Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ. ಎಚ್. ಹನುಮಂತರಾಯ

ವಕೀಲ ವೃತ್ತಿಯೊಡನೆ ಜನಪರ ಹೋರಾಟ ಹಾಗೂ ಸಾಹಿತ್ಯದ ಒಡನಾಟ ಇಟ್ಟುಕೊಂಡ ಅಪರೂಪದ ವಕೀಲರಲ್ಲಿ ಸಿ. ಎಚ್. ಹನುಮಂತರಾಯ ಒಬ್ಬರು.
ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ ಪದವಿ ಗಳಿಸಿ ಕಾನೂನು ವ್ಯಾಸಂಗ ಮಾಡಿ ಪ್ರಸಿದ್ಧ ಕ್ರಿಮಿನಲ್ ವಕೀಲರೆಂದು ಹೆಸರು ಮಾಡಿರುವ ಹನುಮಂತರಾಯ ಅವರು ಸೀಮಾತೀತ ಕ್ರಿಮಿನಲ್ ವಕೀಲ ಪಿ. ಎಸ್. ದೇವದಾಸ್ ಅವರಲ್ಲಿ ಪಳಗಿದವರು.
ಉಗುರು ಸ್ವಾಮಿ ಕೊಲೆ ಪ್ರಕರಣ, ಬೀನಾ ಕೊಲೆ ಮೊಕದ್ದಮೆ, ಸತ್ಯದೇವ್ ಹತ್ಯಾ ಪ್ರಕರಣ ಹೀಗೆ ಹಲವಾರು ಕುತೂಹಲ ಕೆರಳಿಸಿದ ಪ್ರಕರಣಗಳಲ್ಲಿ ತಮ್ಮ ಕಾನೂನು ನೈಪುಣ್ಯತೆ ತೋರಿ ಗಮನ ಸೆಳೆದ ಸಿ. ಎಚ್. ಹನುಮಂತರಾಯ ಅವರು ಅನೇಕ ಕನ್ನಡಪರ ಹೋರಾಟಗಾರರ ಪರವಾಗಿ ಮೊಕದ್ದಮೆಗಳಲ್ಲಿ ವಕಾಲತ್ತು ನಡೆಸಿದ್ದಾರೆ.
ನ್ಯಾಯಾಲಯಗಳಲ್ಲಿ ವಾದಿಸಿದಂತೆ ಅನೇಕ ಸಾಹಿತ್ಯ ಸಮಾವೇಶಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿರುವ ಹನುಮಂತರಾಯ ಅವರು ಅನೇಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆಗಳ ಕನ್ನಡ ಸಂಘಗಳ ಅಧ್ಯಕ್ಷರು.
ವೃತ್ತಿ ಅನುಭವವನ್ನು ಆಪ್ಯಾಯವಾಗಿ ಬರವಣಿಗೆಯಲ್ಲಿ ತೆರೆದಿಡುವ ಸಿ. ಎಚ್. ಹನುಮಂತರಾಯ ಅನೇಕ ಕಾನೂನು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು.