Categories
ಕಲಾವಿಮರ್ಶೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸದಾನಂದ ಕನವಳ್ಳಿ

ಧಾರವಾಡದ ಸಾಂಸ್ಕೃತಿಕ ವಲಯಗಳಲ್ಲಿ ಸಂಸ್ಕೃತಿ ಪರಿಚಾರಕರೆಂದೇ ಕರೆಸಿಕೊಳ್ಳುವ ಶ್ರೀ ಸದಾನಂದ ಕನವಳ್ಳಿ ವೃತ್ತಿಯಿಂದ ಆಂಗ್ಲ ಅಧ್ಯಾಪಕರು.
ಸವಣೂರು ತಾಲ್ಲೂಕಿನ ಹಿರೇಮುಗದೂರಿನವರಾದ ಶ್ರೀ ಸದಾನಂದ ಕನವಳ್ಳಿ ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿದ್ದು ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು.
ಲಕ್ಷ್ಮೀಶ್ವರ ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಶ್ರೀ ಸದಾನಂದ ಕನವಳ್ಳಿಯವರು ಕಲೆ, ಸಂಸ್ಕೃತಿಯ ಆರಾಧಕರು, ಲಕ್ಷೇಶ್ವರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ದೇಸೀಯ ಕ್ರೀಡಾಕೂಟಗಳು ನಿರಂತರವಾಗಿ ನಡೆಯಲು ಮುಖ್ಯ ಕಾರಣರಾಗಿದ್ದ ಶ್ರೀ ಕನವಳ್ಳಿಯವರು ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘಗಳಲ್ಲಿ ಸಕ್ರಿಯವಾಗಿ ದುಡಿದವರು.
ಕ್ರಿಯಾಶೀಲ ಸಂಘಟಕರಲ್ಲದೆ ಸಾಹಿತಿಯಾಗಿ, ಕಲಾವಿಮರ್ಶಕರಾಗಿ ಹೆಸರು ಮಾಡಿರುವ ಶ್ರೀ ಸದಾನಂದ ಕನವಳ್ಳಿ ಅನೇಕ ಹಿಂದೂಸ್ತಾನಿ ಗಾಯಕರನ್ನು ಕುರಿತಂತೆ, ಒಲಂಪಿಕ್ಸ್ ಕ್ರೀಡೋತ್ಸವದ ಬಗ್ಗೆ, ವಿಜಯನಗರ ಸಾಮ್ರಾಜ್ಯ ಕುರಿತ ಕೃತಿಗಳನ್ನು ರಚಿಸಿದ್ದಾರೆ.