Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ

ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳೆರಡರಲ್ಲೂ ಬಳಕೆಯಾಗುವ ಪಿಟೀಲು ವಾದ್ಯದಲ್ಲಿ ನಿಪುಣತೆ ಸಾಧಿಸಿದವರು ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ.
ಗದಗದವರಾದ ಕಬಾಡಿ ಅವರ ತಂದೆ ಹೆಸರಾಂತ ಹಾರೋನಿಯಂ ವಾದಕ ವಿಠಲ ಸಾ ಕಬಾಡಿ. ಶ್ರೀ ತುಕಾರಾಮ ಸಾ ವಯೋಲಿನ್ ಹಿಡಿದು ಮುನ್ನಡೆದರು.
ಸಬಣಸಾ ಕಲಬುರ್ಗಿ, ಡಾ. ಪುಟ್ಟರಾಜ ಗವಾಯಿ ನಂತರ ಖ್ಯಾತ ಪಿಟೀಲುವಾದಕ ಗಜಾನನ ರಾವ್ ಜೋಷಿಯವರಲ್ಲಿ ಪಿಟೀಲು ಶಿಕ್ಷಣ ಪಡೆದ ಶ್ರೀ ತುಕಾರಾಮಸಾ ದೇಶದುದ್ದಕ್ಕೂ ಗುರುಗಳ ಸಾಥಿದಾರರಾಗಿ ಹೋಗಿಬಂದರು.
ಗದುಗಿನಲ್ಲಿ ಸಂಗೀತ ಕೇಂದ್ರ ಸ್ಥಾಪಿಸಿದ ಶ್ರೀ ತುಕಾರಾಮ ಸಾ ಸಂಡೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದರು. ಕೊನೆಗೆ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯದ ಕಲಾವಿದರಾಗಿದ್ದು ನಿವೃತ್ತಿ ನಂತರ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ಭೀಮಸೇನ್‌ಜೋಷಿ, ಮನ್ಸೂರ್, ರಾಜಗುರು, ಗಂಗೂಬಾಯಿ ಹಾನಗಲ್ ಮೊದಲಾದ ಖ್ಯಾತ ಗಾಯಕರೊಂದಿಗೆ ಪಿಟೀಲು ಸಾಥಿ ನೀಡಿರುವ ಶ್ರೀ ತುಕಾರಾಮ ಸಾ ವಿಠಲ್ ಸಾ ಕಬಾಡಿ ಅವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡಮಿ ಗೌರವ ಪ್ರಶಸ್ತಿ ಲಭಿಸಿದೆ.