Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಗೌರಾಂಗ ಕೋಡಿಕಲ್

ಸಂಗೀತದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನಾಡಿನ ಉತ್ತಮ ತಬಲಾ ವಾದಕರು
ಶ್ರೀ ಗೌರಾಂಗ ಕೋಡಿಕಲ್ ಅವರು.
ತಂದೆಯಿಂದ ತಬಲವಾದನದ ಪ್ರಾರಂಭಿಕ ಶಿಕ್ಷಣ. ಅನಂತರ ಮುಂಬನ ಶಶಿಬೆಳ್ಳಾರೆ, ಹೈದರಾಬಾದಿನ ಶೇಕ್ದಾವೂದ್ ಮತ್ತು ಬೆಂಗಳೂಲಿನ ಡಿ.ಎಸ್. ಗರೂಡ ಅವರಲ್ಲಿ ಪ್ರೌಢಶಿಕ್ಷಣ ಪಡೆದು ಗೌರಾಂಗ ಕೋಡಿಕಲ್ ಅವರು ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಗುರುಕುಲಪರಂಪರೆಯಲ್ಲಿ ತಬಲಾವಾದನ ಅಭ್ಯಾಸ ಮಾಡಿದ ಗೌರಾಂಗ ಕೋಡಿಕಲ್ ಅವರು ಬಾಲ್ಯದಲ್ಲೇ ತಬಲಾವಾದನದಿಂದ ಎಲ್ಲರ ಗಮನ ಸೆಳೆದು ನಂತರದ ದಿನಗಳಲ್ಲಿ ಅನೇಕ ಪ್ರಸಿದ್ಧ ಗಾಯಕಲಗೆ, ವಾದಕರಿಗೆ ತಬಲಾ ಸಾಥಿ ನೀಡಿದಒಲಮೆಗೆ ಪಾತ್ರರು.
ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ತಬಲ ಸಾಥಿ ನೀಡಿರುವ ಇವರು ದಿನಕರ ಕೈಕಿಣಿ ಅವರೊಂದಿಗೆ ಅಮೆಲಕ, ಕೆನಡ ಹಾಗೂ ಇಂಗ್ಲೆಂಡ್ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಹಲವಾರು ಕಚೇಲಗಳಲ್ಲಿ ಪಾಲ್ಗೊಂಡಿದ್ದಾರೆ.
ಹವ್ಯಾಸಿ ಕಲಾವಿದರಾದ ಗೌರಾಂಗ ಕೋಡಿಕಲ್ ಅವರು ಬೆಂಗಳೂಲಿನ ಸುರ್ಸಾಗರ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರು.
ತಬಲಾವಾದನದಲ್ಲಿ ಇವರ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೦- ೨೦೦೧ನೇ ಸಾಱನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಕದ ಪ್ರತಿಭಾವಂತ ತಬಲಾ ವಾದಕರಲ್ಲೊಬ್ಬರು ಶ್ರೀ ಗೌರಾಂಗ ಕೋಡಿಕಲ್ ಅವರು.