಿ ಪಾಕೀಸ್ತಾನದ ವಿರುದ್ಧ ೨೭ ರನ್ ನೀಡಿ ೫ ವಿಕೆಟ್ ಪಡೆದಿದ್ದು ಶ್ರೇಷ್ಠ ಸಾಧನೆ.
೧೯೯೬ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಬದುಕು ಆರಂಭಿಸಿದ ಬೌಲರ್ ವೆಂಕಿ ಏಳು ಇನಿಂಗ್ಸ್‌ಗಳಲ್ಲಿ ತಲಾ ೫ ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಪ್ರತಿಷ್ಟಿತ ಅಂತರರಾಷ್ಟ್ರೀಯ ಕ್ರಿಕೆಟ‌ ಪ್ರಶಸ್ತಿ (೧೯೯೭) ಅರ್ಜುನ್ ಪ್ರಶಸ್ತಿ (೨೦೦೧) ‘ಏಕಲವ್ಯ ಪ್ರಶಸ್ತಿ’ (೧೯೯೯) ಪಡೆದಿರುವ ವೆಂಕಟೇಶ್ ಪ್ರಸಾದ್ ಕರ್ನಾಟಕ ರಣಜಿ ಟ್ರೋಫಿ ತಂಡದ ಪ್ರಧಾನ ಕೋಚ್‌.
ಕ್ರಿಕೆಟ್ ಅಂಗಳದಿಂದ ಕ್ರಿಕೆಟ್ ಆಡಳಿತಕ್ಕೆ ಬಂದಿರುವ ವೆಂಕಟೇಶ ಪ್ರಸಾದ್ ಅವರ ಈಗಿನ ಗುರಿ ತರಬೇತಿಯಲ್ಲಿ ಶ್ರೇಷ್ಠ ಪರಿಣತಿ ಪಡೆಯುವುದು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಎಂ. ಕೆ. ಸೂರಪ್ಪ

ವಿಜ್ಞಾನ, ತಂತ್ರಜ್ಞಾನದ ಫಲ ಜನತೆಯ ಬದುಕನ್ನು ಹಸನುಗೊಳಿಸಲು ಲಭ್ಯವಾಗಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವ ಕ್ರಿಯಾಶೀಲ ವಿಜ್ಞಾನಿ ಡಾ. ಎಂ.ಕೆ. ಸೂರಪ್ಪ ಅವರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎಂ.ಕೆ. ಸೂರಪ್ಪನವರು ನಾಡಿನ ಹೆಸರಾಂತ ಲೋಹತಜ್ಞರು.
ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಲಿಯ ಕಾರ್ಯದರ್ಶಿಗಳಾಗಿರುವ ಸೂರಪ್ಪನವರು ಕರ್ನಾಟಕದ ಪ್ರಥಮ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಿದ್ಧಪಡಿಸುವ ಸಮಿತಿಯಲ್ಲಿ ಸಕ್ರಿಯರಾಗಿದ್ದು ರಾಜ್ಯದ ೨೦ ಸಾವಿರ ಸರ್ಕಾರಿ ಶಾಲೆಗಳಲ್ಲಿ ಮಳೆನೀರು ಸಂಗ್ರಹ ಯೋಜನೆಗೆ ಚಾಲನೆ ನೀಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
5.62. ಲೋಹ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಡಾ. ಎಂ.ಕೆ. ಸೂರಪ್ಪ ಕೇಂದ್ರ ಸರ್ಕಾರದ ಗಣಿ ಹಾಗೂ ಉಕ್ಕು ಇಲಾಖೆಯ ವಾರ್ಷಿಕ ಲೋಹ ತಜ್ಞ ಪ್ರಶಸ್ತಿ, ಜಪಾನಿನ C ಹಣ ರದ ದ ಜೆ.ಎಸ್.ಪಿ.ಎಸ್. ಫೆಲೋಷಿಪ್ ಸೇರಿದಂತೆ ಹಲವು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

Categories
ಛಾಯಾಗ್ರಹಣ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೇನಾನಿ

ವನ್ಯ ಜಗತ್ತಿನ ಅದ್ಭುತಗಳನ್ನು ಕ್ಯಾಮರಾದಲ್ಲಿ ಹಿಡಿದಿಟ್ಟು ಜಾಗತಿಕ ಮಟ್ಟಕ್ಕೆ ಏರಿದ ಕನ್ನಡಿಗ ಜೋಡಿ ಕೃಪಾಕರ್ ಸೇನಾನಿ.
ಪಶ್ಚಿಮ ಘಟ್ಟಗಳ ಪಕ್ಷಿಲೋಕವನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನವನ್ನು ೧೯೮೬ ಹಾಗೂ ೨. ೧೯೯೦ರಲ್ಲಿ ವ್ಯವಸ್ಥೆ ಮಾಡಿದ್ದ ಕೃಪಾಕರ್-ಸೇನಾನಿ ಈಗ ಪೂರ್ಣಾವಧಿ ವನ್ಯ ಪ್ರಪಂಚದ ಛಾಯಾಗ್ರಾಹಕರು ಹಾಗೂ ಚಲನಚಿತ್ರ ತಯಾರಕರು.
ಮೈಸೂರಿನಲ್ಲಿ ನೆಲೆನಿಂತ ಕ್ರೀಡಾ ಪತ್ರಕರ್ತ ಬಿ. ಎಸ್. ಕೃಪಾಕರ್ ಹಾಗೂ ಎಂಜಿನಿಯರ್ ಸೇನಾನಿ ಅವರ ಕ್ಯಾಮರಾಗೆ ಸೆರೆಸಿಕ್ಕ ಛಾಯಾಚಿತ್ರಗಳು ದೇಶ ವಿದೇಶಗಳ ಹಲವಾರು ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಅಂತರರಾಷ್ಟ್ರೀಯ ಪ್ರತಿಷ್ಠೆಯ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವ ಭಾರತ ಉಪಖಂಡದ ಪಕ್ಷಿ ಪ್ರಪಂಚದ ಕೃತಿಗಳಲ್ಲಿ ಕೃಪಾಕರ್ ಸೇನಾನಿ ಅವರು ಪಶ್ಚಿಮಘಟ್ಟದ ಪಕ್ಷಿಗಳ ಚಿತ್ರಗಳು ಬಳಕೆಯಾಗಿವೆ. ನ್ಯಾಷನಲ್ ಜಿಯಾಗ್ರಫಿ, ಬಿ.ಬಿ.ಸಿ., ಡಿಸ್ಕವರಿ, ಚಾನಲ್‌ ೪ ಟೆಲಿವಿಷನ್‌ಗಳಿಗೆ ೧೫ಕ್ಕೂ ಹೆಚ್ಚು ವನ್ಯಲೋಕ ಸಾಕ್ಷ್ಯಚಿತ್ರಗಳನ್ನು ತಯಾರಿಸಿರುವ ಕೃಪಾಕರ್ ಸೇನಾನಿ ಕೆ. ಪುಟ್ಟಸ್ವಾಮಿ ಅವರೊಂದಿಗೆ ಬರೆದ ‘ಜೀವಜಾಲ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

Categories
ಛಾಯಾಗ್ರಹಣ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೃಪಾಕರ್

ವನ್ಯ ಜಗತ್ತಿನ ಅದ್ಭುತಗಳನ್ನು ಕ್ಯಾಮರಾದಲ್ಲಿ ಹಿಡಿದಿಟ್ಟು ಜಾಗತಿಕ ಮಟ್ಟಕ್ಕೆ ಏರಿದ ಕನ್ನಡಿಗ ಜೋಡಿ ಕೃಪಾಕರ್ ಸೇನಾನಿ.
ಪಶ್ಚಿಮ ಘಟ್ಟಗಳ ಪಕ್ಷಿಲೋಕವನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನವನ್ನು ೧೯೮೬ ಹಾಗೂ ೧೯೯೦ರಲ್ಲಿ ವ್ಯವಸ್ಥೆ ಮಾಡಿದ್ದ ಕೃಪಾಕರ್-ಸೇನಾನಿ ಈಗ ಪೂರ್ಣಾವಧಿ ವನ್ಯ ಪ್ರಪಂಚದ ಛಾಯಾಗ್ರಾಹಕರು ಹಾಗೂ ಚಲನಚಿತ್ರ ತಯಾರಕರು.
ಮೈಸೂರಿನಲ್ಲಿ ನೆಲೆನಿಂತ ಕ್ರೀಡಾ ಪತ್ರಕರ್ತ ಬಿ. ಎಸ್. ಕೃಪಾಕರ್ ಹಾಗೂ ಎಂಜಿನಿಯ‌ ಸೇನಾನಿ ಅವರ ಕ್ಯಾಮರಾಗೆ ಸೆರೆಸಿಕ್ಕ ಛಾಯಾಚಿತ್ರಗಳು ದೇಶ ವಿದೇಶಗಳ ಹಲವಾರು ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ನೀಡಿ ಅ ಅಂತರರಾಷ್ಟ್ರೀಯ ಪ್ರತಿಷ್ಠೆಯ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವ ಭಾರತ ಉಪಖಂಡದ ಪಕ್ಷಿ ಪ್ರಪಂಚದ ಕೃತಿಗಳಲ್ಲಿ ಕೃಪಾಕರ್ ಸೇನಾನಿ ಅವರು ಪಶ್ಚಿಮಘಟ್ಟದ ಪಕ್ಷಿಗಳ ಚಿತ್ರಗಳು ಬಳಕೆಯಾಗಿವೆ.
ನ್ಯಾಷನಲ್ ಜಿಯಾಗ್ರಫಿ, ಬಿ.ಬಿ.ಸಿ., ಡಿಸ್ಕವರಿ, ಚಾನಲ್ ೪ ಟೆಲಿವಿಷನ್‌ಗಳಿಗೆ ೧೫ಕ್ಕೂ ಹೆಚ್ಚು ವನ್ಯಲೋಕ ಸಾಕ್ಷ್ಯಚಿತ್ರಗಳನ್ನು ತಯಾರಿಸಿರುವ ಕೃಪಾಕರ್ ಸೇನಾನಿ ಕೆ. ಪುಟ್ಟಸ್ವಾಮಿ ಅವರೊಂದಿಗೆ ಬರೆದ ‘ಜೀವಜಾಲ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

Categories
ಮಾನವಿಕ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಡಾ. ಕೆ. ಪುಟ್ಟಸ್ವಾಮಯ್ಯ

ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳನ್ನು ತಯಾರಿಸಿ ನಾಡಿನ ಮುನ್ನಡೆ ಶ್ರಮಿಸಿದವರು ಹೆಸರಾಂತ ಅರ್ಥಶಾಸ್ತ್ರಜ್ಞ ಡಾ. ಪುಟ್ಟಸ್ವಾಮಯ್ಯ ಅವರು.
ತುಮಕೂರಿನವರಾದ ಡಾ. ಪುಟ್ಟಸ್ವಾಮಯ್ಯನವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ವಿಶ್ವಸಂಸ್ಥೆಯ ಏಷ್ಯ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಫೆಲೋಷಿಪ್ ಗಳಿಸಿದ ಪ್ರತಿಭಾವಂತರು.
ಕರ್ನಾಟಕ ಸರ್ಕಾರದ ಹಲವು ಅಭಿವೃದ್ಧಿ ಇಲಾಖೆಗಳಲ್ಲಿ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಡಾ. ಪುಟ್ಟಸ್ವಾಮಯ್ಯನವರು ರಚಿಸಿದ ಅನೇಕ ಅರ್ಥಶಾಸ್ತ್ರ ಕುರಿತ ಕೃತಿಗಳು ಆರ್ಥಿಕ ತಜ್ಞರಪ್ರಶಂಸೆಗೆ ಪಾತ್ರವಾಗಿದೆ.
ವಿಶ್ವದಾದ್ಯಂತ ಅನೇಕ ಅರ್ಥಶಾಸ್ತ್ರದ ಬಗೆಗಿನ ಸಮ್ಮೇಳನ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಅನುಭವ ಪಡೆದುಕೊಂಡಿರುವ ಡಾ. ಪುಟ್ಟಸ್ವಾಮಯ್ಯ ನವರು ವಿಶ್ವಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಕರ್ನಾಟಕದಲ್ಲಿ ಕೈಗೊಂಡ ರೇಷ್ಮೆ ನಿಯಂತ್ರಿತ ಮಾರುಕಟ್ಟೆ, ಡಿ. ಪಿ.ಎ.ಪಿ ಮುಂತಾದ ಯೋಜನೆಗಳ ರೂಪುರೇಷೆ ತಯಾರಿಸಿದವರು.
ಕರ್ನಾಟಕ ಯೋಜನಾ ಆಯೋಗದ ಸದಸ್ಯರಾದ ಡಾ. ಪುಟ್ಟಸ್ವಾಮಯ್ಯನವರು ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ಶ್ಯಾಮಸುಂದರ್

ಹಳ್ಳಿಗಾಡಿನ ಆಗುಹೋಗುಗಳನ್ನು ಸಮರ್ಥವಾಗಿ ವರದಿ ಮಾಡುವ ಪತ್ರಕರ್ತರಲ್ಲಿ ಬಳ್ಳಾರಿಯ ಶ್ರೀ ಎಸ್. ಶ್ಯಾಮಸುಂದರ್ ಅವರೂ ಒಬ್ಬರು.
ಇಂಗ್ಲೀಷ್‌ನಲ್ಲಿ ಸ್ನಾತಕಪದವಿ ಪಡೆದು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಎಸ್‌. ಶ್ಯಾಮಸುಂದರ್‌ ೧೯೮೧ರಿಂದ ಬಳ್ಳಾರಿಯಲ್ಲಿ ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳ ವರದಿಗಾರರಾಗಿದ್ದರು. “ಭಟ್ಟಿ ಸಾರಾಯಿಗೂ ಬ್ಯಾಂಕ್‌ ಸಾಲ”, “ಬಳ್ಳಾರಿ ಬಂದೂಕಿನ ಪೂರ್ವೋತ್ತರ” “ಕುಷ್ಠ ಆಯುರ್ವೇದ ನಿವಾರಿಸಬಲ್ಲ ಅನಿಷ್ಠ” ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ಆಸಕ್ತಿ ಪೂರ್ಣ ವರದಿಗಳನ್ನು ನೀಡಿರುವ ಶ್ಯಾಮಸುಂದರ್ ಈಗ ಬಳ್ಳಾರಿಯಲ್ಲಿ ವಿಜಯ ಟೈಂಸ್‌ನ ಹಿರಿಯ ವರದಿಗಾರ, ಕರ್ನಾಟಕ ಮಾದ್ಯಮ ಅಕಾಡಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಎಸ್. ಶ್ಯಾಮಸುಂದರ್ ಮಾನವೀಯ ವರದಿಗೆ ಒತ್ತುಕೊಟ್ಟವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ. ಎಸ್. ಸದಾಶಿವ

ರಾಜ್ಯಶಾಸ್ತ್ರ ಓದಿದರೂ ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರವೃತ್ತಿಯಿಂದ ಸಾಹಿತಿಯಾದವರು ಸಾಗರದ ಶ್ರೀ ಜಿ. ಎಸ್. ಸದಾಶಿವ ಅವರು.
ನಾಡಿನ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರಗಳಲ್ಲಿ ಕಾರ್ಯ ನಿರ್ವಹಿಸಿದ ಶ್ರೀ ಜಿ. ಎಸ್. ಸದಾಶಿವ ಈಗ ಕನ್ನಡ ಪ್ರಭದ ಕಾರ್ಯ ನಿರ್ವಾಹಕ ಸಂಪಾದಕರು.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸದಾಶಿವ ಹೊರತಂದಿರುವ ಸಣ್ಣ ಕಥೆಗಳ ಸಂಕಲನಗಳು ಮೂರು. ಬೇರೆ ಭಾಷೆಯ ಕಥೆಗಳನ್ನು ಅನುವಾದಿಸಿರುವ ಸದಾಶಿವ ಮಕ್ಕಳ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದು ಕೊಟ್ಟವರು.
ಚಲನಚಿತ್ರಗಳಿಗೆ ಸಂಭಾಷಣೆ (ಆಕ್ಸಿಡೆಂಟ್, ಮೂರು ದಾರಿಗಳು) ಚಿತ್ರಕಥೆ ಹಾಗೂ ಸಂಭಾಷಣೆ (ಆಕ್ರಮಣ) ಬರೆದಿರುವ ಸದಾಶಿವ ‘ಎಲ್ಲಿಂದಲೋ ಬಂದವರು’ ಚಿತ್ರದ ಚಿತ್ರಕಥೆಯನ್ನು ಪಿ. ಲಂಕೇಶರ ಜೊತೆ ರಚಿಸಿದರು.
ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಗಟ್ಟಿಸ್ಥಾನ ತಂದುಕೊಟ್ಟವರಲ್ಲಿ ಒಬ್ಬರಾದ ಜಿ. ಎಸ್. ಸದಾಶಿವ ಅವರಿಗೆ ಮಾಧ್ಯಮ ಅಕಾಡಮಿ, ಪದ್ದಣ್ಣ ನೇಪಥ್ಯ ಕಲಾ ಪ್ರಶಸ್ತಿ, ರಾಮಚಂದ್ರಾಪುರ ಮಠ ಪ್ರಶಸ್ತಿಗಳು ಸಂದಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಎನ್. ಶಾಂತಕುಮಾರ್

ಆಟೋಟಗಳ ರೋಮಾಂಚಕ ಕ್ಷಣಗಳನ್ನು ತಮ್ಮ ಕ್ಯಾಮರಾ ಒಳಗಣ್ಣುಗಳಿಂದ ಹಿಡಿದಿಡುತ್ತಿದ್ದ ಶ್ರೀ ಕೆ.ಎನ್. ಶಾಂತಕುಮಾರ್ ಈಗ ಪ್ರಿಂಟರ್ ಪತ್ರಿಕಾ ಸಮೂಹದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಸಂಪಾದಕರು.
ಪದವಿ ಪಡೆದ ಬಳಿಕ ಕುಟುಂಬ ಸಂಸ್ಥೆ “ದಿ ಪ್ರಿಂಟರ್ (ಮೈಸೂರು) ಪ್ರೈವೇಟ್’ನ ಆಡಳಿತಕ್ಕೆ ಸೇರ್ಪಡೆಯಾದ ಶಾಂತಕುಮಾರ್ ತಂದೆ ನೆಟ್ಟಕಲ್ಲಪ್ಪನವರ ಪ್ರೀತಿಯ ಕ್ಷೇತ್ರವಾಗಿದ್ದ ಕ್ರೀಡೆಗಳತ್ತ ಒಲಿದರು.
ನಿಜ ಭಾಷಿಗಳ ಬದು ಕ್ರೀಡೆಗಳನ್ನು ಕ್ಯಾಮರಾದಿಂದ ಸೆರೆಹಿಡಿಯುವ ಹವ್ಯಾಸ ಬೆಳೆಸಿಕೊಂಡ ಕೆ. ಎನ್. ಶಾಂತಕುಮಾ‌ ಅನೇಕ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ಗಳಲ್ಲಿ ಪಾಲ್ಗೊಂಡು ನೋಡುಗರಿಗೆ ಕ್ರೀಡಾಸವಿ ಉಣಬಡಿಸಿದರು.
ಗಾಲ್ಫ್ ಆಟಗಾರರಾಗಿ ಈಗ ಬೆಂಗಳೂರು ಗಾಲ್ಫ್ ಕ್ಲಬ್ ಕಪ್ತಾನರೂ ಆಗಿರುವ ಶಾಂತಕುಮಾರ್ ಅನೇಕ ಪತ್ರಿಕೆ ಹಾಗೂ ಕ್ರೀಡಾ ಸಂಘಟನೆಗಳ ಒಡನಾಟ ಹೊಂದಿದವರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಾಂತಕುಮಾರ್ ಅವರಿಗೆ ಏಷ್ಯನ್ ಗೇಮ್ಸ್ನ (ಕೊರಿಯಾ) ಭಾರತೀಯ ಗಾಲ್ಫ್ ತಂಡದ ಮ್ಯಾನೇಜರ್ ಆಗಿದ್ದ ಅನುಭವವೂ ಇದೆ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ನಾರಾಯಣ್

ಸಹಾಯಕ ನಿರ್ದೇಶಕರಾಗಿದ್ದು ನಿರ್ದೆಶಕರಾಗಿ, ನಾಯಕ ನಟರಾಗಿಯೂ ಯಶಸ್ಸು ಪಡೆದವರು ಶ್ರೀ ಎಸ್. ನಾರಾಯಣ್ ಅವರು.
ಭಾರ್ಗವ, ಎ. ಟಿ. ರಘು ಮೊದಲಾದವರಲ್ಲಿ ಅನುಭವ ಪಡೆದ ಶ್ರೀ ಎಸ್. ನಾರಾಯಣ್ ಮೊದಲು ನಿರ್ದೇಶಿಸಿದ ಚಿತ್ರ ‘ಚೈತ್ರದ ಪ್ರೇಮಾಂಜಲಿ’. ಈ ಚಿತ್ರದ ಅಪೂರ್ವ ಯಶಸ್ಸಿನ ನಂತರ ಎಸ್. ನಾರಾಯಣ್ ಅವರು ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಿವರಾಜಕುಮಾರ್ ಮೊದಲಾದ ನಾಯಕನಟರು ಅಭಿನಯಿಸಿದ ಚಿತ್ರಗಳನ್ನು ನಿರ್ದೆಶಿಸಿ ಪ್ರೇಕ್ಷಕರ ಹಾಗೂ ಉದ್ಯಮದ
ಗಮನ ಸೆಳೆದರು.
ಸಂಭಾಷಣೆ, ಚಿತ್ರಕತೆ, ಗೀತೆಗಳನ್ನು ರಚಿಸಿ ನಿರ್ದೇಶನ ಮಾಡುತ್ತಿದ್ದ ಶ್ರೀ ಎಸ್. ನಾರಾಯಣ್ ನಾಯಕ ನಟರಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಯಶ ಗಳಿಸಿದರು.
ಹಿರಿಯ ನಟರಿದ್ದ ಚಿತ್ರಗಳಿಗೆ ನಿರ್ದೇಶನ ಮಾಡಿ ಹೆಸರು ಮಾಡಿದ ಶ್ರೀ ಎಸ್. ನಾರಾಯಣ್ ಯುವ ಪ್ರತಿಭೆಗಳಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದರು. ಕೆಲವು ಚಿತ್ರಗಳನ್ನು ತಾವೇ ನಿರ್ಮಿಸಿದ ಶ್ರೀ ನಾರಾಯಣ್ ಬಹುಮುಖ ಪ್ರತಿಭೆಯ ಕಲಾವಿದ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ದೊಡ್ಡಣ್ಣ

ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಗಳ ಪ್ರತಿಭಾವಂತ ನಟರಲ್ಲೊಬ್ಬರು ದೊಡ್ಡಣ್ಣ.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ದೊಡ್ಡಣ್ಣ ನಾಟಕದ ಗೀಳು ಹಚ್ಚಿಕೊಂಡರು.
ಅನೇಕ ಹವ್ಯಾಸಿ ನಾಟಕಗಳಲ್ಲಿ ನಟಿಸಿದ ಶ್ರೀ ದೊಡ್ಡಣ್ಣ ಅಭಿನಯಿಸಿದ ಮೊದಲ ಚಿತ್ರ ‘ಕೂಡಿಬಾಳಿದರೆ ಸ್ವರ್ಗಸುಖ’.
ಹಾಸ್ಯನಟ, ಖಳನಾಯಕರಾಗಿ ವಿಶೇಷ ಗಮನ ಸೆಳೆದಿರುವ ಶ್ರೀ ದೊಡ್ಡಣ್ಣ ಕೆಲವು ಗಂಭೀರ ಪಾತ್ರಗಳಲ್ಲೂ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ.
ತಮ್ಮದೇ ಆದ ಅಭಿನಯ ಶೈಲಿಯನ್ನು ರೂಢಿಸಿಕೊಂಡಿರುವ ಶ್ರೀ ದೊಡ್ಡಣ್ಣ ಕಳೆದ ೨೫ ವರ್ಷಗಳಿಂದ ನಟಿಸಿರುವ ಚಿತ್ರಗಳು ೬೦೦ಕ್ಕೂ ಹೆಚ್ಚು.
‘ಟು, ಟುವ್ವ ಟುವ್ವ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಪಡೆದಿರುವ ಶ್ರೀ ದೊಡ್ಡಣ್ಣ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹತ್ತು ಹಲವು.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹಂಸಲೇಖ

ಚಲನಚಿತ್ರ ಸಂಗೀತ ಲೋಕದಲ್ಲಿ ಹೊಸ ಅಲೆಯನ್ನು ಉಂಟು ಮಾಡಿದವರು ಖ್ಯಾತ ಸಂಗೀತ ಸಂಯೋಜಕ ಹಾಗೂ ಗೀತ ರಚನಕಾರ ಶ್ರೀ ಹಂಸಲೇಖ ಅವರು.
ಅಣ್ಣ ಬಾಲಕೃಷ್ಣನ ವಾದ್ಯಗೋಷ್ಠಿಯಲ್ಲಿ ಸೇರಿ ಸಂಗೀತದ ಪರಿಚಯ ಮಾಡಿಕೊಂಡ ಶ್ರೀ ಹಂಸಲೇಖ ತಮ್ಮದೇ ನಾಟಕ ತಂಡ ಕಟ್ಟಿಕೊಂಡು ಹಲವು ಬಗೆಯ ಪ್ರಯೋಗಗಳನ್ನು ಮಾಡಿದವರು. ರವಿಚಂದ್ರನ್ ನಿರ್ದೇಶನದ ‘ಪ್ರೇಮಲೋಕ’ ಚಿತ್ರದಲ್ಲಿ ರಾಕ್ ಸಂಗೀತ ಮಾದರಿಯನ್ನು ಅಳವಡಿಸಿ ದೃಶ್ಯಗಳನ್ನೇ ಹಾಡನ್ನಾಗಿ ಪರಿವರ್ತಿಸಿದಾಗ ಹಂಸಲೇಖ ಪ್ರತಿಭೆ ಬೆಳಕಿಗೆ ಬಂತು. ಅಲ್ಲಿಂದ ಚಿತ್ರ ಸಂಗೀತದಲ್ಲೊಂದು ಹೊಸ ಶಕೆಯೇ ಆರಂಭವಾಯಿತು.
ಯಶಸ್ವಿ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರರಾದ ಶ್ರೀ ಹಂಸಲೇಖ ಚಿತ್ರ ಸಂಗೀತದಂತೆ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತದಲ್ಲೂ ಪರಿಣತರು.
ಸಂಗೀತ ನಿರ್ದೆಶನ ಹಾಗೂ ಗೀತರಚನೆಗಾಗಿ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಶ್ರೀ ಹಂಸಲೇಖ ಅವರು ೨೦ ವರ್ಷಗಳಲ್ಲಿ ೩೦೦ಕ್ಕೂ ಹೆಚ್ಚು ಚಿತ್ರಗಳಿಗೆ ಗೀತರಚನಕಾರರಾಗಿ, ಸಂಗೀತ ನಿರ್ದೆಶಕರಾಗಿ ಕೆಲಸ ಮಾಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಸ್. ದ್ವಾರಕೀಶ್

ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕ ಹಾಗೂ ನಿರ್ದೆಶಕರಾಗಿ ಅನುಪಮ ಸೇವೆ ಸಲ್ಲಿಸಿದವರು ಕಲಾವಿದ ಶ್ರೀ ಬಿ. ಎಸ್. ದ್ವಾರಕೀಶ್ ಅವರು.
ಮೈಸೂರಿನಲ್ಲಿ ಆಟೋಮೊಬೈಲ್ ಇಂಜನಿಯರಿಂಗ್ ಡಿಪ್ಲೊಮಾ ಗಳಿಸಿ ಕುಟುಂಬ ಉದ್ಯೋಗವಾಗಿದ್ದ ಟೈರ್ ವ್ಯಾಪಾರವನ್ನು ಬಿಟ್ಟು ಶ್ರೀ ದ್ವಾರಕೀಶ್ ಅವರು ಚಿತ್ರರಂಗ ಪ್ರವೇಶಿಸಿದ್ದು ಸೋದರಮಾವ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದ ‘ವೀರಸಂಕಲ್ಪ’ ಚಿತ್ರದಲ್ಲಿ ನಟಿಸುವುದರ ಮೂಲಕ. ನಲ್ವತ್ತು ವರ್ಷಗಳಲ್ಲಿ ೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ೪೫ ಚಿತ್ರಗಳನ್ನು ನಿರ್ಮಿಸಿ, ೨೫ ಚಿತ್ರಗಳನ್ನು ನಿರ್ದೆಶಿಸಿದವರು ಶ್ರೀ ದ್ವಾರಕೀಶ್.
‘ಮೇಯರ್ ಮುತ್ತಣ್ಣ’ದ ಮೂಲಕ ಚಿತ್ರ ನಿಲ್ದಾಣಕ್ಕೆ ಇಳಿದ ಶ್ರೀ ದ್ವಾರಕೀಶ್ ಹೊಸ ಪ್ರಯೋಗಗಳಿಂದ ಹೆಸರಾದವರು. ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೀ ದ್ವಾರಕೀಶ್ ಅವರು ಖ್ಯಾತ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಅವರನ್ನು ಕನ್ನಡಕ್ಕೆ ತಂದವರು.
ವಿದೇಶಗಳಲ್ಲಿ ಮೊಟ್ಟಮೊದಲು ಕನ್ನಡ ಚಿತ್ರ ಚಿತ್ರೀಕರಿಸಿದ ಕೀರ್ತಿಯೂ ಶ್ರೀ ದ್ವಾರಕೀಶ್ ಅವರದೇ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಶಿಷ್ಠ

ಬಹುಮಂದಿಯನ್ನು ಬಾಧಿಸುವ ಕಾಲು ಕೀಲು ನೋವಿಗೆ ಶಮನಕಾರಿ ಚಿಕಿತ್ಸೆ ಕಂಡುಹಿಡಿದ ಹೆಸರಾಂತ ವೈದ್ಯರು ಡಾ. ವಶಿಷ್ಠ ಅವರು.
ಹಾಸನ ಜಿಲ್ಲೆಯವರಾದ ಡಾ. ವಶಿಷ್ಠ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಪ್ರಸ್ತುತ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಮೂಳೆತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಡಾ. ವಶಿಷ್ಠ ಅವರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜೆ. ಜಿ. ದೇವಧರ

ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ಸಾಧನೆ ಮಾಡಿದವರು ಹಾವೇರಿಯ ದೇವಧರ ಆಸ್ಪತ್ರೆಯ ಡಾ. ಜೆ. ಜಿ. ದೇವಧರ ಅವರು.
ವೈದ್ಯಕೀಯ ಸ್ನಾತಕೋತ್ತರ ಪದವೀಧರರಾದ ಡಾ. ದೇವಧರ ಅವರು ಮೊದಲಿಗೆ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಡನೆ ಕುಟುಂಬದ ಡಾ. ಜಿ.ಎಸ್. ದೇವಧರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಸೇವೆಗೆ ಇಳಿದವರು.
ಇಂಗ್ಲೆಂಡಿನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದುಡಿದು, ಸಿಂಗಪುರ, ಜರ್ಮನಿ, ಫ್ರಾನ್ಸ್‌ಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಂಡ ಡಾ. ದೇವಿಧರ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬಳ್ಳಾರಿ, ಹಾವೇರಿ, ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳ ೨೫ಕ್ಕೂ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿರುವ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಸುಮಾರು ೨ ಲಕ್ಷ.
ಲ್ಯಾಪ್ರೋಸ್ಕೋಪಿಕ್ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಕರ್ನಾಟಕ ಸರ್ಕಾರ, ಭಾರತೀಯ ವೈದ್ಯಕೀಯ ಸಂಸ್ಥೆ ಮೊದಲಾದವುಗಳಿಂದ ಪ್ರಶಸ್ತಿ ಪುರಸ್ಕಾರ ಗಳಿಸಿರುವ ಡಾ. ದೇವಧರ ‘ಪರಿಸರ’ ಸಂರಕ್ಷಣೆಯಲ್ಲೂ ಸಕ್ರಿಯರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ.ಟಿ. ಚಿದಾನಂದಮೂರ್ತಿ

ಪ್ರಕೃತಿ ಮತ್ತು ಯೋಗ ಚಿಕಿತ್ಸಕರಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಡಾ. ಬಿ.ಟಿ ಚಿದಾನಂದ ಮೂರ್ತಿಯವರು ತುಮಕೂರು ಜಿಲ್ಲೆ ಬೈತರ ಹೊಸಹಳ್ಳಿಯವರು.
ಕರ್ನಾಟಕದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರ, ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಪ್ರಸ್ತುತ ನವದೆಹಲಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ನಿರ್ದೆಶಕರು.
ಪ್ರತಿಷ್ಟಿತ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾಗಿ, ಹುಬ್ಬಳ್ಳಿಯ ಪ್ರಕೃತಿ ಚಿಕಿತ್ಸಾಲಯದ ಸಂಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿರುವ ಡಾ. ಬಿ.ಟಿ ಚಿದಾನಂದ ಮೂರ್ತಿ ಯವರು ರಾಜಸ್ಥಾನ, ಹರಿಯಾಣ, ದೆಹಲಿಗಳಲ್ಲಿ ಕೆಲಸ ಮಾಡಿರುವುದಲ್ಲದೆ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಮ್ಮೇಳನ, ಶಿಬಿರಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಅನೇಕ ಕಾಯಿಲೆ ಕುರಿತು ಸಂಶೋಧನೆ ನಡೆಸಿ ಪ್ರಕೃತಿ ಹಾಗೂ ಯೋಗ ಚಿಕಿತ್ಸೆಯಿಂದ ಅವುಗಳನ್ನು ಹೇಗೆ ಗುಣಪಡಿಸಬಹುದೆಂದು ಸೂಚಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಅವರು ಜನಸಾಮಾನ್ಯರಿಗೆ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಬಗ್ಗೆ ಸರಳವಾದ ಸಲಹೆಗಳನ್ನು ನೀಡುತ್ತಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪದ್ಮನಿ ರಾವ್ಯ

ಪಾರಂಪಾರಿಕ ಶಾಸ್ತ್ರೀಯ ಪದ್ಧತಿಯಲ್ಲಿ ನೃತ್ಯ ಪ್ರದರ್ಶನ ಹಾಗೂ ನೃತ್ಯ ಶಿಕ್ಷಣವನ್ನು ನಾಲ್ಕು ದಶಕಗಳಿಂದ ನೀಡುತ್ತಿರುವವರು ಹಿರಿಯ ನೃತ್ಯಪಟು ಶ್ರೀಮತಿ ಪದ್ಮನಿರಾವ್.
ಗುರುಕುಲ ಪದ್ಧತಿಯಲ್ಲಿ ಗುರು ಕಿಟ್ಟಪ್ಪ ಪಿಳ್ಳೆ ಡಾ. ಕೆ. ವೆಂಕಟಲಕ್ಷ್ಮಮ್ಮ, ಕೊರಾಡ ನರಸಿಂಹರಾವ್ ಮೊದಲಾದವರಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಶಿಕ್ಷಣ ಪಡೆದ ಶ್ರೀಮತಿ ಪದ್ಮನಿರಾವ್ ಅವರಿಗೆ ರಾಷ್ಟ್ರದಾದ್ಯಂತ ತನಿ ನೃತ್ಯ ಕಾರ್ಯಕ್ರಮಗಳನ್ನು ಕೊಟ್ಟಿರುವ ಅನುಭವ.
ಭರತನಾಟ್ಯ ಹಾಗೂ ನಟನಾಂಗಕ್ಕಾಗಿ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆದಿರುವ ಶ್ರೀಮತಿ ಪದ್ಮನಿರಾವ್ ಅವರು ಸಂಯೋಜಿಸಿರುವ ತನಿ ನೃತ್ಯಗಳು, ನೃತ್ಯನಾಟಕಗಳು ಹಲವಾರು.
ದೇಶವಿದೇಶಗಳಲ್ಲಿ ನೃತ್ಯಪ್ರದರ್ಶನ, ನೃತ್ಯ ಪ್ರಾತ್ಯಕ್ಷಿಕೆ ಹಾಗೂ ನೃತ್ಯತರಬೇತಿ ನೀಡಿರುವ ಶ್ರೀಮತಿ ಪದ್ಮನಿ ಅವರು ಪೊನ್ನಯ್ಯ ಲಲಿತ ಕಲಾ ಅಕಾಡಮಿ ಮೂಲಕ ಕಲೆ ಹಾಗೂ ಸಂಸ್ಕೃತಿ ಪರಿಸರ ಪಸರಿಸುತ್ತಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ ಸೇರಿದಂತೆ ದೇಶದ ಹಲವು ಸಂಗೀತ ನೃತ್ಯ ಸಂಸ್ಥೆಗಳ ಗೌರವ ಪುರಸ್ಕಾರಗಳು ಶ್ರೀಮತಿ ಪದ್ಮನಿರಾವ್ ಅವರಿಗೆ ಸಂದಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ

ತಮ್ಮ ನಾಲ್ಕನೇಯ ವಯಸ್ಸಿನಲ್ಲೇ ಕಚೇರಿ ನಡೆಸಿಕೊಟ್ಟಿದ್ದ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ದೇಶದ ಕಿರಿಯ ಪೀಳಿಗೆಯ ಹಿಂದೂಸ್ತಾನಿ ಶಾಸ್ತ್ರೀಯ ಹಾಡುಗಾರ್ತಿಯರಲ್ಲಿ ಪ್ರಮುಖರು. ಶಾಸ್ತ್ರೀಯ ಸಂಗೀತ, ದೇವರ ನಾಮ, ಸುಗಮ ಸಂಗೀತ, ಹಿನ್ನೆಲೆ ಗಾಯನ ಹೀಗೆ ಬಹುಮುಖ ಸಂಗೀತ ಪ್ರವೀಣೆಯಾದ ಶ್ರೀಮತಿ ಸಂಗೀತಾ ಹಿಂದೂಸ್ತಾನಿ ಗಾಯನ ಶಿಕ್ಷಕಿಯೂ ಹೌದು. ಸುಶ್ರಾವ್ಯ ಸಂಗೀತಗಾರ್ತಿಯೆಂದು ಕಿರಿಯ ವಯಸ್ಸಿನಲ್ಲೇ ಜನಪ್ರಿಯರಾದ ಶ್ರೀಮತಿ ಸಂಗೀತಾ ಸವಾಯಿ ಗಂಧರ್ವ ಸಂಗೀತೋತ್ಸವ ಸೇರಿದಂತೆ ದೇಶ ವಿದೇಶಗಳ ಹಲವು ಪ್ರತಿಷ್ಟಿತ ಸಂಗೀತೋತ್ಸವಗಳಲ್ಲಿ ತಮ್ಮ ಗಾಯನ ಗಂಗೆ ಹರಿಸಿದ್ದಾರೆ.
ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಶ್ರೀಮತಿ ಸಂಗೀತಾ ಅವರು ಹಾಡಿರುವ ಅನೇಕ ಧ್ವನಿಸುರಳಿ ಹಾಗೂ ಸಿಡಿಗಳು ಜನ ಮೆಚ್ಚುಗೆ ಪಡೆದಿವೆ.
ಈವರೆಗೆ ೨,೫೦೦ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿರುವ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಗಾಯನ ಕ್ಷೇತ್ರದ ಕೋಗಿಲೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವಿ. ಎ. ರಾಮದಾಸ್

ಮಂಗಳವಾದ್ಯವಾದ ನಾಗಸ್ವರ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುವತ್ತ ದಾಪುಗಾಲು ಹಾಕಿರುವ ನಾದಸ್ವರ ಕಲಾವಿದರು ಹೊಸಕೋಟೆ ವಾಗಟದ ಶ್ರೀ ವಿ.ಎ. ರಾಮದಾಸ್ ಅವರು. ತಂದೆಯವರಿಂದಲೇ ನಾಗಸ್ವರದ ಮೊದಲ ಪಾಠಗಳನ್ನು ಹತ್ತನೆಯ ವಯಸ್ಸಿನಲ್ಲಿಯೇ ಕಲಿತ ಶ್ರೀ ವಿ.ಎ. ರಾಮದಾಸ್ ಬೇತಮಂಗಲ ಶ್ರೀ ಗಂಗಾಧರಂ ಹಾಗೂ ಹೊಸೂರು ರಾಜಣ್ಣನವರಿಂದ ಹೆಚ್ಚಿನ ಶಿಕ್ಷಣ ಪಡೆದರು.
ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಬಿ.ಹೈ ಗ್ರೇಡ್ ಕಲಾವಿದರಾಗಿದ್ದು ದಕ್ಷಿಣ ಭಾರತದ ಅನೇಕ ಊರುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀ ವಿ.ಎ. ರಾಮದಾಸ್ ಅವರು ಪಡೆದಿರುವ ಗೌರವ ಪುರಸ್ಕಾರಗಳು ಹಲವು ಹತ್ತು.
ನಾಗಸ್ವರ ಕಲೆಯಲ್ಲಿ ಅನೇಕ ಪ್ರಯೋಗಗಳಿಗೆ ಕೈಹಾಕಿ ಯಶಸ್ಸು ಕಂಡಿರುವ ಶ್ರೀ ವಿ.ಎ. ರಾಮದಾಸ್ ಅವರು ಹೊಸಕೋಟೆಯಲ್ಲಿರುವ ಗುರುಕುಲದಲ್ಲಿ ಯುವಕರನ್ನು ನಾಗಸ್ವರ ಕಲೆಯಲ್ಲಿ ತರಬೇತಿಗೊಳಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ನಾಗನಾಥ ಒಡೆಯರ್

ಹಿಂದೂಸ್ತಾನಿಯ ಕಿರಾಣಾ ಘರಾಣೆಯ ಸಂಗೀತ ಶೈಲಿಯ ಗಾಯಕರಲ್ಲಿ ಪಂಡಿತ ನಾಗನಾಥ ಒಡೆಯರ್ ಅವರೂ ಒಬ್ಬರು.
ಧಾರವಾಡದ ಬಂಕಾಪುರದವರಾದ ಶ್ರೀ ನಾಗನಾಥ ಒಡೆಯರ್ ಅವರು ಪ್ರಾರಂಭಿಕ ಶಿಕ್ಷಣವನ್ನು ಪಂಡಿತ ವಿ.ಹೆಚ್. ಇನಾಂದಾರ್ ಅವರಲ್ಲಿ ಪಡೆದು ಕಿರಾಣಾ ಘರಾಣೆಯನ್ನು ರಾಘವೇಂದ್ರ ಚವಟಿ, ಡಾ. ಗಂಗೂಬಾಯಿ ಹಾನಗಲ್ ಅವರಲ್ಲಿ ಅಭ್ಯಾಸಮಾಡಿದರು.
ಧಾರವಾಡದ ಆಕಾಶವಾಣಿ ಕಲಾವಿದರಾದ ಪಂಡಿತ ನಾಗನಾಥ ಒಡೆಯರ್ ಅವರು ದೇಶದ ಹಲವು ಪ್ರಮುಖ ನಗರಗಳಲ್ಲಿ ತಮ್ಮ ಸಮರ್ಥ ಗಾಯನದಿಂದ ಕೇಳುಗರ ಮನ ಗೆದ್ದಿದ್ದಾರೆ.
ಪ್ರತಿಷ್ಟಿತ ಸಂಗೀತ ಉತ್ಸವಗಳಲ್ಲಿ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಕಾರ್ಯಕ್ರಮ ನೀಡುತ್ತ ಬಂದಿರುವ ಪಂಡಿತ ನಾಗನಾಥ ಒಡೆಯರ್ ಅವರು ಒಳ್ಳೆಯ ಹಾರ್ಮೋನಿಯಂ ವಾದಕರು ಹೌದು. ಹಿಂದೂಸ್ಥಾನಿ ಗಾಯಕರಾಗಿ, ಉತ್ತಮ ಹಾರ್ಮೋನಿಯಂ ವಾದಕರಾಗಿ ಹೆಸರು ಮಾಡಿರುವ ಪಂಡಿತ ನಾಗನಾಥ ಒಡೆಯರ್ ಅವರಿಗೆ ಹಲವು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ

ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಬಳಕೆಯಾಗುವ ಪಿಟೀಲು ವಾದ್ಯದಲ್ಲಿ ನಿಪುಣತೆ ಸಾಧಿಸಿದವರು ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ.
ಗದಗದವರಾದ ಕಬಾಡಿ ಅವರ ತಂದೆ ಹೆಸರಾಂತ ಹಾರೋನಿಯಂ ವಾದಕ ವಿಠಲ ಸಾ ಕಬಾಡಿ. ಶ್ರೀ ತುಕಾರಾಮ ಸಾ ವಯೋಲಿನ್ ಹಿಡಿದು ಮುನ್ನಡೆದರು.
ಸಬಣಸಾ ಕಲಬುರ್ಗಿ, ಡಾ. ಪುಟ್ಟರಾಜ ಗವಾಯಿ ನಂತರ ಖ್ಯಾತ ಪಿಟೀಲುವಾದಕ ಗಜಾನನ ರಾವ್ ಜೋಷಿಯವರಲ್ಲಿ ಪಿಟೀಲು ಶಿಕ್ಷಣ ಪಡೆದ ಶ್ರೀ ತುಕಾರಾಮಸಾ ದೇಶದುದ್ದಕ್ಕೂ ಗುರುಗಳ ಸಾಥಿದಾರರಾಗಿ ಹೋಗಿಬಂದರು.
ಗದುಗಿನಲ್ಲಿ ಸಂಗೀತ ಕೇಂದ್ರ ಸ್ಥಾಪಿಸಿದ ಶ್ರೀ ತುಕಾರಾಮ ಸಾ ಸಂಡೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಕೊನೆಗೆ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯದ ಕಲಾವಿದರಾಗಿದ್ದು ನಿವೃತ್ತಿ ನಂತರ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ಭೀಮಸೇನ್‌ಜೋಷಿ, ಮನ್ಸೂರ್, ರಾಜಗುರು, ಗಂಗೂಬಾಯಿ ಹಾನಗಲ್ ಮೊದಲಾದ ಖ್ಯಾತ ಗಾಯಕರೊಂದಿಗೆ ಪಿಟೀಲು ಸಾಥಿ ನೀಡಿರುವ ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡಮಿ ಗೌರವ ಪ್ರಶಸ್ತಿ ಲಭಿಸಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಪ್ರಭಾಕರ ಕೋರೆ

ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳಗಾವಿಯ ಶ್ರೀ ಪ್ರಭಾಕರ ಕೋರೆ ಅವರದು ಪ್ರಮುಖವಾಗಿ ನಿಲ್ಲುವ ಹೆಸರು.
ಬೆಳಗಾವಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ಶ್ರೀ ಪ್ರಭಾಕರ ಕೋರೆ ಸ್ವಾತಂತ್ರ ಹೋರಾಟಗಾರರ ಕುಟುಂಬದಿಂದ ಬಂದವರು.
ಶಿಕ್ಷಣ, ಕೃಷಿ, ಸಹಕಾರ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀ ಪ್ರಭಾಕರ ಕೋರೆ ಅವರು ೬೫ ಸಾವಿರ ವಿದ್ಯಾರ್ಥಿಗಳು, ೬,೫೦೦ ಸಿಬ್ಬಂದಿಯುಳ್ಳ ಶಿಕ್ಷಣ ಸಂಸ್ಥೆಗಳ ನಿರ್ವಾಹಕರು. ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ನಿರ್ದೆಶಕರಾಗಿರುವ ಶ್ರೀ ಕೋರೆ ಅವರು ದೇಶದ ಹಲವು ತಾಂತ್ರಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಪ್ರಭಾಕರ ಕೋರೆಯವರು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯರು.
ಕರ್ನಾಟಕ ಏಕೀಕರಣದ ನಂತರ ಪ್ರಥಮವಾಗಿ ಬೆಂಗಳೂರಿನಿಂದ ಹೊರಗಡೆ ಬೆಳಗಾವಿಯಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿ ಮೆಚ್ಚುಗೆ ಗಳಿಸಿದವರು ಶ್ರೀ ಪ್ರಭಾಕರ ಕೋರೆ ಅವರು.

Categories
ಕರಕುಶಲಕಲೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಆರ್.ಎ. ಖಾದ್ರಿ

ವಂಶ ಪಾರಂಪರವಾಗಿ ಬಂದಿರುವ ಬಿದಿರಿ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುತ್ತಿರುವ ಕಲಾವಿದರು ಶ್ರೀ ಷಾ ರಷೀದ್ ಅಹಮದ್ ಖಾದ್ರಿ ಬೀದರ್‌ನ ಬಿದಿರಿ ತಯಾರಕರ ಕುಟುಂಬದವರಾದ ಶ್ರೀ ಖಾದ್ರಿ ಚಿಕ್ಕಂದಿನಿಂದಲೇ ಬಿದಿರಿಕಲೆಯ ಒಡನಾಟದಲ್ಲಿ ಬೆಳೆದವರು.
ಕುಟುಂಬದ ಕಸುಬಾಗಿರುವ ಬಿದಿರಿ ಕಲೆಯನ್ನು ತಂದೆಯವರಿಂದಲೇ ಕಲಿತ ಶ್ರೀ ಖಾದ್ರಿ ಅವರು ಕಾಲಕ್ಕೆ ತಕ್ಕಂತೆ ಈ ಕಲೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಈಗಲೂ ಬಿದ್ರಿಯನ್ನು ಜೀವಂತವಾಗಿಟ್ಟವರು.
ಬಿದಿರಿ ಕಲೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಸೃಷ್ಠಿಸಿದ ಶ್ರೀ ಖಾದ್ರಿ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅನೇಕ ಬಾರಿ ಪ್ರದರ್ಶನ, ಕಾರಾಗಾರಗಳನ್ನು ನಡೆಸಿಕೊಟ್ಟಿರುವ ಶ್ರೀ ಖಾದ್ರಿ ಅವರು ವಿವಿಧ ಯೋಜನೆಗಳಡಿ ಹತ್ತಾರು ವಿದ್ಯಾರ್ಥಿಗಳನ್ನು ಬಿದಿರಿ ಕಲೆಯಲ್ಲಿ ತರಬೇತಿಗೊಳಿಸಿದ್ದಾರೆ.

Categories
ಕಲಾವಿಮರ್ಶೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸದಾನಂದ ಕನವಳ್ಳಿ

ಧಾರವಾಡದ ಸಾಂಸ್ಕೃತಿಕ ವಲಯಗಳಲ್ಲಿ ಸಂಸ್ಕೃತಿ ಪರಿಚಾರಕರೆಂದೇ ಕರೆಸಿಕೊಳ್ಳುವ ಶ್ರೀ ಸದಾನಂದ ಕನವಳ್ಳಿ ವೃತ್ತಿಯಿಂದ ಆಂಗ್ಲ ಅಧ್ಯಾಪಕರು.
ಸವಣೂರು ತಾಲ್ಲೂಕಿನ ಹಿರೇಮುಗದೂರಿನವರಾದ ಶ್ರೀ ಸದಾನಂದ ಕನವಳ್ಳಿ ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿದ್ದು ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು.
ಲಕ್ಷ್ಮೀಶ್ವರ ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಶ್ರೀ ಸದಾನಂದ ಕನವಳ್ಳಿಯವರು ಕಲೆ, ಸಂಸ್ಕೃತಿಯ ಆರಾಧಕರು, ಲಕ್ಷೇಶ್ವರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ದೇಸೀಯ ಕ್ರೀಡಾಕೂಟಗಳು ನಿರಂತರವಾಗಿ ನಡೆಯಲು ಮುಖ್ಯ ಕಾರಣರಾಗಿದ್ದ ಶ್ರೀ ಕನವಳ್ಳಿಯವರು ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘಗಳಲ್ಲಿ ಸಕ್ರಿಯವಾಗಿ ದುಡಿದವರು.
ಕ್ರಿಯಾಶೀಲ ಸಂಘಟಕರಲ್ಲದೆ ಸಾಹಿತಿಯಾಗಿ, ಕಲಾವಿಮರ್ಶಕರಾಗಿ ಹೆಸರು ಮಾಡಿರುವ ಶ್ರೀ ಸದಾನಂದ ಕನವಳ್ಳಿ ಅನೇಕ ಹಿಂದೂಸ್ತಾನಿ ಗಾಯಕರನ್ನು ಕುರಿತಂತೆ, ಒಲಂಪಿಕ್ಸ್ ಕ್ರೀಡೋತ್ಸವದ ಬಗ್ಗೆ, ವಿಜಯನಗರ ಸಾಮ್ರಾಜ್ಯ ಕುರಿತ ಕೃತಿಗಳನ್ನು ರಚಿಸಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶಿ ಜೆ.ಎಂ.ಎಸ್. ಮಣಿ

ತಾವು ಅಭ್ಯಾಸ ಮಾಡಿದ ಶಾಲೆಗೆ ಇಂದು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಜೆ.ಎಂ.ಎಸ್‌. ಮಣಿ ಅವರು ನಾಡಿನ ಹಿರಿಯ ಚಿತ್ರಕಲಾವಿದರಲ್ಲೊಬ್ಬರು.
ಡ್ರಾಯಿಂಗ್ ಹಾಗೂ ಚಿತ್ರಕಲೆ ಡಿಪ್ಲೊಮಾ ತರಗತಿಗಳಲ್ಲಿ ಮೊದಲ ಬ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದ ಶ್ರೀ ಜೆ.ಎಂ.ಎಸ್. ಮಣಿ ಅವರು ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಬಹುಮಾನ ಪಡೆದವರು.
೧೯೭೯ರಿಂದ ದೇಶವಿದೇಶಗಳಲ್ಲಿ ಸತತವಾಗಿ ಏಕಕಲಾ ಪ್ರದರ್ಶನಗಳನ್ನು ನಡೆಸಿರುವ ಶ್ರೀ ಜೆ.ಎಂ.ಎಸ್. ಮಣಿ ಮ್ಯಾಂಚೆಸ್ಟರ್‌ನಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಪಾಲ್ಗೊಂಡವರು.
ಕರ್ನಾಟಕ ಕಲಾಯಾತ್ರೆಯೂ ಸೇರಿದಂತೆ ಹಲವಾರು ಕಲಾ ಪ್ರದರ್ಶನಗಳಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿರುವ ಶ್ರೀ ಜೆ.ಎಂ.ಎಸ್. ಮಣಿ ಯವರು ಹತ್ತಾರು ಕಲಾಶಿಬಿರ ಹಾಗೂ ಕಾರಾಗಾರಗಳಲ್ಲಿ ಭಾಗವಹಿಸಿದ್ದಾರೆ.
ಅನೇಕ ಸರ್ಕಾರಿ ಗ್ಯಾಲರಿಗಳು ಹಾಗೂ ಖಾಸಗಿ ಸಂಗ್ರಹಗಳಲ್ಲಿ ಶ್ರೀ ಜೆ.ಎಂ.ಎಸ್. ಮಣಿ ಅವರ ಕೃತಿಗಳು ಪ್ರದರ್ಶನಕ್ಕಿದ್ದು ಪ್ರಸ್ತುತ ಅವರು ಕೆನ್ ಕಲಾಶಾಲೆಯ ಪ್ರಾಂಶುಪಾಲರಾಗಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀಮತಿ ರೇಖಾರಾವ್

ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಶ್ರೀಮತಿ ರೇಖಾರಾವ್‌ ಪ್ರಸಿದ್ಧ ಕಲಾವಿದರಾದ ಕೆ.ಕೆ. ಹೆಬ್ಬಾರ್ ಅವರ ಮಗಳು.
ತಂದೆಯವರಲ್ಲಿಯೇ ಚಿತ್ರಕಲೆ ಅಭ್ಯಾಸ ಮಾಡಿದ ಶ್ರೀಮತಿ ರೇಖಾರಾವ್ ೧೯೭೦ರ ದಶಕದಲ್ಲಿಯೇ ತಮ್ಮ ರಚನೆಗಳಿಂದ ಚಿತ್ರಾಸಕ್ತರ ಗಮನ ಸೆಳೆದರು.
ನವದೆಹಲಿ, ಮುಂಬೈ, ಬರೋಡ, ಜರ್ಮನಿ, ಅಮೇರಿಕಾ ದೇಶಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ಏರ್ಪಡಿಸಿರುವ ಶ್ರೀಮತಿ ರೇಖಾರಾವ್‌ ಅವರು ದೇಶದ ಹಲವು ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.
ಲಲಿತಕಲಾ ಅಕಾಡಮಿ ಏರ್ಪಡಿಸಿದ್ದ ಪಂಡಿತ್ ನೆಹರೂ ಅವರಿಗೆ ಶ್ರದ್ದಾಂಜಲಿ, ಹೆಲ್ವೇಜ್ ಇಂಡಿಯಾ ಪ್ರದರ್ಶನ, ಮಕ್ಕಳ ರಕ್ಷಣೆ ಹೀಗೆ ಹಲವಾರು ಸಮಕಾಲೀನ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀಮತಿ ರೇಖಾರಾವ್‌ ಹಲವಾರು ಚಿತ್ರಕಲಾವಿದರ ಶಿಬಿರಗಳಲ್ಲಿ, ಕಾರಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ದೇಶವಿದೇಶಗಳ ಹಲವು ಗ್ಯಾಲರಿಗಳಲ್ಲಿ ಶ್ರೀಮತಿ ರೇಖಾರಾವ್ ಅವರ ಚಿತ್ರಕೃತಿ ಸಂಗ್ರಹವಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಮಲ್ಲೋಜ ಮಾಯಾಚಾರ್ಯ

ಸಾಂಪ್ರದಾಯಕ ಶಿಲ್ಪಕಲೆ ಅಭ್ಯಾಸ ಮಾಡಿ ಅದರಲ್ಲಿ ನವೀನ ಪದ್ಧತಿಯನ್ನು ಅಳವಡಿಸಿ ಹೊಸತನ ರೂಢಿಸಿದವರು ಶಿಲ್ಪಿ ಶ್ರೀ ಮಲ್ಲೋಜ ಮಾಯಾಚಾರ್ ಅವರು.
ಚಿಮ್ಮಲಿಗಿಯಲ್ಲಿ ಹುಟ್ಟಿ ಬಾಗಲಕೋಟೆಯಲ್ಲಿ ನೆಲೆಸಿರುವ ಶ್ರೀ ಮಲ್ಲೋಜ ಮಾಯಾಚಾರ್ ಅವರು ತಮ್ಮ ತಂದೆ ಭೀಮರಾಯರಿಂದ ಕಾಷ್ಠಶಿಲೆಯಲ್ಲಿ ಪರಿಣತಿ ಪಡೆದರು. ಕಾಷ್ಠ ಶಿಲ್ಪದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀ ಮಾಯಾಚಾರರು ಈವರಗೆ ೨೦ಕ್ಕೂ ಹೆಚ್ಚು ದೇವಾಲಯಗಳ ತೇರುಗಳನ್ನು ನಿರ್ಮಿಸಿದ್ದಾರೆ.
ಶಿಲಾಶಿಲ್ಪದಲ್ಲೂ ತಾಂತ್ರಿಕ ವಿಷಯದಲ್ಲೂ ಅನುಭವ ಪಡೆದ ಶ್ರೀ ಮಲ್ಲೋಜರು ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಂಡು ಹಲವಾರು ಪ್ರತಿಮೆಗಳನ್ನು ತಯಾರಿಸಿದ್ದಾರೆ.
ಬಾಗಲಕೋಟೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಶಿಲ್ಪಕಲಾ ಕೇಂದ್ರ ಸ್ಥಾಪಿಸಿ ಶಿಲ್ಪಕಲೆಗೆ ಹೊಸ ಆಯಾಮ ನೀಡಿರುವ ಸಾಧಕರು ಶ್ರೀ ಮಲ್ಲೋಜ ಮಾಯಾಚಾರರು.

Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎಸ್. ಗಂಗಾಧರಗೌಡ

ಬಣ್ಣ ಬಣ್ಣದ ಮುಖವಾಡಗಳೊಂದಿಗೆ ಆಕರ್ಷಿಸುವ ಸೋಮನ ಕುಣಿತವನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ತುಮಕೂರಿನ ಡಿ. ಎಸ್. ಗಂಗಾಧರಗೌಡ ಅವರದು.
ಚಿಕ್ಕಂದಿನಿಂದಲೇ ಜನಪದ ಕಲಾವಿದರಾಗಿ ಯಕ್ಷಗಾನ ಪಟುವಾಗಿ ಸೋಮನ ಕುಣಿತವನ್ನು ಗಂಭೀರವಾಗಿ ಅಭ್ಯಾಸ ಮಾಡಿರುವ ದಂಡಿನ ಶಿವರದ ಶ್ರೀ ಗಂಗಾಧರಗೌಡರು ಜನಪದ ಕಲೆಗಳಿಗಾಗಿಯೇ ಸ್ವರ್ಣಶ್ರೀ ಯಕ್ಷಗಾನ ಕಲಾಶಾಲೆ ತೆರೆದವರು.
ಸೋಮನ ಕುಣಿತದಲ್ಲಿ ವೈವಿಧ್ಯತೆಯನ್ನು ತುಂಬುವ ಉದ್ದೇಶದಿಂದ ಅನೇಕ ಪ್ರಯೋಗಗಳನ್ನು ಕೈಗೊಂಡ ಗಂಗಾಧರಗೌಡರು ಒಂದೇ ಬಾರಿಗೆ ೨೫ ಸೋಮಗಳನ್ನು ಕುಣಿಸಿದ್ದರು.
ಒಂದೇ ವೇದಿಕೆಯಲ್ಲಿ ೨೫ ಮಂದಿ ಮೂಡಲಪಾಯ ಯಕ್ಷಗಾನ ಭಾಗವತರನ್ನು ಸೇರಿಸಿ ಕಾರ್ಯಕ್ರಮ ನೀಡಿದ್ದ ಗಂಗಾಧರ ಗೌಡರು ಒಂದೇ ಬಾರಿಗೆ ೧೦ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ‘ಯಕ್ಷರಾತ್ರಿ’ ಎಂಬ ಪ್ರಶಂಸೆ ಪಡೆದ ಸಂಘಟಕರು.
ದೇಶದ ಅನೇಕ ನಗರಗಳಲ್ಲಿ ತಮ್ಮ ಸೋಮನ ತಂಡದ ಪ್ರದರ್ಶನ ನೀಡಿರುವ ಶ್ರೀ ಗಂಗಾಧರಗೌಡರು ತಮ್ಮ ಊರಿನ ಕೋಲಾಟ, ನಗಾರಿ, ತಮಟೆ, ಕಹಳೆ ವಾದ್ಯಗಳ ಪುನರುಜ್ಜಿವನಕ್ಕೂ ಕೈಹಾಕಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗೋಪಾಲಕೃಷ್ಣ ಕುರುಪ್

ಯಕ್ಷಗಾನ ಪ್ರಪಂಚದ ಚಂಡೆ-ಮದ್ದಳೆ ಭಾಗವತಿಕೆಯಲ್ಲಿ ಸಾವಿರ ಸಾವಿರ ಶಿಷ್ಯರನ್ನು ತಯಾರು ಮಾಡಿರುವ ಅಪೂರ್ವ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರು.
ಆರು ದಶಕಗಳಿಂದ ಯಕ್ಷಗಾನ ಜಗತ್ತಿನಲ್ಲಿ ಶಿಷ್ಯನಾಗಿ, ಭಾಗವತನಾಗಿ, ಚಂಡೆ ಮದ್ದಳೆ ವಾದಕನಾಗಿ ಮುಮ್ಮೇಳದ ನಾಟ್ಯವನ್ನೂ ಬಲ್ಲವರಾಗಿ ಹೆಸರು ಮಾಡಿರುವುದು ಗೋಪಾಲಕೃಷ್ಣ ಕುರುಪ್ ಅವರ ಹೆಗ್ಗಳಿಕೆ.
ದಕ್ಷಿಣ ಕನ್ನಡದ ಬರ್ಗುಳದವರಾದ ಗೋಪಾಲಕೃಷ್ಣ ಕುರುಪ್ ಐದನೇ ತರಗತಿಯವರೆಗೆ ಮಾತ್ರ ಓದಿ ಯಕ್ಷಗಾನದಲ್ಲಿ ಆಸಕ್ತರಾದರು. ಬಲಿಪ ನಾರಾಯಣ ಭಾಗವತ, ಕುದ್ರೆಕೋಡು ರಾಮಭಟ್, ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಮುಂತಾದವರ ಬಳಿ ಶಿಷ್ಯರಾಗಿದ್ದು ಯಕ್ಷಗಾನವನ್ನು ಅರಿತುಕೊಂಡ ಶ್ರೀ ಕುರುಪ್ ಮೊದಲು ಸ್ತ್ರೀ ವೇಷ ಕಟ್ಟುತ್ತಿದ್ದರು.
ಬುಡಕಟ್ಟು ದಲಿತರಿಗೆ, ಗಿರಿಜನರಿಗೆ, ಮಲೆಕುಡಿಯರಿಗೆ, ಮಹಿಳೆಯರಿಗೆ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳನ್ನು ಕಲಿಸಿದ ಶ್ರೀ ಕುರುಪ್ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಕುರಿತಂತೆ ಹಲವು ಕೃತಿಗಳನ್ನು ಬರೆದ ಕೀರ್ತಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರದು.

Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಾಸ್ತಮ್ಮ

ಆಧುನಿಕ ಶಿಕ್ಷಣ ಪಡೆದ ವೈದ್ಯರೂ ಅಚ್ಚರಿಪಡುವಂತೆ ಹಳ್ಳಿಗಾಡಿನಲ್ಲಿ ತಮ್ಮ ಅನುಭವದಿಂದಲೇ ಎರಡೂವರೆ ಸಾವಿರ ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿರುವ ಹಿರಿಮೆ ಹುಣಸೂರು ತಾಲ್ಲೂಕು ಹೆಬ್ಬಾಳ ಗಿರಿಜನ ಹಾಡಿಯ ಶ್ರೀಮತಿ ಮಾಸ್ತಮ್ಮ ಅವರದು.
ಪರಂಪರಾನುಗತವಾಗಿ ಬಂದಿರುವ ಗಿಡ ಮೂಲಿಕಾ ಉಪಚಾರದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀಮತಿ ಮಾಸ್ತಮ್ಮ ಇಸುಬು, ಉಳುಕು, ಮೂಳೆ ಸಂಬಂಧಿ ಕಾಯಿಲೆಗಳನ್ನೂ ಗುಣಪಡಿಸಬಲ್ಲ ದೇಸಿ ವೈದ್ಯೆ.
ತಾಯಿ ಸಿದ್ಧಮ್ಮನಿಂದ ಕಲಿತ ಈ ಜನಪದ ಔಷಧೋಪಚಾರವನ್ನು ಮನಸಾರೆ ಮಾಡಿಕೊಂಡು ಗ್ರಾಮೀಣ ಜನಮನ ಗೆದ್ದಿರುವ ಶ್ರೀ ಮಾಸ್ತಮ್ಮ ಅವರನ್ನು ಸ್ವಯಂಸೇವಾ ಸಂಸ್ಥೆಯೊಂದು ತನ್ನ – ಆರೋಗ್ಯ ಯೋಜನೆಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ.
ತಮ್ಮ ಅದ್ಭುತ ಕೈಚಳಕದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀ ಮಾಸ್ತಮ್ಮ ಅವರನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡಮಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಹಿ. ಶಿ. ರಾಮಚಂದ್ರೇಗೌಡ

ಜಾನಪದ ವಿದ್ವಾಂಸರಾದ ಪ್ರೊ. ಹಿ. ಶಿ. ರಾಮಚಂದ್ರೇಗೌಡರು ಸ್ವತಹ ಜನಪದ ಕಲಾವಿದರೂ ಹೌದು.
ಹಾಸನದ ರಂಗನಾಥಪುರದವರಾದ ರಾಮಚಂದ್ರೇಗೌಡರು ಕೇರಳದ ತಿರುವನಂತಪುರ ಹಾಗೂ ಕಲ್ಲಿಕೋಟೆಗಳಲ್ಲಿ ಮಲಯಾಳಂ ಸಾಹಿತ್ಯ ಸಂಸ್ಕೃತಿ ಸಂಶೋಧನೆ ನಡೆಸಿ ಬಳಿಕ ಮೈಸೂರು * ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಾಪನ ಕೈಗೊಂಡವರು.
ಕರ್ನಾಟಕ ವಿಚಾರವಾದಿ ಒಕ್ಕೂಟ, ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿಗಳಲ್ಲಿ ದಿ ಸಕ್ರಿಯವಾಗಿದ್ದ ಹಿ. ಶಿ. ರಾಮಚಂದ್ರೇಗೌಡರು ಕರ್ನಾಟಕ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ವೈಚಾರಿಕ ಪಂಥದ ರೂವಾರಿ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ರಾಮಚಂದ್ರೇಗೌಡರು ಈಗ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು.
ಪ್ರಮುಖವಾಗಿ ಜಾನಪದಕ್ಕೆ ಸಂಬಂಧಿಸಿದ ೧೮ ಕೃತಿಗಳೂ ಸೇರಿದಂತೆ ೨೪ ಕೃತಿಗಳನ್ನು ರಚಿಸಿರುವ ರಾಮಚಂದ್ರೇಗೌಡರು ಬರೆದ ರೈತ ಹೋರಾಟದ ಹಾಡುಗಳು ಬಹುಜನಪ್ರಿಯ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ರೀಪತಿ ಮಂಜನಬೈಲು

ಯಕ್ಷಗಾನದ ಸೆಳೆತದಿಂದ ಬಣ್ಣ ಹಚ್ಚಿ ನಾಟಕತಂಡ ಕಟ್ಟಿ ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಶ್ರೀಪತಿ ಮಂಜನಬೈಲು ಅವರು.
ಕರಾವಳಿಯಿಂದ (ದಕ್ಷಿಣ ಕನ್ನಡ) ನೌಕರಿಗಾಗಿ ಬೆಳಗಾವಿ ಸೇರಿದ ಶ್ರೀಪತಿ ಕನ್ನಡ ನಾಟಕಗಳಿಗೆ GINGS ಸೇರ: ಕದಂ ‘ರಂಗಸಂಪದ’ದ ಮೂಲಕ ಬೆಳಗಾವಿಯಲ್ಲಿ ಭದ್ರ ನೆಲೆ ಒದಗಿಸಿಕೊಟ್ಟವರು.
ಅನ್ಯಭಾಷಾ ನಾಟಕಗಳ ಮಧ್ಯೆ ಕನ್ನಡದ ಹೊಸ ಅಲೆಯ ನಾಟಕ ಆಡುವ ಛಾತಿ ತೋರಿ ಬೆಳಗಾವಿಯಲ್ಲಿ ರಂಗಸಂಪದ ನಾಟಕ ಸಂಸ್ಥೆ ಕಟ್ಟಿದ ಶ್ರೀಪತಿ ಅಭಿನಯಿಸಿದ ನಾಟಕಗಳು ೫೦ಕ್ಕೂ ಹೆಚ್ಚು. ೬೦ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿರುವ ಅವರು ಹೊರ ಊರುಗಳ ತಂಡಗಳಿಗೆ ಬೆಳಗಾವಿಯಲ್ಲಿ ನಾಟಕ ಪ್ರದರ್ಶನಕ್ಕೆ ಕೊಟ್ಟ ಅವಕಾಶಗಳೇ ಅಸಂಖ್ಯ.
ನೋವು ನಲಿವುಗಳ ನಡುವೆ ರಂಗಬದುಕಿನಲ್ಲಿ ನಿರಂತರ ಪಯಣದಲ್ಲಿರುವ ಶ್ರೀಪತಿ ಮಂಜನಬೈಲು ಅಪರೂಪದ ರಂಗಕರ್ಮಿ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಅರುಂಧತಿನಾಗ್

ದೆಹಲಿಯಲ್ಲಿ ಹುಟ್ಟಿ ಮುಂಬೈನಲ್ಲಿ ವ್ಯಾಸಂಗ ಮಾಡಿ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅರುಂಧತಿ ನಾಗ್ ರಂಗಭೂಮಿಯಲ್ಲಿ ಕ್ರಿಯಾಶೀಲರು.
ಕೈಫಿ ಆಜ್ಞೆ, ಬಾಲ್‌ರಾಜ್ ಸಹಾನಿ, ಎಂ. ಎಸ್. ಸತ್ಯು, ಎ.ಕೆ. ಹಾನಗಲ್ ಅವರ ಹಿರಿತನವಿದ್ದ ‘ಇಪ್ಪಾ’ ರಂಗಶಾಲೆಯನ್ನು ಹದಿನಾರರ ಹರೆಯದಲ್ಲೇ ಸೇರಿಕೊಂಡ ಅರುಂಧತಿ ಮರಾಠಿ ಹಾಗೂ ಗುಜರಾತಿ ಹವ್ಯಾಸಿ ರಂಗಭೂಮಿಯಲ್ಲಿ ಪ್ರಸಿದ್ಧ ನಟಿ.
ನಟ ಶಂಕರ್‌ನಾಗ್‌ ಜೀವನ ಸಂಗಾತಿಯಾದ ಬಳಿಕ ಕರ್ನಾಟಕಕ್ಕೆ ಬಂದು ನೆಲೆಸಿದ ಅರುಂಧತಿ ಕನ್ನಡ ನಾಟಕಗಳಲ್ಲಿ ಅಭಿನಯಿಸಲಾರಂಭಿಸಿದರು.
ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿರುವ ಆರುಂಧತಿ ಕಿರುತೆರೆಯ ‘ಮಾಲ್ಗುಡಿ ಡೇಸ್’ ಧಾರಾವಾಹಿಗೆ ಶಂಕರ್‌ನಾಗ್ ಜೊತೆ ಹಿಂದಿ ಸಂಭಾಷಣೆ ರಚಿಸಿದರು.
ಶಂಕರ್‌ನಾಗ್ ನಿರ್ಮಿಸಿದ ಹಲವು ಕನ್ನಡ ಚಿತ್ರಗಳ ವಸ್ತ್ರಾಲಂಕಾರ ವ್ಯವಸ್ಥೆ ನೋಡಿಕೊಂಡ ಅರುಂಧತಿನಾಗ್ ‘ರಂಗಶಂಕರ’ದ ಹಿಂದಿನ ಶಕ್ತಿ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಬಿ. ಎಸ್. ಲೋಹಿತಾಶ್ವ

ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವ ಪ್ರೊ. ಟಿ. ಎಸ್. ಲೋಹಿತಾಶ್ವ ಅವರು ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರು.
ತುಮಕೂರು ಜಿಲ್ಲೆ ತೊಂಡಗೆರೆಯವರಾದ ಲೋಹಿತಾಶ್ವ ಸಮುದಾಯ ನಾಟಕ ಚಳವಳಿಯ ಮೂಲಕ ಮನೆಮಾತಾದವರು. ನಾಡಿನುದ್ದಕ್ಕೂ ಪ್ರಗತಿಪರ ಚಿಂತನೆಯ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡ ಲೋಹಿತಾಶ್ವ ‘ಕತ್ತಲೆ ದಾರಿ ದೂರ’, ‘ಮಾರೀಚನ ಬಂಧುಗಳು’ ಮೊದಲಾದ ಸತ್ವಯುತ ನಾಟಕಗಳ ನಿರ್ದೆಶಕರು.
ಹುತ್ತವ ಬಡಿದರೆ, ಪಂಚಮ, ಗೆಲಿಲಿಯೊ, ಕುಬಿ ಮತ್ತು ಇಯಾಲ, ದಂಗೆಯ ಮುಂಚಿನ ದಿನಗಳು ಮೊದಲಾದ ನಾಟಕಗಳ ಅಭಿನಯದಿಂದ ಜನಮನ ಸೇರಿರುವ ಪ್ರೊ. ಲೋಹಿತಾಶ್ವ ೪೫೦ಕ್ಕೂ ಚಲನಚಿತ್ರಗಳಲ್ಲಿ ನಟಿಸಿದವರು.
ಕರ್ನಾಟಕ ಸಾಂಸ್ಕೃತಿಕ ಜಗತ್ತಿನಲ್ಲಿ ಮಿಂದೆದ್ದಿರುವ ಲೋಹಿತಾಶ್ವ ನಾಟಕಗಳ ರಚನಕಾರರು, ಅಂಕಣ ಬರವಣಿಗೆಯಲ್ಲೂ ನಿಪುಣರಾದ ಇವರು ಕೆಲವು ಚಲನಚಿತ್ರಗಳಿಗೆ ಸಂಭಾಷಣೆ, ಹಾಡುಗಳನ್ನು ಬರೆದಿದ್ದಾರೆ.
ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಪ್ರೊ. ಲೋಹಿತಾಶ್ವ ಅವರು ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸುಮಿತ್ರಮ್ಮ ಕುಂದಾಪುರ

ಗುಬ್ಬಿ ಕಂಪನಿಯಿಂದ ಅರಳಿದ ಕಲಾ ಕುಸುಮಗಳಲ್ಲಿ ಒಬ್ಬರಾಗಿ ಐದಾರು ದಶಕಗಳಿಂದ ಅಭಿನಯ ಕಾಯಕದಲ್ಲಿರುವ ಹಿರಿಯ ಜೀವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು.
ಗುಬ್ಬಿ ಕಂಪನಿಯ ಕುರುಕ್ಷೇತ್ರ ನಾಟಕದಲ್ಲಿ ರುಕ್ಕಿಣಿ ಪಾತ್ರ ವಹಿಸಿದಾಗ ಸುಮಿತ್ರಮ್ಮ ಅವರ ವಯಸ್ಸು ೧೪, ಶೇಷಾಚಾರ್ಯರ ಕಂಪನಿ, ಗುಡಿಗೇರಿ ಕಂಪನಿ, ಗೋಕಾಕ್ ನಾಟಕ ಕಂಪನಿ, ಕೆ.ಬಿ.ಆರ್.
ಡ್ರಾಮ ಕಂಪನಿಗಳಲ್ಲಿ ಅಭಿನಯಿಸಿದ ಸುಮಿತ್ರಮ್ಮನವರು ಶ್ರೀ ವಿಜಯಮಾಲಾ ನಾಟ್ಯ ಸಂಘ ಕುಂದಾಪುರ ಎಂಬ ಸ್ವಂತ ಕಂಪನಿಯನ್ನು ೮ ವರ್ಷ ನಡೆಸಿದವರು.
ಡಾ. ರಾಜ್‌ಕುಮಾರ್ ಅವರೊಂದಿಗೆ ನಾಟಕಗಳಲ್ಲಿ ಪಾತ್ರವಹಿಸಿರುವ ಸುಮಿತ್ರಮ್ಮ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳಲ್ಲಿ ರಕ್ತ ರಾತ್ರಿ, ಸಂಸಾರ ನೌಕೆ, ಪ್ರೇಮಲೀಲಾ ಕುರುಕ್ಷೇತ್ರ ಪ್ರಮುಖವಾದವು. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು ೭೫ರ ಇಳಿವಯಸ್ಸಿನಲ್ಲೂ ರಂಗದ ಮೇಲೆ ಕ್ರಿಯಾಶೀಲೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕಾಳೇಗೌಡ ನಾಗವಾರ

ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೆ ಬೆಳೆದು ಬಂದ ಪ್ರೊ. ಕಾಳೇಗೌಡ ನಾಗವಾರ ಅವರು ಕಥೆಗಾರ, ಕವಿ, ವಿಚಾರವಾದಿ ಹಾಗೂ ಜಾನಪದ ತಜ್ಞರು.
ಕನ್ನಡದ ಸಾಂಸ್ಕೃತಿಕ ಇತಿಹಾಸದ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳವಳಿಯ ಸ್ಥಾಪಕ ಸಂಚಾಲಕರಲ್ಲೊಬ್ಬರಾದ ಕಾಳೇಗೌಡರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು.
ಗ್ರಾಮ ಸೊಗಡಿನಿಂದ ಎದ್ದು ಬಂದ ಕಾಳೇಗೌಡರು ಜಾನಪದ ಕಲೆ ಹಾಗೂ ಕಲಾವಿದರ ನೋವು ನಲಿವುಗಳ ಅಂತರಂಗ ಬಲ್ಲವರು. ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ಅವರು ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವಲ್ಲಿ ಯಶ ಕಂಡರು.
ಕಥಾಸಂಕಲನ, ಕಾವ್ಯ, ವಿಚಾರ-ವಿಮರ್ಶೆ, ಜಾನಪದ ಗಿರಿಜನ ಕಾವ್ಯ ಹಾಗೂ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿಕೊಂಡ ಪ್ರೊ. ಕಾಳೇಗೌಡ ನಾಗವಾರ ಅವರು ಜನಪರ ಆಲೋಚನೆಯುಳ್ಳ ಬರಹಗಾರರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಿಷ್ಣುನಾಯ್ಕ

ಕನ್ನಡ ಪಾಠ ಮಾಡುತ್ತ ಕನ್ನಡ ಸಾಹಿತ್ಯ ರಚನೆಯಲ್ಲೂ ಸಾಧನೆ ಮಾಡಿದವರು ಅಂಕೋಲಾದ ಶ್ರೀ ವಿಷ್ಣುನಾಯ್ಕ ಅವರು.
ಕವನ, ನಾಟಕ, ಚರಿತ್ರೆ, ಕಥೆ ಹೀಗೆ ೪೩ ಗ್ರಂಥಗಳನ್ನು ರಚಿಸಿರುವ ಶ್ರೀ ವಿಷ್ಣುನಾಯ್ಕ ಅವರು ಗೌರೀಶ ಕಾಯ್ಕಿಣಿ, ಅಕಬರ ಅಲಿ ಅವರ ಸಮಗ್ರ ಸಾಹಿತ್ಯ ಸಂಪುಟಗಳ ಸಂಪಾದಕರು.
ಕಾವ್ಯ ಕೃಷಿಗಾಗಿ ಬೇಂದ್ರೆ ಕಾವ್ಯ ಪುರಸ್ಕಾರ, ಲಿಂಗರಾಜ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ ಹೀಗೆ ಹಲವಾರು ಗೌರವಗಳಿಗೆ ಪಾತ್ರರಾಗಿರುವ ಶ್ರೀ ವಿಷ್ಣುನಾಯ್ಕ ಅವರ ರಾಘವೇಂದ್ರ ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಗ್ರಂಥ ಪ್ರಕಾಶನ ಪ್ರಶಸ್ತಿಯೂ ಸಂದಿದೆ.
ಕನ್ನಡ ಸಾಹಿತ್ಯ ಪರಿಚಾರಿಕೆಗಾಗಿ, ತಮ್ಮ ಕೃತಿಗಳಿಗಾಗಿ, ತಮ್ಮ ಪ್ರಕಾಶನಕ್ಕಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಶ್ರೀ ವಿಷ್ಣುನಾಯ್ಕ ಅವರಿಗೆ ಕರ್ನಾಟಕ ಸರ್ಕಾರ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ನೀಡಿದೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ

ಕೃಷಿಕರಾಗಿದ್ದು ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡವರು ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಾಕೇತದವರಾದ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ಚಿಕ್ಕಂದಿನಿಂದಲೂ ಸಹಕಾರಿ ಚಳವಳಿಯಲ್ಲಿ ಅತ್ಯಂತ ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀ ಆಳ್ವ ಅವರು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಕಾರಣರಾದವರು.
ದೇಶ ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿರುವ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದ ಕೃತಿಗಳು ಹತ್ತಕ್ಕೂ ಹೆಚ್ಚು. ಇವರು ರಚಿಸಿದ ‘ರಾಮಾಶ್ವಮೇಧದ ರಸ ತರಂಗಗಳು’ ಕೃತಿ ಮೈಸೂರು ಹಾಗೂ ಮದ್ರಾಸು ವಿಶ್ವವಿದ್ಯಾನಿಲಯ ಕಾಲೇಜುಗಳಿಗೆ ಪಠ್ಯಪುಸ್ತಕವಾಗಿತ್ತು.
ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹಕರಾಗಿ ಕೆಲಸ ಮಾಡಿರುವ ಶ್ರೀ ಆಳ್ವ ಅವರು ಸದಭಿರುಚಿ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಆರಂಭಿಸಲಾದ ಮಂಗಳ ಫಿಲ್ಡ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು. ನಮ್ಮ ಬಂಟ್ವಾಳ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹಲವಾರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ವಸಂತ ಕುಷ್ಟಗಿ

ಸಾಹಿತ್ಯ, ಸಂಶೋಧನೆ ಜೊತೆ ಶೈಕ್ಷಣಿಕ ಆಡಳಿತದಲ್ಲೂ ದುಡಿದು ಹೆಸರಾದವರು ವಸಂತ ಕುಷ್ಟಗಿ
ಅವರು.
ಸ್ನಾತಕೋತ್ತರ ಪದವಿಯ ನಂತರ ಹಲವು ಕಾಲೇಜುಗಳ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿರುವ ವಸಂತ ಕುಷ್ಟಗಿ ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗದ ಮೊದಲ ನಿರ್ದೆಶಕರು,
ಕಾವ್ಯ, ಗದ್ಯ, ಮಕ್ಕಳ ಸಾಹಿತ್ಯ ಸಂಶೋಧನೆ ಹೀಗೆ ನಾಲ್ಕಾರು ವಿಭಾಗಗಳಲ್ಲಿ ಕುಷ್ಟಗಿಯವರು ರಚಿಸಿರುವ ಕೃತಿಗಳು, ೪೦ಕ್ಕೂ ಹೆಚ್ಚು.
ಅನೇಕ ಕೃತಿಗಳನ್ನು ಸಂಪಾದಿಸಿರುವ ವಸಂತ ಕುಷ್ಟಗಿಯವರು ಹತ್ತಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದವರು.
ಏಳೆಂಟು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ವಸಂತ ಕುಷ್ಟಗಿಯವರು ಗಳಿಸಿರುವ ಪ್ರಶಸ್ತಿ ಪುರಸ್ಕಾರಗಳು ಹತ್ತು ಹಲವು.