Categories
ಕರಕುಶಲಕಲೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಆರ್.ಎ. ಖಾದ್ರಿ

ವಂಶ ಪಾರಂಪರವಾಗಿ ಬಂದಿರುವ ಬಿದಿರಿ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುತ್ತಿರುವ ಕಲಾವಿದರು ಶ್ರೀ ಷಾ ರಷೀದ್ ಅಹಮದ್ ಖಾದ್ರಿ ಬೀದರ್‌ನ ಬಿದಿರಿ ತಯಾರಕರ ಕುಟುಂಬದವರಾದ ಶ್ರೀ ಖಾದ್ರಿ ಚಿಕ್ಕಂದಿನಿಂದಲೇ ಬಿದಿರಿಕಲೆಯ ಒಡನಾಟದಲ್ಲಿ ಬೆಳೆದವರು.
ಕುಟುಂಬದ ಕಸುಬಾಗಿರುವ ಬಿದಿರಿ ಕಲೆಯನ್ನು ತಂದೆಯವರಿಂದಲೇ ಕಲಿತ ಶ್ರೀ ಖಾದ್ರಿ ಅವರು ಕಾಲಕ್ಕೆ ತಕ್ಕಂತೆ ಈ ಕಲೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಈಗಲೂ ಬಿದ್ರಿಯನ್ನು ಜೀವಂತವಾಗಿಟ್ಟವರು.
ಬಿದಿರಿ ಕಲೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಸೃಷ್ಠಿಸಿದ ಶ್ರೀ ಖಾದ್ರಿ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅನೇಕ ಬಾರಿ ಪ್ರದರ್ಶನ, ಕಾರಾಗಾರಗಳನ್ನು ನಡೆಸಿಕೊಟ್ಟಿರುವ ಶ್ರೀ ಖಾದ್ರಿ ಅವರು ವಿವಿಧ ಯೋಜನೆಗಳಡಿ ಹತ್ತಾರು ವಿದ್ಯಾರ್ಥಿಗಳನ್ನು ಬಿದಿರಿ ಕಲೆಯಲ್ಲಿ ತರಬೇತಿಗೊಳಿಸಿದ್ದಾರೆ.