Categories
ನೃತ್ಯ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಮಾಸ್ಟರ್ ವಿಠಲ್ ಶೆಟ್ಟ

ಕರಾವಳಿ ಜಿಲ್ಲೆಗೆ ರಾಜನ್ ಅಯ್ಯರ್, ರಾಜರತ್ನಂ ಪಿಳ್ಳೆ ಅವರಿಂದ ಹಲದು ಬಂದ ಭರತನಾಟ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರಲ್ಲಿ ಒಬ್ಬರು
ನಾಟ್ಯಾಚಾರ್ಯ ಮಾಸ್ಟರ್ ವಿಠಲ್ ಅವರು.
ಸುಮಾರು ಅರವತ್ತು ವರ್ಷಗಳಿಂದಲೂ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಣವನ್ನು ನೀಡುತ್ತಿರುವ ವಿಠಲ್ ಶೆಟ್ಟಿ ಮಾಸ್ಟರ್ ಏಠಲ್ ಎಂದೇ ಚಿರಪಲಚಿತರು. ಲವಂಗತ ಎಂ.ಎ. ದೇವಾಡಿಗರಿಂದ ಪ್ರಾಥಮಿಕ ನೃತ್ಯಾಭ್ಯಾಸ. ನಂತರ ರಾಜನ್ ಅಯ್ಯರ್ ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ. ೧೯೬೪ರಲ್ಲಿ ನೃತ್ಯ ಕೌಸ್ತುಭ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಅನೇಕ ನೃತ್ಯ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.
೧೯೪೦ಲಿಂದ ನೃತ್ಯರಂಗದಲ್ಲಿ ತಮ್ಮನ್ನು ತೊಡಲಿಸಿಕೊಂಡು ಮಹಾಭಾರತ, ರಾಮಾಯಣ ಕಥೆಗಳ ಆಧಾಲತ ನೃತ್ಯರೂಪಕಗಳು, ಬೈಬಲ್ ಕಥಾಧಾಲತ ನೃತ್ಯ ರೂಪಕಗಳನ್ನು ನೃತ್ಯ ರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಆಕೆ ಶ್ರೀಯುತರದು. ಮಿನಗುತಾರೆ ಕಲ್ಪನಾ,ಉಳ್ಳಾಲ್ ಮೋಹನ್ಕುಮಾರ್,ಡಾ.ಮೋಹನ್ ಆಳ್ವ, ಪ್ರೇಮನಾಥ್ ಮೊದಲಾದವರು ಮಾಸ್ಟರ್ ಏಠಲ್ ಅವರ ಶಿಷ್ಯರು. ದೇಶ್,ಅಠಾಣ, ಯಮನ್ ಮುಂತಾದ ರಾಗಗಳನ್ನು ಬಳಸಿ ಪ್ರದರ್ಶಿಸಿದ ‘ಶಿಯ ಸ್ವಪ್ನ’ ಮಾಸ್ಟರ್ ಏಠಲ್ ಅವರಿಗೆ ವಿಶೇಷ ಹೆಸರು ಗಳಿಸಿಕೊಟ್ಟ ನೃತ್ಯರೂಪಕ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿಯ ಪುರಸ್ಕೃತರಾದ ಮಾಸ್ಟರ್ ಏಠಲ್ ಅವರು ೧೯೮೧ರಲ್ಲಿ ಸ್ವೀಡನ್ ದೇಶದ ಪ್ರಸಿದ್ಧ ಸೇನೇಷಿಯ ವರ್ಲ್ಡ್ ಟೂರ್ಸ್ ಸಂಸ್ಥೆಯ ಆಹ್ವಾನದ ಮೇರೆಗೆ ಸ್ವೀಡನ್ನಿಗೆ ಹೋಗಿ ಸ್ವೀಡನ್, ಸ್ಟೋಖೋಲ್ಡ್, ಓಸ್ತೆ, ಕೋಪೆನ್ ಹೆಗನ್ಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರು. ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕಾರ್ಯನಿರ್ವಹಣೆ, ಮಾಸ್ಟರ್ ವಿಠಲ್ ಅವರಿಗೆ ಶಾಸ್ತ್ರೀಯ ನೃತ್ಯಗಳೀಗಿಂತ ನೃತ್ಯರೂಪಕಗಳತ್ತ ಒಲವು. ಪೃಥ್ವಿರಾಜ ಸಂಯುಕ್ತ, ಸುಕೋಮಲೆ ಸೋಫಿಯಾಳ ಸುವರ್ಣ ಸ್ವಪ್ನ, ಟೆನ್ ಕಮಾಂಡೆಂಟ್ಸ್, ಚಿತ್ರಾಂಗದಾ, ಶಾಕುಂತಲಾ ಮೊದಲಾದ ನೃತ್ಯರೂಪಕಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ.
ಅನೇಕ ಪ್ರಸಿದ್ಧ ನೃತ್ಯರೂಪಕಗಳ ರೂವಾಲಿ ಹಾಗೂ ಎಂಬತ್ತರ ಇವಯಸ್ಸಿನಲ್ಲೂ ನೃತ್ಯಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ನೃತ್ಯ ಕೌಸ್ತುಭ ಮಾಸ್ಟರ್ ಏಠಲ್ ಅವರು.