Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವಿ. ಎ. ರಾಮದಾಸ್

ಮಂಗಳವಾದ್ಯವಾದ ನಾಗಸ್ವರ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುವತ್ತ ದಾಪುಗಾಲು ಹಾಕಿರುವ ನಾದಸ್ವರ ಕಲಾವಿದರು ಹೊಸಕೋಟೆ ವಾಗಟದ ಶ್ರೀ ವಿ.ಎ. ರಾಮದಾಸ್ ಅವರು. ತಂದೆಯವರಿಂದಲೇ ನಾಗಸ್ವರದ ಮೊದಲ ಪಾಠಗಳನ್ನು ಹತ್ತನೆಯ ವಯಸ್ಸಿನಲ್ಲಿಯೇ ಕಲಿತ ಶ್ರೀ ವಿ.ಎ. ರಾಮದಾಸ್ ಬೇತಮಂಗಲ ಶ್ರೀ ಗಂಗಾಧರಂ ಹಾಗೂ ಹೊಸೂರು ರಾಜಣ್ಣನವರಿಂದ ಹೆಚ್ಚಿನ ಶಿಕ್ಷಣ ಪಡೆದರು.
ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಬಿ.ಹೈ ಗ್ರೇಡ್ ಕಲಾವಿದರಾಗಿದ್ದು ದಕ್ಷಿಣ ಭಾರತದ ಅನೇಕ ಊರುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀ ವಿ.ಎ. ರಾಮದಾಸ್ ಅವರು ಪಡೆದಿರುವ ಗೌರವ ಪುರಸ್ಕಾರಗಳು ಹಲವು ಹತ್ತು.
ನಾಗಸ್ವರ ಕಲೆಯಲ್ಲಿ ಅನೇಕ ಪ್ರಯೋಗಗಳಿಗೆ ಕೈಹಾಕಿ ಯಶಸ್ಸು ಕಂಡಿರುವ ಶ್ರೀ ವಿ.ಎ. ರಾಮದಾಸ್ ಅವರು ಹೊಸಕೋಟೆಯಲ್ಲಿರುವ ಗುರುಕುಲದಲ್ಲಿ ಯುವಕರನ್ನು ನಾಗಸ್ವರ ಕಲೆಯಲ್ಲಿ ತರಬೇತಿಗೊಳಿಸುತ್ತಿದ್ದಾರೆ.