Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಪ್ರಭಾಕರ ಕೋರೆ

ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳಗಾವಿಯ ಶ್ರೀ ಪ್ರಭಾಕರ ಕೋರೆ ಅವರದು ಪ್ರಮುಖವಾಗಿ ನಿಲ್ಲುವ ಹೆಸರು.
ಬೆಳಗಾವಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ಶ್ರೀ ಪ್ರಭಾಕರ ಕೋರೆ ಸ್ವಾತಂತ್ರ ಹೋರಾಟಗಾರರ ಕುಟುಂಬದಿಂದ ಬಂದವರು.
ಶಿಕ್ಷಣ, ಕೃಷಿ, ಸಹಕಾರ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀ ಪ್ರಭಾಕರ ಕೋರೆ ಅವರು ೬೫ ಸಾವಿರ ವಿದ್ಯಾರ್ಥಿಗಳು, ೬,೫೦೦ ಸಿಬ್ಬಂದಿಯುಳ್ಳ ಶಿಕ್ಷಣ ಸಂಸ್ಥೆಗಳ ನಿರ್ವಾಹಕರು. ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ನಿರ್ದೆಶಕರಾಗಿರುವ ಶ್ರೀ ಕೋರೆ ಅವರು ದೇಶದ ಹಲವು ತಾಂತ್ರಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಪ್ರಭಾಕರ ಕೋರೆಯವರು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯರು.
ಕರ್ನಾಟಕ ಏಕೀಕರಣದ ನಂತರ ಪ್ರಥಮವಾಗಿ ಬೆಂಗಳೂರಿನಿಂದ ಹೊರಗಡೆ ಬೆಳಗಾವಿಯಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿ ಮೆಚ್ಚುಗೆ ಗಳಿಸಿದವರು ಶ್ರೀ ಪ್ರಭಾಕರ ಕೋರೆ ಅವರು.