Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ನಾಗನಾಥ ಒಡೆಯರ್

ಹಿಂದೂಸ್ತಾನಿಯ ಕಿರಾಣಾ ಘರಾಣೆಯ ಸಂಗೀತ ಶೈಲಿಯ ಗಾಯಕರಲ್ಲಿ ಪಂಡಿತ ನಾಗನಾಥ ಒಡೆಯರ್ ಅವರೂ ಒಬ್ಬರು.
ಧಾರವಾಡದ ಬಂಕಾಪುರದವರಾದ ಶ್ರೀ ನಾಗನಾಥ ಒಡೆಯರ್ ಅವರು ಪ್ರಾರಂಭಿಕ ಶಿಕ್ಷಣವನ್ನು ಪಂಡಿತ ವಿ.ಹೆಚ್. ಇನಾಂದಾರ್ ಅವರಲ್ಲಿ ಪಡೆದು ಕಿರಾಣಾ ಘರಾಣೆಯನ್ನು ರಾಘವೇಂದ್ರ ಚವಟಿ, ಡಾ. ಗಂಗೂಬಾಯಿ ಹಾನಗಲ್ ಅವರಲ್ಲಿ ಅಭ್ಯಾಸಮಾಡಿದರು.
ಧಾರವಾಡದ ಆಕಾಶವಾಣಿ ಕಲಾವಿದರಾದ ಪಂಡಿತ ನಾಗನಾಥ ಒಡೆಯರ್ ಅವರು ದೇಶದ ಹಲವು ಪ್ರಮುಖ ನಗರಗಳಲ್ಲಿ ತಮ್ಮ ಸಮರ್ಥ ಗಾಯನದಿಂದ ಕೇಳುಗರ ಮನ ಗೆದ್ದಿದ್ದಾರೆ.
ಪ್ರತಿಷ್ಟಿತ ಸಂಗೀತ ಉತ್ಸವಗಳಲ್ಲಿ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಕಾರ್ಯಕ್ರಮ ನೀಡುತ್ತ ಬಂದಿರುವ ಪಂಡಿತ ನಾಗನಾಥ ಒಡೆಯರ್ ಅವರು ಒಳ್ಳೆಯ ಹಾರ್ಮೋನಿಯಂ ವಾದಕರು ಹೌದು. ಹಿಂದೂಸ್ಥಾನಿ ಗಾಯಕರಾಗಿ, ಉತ್ತಮ ಹಾರ್ಮೋನಿಯಂ ವಾದಕರಾಗಿ ಹೆಸರು ಮಾಡಿರುವ ಪಂಡಿತ ನಾಗನಾಥ ಒಡೆಯರ್ ಅವರಿಗೆ ಹಲವು ಸಂಘಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.