Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಶ್ರೀನಿವಾಸ ಎಚ್. ಲತ್ತಿ

ದೇಶದ ಪ್ರಮುಖ ಶಾಸನ ತಜ್ಞರಲ್ಲಿ ಒಬ್ಬರಾದ ಹಾಗೂ ಕನ್ನಡ ನಾಡಿನ ಶಾಸನ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿರುವವರು ಡಾ. ಶ್ರೀನಿವಾಸ ಎಚ್. ಲತ್ತಿ ಅವರು.
ಭಾರತೀಯ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿ ಕುಲತಂತೆ ಆಳವಾದ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಭಾರತೀಯ ಪುರಾತತ್ವ ಇಲಾಖೆಯ ಶಾಸನ ತಜ್ಞರಾಣ ಕೆಲಸ ಮಾಡಿದವರು.
ಕರ್ನಾಟಕ ವಿಶ್ವವಿದ್ಯಾನಿಲಯದ ಭಾರತೀಯ ಪ್ರಾಚೀನ ಚರಿತ್ರೆ ಹಾಗೂ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಆಗಿದ್ದ ಇವರು ಕರ್ನಾಟಕ ರಾಜ್ಯದ ಶಾಸನಗಳ ಬಗ್ಗೆ ಅಪಾರ ಮಾಹಿತಿ ಸಂಗ್ರಹಿಸಿದವರು. ಭಾರತೀಯ ಶಾಸನ ಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳನ್ನು ಕೈಗೊಂಡು ಸಂಶೋಧನಾ ಪತ್ರಿಕೆಗಳನ್ನು ಹಾಗೂ ಕೃತಿಗಳನ್ನು ರಚಿಸಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ಭಾರತದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರದ ಬಗ್ಗೆ ಅಪಾರವಾದ ಅಧ್ಯಯನ ಮಾಡಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ರಚಿಸಿರುವ ವಿಜಯನಗರದ ಅರಸರ ಶಾಸನಗಳು ಎಂಬ ಬೃಹತ್ ಪ್ರಕಟಣೆಯನ್ನು ನವದೆಹಅಯ ಭಾರತೀಯ ಅನುಸಂಧಾನ ಪರಿಷತ್ತು ಕೈಗೆತ್ತುಕೊಂಡಿದೆ. ಕನ್ನಡ ಹಾಗೂ ಸಂಸ್ಕೃತ ಶಾಸನಗಳ ಸಂಪುಟವು ಈಗಾಗಲೇ ಪ್ರಕಟಣೆಗೊಂಡಿದ್ದು ಇದೇ ಯೋಜನೆಯಡಿ ತೆಲುಗು ಹಾಗೂ ತಮಿಳು ಸಂಪುಟಗಳು ಡಾ. ಶ್ರೀನಿವಾಸ ಎಚ್. ಲತ್ತಿ ಅವರ ಸಂಪಾದಕತ್ವದಲ್ಲಿ ಸಿದ್ಧಗೊಳ್ಳುತ್ತಿವೆ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿದ್ದ ಇವರ ನೇತೃತ್ವದಲ್ಲಿ ೧೯ ವಿದ್ಯಾರ್ಥಿಗಳು ಡಾಕ್ಟರೇಟ್ಗಾಲ ಮಾರ್ಗದರ್ಶನ ಪಡೆದಿದ್ದಾರೆ.
ಭಾರತೀಯ ಶಾಸನಶಾಸ್ತ್ರ ಸೊಸೈಟಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುವ ಡಾ. ಶ್ರೀನಿವಾಸ ಎಚ್. ಲತ್ತಿ ಅವರು ಹತ್ತಾರು ಪುಸ್ತಕಗಳನ್ನು ಸಂಪಾದಿಸಿದ್ದಾರಲ್ಲದೆ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ದೇಶದ ಪ್ರಮುಖ ಶಾಸನಶಾಸ್ತ್ರ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಇವರು ಪಾತ್ರರಾಗಿದ್ದಾರೆ.
ನಾಡಿನ ಸಂಶೋಧನೆ ಪ್ರಪಂಚದಲ್ಲಿ ಹೆಸರಾದವರು ಹಾಗೂ ಶಾಸನ ಶಾಸ್ತ್ರದಲ್ಲಿ ಪಲಣತರು ಶ್ರೀ ಶ್ರೀನಿವಾಸ ಎಚ್. ಲತ್ತಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಕೆ. ಟಿ. ಪಾಂಡುರಂಗಿ

ಮೈಸೂರು ಮಹಾರಾಜಾ ಸಂಸ್ಕೃತ ಕಾಲೇಜು, ಅಣ್ಣಾಮಲೆ ವಿಶ್ವಾವಿದ್ಯಾನಿಲಯ ಹಾಗೂ ಬನರಾಸ್ ಹಿಂದು ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡಿ ಸ್ನಾತಕ
ಪದವಿಯೊಂದಿಗೆ ಸಾಂಪ್ರದಾಯಕ ಪದವಿಗಳಾದ ವೇದಾಂತ ವಿದ್ವಾನ್, ಮೀಮಾಂಸ ಶಿರೋಮಣಿಗಳನ್ನೂ ಪಡೆದುಕೊಂಡಿರುವ ಪ್ರೊ.ಕೆ.ಟಿ. ಪಾಂಡುರಂಗಿ ಹೆಸರಾಂತ ಸಂಸ್ಕೃತ ಪಂಡಿತರು. ಪ್ರಸ್ತುತ ಬೆಂಗಳೂಲಿನ ಪೂರ್ಣಪ್ರಜ್ಞ ವಿದ್ಯಾಪೀಠದ ಉಪಕುಲಪತಿಗಳು ಹಾಗೂ ದೇವಿತ ವೇದಾಂತ ಶಿಕ್ಷಣ ಹಾಗೂ ಸಂಶೋಧನ ಫೌಂಡೇಶನ್ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಧಾರವಾಡ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿದವರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಭಾರತ ಸರ್ಕಾರದ ಕೇಂದ್ರ ಸಂಸ್ಕೃತ ಮಂಡಲ, ಭಾರತೀಯ ವಿದ್ಯಾಭವನದ ಗಾಂಧಿಕೇಂದ್ರ, ಪುಣೆಯ ಡೆಕ್ಕನ್ ಕಾಲೇಜನ ನಿಘಂಟು ಸಮಿತಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹಣಕಾಸು ಸಂಸ್ಥೆ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಮುಂತಾದ ಹಲವು ಸಂಘ-ಸಂಸ್ಥೆಗಳೊಡನೆ ಸಕ್ರಿಯವಾಗಿ ಸಂಬಂಧವಿಟ್ಟುಕೊಂಡಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಪಡೆದಿರುವ ಗೌರವ ಪುರಸ್ಕಾರಗಳು ಹಲವಾರು.
ತಿರುಪತಿಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಹಾ ಮಹೋಪಾಧ್ಯಾಯ, ಕೊಲ್ಕತ್ತಾದ ಏಷ್ಯಾಟಿಕ್ ಸೊಸೈಟಿಯ ಪ್ರತಿಷ್ಠಿತ ಸರ್್ರ. ವಿಲಿಯಂ ಜೋನ್ಸ್ ಸ್ಮಾರಕ ಪದಕ, ಉತ್ತರ ಪ್ರದೇಶ ಸಂಸ್ಕೃತ ಸಂಸ್ಥಾನ ಪುರಸ್ಕಾರ, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಗೌರವ ಪುರಸ್ಕಾರ ಹೀಗೆ ಹಲವಾರು ಗೌರವಗಳನ್ನು ಪಡೆದಿರುವ ಪ್ರೊ.ಕೆ.ಟಿ. ಪಾಂಡುರಂಗಿ ವೇದಾಂತದ ಬಗ್ಗೆ ಆಳವಾದ ಅಭ್ಯಾಸ ಮಾಡಿ ನೂರಾರು ಪ್ರೌಢ ಪ್ರಬಂಧಗಳನ್ನು ರಚಿಸಿದ್ದಾರೆ. ಸುಮಾರು ೨,೦೦೦ತೂಕ ಹೆಚ್ಚು ಸಂಸ್ಕೃತ ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ಪ್ರೊ.ಕೆ.ಟಿ. ಪಾಂಡುರಂ ಅವರ ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದು, ಜರ್ಮನಿ, ಇಂಗ್ಲೆಂಡ್, ಅಮೇಲಕಾ ಮೊದಲಾದ ದೇಶಗಳಲ್ಲಿ ಸಂಸ್ಕೃತ ಸಾಹಿತ್ಯ, ವೇದಾಂತ ಹಾಗೂ ಮೀಮಾಂಸೆ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ಕಾವ್ಯಾಂಜಲಿ, ಸಂಸ್ಕೃತ ಕವಿಯತ್ರಿಯರು, ಕವಿ ಕಾವ್ಯ ದರ್ಶನ ಹೀಗೆ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಕೃತಿಗಳನ್ನು ರಚಿಸಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ವಿಚಾರ ಜ್ಯೋತಿ ಎಂಬ ಸಂಸ್ಕೃತ ಸುಭಾಷಿತಗಳ ೩ ಸಂಪುಟಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಡಿ.ಎನ್. ಶಂಕರಭಟ್

ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿಜ್ಞಾನಿ, ಬಹುಭಾಷಾ ತಜ್ಞರು ಹಾಗೂ ಕನ್ನಡದ ಮಹತ್ವದ ಲೇಖಕರು ಡಾ. ಡಿ. ಎನ್. ಶಂಕರಭಟ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನನ. ೧೯೩೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಎಂ.ಎ. ಪದವಿ; ಪುಣಿ ವಿಶ್ವವಿದ್ಯಾಲಯದಿಂದ ಭಾಷಾ ವಿಜ್ಞಾನದಲ್ಲಿ ಪಿಹೆಚ್ಡಿ ಪದವಿ ಗಳಿಕೆ, ಬ್ರಿಟಿಷ್ ಕೌನ್ಸಿಲ್ದ ಫೆಲೋ ಆಗಿ ಇಂಗ್ಲೆಂಡಿನಲ್ಲಿ ಉಪಭಾಷೆಗಳ ಅಧ್ಯಯನ, ಪುಣೆ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ವಿಜ್ಞಾನದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭ, ತ್ರಿವೇಂಡ್ರಮ್, ಇಂಫಾಲ, ಮೈಸೂರುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಇಂಗ್ಲಿಷಿನಲ್ಲಿ ಬರೆದ ಮಣಿಪುಲ ಗ್ರಾಮರ್, ಐ ಕೊರಗು ಲ್ಯಾಂಡೇಜ್, ಔಟ್ಲೈನ್ ಗ್ರಾಮ ಆಫ್ ಹವ್ಯಕಾ, ಬೋರೋ ಗ್ರಾಮರ್ ಡಿಸ್ಕ್ರಿಪ್ಟಿವ್ ಅನಾಲಿಸಿಸ್ ಆಫ್ ತುಳು, ಇತ್ಯಾದಿ ಕೃತಿಗಳು ಅವರ ಬಹುಭಾಷಾ ಪಾಂಡಿತ್ಯಕ್ಕೆ ನಿದರ್ಶನ.
ಭಾಷಾವಿಜ್ಞಾನದ ಮಹತ್ವದ ವಿದ್ವಾಂಸರಾದ ಡಾ. ಡಿ.ಎನ್. ಶಂಕರಭಟ್ಟ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಸಾಧಾರಣ. ಕನ್ನಡ ಶಬ್ದರಚನೆ, ಕನ್ನಡ ವಾಕ್ಯಗಳು, ಕನ್ನಡದ ಬಗೆಗೆ ನೀವೇನು ಬಲ್ಲಲ ? ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಕನ್ನಡ ಭಾಷೆಯ ಕಲ್ಪತ ಚಲತ್ರೆ, ನಿಜಕ್ಕೂ ಹಳಗನ್ನಡ ವ್ಯಾಕರಣ ಎಂಥಹದು? ಕನ್ನಡ ಬರಹವನ್ನು ಸಲಪಡಿಸೋಣ ಇತ್ಯಾದಿ ಗ್ರಂಥಗಳು ಅವರ ವಿಶಿಷ್ಟ ಕೊಡುಗೆ.
ಭಾಷಾವಿಜ್ಞಾನಕ್ಕೆ ಸಂಬಂಧಪಟ್ಟಂತೆ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಅಂತರರಾಷ್ಟ್ರೀಯ ನಿಯತಕಾಅಕೆಗಆಗೆ ಬರೆದಿರುವ ಹೆಗ್ಗಆಕೆಗೆ ಪಾತ್ರರು ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕನ್ನಡದ ಗಣ್ಯ ಲೇಖಕರು, ಭಾಷೆ ಹಾಗೂ ವ್ಯಾಕರಣ ತಜ್ಞರು ಡಾ. ಡಿ. ಎನ್. ಶಂಕರಭಟ್ಟಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಅ. ಸುಂದರ

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪುರಾತತ್ವ ಹಾಗೂ ಇತಿಹಾಸ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿ ಪ್ರಸಿದ್ಧ ಇತಿಹಾಸ ಸಂಶೋಧಕರು ಡಾ. ಅ. ಸುಂದರ ಅವರು. ೧೯೨೨ರಲ್ಲಿ ಜನನ, ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಡಾಲಜಿಯಲ್ಲಿ ಎಂ.ಎ ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಶಾಸನಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ.
ಕರ್ನಾಟಕ ವಿಶ್ವವಿದ್ಯಾಲಯ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಕೆ. ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೆಶನಾಲಯದ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಬಿಜಾಪುರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಕೆ, ಕರ್ನಾಟಕ ಇತಿಹಾಸ ಅಕಾಡೆಮಿ ಏಳನೆಯ ವಾರ್ಷಿಕ ಸಮ್ಮೇಳನ, ಸರ್ವಾಧ್ಯಕ್ಷತೆ ಶಿವಮೊಗ್ಗ ಜಿಲ್ಲೆ ಕನ್ನಡ ಸಾಹಿತ್ಯ ಪಲಷತ್ತಿನ ಜಿಲ್ಲಾ ಸಮ್ಮೇಳನದ ಅಧ್ಯಕ್ಷರು, ಶಿವಮೊಗ್ಗ ಕರ್ನಾಟಕ ಸಂಘದ ಶಂಬಾ ಜೋಶಿ ಪ್ರಶಸ್ತಿ ಪ್ರದಾನ, ಇವೇ ಮೊದಲಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ರಾಜ್ಯ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರಾಗಿ ಸಲ್ಲಿಸಿದ ಸೇವೆ ಮಹತ್ವಪೂರ್ಣವಾದುದು. ಇವರ ಸೇವಾವಧಿಯಲ್ಲಿ ಶಿವಮೊಗ್ಗದ ಪ್ರಸಿದ್ಧ ಶಿವಪ್ಪ ನಾಯಕನ ಅರಮನೆ ಹಾಗೂ ಪ್ರಾಚೀನ ಸ್ಮಾರಕಗಳನ್ನು ಬೆಳಕಿಗೆ ತಂದವರು. ಕೆಳದಿ ಅರಸರ ಅರಮನೆ ಸಂರಕ್ಷಣೆ; ವಡಗಾಂ ಮಾಧವಪುರ ಪ್ರದೇಶ ಉತ್ಪನನ ಕಾರ್ಯಗಳು ನಡೆದವು, ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಪಟ್ಟಂತೆ ೯೧ ಲೇಖನಗಳ ರಚನೆ, ಕರ್ನಾಟಕ ಪ್ರಗೈತಿಹಾಸ, ಪ್ರಾಚ್ಯವಸ್ತು ಸಂಶೋಧನೆ, ಉದ್ದೇಶ ಮತ್ತು ವಿಧಾನ, ಬ್ರಹ್ಮಣಲ ಮತ್ತು ಚಂದ್ರವಳ್ಳಿ ಶಿವಮೊಗ್ಗ ಜಿಲ್ಲೆಯ ದರ್ಶನ ಪ್ರಮುಖ ಕೃತಿಗಳು. ಡಾ. ಎಂ.ಹೆಚ್. ಕೃಷ್ಣ ಹಿಸ್ ಲೈಫ್ ಅಂಡ್ ಕಂಟ್ರಿಬ್ಯೂಷನ್ಸ್ ಅರ್ಅ ಚೆಂಬರ್ ಟೂಂವ್ ಆಫ್ ಸೌತ್ ಇಂಡಿಯಾ ಮುಂತಾದ ಇಂಗ್ಲಿಷ್ ಕೃತಿಗಳನ್ನು ರಚಿಸಿದ ಹಿಲಮೆ ಶ್ರೀಯುತರದು.
ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ ಕರ್ನಾಟಕ ಇತಿಹಾಸಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಇತಿಹಾಸ ಸಂಶೋಧಕರು ಡಾ. ಅ. ಸುಂದರ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಮೂಲ್‌ಚಂದ್ ನಹಾರ್

ವೃತ್ತಿಯಿಖಂದ ವ್ಯಾಪಾರಸ್ಥರು ಹಾಗೂ ಬಹುಮುಖಿ ಸಮಾಜಸೇವಾಕರ್ತರು ಶ್ರೀ
ಮೂಲ್ಚಂದ್ ನಹಾರ್ ಅವರು.
ಹಲವಾರು ಜೀವನ ವಿಜ್ಞಾನ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಒಂದು ಲಕ್ಷ ಪ್ರತಿಗಳನ್ನು ಕನ್ನಡದಲ್ಲಿ ಮುದ್ರಿಸಿ ಶಾಲಾವಿದ್ಯಾರ್ಥಿಗಳಿಗೆ ಉಚಿತವಾಗಿ ವಿತಲಸಿರುವ ಇವರು ಬಡಮಕ್ಕಆಗೆ ಕಂಪ್ಯೂಟರ್ ತರಬೇತಿ, ಅಂಧ ಮಕ್ಕಆಗೆ ಬಟ್ಟೆ ವಿತರಣೆ, ದುರ್ಬಲಲಿಗೆ ಉಚಿತ ಆರೋಗ್ಯ ಕೇಂದ್ರ ವ್ಯವಸ್ಥೆ ಒದಲಿಸಿದ್ದಾರೆ.
ಸ್ವತಃ ಅಂಗವಿಕಲರಾದ ಶ್ರೀ ಮೂಲ್ಚಂದ್ ನಹಾರ್ ಅವರು ನೂರಾರು ಅಂಧಮಕ್ಕಳ ಜೀವನದಲ್ಲಿ ಭರವಸೆ ಮೂಡಿಸುವ ನಿಟ್ಟನಲ್ಲ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸುನಾಮಿಯಿಂದ ಸಂತ್ರಸ್ಥರಾದವರಿಗೆ ಅಕ್ಕಿ, ಪಾತ್ರೆ, ಔಷಧಿ, ಬಟ್ಟೆ ಹಾಗೂ ನಗದು ಹಣವನ್ನು ಕಳಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಬೆಂಗಳೂಲನ ಅಡಕಮಾರನಹಳ್ಳಿಯಲ್ಲಿನ ಆರೋಗ್ಯ ಕೇಂದ್ರದ ಮೂಲಕ ಉಚಿತ ಆರೋಗ್ಯ ತಪಾಸಣಿ, ಔಷಧಿ ನೀಡುತ್ತಿದ್ದಾರೆ. ಶಾಲಾ ಕಾಲೇಜುಗಳ ತಜ್ಞರಿಂದ ಜೀವನ ಮೌಲ್ಯ ಶಿಕ್ಷಣ ತರಬೇತಿ ಶಿಬಿರಗಳನ್ನು ಶಿಕ್ಷಕಲಗಾಗಿ ಜೀವನ ವಿಜ್ಞಾನ ಪಠ್ಯ ರಚನೆ ಹಾಗೂ ಬೋಧನೆಯ ಬಗ್ಗೆ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಇವರು ತಮ್ಮ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಉಚಿತ ತಪಾಸಣೆ ಹಾಗೂ ಔಷಧಿ ವಿತಲಸುವ ಕಾಯಕವನ್ನು ಕಳೆದ ಎರಡು ದಶಕಗಆಂದಲೂ ನಡೆಸುತ್ತಾ ಬಂದಿದ್ದಾರೆ.
ಸರ್ವಧರ್ಮ ಸಮ್ಮೇಳನವನ್ನು ಸಂಘಟಿಸಿರುವ ಶ್ರೀ ಮೂಲ್ಚಂದ್ ನಹಾರ್ ಅವರು ಅಡಕಮಾರನಹಳ್ಳಿಯ ಭಿಕ್ಷಾಧಾಮದ ಅಧ್ಯಕ್ಷರು.
ಅನೇಕ ಧಾರ್ಮಿಕ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಪಾತ್ರರಾಗಿರುವ ಮೂಲ್ಚಂದ್ ನಹಾ ಅವರು ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ದೀನ ದಲತರ ಏಆಗೆಗಾಲ ಸೇವಾಮನೋಭಾವದಿಂದ ದುಡಿಯುತ್ತಿರುವವರು ಶ್ರೀ ಮೂಲ್ಚಂದ್ ನಹಾ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಟಿ.ವಿ. ನಾರಾಯಣಶಾಸ್ತ್ರಿ

ಶಾಲಾದಿನಗಳಿಂದಲೇ ಸೌಟ್ಸ್ ಹಾಗೂ ಗೈಡ್ಸ್ ಬಗ್ಗೆ ಆಸಕ್ತಿ ತಳೆದವರು! ಶ್ರೀ ಟಿ.ವಿ. ನಾರಾಯಣಶಾಸ್ತ್ರಿ ಅವರು.
ಶಾಲಾ ದಿನಗಳಲ್ಲೇ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ಕಾರ್ಯಕರ್ತರಾಗಿ ಭಾಗವಹಿಸಿದ ಟಿ.ವಿ. ನಾರಾಯಣಶಾಸ್ತ್ರಿ ಅವರು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸ್ಕಟ್ಸ್ ಹಾಗೂ ಗೈಡ್ಸ್ನ ಆಯುಕ್ತರು.
ಆಟೋಮೊಬೈಲ್ ಇಂಜಿನಿಯಲಿಂಗ್ನಲ್ಲಿ ಡಿಪ್ಲೊಮಾ ಪಡೆದಿರುವ ಇವರು ೧೯೨೬ರಿಂದ ಸೈಟ್ ಕರ್ನಾಟಕ ಜಾಂಬೂಲಗಳಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯಾದ್ಯಂತ ನಡೆಯುವ ಶಿಬಿರಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಸೌಟ್ಸ್ ಚಳವಆಯಲ್ಲಿ ಅನುಪಮ ಸೇವೆ ಸಲ್ಲಿಸಿರುವ ಟಿ.ವಿ. ನಾರಾಯಣಶಾಸ್ತ್ರಿ ಅವರಿಗೆ ರಾಷ್ಟ್ರೀಯ ಭಾರತ್ ಸ್ಕಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಅತ್ಯುನ್ನತವಾದ ಪ್ರಶಸ್ತಿ ಸಿಲ್ವರ್್ರ ಎಅಫೆಂಟ್ನ್ನು ೨೦೦೨ರ ಸಾಲಿಗಾಗಿ ನೀಡಿತು. ಕೈಗಾಲಕೋದ್ಯಮಿಯಾಗಿ ಅನೇಕ ಸಾಧನೆಗಳನ್ನು ಮಾಡಿರುವ ಶಾಸ್ತ್ರಿ ಅವರಿಗೆ ಉದ್ಯೋಗರತ್ನ, ಕೈಗಾಲಕಾ ಅರ್ಹತಾ ಪತ್ರ ಹಾಗೂ ಉದ್ಯಮಿಗಳಿಗಾಗಿ ನೀಡುವ ತಾವು ಪತ್ರವು ಸಂದಿದೆ.
ಸೌಟ್ಸ್ ಚಳುವಆಯಲ್ಲಿ ಏಳು ದಶಕಗಳಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಶಾಸ್ತ್ರಿಯವರು ಶಿವಮೊಗ್ಗೆಯಲ್ಲ ೨೧ನೆಯ ರಾಜ್ಯಮಟ್ಟದ ಸೌಟ್ಸ್ ಹಾಗೂ ಗೈಡ್ಸ್ ಬುಲ್ಬುಲ್ ಉತ್ಸವವನ್ನು ೧೯೯೬ರಲ್ಲಿ ಯಶಸ್ವಿಯಾಗಿ ನಡೆಸಿದರು. ಈ ಉತ್ಸವದಲ್ಲ ರಾಜ್ಯದ ಸಾವಿರಕ್ಕೂ ಹೆಚ್ಚು ಪುಟಾಣಿ ಸ್ಕಟ್ಸ್ಗಳು ಪಾಲ್ಗೊಂಡು ಸೌಟ್ ಚಳವಆಯ ಉದ್ದೇಶವನ್ನು ಅಲತರಲ್ಲದೆ, ಅದರ ಸಕ್ರಿಯ ಕಾರ್ಯಕರ್ತರಾಗಲು ಪ್ರೇರಣೆ ಪಡೆದರು.
ಮಕ್ಕಳಲ್ಲಿ ಸೌಟ್ಸ್ ಚಳವಳಿಯ ಬಗ್ಗೆ ಅಲವನ್ನು ಮೂಡಿಸಿ ಸೇವಾ ಮನೋಭಾವವನ್ನು ಬಿತ್ತಿದ ಸಮಾಜಸೇವಕರು ಶ್ರೀ ಟಿ.ವಿ. ನಾರಾಯಣ ಶಾಸ್ತ್ರಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಎಂ.ಜಿ. ಬೋಪಯ್ಯ

ದಿ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಮೂಲಕ ಸಮಾಜಸೇವೆಯಲ್ಲಿ ತೊಡಗಿರುವವರು ಶ್ರೀಮತಿ ಎಂ.ಜಿ.ಬೋಪಯ್ಯ ಅವರು.
ಕೊಡಲನವರಾದ ಶ್ರೀಮತಿ ಎಂ.ಜಿ. ಬೋಪಯ್ಯ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರು ಹಾಗೂ ಮದ್ರಾಸ್ಗಳಲ್ಲ. ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಪರ್ಕಕ್ಕೆ ಬಂದ ಶ್ರೀಮತಿ ಬೋಪಯ್ಯನವರು ಪ್ರಸ್ತುತ ಈ ಸಂಸ್ಥೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷೆ.
೮೮ ವರ್ಷ ಹರೆಯದ ಶ್ರೀಮತಿ ಬೋಪಯ್ಯ ೧೯೬೦ರಲ್ಲಿ ಗೈಡ್ಸ್ ಘಟಕವನ್ನು ಆರಂಭಿಸುವುದರ ಮೂಲಕ ಗೈಡ್ ಚಳವಳಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಎರಡನೆಯ ತರಗತಿಯಲ್ಲೇ ಗರ್ಲ್ಗೈಡ್ ಆಗಿ ಅನುಭವ ಪಡೆದಿದ್ದ ಇವರು ತಮ್ಮ ವಿದ್ಯಾಭ್ಯಾಸ ಉದ್ದಕ್ಕೂ ಈ ಸಂಸ್ಥೆಯೊಡನೆ ಸಂಪರ್ಕ ಇಟ್ಟುಕೊಂಡಿದ್ದವರು. ಕೊಡಗಿನಾದ್ಯಂತ ಸ್ಕಟ್ಸ್ ಹಾಗೂ ಗೈಡ್ಸ್ ಶಾಖೆಗಳನ್ನು ತೆರೆದು ಶಾಲಾ ಮಕ್ಕಳನ್ನು ಮತ್ತು ಸಾರ್ವಜನಿಕರನ್ನು ಈ ಚಳುವಆಯ ವ್ಯಾಪ್ತಿಗೆ ತಂದ ಶ್ರೀಮತಿ ಬೋಪಯ್ಯ ಅವರು ಭಾರತ ರಾಷ್ಟ್ರೀಯ ಸೌಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ 2019. ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದರು.
ಸೌಟ್ಸ್ ಹಾಗೂ ಗೈಡ್ ಆಂದೋಲನವಲ್ಲದೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷರೂ ಹೌದು.
ಏಷ್ಯಾ ಪೆಸಿಫಿಕ್ ಅಡಲ್ಟ್ ಲೀಡರ್ ಪ್ರಶಸ್ತಿಯೂ ಸೇಲದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ಶ್ರೀಮತಿ ಬೋಪಯ್ಯ ಅವರಿಗೆ ಭಾರತ್ ಸೈಟ್ಸ್ ಹಾಗೂ ಗೈಡ್ಸ್ ಸಂಸ್ಥೆಯ ಅತ್ಯುನ್ನತ ಗೌರವವಾದ ಸಿಲ್ವರ್ ಎಅಫೆಂಟ್ ಕೂಡಾ ದೊರಕಿದೆ. ಮೈಸೂರು ದಸರಾ ಪ್ರಶಸ್ತಿ, ಸಹಕಾರ ಶಿಲ್ಪ ಮೊದಲಾದ ಗೌರವಗಳು ಇವರಿಗೆ ಲಭಿಸಿವೆ. ಅನೇಕ ಯೂರೋಪ್ ದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿರುವ ಶ್ರೀಮತಿ ಬೋಪಯ್ಯ ಅವರು ಮಡಿಕೇಲಯ ಪುರಸಭೆ ಸದಸ್ಯರಾಗಿ ಒಂಬತ್ತು ವರ್ಷಗಳ ಕಾಲ, ಇನ್ನರ್ಲ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಲನಲ್ಲ ಕೆಲವು ಶಾಲೆಗಳನ್ನು, ಬಾಲವಾಡಿಗಳನ್ನು, ಮಹಿಳಾ ಕೇಂದ್ರಗಳನ್ನು ಸ್ಥಾಪಿಸಿದ ಇವರು ರಾಜ್ಯ ಸಮಾಜ ಕಲ್ಯಾಣ ಸಲಹಾ ಸಮಿತಿ, ಸಣ್ಣ ಉಳಿತಾಯ ಸಲಹಾ ಸಮಿತಿ ಸೇಲದಂತೆ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಿತಿಗಳಲ್ಲಿ ಸೇವಾಮನೋಭಾವದಿಂದ ದುಡಿಯುತ್ತಿರುವವರು ಶ್ರೀಮತಿ ಎಂ. ಜಿ. ಬೋಪಯ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವೈ.ಎಂ.ಎಸ್. ಶರ್ಮ

ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳ ಸಾಧನೆ ಮಾಡಿರುವ ಹಿಲಯ ಸಮಾಜಸೇವಕರು ಶ್ರೀ ವೈ.ಎಂ.ಎಸ್. ಶರ್ಮ ಅವರು.
೧೯೨೫ರಲ್ಲಿ ಕೋಲಾರದ ಯಳಗೊಂಡಹಳ್ಳಿಯಲ್ಲಿ ಜನನ. ಶ್ರೀ ವೈ.ಎಂ.ಎಸ್. ಶರ್ಮ ಅವರು ಎಂಜಿನಿಯಲಂಗ್ ಶಿಕ್ಷಣ ಪಡೆದಿದ್ದು ಇಂಗ್ಲೆಂಡ್ನಲ್ಲಿ (೧೯೪೬-೫೦)
ಮೈಸೂರು-ಚಾಮರಾಜನಗರ ರೈಲ್ವೆ ಟ್ರಾಕ್ ನಿರ್ವಹಣೆಯ ಹೊಣೆಗಾಲಕೆ ಹೊತ್ತುಕೊಂಡ ಶರ್ಮ ಅವರು ಲಕ್ಷ್ಮಣತೀರ್ಥ ಸೇತುವೆ, ಕನ್ನಂಬಾಡಿ ಡೀಪ್ ಇಡ್ಜ್, ಶ್ರೀರಂಗಪಟ್ಟಣ-ಮೈಸೂರು ನಡುವಣ ರೈಲ್ವೆ ಹಆ ನಿರ್ವಹಣೆ ಮೊದಲಾದ ಕಾಮಗಾಲಗಳ ನೇತೃತ್ವ ವಹಿಸಿದ್ದರು.
ಮೈಸೂರು ಸಂಸ್ಥಾನದ ಹಲವಾರು ಕೆರೆ ನಿರ್ಮಾಣ ಹಾಗೂ ನಿರ್ವಹಣೆಯ ಉಸ್ತುವಾಲ ವಹಿಸಿಕೊಂಡಿದ್ದ ವೈ.ಎಂ.ಎಸ್. ಶರ್ಮ ರೈಲ್ವೆ ಹಾಲ ಹಾಗೂ ಸೇತುವೆ ನಿಲ್ದಾಣದಲ್ಲಿ ಹೊಸಪದ್ಧತಿಗಳನ್ನು ಅಳವಡಿಸಿ ನಿರಾಣ ವೆಚ್ಚದಲ್ಲಿ ಉಳಿತಾಯ ತೋರಿಸಿಕೊಟ್ಟರು. ಅವರು ಬಡವರ ಶ್ರೇಯೋಭಿವೃದ್ಧಿ ಕಾರ್ಯಗಳಿಗೆ ತೊಡಲಿಸಿಕೊಂಡವರು ಹಾಗೂ ಹಲವಾರು ರೋಗಳಿಗೆ ಪುನರ್ವಸತಿ ಕಲ್ಪಿಸಿದವರು.
ವಿದ್ಯಾರ್ಥಿ ಜೀವನದಲ್ಲಿ ಸೈನ್ಯದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶರ್ಮ ಅವರು ಸ್ವಾತಂತ್ರಾನಂತರ ಕರ್ನಾಟಕದ ಹಲವಾರು ಕಡೆಗಳಲ್ಲಿ ಸೇತುವೆ, ಶಾಲಾಕಟ್ಟಡ, ಸಮುದಾಯ ಭವನ, ಆಸ್ಪತ್ರೆ, ತರಕಾಲ-ಮಾರುಕಟ್ಟೆ ನಿರಾಣ ಕಾರ್ಯದಲ್ಲಿ ದುಡಿದರು.
ಎಂಜಿನಿಯರ್ ಆಗಿ ವೃತ್ತಿ ಜೀವನ ನಡೆಸಿದ ಶರ್ಮ ಅವರು ತನ್ಮೂಲನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಿದರಲ್ಲದೆ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಗಾಗಿ ವ್ಯವಸ್ಥೆ ಮಾಡಿದರು.
ಇವಯಸ್ಸಿನಲ್ಲಿಯೂ ಹಲವು ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವವರು ಮೈ.ಎಂ.ಎಸ್. ಶರ್ಮ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್

ರಾಜನ ಮಗ ಕಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮಗಳ ಆಯೋಜನೆ ಹಾಗೂ ದುರ್ಬಲ ವರ್ಗದವರ … ಏಆಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.
‘ ೨೦೦೨ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಶ್ರೀ ಜಿ. ಶಂಕರ್ ನೇತೃತ್ವದಲ್ಲಿ ಸಂಸ್ಥೆಯ ಸ್ಥಾಪನೆ. ಟ್ರಸ್ಟ್ ವತಿಯಿಂದ ಕುಂದಾಪುರ ತಾಲೂಕು ಮೂಡುಬಗೆ-ಅಂಪಾರು ಇಲ್ಲಿನ ವಾಗ್ದತಿ ಕಿವುಡ, ಮೂಗ ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆ ಆರಂಭ. ಅಲ್ಲದೆ ಟ್ರಸ್ಟ್ ವತಿಯಿಂದ ಬಡವರ್ಗದ ವಿದ್ಯಾರ್ಥಿ- ವಿದ್ಯಾರ್ಥಿನಿಯಲಿಗೆ ವಿದ್ಯಾರ್ಥಿವೇತನ ವಿತರಣೆ, ೨೦೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ನೋಟ್ಬುಕ್ಗಳ ವಿತರಣಿ, ಯಕ್ಷಗಾನ ಕಲಾವಿದರಿಗೆ ಹಾಗೂ ಕಡುಬಡವ ರೋಗಳಿಗೆ ಧನಸಹಾಯ, ಉಡುಪಿ ಗಾಂಛಿ ಆಸ್ಪತ್ರೆಗೆ ಉಚಿತ ಡಯಾಲಿಸಿಸ್ಗಾಗಿ ಡಯಾಲಿಸಿಸ್ ಯಂತ್ರ ವಿತರಣೆ, ಗುಜರಾತ್ ಭೂಕಂಪನಿಛಿ ಹಾಗೂ ಸುನಾಮಿ ದುರಂತಕ್ಕೆ ದೇಣಿಗೆ ನೀಡಿಕೆ, ಉಚಿತ ಸಾಮೂಹಿಕ ವಿವಾಹಕ್ಕೆ ಧನಸಹಾಯ, ಉಡುಪಿ ತಾಲೂಕಿನ ಕೋಟ ಪಡುಕೆರೆ ಪ್ರಥಮ ದರ್ಜೆ ಸರ್ಕಾಲ ಕಾಲೇಜಿಗೆ ಉಚಿತ ಭೂಮಿ ನೀಡಿಕೆ, ಉಡುಪಿ ಜಿಲ್ಲೆ ಕೋಲ ಕಲ್ಯಾಣದಲ್ಲಿ ಹೈಸ್ಕೂಲ್ ಸ್ಥಾಪನೆಗೆ ಎರಡು ಕೊಠಡಿ ಹಾಗೂ ಸಭಾಭವನ ಕೊಡುಗೆ, ಆಯ್ದ ಶಾಲೆಗಳಿಗೆ ಕಂಪ್ಯೂಟರ್ ನೆರವು, ಮಂಗಳೂಲಿನ ಎ.ಜೆ. ಆಸ್ಪತ್ರೆಗೆ ಮಾರ್ಗಮಧ್ಯದಲ್ಲಿ ಹೃದಯಾಘಾತವಾಗುವ ರೋಣಗಳ ಅನುಕೂಲಕ್ಕೆ ವೈದ್ಯಕೀಯ ಸಲಕರಣಿಗಳನ್ನೊಳಗೊಂಡ ಟೆಂಪೊ ಟ್ರಾವಲರ್ ನೀಡಿಕೆ ಮುಂತಾದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ.
ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ವೈದ್ಯಕೀಯ ಕ್ಷೇತ್ರಗಳಲ್ಲಿ ಸಮಾಜೋಪಯೋಗಿ ಮತ್ತು ಜನಪರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮಾದಲ ಸಂಸ್ಥೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್.

Categories
ಕ್ರೀಡೆ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಸಿ. ಸುರೇಶ್

ಹಳ್ಳಿಗಾಡಿನಲ್ಲಿ ಹುಟ್ಟಿ ದೇಸಿ ಕ್ರೀಡೆ ಕಬಡ್ಡಿಯಲ್ಲಿ ನೈಪುಣ್ಯತೆ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು ಶ್ರೀ ಬಿ.ಸಿ. ಸುರೇಶ್ ಅವರು.
ಚನ್ನಪಟ್ಟಣದ ಸಂಕಲಗೆರೆಯವರಾದ ಬಿ.ಸಿ. ಸುರೇಶ್ ಅವರು ಕಳೆದ ಒಂದೂವರೆ ದಶಕದಿಂದ ಕಬಡ್ಡಿ ರಂಗದಲ್ಲಿ ಹೆಸರು ಮಾಡಿದ್ದಾರೆ.
ಚಿಕ್ಕಂದಿನಿಂದಲೇ ಈ ಹಳ್ಳಿ ಆಟದಲ್ಲಿ ಆಸಕ್ತಿ ಮೂಡಿಸಿಕೊಂಡು ಸತತ ಪಲಶ್ರಮದಿಂದ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿಕೊಂಡ ಸುರೇಶ್ ಹಿಂತಿರುಗಿ ನೋಡಲಿಲ್ಲ. ಕರ್ನಾಟಕ ರಾಜ್ಯ ತಂಡಕ್ಕೆ ಮೂರು ಬಾಲ ನಾಯಕರಾಗಿದ್ದ ಇವರು ೧೩ ವರ್ಷಗಳ ಕಾಲ ರಾಷ್ಟ್ರೀಯ ಪಂದ್ಯಾವಆಗಳಲ್ಲಿ ಪಾಲ್ಗೊಂಡಿದ್ದಾರೆ.
ಎಂಟು ಬಾಲ ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಸುರೇಶ್ ೬ ವರ್ಷ ಫೆಡರೇಷನ್ ಕಪ್ ಪಂದ್ಯಾವಆಗಳಲ್ಲಿ ಭಾಗವಹಿಸಿದ್ದು ದೇಶದ ಪ್ರಮುಖ ಕಬಡ್ಡಿ ಆಟಗಾರರೆನ್ನಿಸಿಕೊಂಡಿದ್ದಾರೆ.
ದಕ್ಷಿಣ ಕೊಲಿಯಾದಲ್ಲಿ ಜರುಣದ (೨೦೦೨) ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಭಾರತ ತಂಡದಲ್ಲಿದ್ದ ಸುರೇಶ್ ಮೊದಲ ವಿಶ್ವಕಪ್ ಕಬಡ್ಡಿ ಪಂದ್ಯಾವಆಗಳಲ್ಲಿ ಅಗ್ರಸ್ಥಾನ ಗಳಿಸಿದ ಭಾರತ ತಂಡದ ಉಪ ನಾಯಕ. ಅಂತರರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲ (೨೦೦೪) ಭಾರತ ತಂಡದ ನಾಯಕತ್ವ ವಹಿಸಿದ್ದ ಬಿ.ಸಿ. ಸುರೇಶ್ ಅವರು, ಎರಡು ಬಾಲ ಸ್ಕಾಫ್ ಗೇಮ್ಸ್ (೧೯೯೯-೨೦೦೪) ಎರಡು ವರ್ಷ ಏಷ್ಯನ್ ಚಾಂಪಿಯನ್ ಷಿಪ್ಗಳಲ್ಲಿ ಭಾರತ ತಂಡದ ಆಟಗಾರ,
ಭಾರತಕ್ಕೆ ಹಾಗೂ ಕರ್ನಾಟಕ ತಂಡಕ್ಕೆ ತಮ್ಮ ಚಾಕಚಕ್ಯತೆ ಅಟದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಡುವ ಮುಖ್ಯ ಪಾತ್ರವಹಿಸಿರುವ ಬಿ. ಸಿ. ಸುರೇಶ್ ಅವರಿಗೆ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ ಸಂಸ್ಥೆ ಪುರಸ್ಕಾರ ಹಾಗೂ ಕೆಂಪೇಗೌಡ ಪ್ರಶಸ್ತಿಗಳು ಪ್ರಮುಖವಾದವು. ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ಸಾದರಪಡಿಸಿರುವ ಅತ್ಯುತ್ತಮ ಕಬಡ್ಡಿ ಪಟು ಶ್ರೀ ಬಿ.ಸಿ. ಸುರೇಶ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಪಂಕಜ್ ಅದ್ವಾನಿ

ಕಿರಿಯ ವಯಸ್ಸಿನಲ್ಲೇ ವಿಶ್ವದ ಅಗ್ರಮಾನ್ಯ ಬಿಲಿಯರ್ಡ್ಸ್ ಆಟಗಾರನೆಂದು ಕೀರ್ತಿ ಪಡೆದವರು ಪಂಕಜ್ ಅಡ್ವಾನಿ ಅವರು.
೧೯೮೫ರ ಜುಲೈ ೨೪ರಂದು ಜನಿಸಿದ ಪಂಕಜ್ ಅಡ್ವಾನಿ ೧೯೯೭ರಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಸ್ಪೂಕರ್ ಚಾಂಪಿಯನ್ ಆಗಿ ಹೊರಹೊಮ್ಮಿದವರು ಸತತವಾಗಿ ಯಶಸಾಧಿಸುತ್ತಲೇ ಇದ್ದಾರೆ.
ಸ್ಕೂಕರ್ ಹಾಗೂ ಬಿಲಿಯರ್ಡ್ಸ್ ಆಟಗಳಲ್ಲಿ ಪಲಣಿತಿ ಗಳಿಸಿದ ಪಂಕಜ್ ೧೯೯೮ರಲ್ಲೇ ಸೀನಿಯರ್ ಬಿಲಿಯರ್ಡ್ಸ್ ಟೂರ್ನಿಯಲ್ಲಿ ಪಾಲ್ಗೊಂಡರು.
ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ನಿಯತವಾಗಿ ಭಾಗವಹಿಸುತ್ತ ಬಂದ ಪಂಕಜ್ ಅದ್ವಾನಿ ಅನುಭವದ ಜೊತೆಗೆ ಹಲವು ಪ್ರಶಸ್ತಿಗಳನ್ನು ತಮ್ಮದಾಲಿಸಿಕೊಂಡರು.
೨೦೦೩ರಲ್ಲಿ ಸ್ಕೂಕ ಹಾಗೂ ಇಲಿಯರ್ಡ್ಸ್ ಎರಡರಲ್ಲೂ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಆದ ಪಂಕಜ್ ಅನೇಕ ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಲ್ಲದೆ ೨೦೦೨ರಲ್ಲಿ ೨೧ ವರ್ಷದೊಳಗಿನ ವಿಶ್ವನ್ನೂಕರ್ ಟೂರ್ನಿಯ ಫೈನಲ್ ತಲುಪಿದ್ದರು.
ಭಾರತೀಯ ಚಿಲಿಯರ್ಡ್ಸ್ ಛಾಂಪಿಯನ್ (೨೦೦೫) ಆದ ಪಂಕಜ್ ಅಡ್ವಾನಿ ಅದೇ ವರ್ಷ ಏಷ್ಯನ್ ಬಿಅಯರ್ಡ್ ಛಾಂಪಿಯನ್ಷಿಪ್ ಗೆದ್ದುಕೊಂಡರು. ಆ ನಂತರದ ಹೆಜ್ಜೆಯೇ ಪಂಕಜ್ ಅಡ್ವಾನಿ ವಿಶ್ವ ಛಾಂಪಿಯನ್ ಆಗಿದ್ದು. ಪ್ರತಿಷ್ಟಿತ ರಾಷ್ಟ್ರೀಯ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿಯೂ ಸೇಲದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪಂಕಜ್ ಅದ್ವಾನಿ ಅವಲಗೆ ಸಂದಿವೆ.
ಕರ್ನಾಟಕದ ಹೆಮ್ಮೆಯ ಅಯರ್ಡ್ಸ್ ಪಟು ಶ್ರೀ ಪಂಕಜ್ ಆದ್ವಾನಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೆ. ಶೇಖರ ಬಾಬುಶೆಟ್ಟಿ

ಅರಬ್ ರಾಷ್ಟ್ರಗಳಲ್ಲಿ ಹೊಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವರು ಕರ್ನಾಟಕದ ಕೆ. ಶೇಖರ ಬಾಬುಶೆಟ್ಟಿ ಅವರು.
ಉಡುಪಿ ತಾಲೂಕಿನ ಕಳತ್ತೂರು ಹತ್ತಿರ ಎಲ್ಲೂಲನಲ್ಲಿ ಜನಿಸಿದ ಕೆ. ಶೇಖರ ಬಾಬುಶೆಟ್ಟಿ ಮಧ್ಯಪೂರ್ವದ ಮರಳುಗಾಡಿನಲ್ಲಿ ಸ್ಥಾಪಿಸಿದ ಅರಬ್ ಉಡುಪಿ ರೆಸ್ಟೋರೆಂಟ್ ಇಂದು ಅತ್ಯಂತ ಬೃಹತ್ ಸಂಸ್ಥೆ.
ಅಬೂದಾಚಿಯ ಯಶೋಗಾಥೆಯ ನಂತರ ಕೆ. ಶೇಖರ ಬಾಬುಶೆಟ್ಟಿ ಅವರು ದುಬಾಯ್, ಶಾರ್ಜಾ, ಅಲೈನ್ಗಳಲ್ಲೂ ಉಡುಪಿ ಹೊಟೆಲ್ಗಳನ್ನು ಸ್ಥಾಪಿಸಿ ಶುಚಿ ಹಾಗೂ ರುಚಿಯ ತಿಂಡಿ-ತಿನಿಸು ಆಹಾರಕ್ಕೆ ಹೆಸರುವಾಸಿಯಾಗಿದ್ದಾರೆ.
ಹೊಟೆಲ್ ಉದ್ಯಮವನ್ನು ಬೇರೆ ಬೇರೆ ಕಡೆ ಸ್ಥಾಪಿಸುವುದಲ್ಲದೆ ಅರಬ್ ರಾಷ್ಟ್ರಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ತಿಂಡಿ-ತಿನಿಸುಗಳನ್ನು ಮಾರಾಟಕ್ಕಿಡುವ ಕೆ. ಶೇಖರ ಬಾಬುಶೆಟ್ಟಿ ಅವರು ಪ್ರಯತ್ನ ಯಶಸ್ಸು ಕಂಡಿದ್ದು ಮಾರಾಟ ಸಂಕೀರ್ಣಗಳಲ್ಲಿ, ಶಾಲೆಗಳಲ್ಲಿ ಇಂದು ಅರಬ್ ರಾಷ್ಟ್ರಗಳಲ್ಲಿ ಉಡುಪಿ ರೆಸ್ಟೋರೆಂಟ್ನ ತಿಂಡಿ-ತಿನಿಸುಗಳು ಬಹಳ ಜನಪ್ರಿಯ.
ಪ್ರಸಿದ್ಧ ಉದ್ಯಮಗಳ ಕ್ಯಾಂಟನ್ಗಳಲ್ಲಿ ತಿಂಡಿ-ತಿನಿಸುಗಳ ಮಟಿಗೆಗಳಲ್ಲಿ ತಮ್ಮ ಹೊಟೆಲ್ ತೆರೆದಿರುವ ಕೆ. ಶೇಖರ ಬಾಬುಶೆಟ್ಟಿ ಅವರು ಮನೆಗಳಿಗೆ ತಿಂಡಿ-ತಿನಿಸು ಮುಟ್ಟಿಸುವ ಪ್ರಯತ್ನದಲ್ಲೂ ಯಶ ಪಡೆದುಕೊಂಡಿದ್ದಾರೆ. ಯಶಸ್ವಿ ಉದ್ಯಮಿ ಅನಿಸಿಕೊಂಡ ಕೆ. ಶೇಖರ ಬಾಬುಶೆಟ್ಟಿ ತಮ್ಮೂಲನಲ್ಲಿ ರಂಗಮಂದಿರ, ಬಾಲಭವನ, ಬಸ್ನಿಲ್ದಾಣ ಕಟ್ಟಿಸಿಕೊಟ್ಟಿದ್ದಾರಲ್ಲದೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವು ನೀಡುತ್ತಾ ಬಂದಿದ್ದಾರೆ. ಅನಿವಾಸಿ ಭಾರತೀಯರ ಸಂಘಟನೆಯಲ್ಲೂ ಸಕ್ರಿಯರಾಗಿರುವ ಕೆ. ಶೇಖರ ಬಾಬುಶೆಟ್ಟಿ ಕಾಶ್ಮೀರ ಸರ್ಕಾರದ ಭಾರತ್ ಗೌರವ್ ಸೇಲದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಉದ್ಯಮಿ.
ತಮ್ಮ ಹೊಟೆಲ್ ಉದ್ಯಮದಲ್ಲಿ ಹೆಚ್ಚಾಗಿ ಕರ್ನಾಟಕದವರಿಗೆ ಉದ್ಯೋಗ ನೀಡುವ ಪಲಪಾಠ ಬೆಳೆಸಿಕೊಂಡ ಕೆ. ಶೇಖರ ಬಾಬುಶೆಟ್ಟಿ ಅವರು ಸುಮಾರು ೩೦೦ ಮಂದಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದಾರೆ. ಅಬೂದಾಱಯ ಕರ್ನಾಟಕ ಸಂಘದ ಸಕ್ರಿಯ ಸದಸ್ಯರಾಲರುವ ಇವರು ಅನೇಕ ಸಂಘ-ಸಂಸ್ಥೆಗಳ ಒಡನಾಟದಲ್ಲಿದ್ದಾರೆ.
ಹೊರನಾಡಿನಲ್ಲಿ ಕನ್ನಡನಾಡಿನ ವಿಶಿಷ್ಟ ತಿಂಡಿ ತಿನಿಸುಗಳನ್ನು ಪಲಚಂಸುವ ಮೂಲಕ ದೇಸೀ ತಿನಿಸುಗಳನ್ನು ಉಣಬಡಿಸುತ್ತಿರುವವರು ಶ್ರೀ ಶೇಖರ ಬಾಬು ಶೆಟ್ಟಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಡಾ. ಎಚ್.ವೈ. ರಾಜಗೋಪಾಲ್

ಹೊರನಾಡಿನಲ್ಲಿ ಕನ್ನಡ ನಾಡು-ನುಡಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹೊರನಾಡ ಕನ್ನಡಿಗ ಡಾ. ಎಚ್.ವೈ. ರಾಜಗೋಪಾಲ್ ಅವರು. ಬೆಂಗಳೂಲಿನಲ್ಲಿ ಜನಿಸಿ ಎಂಜಿನಿಯಲಿಂಗ್ ಸ್ನಾತಕ ಪದವಿ ಪಡೆದು ಅಮೆಲಕದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಡಾ. ಎಚ್.ವೈ. ರಾಜಗೋಪಾಲ್ ಅವರು ಅಮೆಲಕದ ಫಿಅಡೆಸ್ಟ್ರಿಯಾ ಹಾಗೂ ನ್ಯೂಜೆರ್ಸಿಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಸಂಬಂಧದಲ್ಲಿ ವಿಶೇಷವಾಗಿ ಶ್ರಮಿಸಿರುವ ರಾಜಗೋಪಾಲ್ ಅವರು ಪ್ರಸ್ತಾಪ ಹಾಗೂ ಕನ್ನಡ ಸಾಹಿತ್ಯರಂಗ ಎಂಬೆರಡು ಸಂಸ್ಥೆಗಳನ್ನು ಹುಟ್ಟುಹಾಕಿ ಅಮೆಲಕದ ಉದ್ದಗಲಕ್ಕೂ ಕನ್ನಡ ಕಾರ್ಯಕ್ರಮಗಳನ್ನು
ನಿರಂತರವಾಗಿ ನಡೆಸಿಕೊಂಡು ಬಂದವರು.
ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾಗಿ ಎಚ್.ವೈ. ರಾಜಗೋಪಾಲ್ ಫಿಅಡೆಸ್ಟ್ರಿಯಾ, ಲಾಸ್ ಏಂಜಲೀಸ್ ಹಾಗೂ ಚಿಕಾಗೋಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಕುವೆಂಪು ಸಾಹಿತ್ಯ ಸಮೀಕ್ಷೆ, ಆಚೀಚೆಯ ಕಥೆಗಳು, ನಗೆಗನ್ನಡಂ ಗೆಲೆ, ಕನ್ನಡ ಸಾಹಿತಿಗಳ ಭಾಷಣ ಮಾಲೆಗಳನ್ನು ತಮ್ಮ ಸಂಸ್ಥೆಗಳ ಮೂಲಕ ಪ್ರಕಟಿಸಿದ ಹೆಗ್ಗಆಕೆ ಶ್ರೀಯುತರದು.
ಅಂತರ್ಜಾಲದಲ್ಲಿ ಕನ್ನಡ ಕಅಸುವ ಎರಡು ಕಾರ್ಯಕ್ರಮಗಳನ್ನು ಸಿದ್ಧಗೊಳಿಸಿರುವ (ಕನ್ನಡ ದನಿ-ಕನ್ನಡ ಪಲಚಯ) ಡಾ|| ರಾಜಗೋಪಾಲ್ ಅಮೆಲಕದ ಒಂಬತ್ತು ಪ್ರಾಂತ್ಯಗಳಲ್ಲಿ ಕನ್ನಡ ಸಾಹಿತ್ಯ ಶಿಬಿರಗಳನ್ನು ವ್ಯವಸ್ಥೆ ಮಾಡಿರುವುದಲ್ಲದೆ ಕನ್ನಡ ಜನಪದ ಗೀತೆಗಳ ಧ್ವನಿಮುದ್ರಿಕೆಗಳ ನಿರ್ಮಾಣವನ್ನು ಕೈಗೊಂಡವರು. ಎಂಜನಿಯಲಂಗ್ ಬೋಧನೆಯ ಜೊತೆಗೆ ನಿರಂತರವಾಗಿ ಪತ್ರಿಕೆ, ನಿಯತಕಾಲಿಕೆಗಳಿಗೆ ಲೇಖನ ಬರೆಯುತ್ತಿರುವ ಡಾ| ರಾಜ್ಗೋಪಾಲ್ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನಾಟ್ಯಕಲೆಗೆ ಸಂಬಂಧಿಸಿದಂತೆ ನಿಪುಣ
ಬರಹಗಾರರು.
ಕರ್ನಾಟಕದಿಂದ ಹಲವಾರು ಕನ್ನಡ ಕವಿ ಸಾಹಿತಿಗಳನ್ನು ಅಮೆಲಕಕ್ಕೆ ಆಹ್ವಾನಿಸಿ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿರುವ ಕನ್ನಡಾಭಿಮಾನಿ ಡಾ|| ರಾಜಗೋಪಾಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಪಿ.ಕೆ. ಶೆಟ್ಟಿ

ಹಲವಾರು ವರ್ಷಗಳಿಂದ ಕೃಷಿ ವಿಜ್ಞಾನಿ ಹಾಗೂ ಪಲಸರ ವಿಜ್ಞಾನಿಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಮ್ಮನ್ನು ಸಂಶೋಧನೆ ಹಾಗೂ ಬೋಧನೆಯಲ್ಲಿ ತೊಡಲಿಸಿಕೊಂಡವರು ಪ್ರೊ. ಪಿ.ಕೆ. ಶೆಟ್ಟಿ ಅವರು. ಸಂಶೋಧನೆಯ ಜೊತೆಗೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಗುತ್ತಿರುವ ತಲತಗತಿಯ ಬೆಳವಣಿಗೆಗಳ ಬಗ್ಗೆ ಅಲವು ಮತ್ತು ಆಸಕ್ತಿ ಮೂಡಿಸಲು ಪಲಿಸರ ಸ್ನೇಹಿ ಕೃಷಿ ಪದ್ಧತಿ ಬಳಕೆಯ ಬಗ್ಗೆ ಬೆಳಕು ಚೆಲ್ಲಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಪಲಸರ ಸಂರಕ್ಷಣೆಯ ಬಗ್ಗೆ ಜನತೆಗೆ ಅಲವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಪಲಸರಕ್ಕೆ ಹಾನಿಕಾರಕವಾದ ಮತ್ತು ಪಲಸರದಲ್ಲಿ ಬಹುಸಮಯ ಇರಬಹುದಾದ ಒಂದು ರಾಸಾಯನಿಕ ಕೀಟನಾಶಕವನ್ನು ಸೂಕ್ಷ್ಮಜೀವಿಯ ಸಹಾಯದಿಂದ ಬೇರ್ಪಡಿಸಿ ಪಲಸರ ಪೂರಕವಾದ ರಾಸಾಯನಿಕವಾಗಿ ಮಾರ್ಪಾಟು ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಭಾರತದ ಕೃಷಿ ಬೆಳೆಗಳ ಸಂರಕ್ಷಣೆ ಕುಲಿತಂತೆ ಹನ್ನೆರಡು ರಾಜ್ಯಗಳಲ್ಲಿ ಆಳವಾದ ಅಧ್ಯಯನ ಕೈಗೊಂಡು ಸಮಗ್ರ ಕೃಷಿ ವಿವರಗಳು ಒಂದೇ ಕಡೆ ಸಿಗುವಂತಹ ಸಾಪ್ಟವೇರ್ ಅಭಿವೃದ್ಧಿ ಪಡಿಸಿದ್ದಾರೆ
ದೇಶ-ವಿದೇಶದ ಸಂಶೋಧನಾ ನಿಯತಕಾಅಕೆಗಳಲ್ಲಿ ಹಲವಾರು ವೈಜ್ಞಾನಿಕ ಲೇಖನಗಳನ್ನು, ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಪ್ರೊ. ಪಿ.ಕೆ. ಶೆಟ್ಟಿ ಅವರು ಪ್ರಸ್ತುತ ಬೆಂಗಳೂಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಂಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಶಾಅ ಸಂಶೋಧನಾತ್ಮಕ ವಿಜ್ಞಾನಿ ಪ್ರೊ. ಪಿ.ಕೆ. ಶೆಟ್ಟಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಜಿ. ಟಿ. ನಾರಾಯಣರಾವ್

ವಿಜ್ಞಾನ ಸಾಹಿತ್ಯ ರಚನೆ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಬರೆಹಗಳಲ್ಲ ತೊಡಗಿಸಿಕೊಂಡಿರುವವರು ಶ್ರೀ ಗುಡ್ಡೆಹಿತ್ತು ತಿಮ್ಮಪ್ಪಯ್ಯ ನಾರಾಯಣರಾವ್ ಅವರು. ೧೯೨೬ರಲ್ಲಿ ಮಡಿಕೇಲಿಯಲ್ಲಿ ಜನನ. ಮದರಾಸು ವಿಶ್ವವಿದ್ಯಾನಿಲಯದಿಂದ ೧೯೪೭ರಲ್ಲಿ ಗಣಿತ ಎಂ.ಎ. ಪದವಿ. ಮಂಗಳೂರು, ಮಡಿಕೇಲ, ಬೆಂಗಳೂರುಗಳಲ್ಲಿ ೧೯೪೭ ರಿಂದ ೧೯೬೯ರ ವರೆಗೆ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಕೆ. ೧೯೬೯ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ ೧೯೮೬ರಲ್ಲಿ ನಿವೃತ್ತಿ . ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಬಗೆಗೆ ಆಳವಾದ ಜ್ಞಾನ. ಸಂಗೀತ ನೃತ್ಯಗಳ ಬಗೆಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅನೇಕ ಲೇಖನಗಳ ರಚನೆ, ‘ಶ್ರುತಗಾನ’ ಸಂಗೀತ ಮತ್ತು ನೃತ್ಯ ಲೇಖನಗಳಿಗೆ ಮೀಸಲಾದ ಕೃತಿ. ಇದರ ವಿಸ್ತ್ರತ ಆವೃತ್ತಿ ‘ಸಂಗೀತ ರಸನಿಮಿಷಗಳು’ ಕೃತಿ.
ಐನ್ಸ್ಟೀನ್ ಬಾಳೆದಲಿಲ್ಲ (ವೈಜ್ಞಾನಿಕ ಜೀವನ ಚಲತ್ರೆ) ಕುವೆಂಪು ದರ್ಶನ ಸಂದರ್ಶನ, (ಕುವೆಂಪು ಕುಲತ ಕೃತಿ) ಕೃಷ್ಣ ವಿವರಗಳು (ಬ್ಲಾಕ್ ಹೋಲ್ಸ್) ಕೊಪರ್ನಿಕಸ್ ಕಾಂತಿ (ಖಗೋಳ ವಿಜ್ಞಾನೇತಿಹಾಸ) ವೈಜ್ಞಾನಿಕ ಮನೋಧರ್ಮ, ಸಪ್ತಸಾಗರದಾಚೆಯಲ್ಲೋ, (ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್, (ವೈಜ್ಞಾನಿಕ ಜೀವನ ಚಲತ್ರೆ), ಸೈಂಟಿಫಿಕ್ ಟೆಂಪರ್, ಐತ್ ಗ್ರೇಟ್ ಮೈಂಡ್ಸ್ ಮುಂತಾದವು. ಶ್ರೀ ಜಿ. ಟಿ. ನಾರಾಯಣರಾವ್ ಅವರ ಪ್ರಮುಖ ಕೃತಿಗಳು. ಇಂಗ್ಲಿಷ್ನಿಂದ ಕನ್ನಡಕ್ಕೆ ಹಲವು ಕೃತಿಗಳ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯ ಪಲಷತ್ತು ಕರ್ನಾಟಕ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಂದ ಅನೇಕ ಕೃತಿಗಳಿಗೆ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಕ್ತ ಪೂರ್ಣಕಾಲ ವಿಜ್ಞಾನ ವಾಹ್ಮಯ ರಚನೆಯಲ್ಲಿ ಮಗ್ನವಾಗಿರುವ, ಹಿಲಯ ವಿದ್ವಾಂಸರು ಶ್ರೀ ಜಿ. ಟಿ. ನಾರಾಯಣ ರಾವ್ ಅವರು.

Categories
ಕೃಷಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ.ಡಿ. ಭರಮಗೌಡ

ಸಾವಯವ ಕೃಷಿಯನ್ನು ಆಶ್ರಯಿಸಿದ ಪ್ರಗತಿಪರ ಕೃಷಿಕರು ಶ್ರೀ ಡಿ.ಡಿ. ಭರಮಗೌಡ ಅವರು.
೧೯೪೭ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಜನನ. ಬಿ.ಎಸ್ಸಿ. ಪದವಿಯ ನಂತರ ಕೃಷಿಕ ವೃತ್ತಿಯತ್ತ ಒಲವು. ಸಂಪೂರ್ಣ ಮಳೆಯಾಶ್ರಿತ ಕಪ್ಪುಭೂಮಿಯನ್ನು ಆಧಲಸಿ ಹತ್ತಿ, ಚಳಿಜೋಳ, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಹುರುಳಿ, ಅಲಸಂದೆ, ಎಚ್ಚು, ನವಣೆ, ಸಜ್ಜೆ, ಕೊತ್ತಂಬಲಿಯಂತಹ ಬಹುತೇಕ ಬೆಳೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ವಿಧಾನದ ಮೂಲಕ ಬೆಳೆಯುವ ಮೂಲಕ ರಾಷ್ಟ್ರಕ್ಕೆ ಮಾದಲ ಕೃಷಿಕರೆಂದು ಹೆಸರು ಗಆಕೆ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಮಿಶ್ರಬೆಳೆ ಪದ್ಧತಿ, ಅಂತರಬೆಳೆ ಪದ್ಧತಿ ಅನುಸಲಿಸಿ, ನಾಟಿಬೀಜ ಬಳಕೆ ಮೂಲಕ ಹೆಚ್ಚು ಇಳುವಲ ಮತ್ತು ಅಧಿಕ ವರಮಾನ ಪಡೆಯುತ್ತಿರುವ ಕೃಷಿಕರು.
ಡಾ|| ವಂದನಾಶಿವ, ಅರೋವಿಲ್ ಮದರ್ ಮತ್ತು ಬರ್ನಾಡ್ ಇವರ ವಿಚಾರಗಳಿಂದ ಪ್ರಭಾವಿತರಾದ ಪಲಸರ ಪ್ರೇಮಿ, ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆಯ ನಾಶ, ಹುಳುಗಳ ನಾಶ ಮುಂತಾದವುಗಳನ್ನು ತಡೆಗಟ್ಟಲು, ಸಸ್ಯಸಾರ, ಕಷಾಯ, ಸಗಣಿ ಇತ್ಯಾದಿಗಳ ಮೂಲಕ ಬೆಳೆರಕ್ಷಣೆಯನ್ನು ರೂಢಿಗೆ ತಂದ ಶ್ರಮಿಕರು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಅಲ್ಲದೆ ದಕ್ಷಿಣ ಕೊಲಿಯಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ ರಾಷ್ಟ್ರಗಳಲ್ಲಿ ಸಂಚಲಸಿ ವಿಚಾರ ಸಂಕಿರಣಗಳ ಮೂಲಕ ಸಾವಯವ ಕೃಷಿ ಪ್ರಾಮುಖ್ಯತೆಯನ್ನು ಸಾಲದವರು.
ಆಕಾಶವಾಣಿ, ದೂರದರ್ಶನಗಳಲ್ಲಿ ಕೃಷಿ ಸಂದರ್ಶನ, ಭಾಷಣ, ಲೇಖನಗಳನ್ನು ಪ್ರಕಟಿಸಿರುವ ಶ್ರೀಯುತರು ಸ್ವಂತ ಪತ್ರಿಕೆ, ಸಹಜ ಸಾಗುವಳಿ, ಅಂಕಣಕಾರರು. ಭಾರತೀಯ ಸಾವಯವ ಬೇಸಾಯ ಸಂಘಟನೆಯ ರಾಷ್ಟ್ರಾಧ್ಯಕ್ಷರು, ಕೃಷಿ ವಿಜ್ಞಾನಗಳ ಸದಸ್ಯರು ಮುಂತಾದ ಕೃಷಿ ಸಂಬಂಧಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲ ಕಾರ್ಯನಿರ್ವಹಣೆ. ಹದಿನೆಂಟು ವರ್ಷಗಳ ಹಿಂದೆ ರೈತರೇ ಸ್ಥಾಪಿಸಿರುವ ಧಲತ್ರಿ ಸಂಸ್ಥೆ ಸ್ಥಾಪಕ ಸದಸ್ಯರು. ಸಾಯವಯ ಕೃಷಿ ಪ್ರಚಾರಕರು, ರೈತರ ಹಿತಚಿಂತಕರು ಶ್ರೀ ಡಿ.ಡಿ. ಭರಮಗೌಡ್ರ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ನಾಗೇಶ್ ಹೆಗಡೆ

ಕನ್ನಡದ ಪ್ರಮುಖ ವಿಜ್ಞಾನ ಹಾಗೂ ಪಲಸರ ಬರಹಗಾರರಲ್ಲಿ ನಾಗೇಶ್ ಹೆಗಡೆ ಅವರದು ಅಗ್ರಮಾನ್ಯ ಹೆಸರು.
ಉತ್ತರ ಕನ್ನಡದವರಾದ ನಾಗೇಶ್ ಹೆಗಡೆ ಅವರು ಖರಗಪುರದ ಐಐಟಿಯಲ್ಲಿ ಭೂಗರ್ಭ ಸ್ನಾತಕೋತ್ತರ ಪದವಿ ಪಡೆದ ನಂತರ ಆಯ್ಕೆ ಮಾಡಿಕೊಂಡಿದ್ದು ಪರಿಸರ ಶಾಸ್ತ್ರ ಅಧ್ಯಯನ. ನೈನಿತಾಲ್ನ ಕುಮಾಂವೋ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ನಾಗೇಶ್ ಹೆಗಡೆ ಅವರು ೭೦ರ ದಶಕದಲ್ಲಿ ಪ್ರಜಾವಾಣಿ ಸಮೂಹದ ವೈಜ್ಞಾನಿಕ ಬರಹಗಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು.
ಪತ್ರಕರ್ತರಾಗಿದ್ದುಕೊಂಡು ನಾಗೇಶ್ ಹೆಗಡೆ ಅವರು ಕರ್ನಾಟಕದ ಹಲವಾರು ಪಲಸರ ಸಮಸ್ಯೆಗಳನ್ನು ಕುಲತು ದನಿಯೆತ್ತಿದವರು. ಕೈಗಾದಲ್ಲಿ ಅಣುಕೇಂದ್ರ ನಿರ್ಮಾಣ, ಪಶ್ಚಿಮ ಘಟ್ಟಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ ಹೀಗೆ ಹಲವಾರು ಪಲಸರ ಸಮಸ್ಯೆಗಳನ್ನು ಬೆಳಕಿಗೆ ತಂದ ನಾಗೇಶ್ ಹೆಗಡೆ ಅವರು ಕರ್ನಾಟಕದಲ್ಲಿ ಪಲಸರ ಜಾಗೃತಿಗಾಗಿ ಶ್ರಮಿಸಿದವರು. ತಮ್ಮ ಅಧ್ಯಯನ ಪೂರ್ಣ ಬರಹಗಳಿಂದ ನಾಡಿನ ಹಲವಾರು ಪಲಸರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದ ನಾಗೇಶ್ ಹೆಗಡೆ ಅವರು ಇರುವುದೊಂದೇ ಭೂಮಿ, ನಮ್ಮೊಳಗಿನ ಬ್ರಹ್ಮಾಂಡ, ಗಗನ ಸಟಿಯರ ಸೆರಗ ಹಿಡಿದು, ಮಂಗಳನಲ್ಲಿ ಜೀವಲೋಕ ಅಂತಲಕ್ಷದಲ್ಲಿ ಮಹಾಸಾಗರ ಹಲವಾರು, ಬರೆದಿರುವ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.
ಪಲಸರ ಸಮಸ್ಯೆಗಳನ್ನು ಜನರ ಮನಮುಟ್ಟುವಂತೆ ಬರೆಯುವಲ್ಲಿ ನಾಗೇಶ್ ಹೆಗಡೆ ಅವರು ಪಲಣತರು. ಕಳೆದ ೩ ದಶಕಗಳಿಂದ ಸತತವಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ವಿಜ್ಞಾನ ಅಂಕಣ ಬರೆಯುತ್ತಿರುವ ನಾಗೇಶ್ ಹೆಗಡೆ ಅವರು ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಪಲಸರ ಶಿಕ್ಷಣ, ಮಾಅನ್ಯದ ಬಗ್ಗೆ ಜಾಗೃತಿ, ನೀಲನ ಸಂರಕ್ಷಣೆ ಮೊದಲಾದವುಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳುವಆಕೆ ನೀಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮಹಾನಗರದ ಪಲಸರ ಪರಿಸ್ಥಿತಿ ಕುಲತು ಮಕ್ಕಳಿಗಾಗಿ ಸರಳವಾದ ಪುಸ್ತಕವನ್ನು ರಚಿಸಿರುವ ನಾಗೇಶ್ ಹೆಗಡೆ ಅವರು ಅನೇಕ ಪ್ರತಿಷ್ಠಿತ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸರ್ಕಾರದ ಪಲಸರ ಪ್ರಶಸ್ತಿಯಲ್ಲದೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಪತ್ರಕರ್ತ, ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕ್ರಿಯಾಶೀಲ ಬರಹಗಾರರು ಶ್ರೀ ನಾಗೇಶ್ ಹೆಗಡೆ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಬಾಲವೀರ ರೆಡ್ಡಿ

ತಾಂತ್ರಿಕ ಶೈಕ್ಷಣಿಕ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿರುವವರು ಡಾ. ಕೆ. ಬಾಲವೀರ ರೆಡ್ಡಿ ಅವರು.
೧೯೪೧ರಲ್ಲಿ ಜನಿಸಿದ ಡಾ. ಕೆ. ಬಾಲವೀರ ರೆಡ್ಡಿ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯಲಂಗ್ ಪದವಿ, ಐಐಟಿ ಖರಗ್ಪುರದಿಂದ ಮಶಿನ್ ಡಿಸೈನ್ನಲ್ಲಿ ಎಂ.ಟೆಕ್, ಮದರಾಸಿನ ಐಐಟಿಯಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಸುರತ್ಕಲ್ನ ಕರ್ನಾಟಕ ಲೀಜನಲ್ ಇಂಜಿನಿಯಲಿಂಗ್ ಕಾಲೇಜಿನಲ್ಲಿ ಸಹ ಉಪನ್ಯಾಸಕರಾಗಿ, ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಆಯ ನಿರ್ದೇಶಕರಾಗಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅವರು ತಾಂತ್ರಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನನ್ಯ.
ಡಿಸೈನ್ ಮತ್ತು ಮಶಿನ್ ಎಅಮೆಂಟ್ಸ್, ಡಿಸೈನ್ ಮತ್ತು ಡ್ರಾಯಿಂಗ್, ವೈಬ್ರೇಶನ್ಸ್, ಅಲೈಯಅ ಮತ್ತು ಮಶಿನಲ ಡೈಗೊಸ್ಟಿಕ್ಸ್, ಟೊರೊಜನಲ್ ವೈಬ್ರೇಶನ್ಸ್, ನೀಯರ್ಸ್ ಮತ್ತು ನೀಯರ್ಸ್ ಶಾಫ್ಟ್, ಮಶಿನ್ ಟೂಲ್ಬ ಮುಂತಾದವು ಅವರ ಸಂಶೋಧನಾ ಕ್ಷೇತ್ರಗಳು.
ಸುಮಾರು ಹದಿನೈದು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಶ್ರೀಯುತರು ಡಿಸೈನ್ ಡೆಟಾ ಹ್ಯಾಂಡ್ ಬುಕ್-ಮೆಟ್ರಿಕ್ ಯುನಿಟ್ಸ್, ಡಿಸೈನ್ ಡೆಟಾ ಹ್ಯಾಂಡ್ ಬುಕ್-ಮೆಟ್ರಿಕ್ ಮತ್ತು ಎಸ್ಐ ಯುನಿಟ್ಸ್ ಪುಸ್ತಕಗಳ ಕರ್ತೃ.
ಚೆನ್ನೈ ಐಐಟಿಯ ಬೋರ್ಡ್ ಆಫ್ ಗವರ್ನರ್ಸ್, ಸದಸ್ಯರು ನವದೆಹಲಿಯ ಆಲ್ ಇಂಡಿಯಾ ಬೋರ್ಡ್ ಆಫ್ ಟೆಕ್ನಿಷಿಯನ್ ಎಜ್ಯುಕೇಶನ್ (ಎಐಸಿಟಿಇ) ಕಾರಾಧ್ಯಕ್ಷತೆ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಸಂಸ್ಥೆಗಳಲ್ಲ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ಕರ್ನಾಟಕ, ಮಂಗಳೂರು, ಕುವೆಂಪು, ಗುಲ್ಬರ್ಗಾ ವಿಶ್ವವಿದ್ಯಾಲಯಗಳ, ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರು ಹೀಗೆ ಅನೇಕ ಸಂಸ್ಥೆಗಳಲ್ಲಿ ವಿವಿಧ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ ಕೀರ್ತಿಗೆ ಭಾಜನರು. ಯುಎಸ್ಎಯ ವರ್ಲ್ಡ್ ಅಕಾಡೆಮಿ ಆಫ್ ಪ್ರೊಡೆಕ್ಟಿನಿಟಿ ಸೈನ್ಸ್ ಫೆಲೋ, ಆರ್ಯಭಟ ಪ್ರಶಸ್ತಿ, ನವದೆಹಅಯ ಎಐಎಸ್ಇ ಗೌರವ ಫೆಲೋಷಿಪ್, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ಮೊದಲಾದವು ಅವರಿಗೆ ಸಂದ ಮಹತ್ವದ ಪ್ರಶಸ್ತಿ ಪುರಸ್ಕಾರಗಳು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಿ.ಎನ್. ಬ್ರಹ್ಮಾಚಾರ್ಯ

ದೇಸೀ ವೈದ್ಯ ಪದ್ಧತಿಗಳನ್ನು ಅಳವಡಿಸುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುವ ಪ್ರಸಿದ್ಧ ಪ್ರಕೃತಿ ಹಾಗೂ ಯೋಗ ಶಿಕ್ಷಣತಜ್ಞರು ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.
ತುಮಕೂಲಿನವರಾದ ಬ್ರಹ್ಮಾಚಾರ್ಯ ಅವರು ಕರ್ನಾಟಕ ಸರ್ಕಾರದ ಭಾರತೀಯ ವೈದ್ಯಪದ್ಧತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರಕೃತಿ ಚಿಕಿತ್ಸೆ ಹಾಗೂ ಅಕ್ಯೂಪಂಚರ್ ಆರೋಗ್ಯ ವಿಧಾನಗಳನ್ನು ಅಧ್ಯಯನ ಮಾಡಿರುವ ಇವರು ಪ್ರಸ್ತುತ ಅರೋಗ್ಯ ಮಂದಿರ ಟ್ರಸ್ಟ್ನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕುಲತ ನೂರಾರು ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿ ದೇಸೀ ಪದ್ಧತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವ ಇವರು ಪ್ರಕೃತಿ ಜೀವನ ಕೇಂದ್ರದ ಸಕ್ರಿಯ ಕಾರ್ಯಕರ್ತರಲ್ಲೊಬ್ಬರು. ಯೋಗ ಶಿಕ್ಷಣದ ಮೂಲಕ ನಗರ ಜೀವನದ ಒತ್ತಡಗಳ ನಿವಾರಣೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಮಲ್ಲಾಡಿ ಹಳ್ಳಿ, ಪಾಂಡಿಚೆಲ ಮುಂತಾದ ಕಡೆಗಳಲ್ಲಿ ಯೋಗಾಭ್ಯಾಸ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಪ್ರಕೃತಿ ಚಿಕಿತ್ಸಾ ತರಗತಿಗಳನ್ನು ಸಾರ್ವಜನಿಕರಿಗಾಗಿ ಏರ್ಪಡಿಸುತ್ತಿದ್ದಾರೆ. ಅಕ್ಯೂಪಂಚ ವೈದ್ಯ ವಿಧಾನವನ್ನು ಅಭ್ಯಾಸ ಮಾಡಿ ಅನೇಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಇವರು ಹಲವಾರು ದೇಸೀಯ ಚಿಕಿತ್ಸಾ ಸಮ್ಮೇಳನಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದಾರೆ.
ಪತಂಜಲಿ ಸ್ವರ್ಣ ಪದಕ, ಜಿಂದಾಲ್ ಟ್ರಸ್ಟ್ನ ಪ್ರಕೃತಿ ಚಿಕಿತ್ಸಾ ರತ್ನ ಹಾಗೂ ಭಾರತೀಯ ಪರ್ಯಾಯ ಔಷಧಿಗಳ ಸಂಸ್ಥೆಯ ಚಿನ್ನದ ಪದಕ ಪಡೆದಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಬೆಂಗಳೂರು ಯೋಗಕೇಂದ್ರದಿಂದಲೂ ಸನ್ಮಾನಿತರು.
ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಯೋಗ ಸ್ಪರ್ಧೆಗಳ ತೀರ್ಪುಗಾರರಾಗಿ ಹಾಗೂ ಕರ್ನಾಟಕ ಯೋಗ ತಂಡದ ವ್ಯವಸ್ಥಾಪಕರಾಣ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಕಾರ್ಯನಿರ್ವಹಿಸಿದ್ದಾರೆ.
ಜನತೆಯ ಆರೋಗ್ಯದಲ್ಲಿ ಯೋಗದ ಮಹತ್ವವನ್ನು ಸಾರುತ್ತಿರುವ ಯೋಗ ಚಿಕಿತ್ಸಕ ಹಾಗೂ ಯೋಗ ಶಿಕ್ಷಕ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಚನ್ನಬಸಪ್ಪ ಹಾಲಹಳ್ಳಿ

ಬೀದರ್ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದವರು ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು.
೧೯೪೭ರಲ್ಲಿ ಜನನ. ಸುಮಾರು ೩೫ ವರ್ಷಗಳಿಂದ ಕನ್ನಡ ನಾಡುನುಡಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಕೆ. ಬೀದರ್ನ ಭೂಮರೆಡ್ಡಿ ಮಹಾವಿದ್ಯಾಲಯದ ಬಿ.ಎ.ಪದವಿ, ಬೆಳಗಾಂವ್ನ ಆರ್.ಎಲ್. ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ. ಪದವಿ ಗಳಿಕೆ. ೧೯೬೮ ಲಂದ ವಕೀಲ ವೃತ್ತಿಗೆ ಪದಾರ್ಪಣೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀಯುತರು ಚೀದರ್ನ ಚಿದಂಬರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ-ಕಾರ್ಯದರ್ಶಿ, ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು. ಈ ಸಂಸ್ಥೆಯ ಅಡಿಯಲ್ಲಿ ಇಪ್ಪತ್ತೈದು ಅಂಗಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ. ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯಡಿ ಆಯುರ್ವೇಕ್ ಮೆಡಿಕಲ್ ಕಾಲೇಜು ಸೇಲದಂತೆ ಹನ್ನೆರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಬೀದರ್-ಗುಲಬರ್ಗಾ ರೈಲು ಮಾರ್ಗ, ಬೀದರ್ ನಾಗಲಕ ವಿಮಾನಯಾನ, ಬೀದರ್ ಪ್ರವಾಸೋದ್ಯಮದ ಕೇಂದ್ರವಾಗಬೇಕೆಂಬ ಆಶಯದಿಂದ ರಚನಾತ್ಮಕ ಯೋಜನೆಗಳನ್ನು ರೂಪಿಸಿ ಬೀದರ್ಭಾಗದ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುತ್ತಿರುವ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ, ಪದಾಧಿಕಾಲಿಯಾಗಿ ಸಲ್ಲಿಸಿರುವ ಸೇವೆ ಗಣನೀಯವಾದುದು.
ನಿರಂತರ ಶೈಕ್ಷಣಿಕ ಸೇವೆಗಾಗಿ ಬೀದರ್ ಜಿಲ್ಲಾ ಆಡಳತದಿಂದ ಸನ್ಮಾನ, ಪ್ರಭುರಾವ್ ಕಂಬಳವಾಲೆ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪಲಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಬೀದಲಿಗೆ ಪಶುವೈದ್ಯಕೀಯ ವಿದ್ಯಾಲಯ, ಸರಕಾಲ ಕಾಲೇಜು ಬರಲು ಶ್ರಮಿಸಿದವರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ರಾಜನ್ ದೇಶಪಾಂಡೆ

ಮಕ್ಕಆಗಾಗಿಯೇ ವಿಶೇಷ ಚಿಕಿತ್ಸಾಲಯವನ್ನು ಧಾರವಾಡದಲ್ಲಿ ಸ್ಥಾಪಿಸಿ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ತೋಲಿಸುತ್ತಿರುವ ಪ್ರಸಿದ್ಧ ಮಕ್ಕಳ ತಜ್ಞ
ಡಾ. ರಾಜನ್ ದೇಶಪಾಂಡೆ ಅವರು.
ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮೂರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಡಾ. ರಾಜನ್ ದೇಶಪಾಂಡೆ ಅವರ ಜನನ ೧೯೫೨ರಲ್ಲಿ. ಕರ್ನಾಟಕ ಮೆಡಿಕಲ್ ಕಾಲೇಜ್ನಿಂದ ಎಂ.ಬಿ.ಬಿ.ಎಸ್., ಎಂ.ಡಿ. ಪದವಿ ಪಡೆದು ಹುಬ್ಬಳ್ಳಿ, ನವದೆಹಲಿ, ಚೆನ್ನೈ ಹಾಗೂ ಅಮೆಲಕಾಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಪ್ರಸ್ತುತ ಧಾರವಾಡದಲ್ಲೇ ನೆಲೆಸಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ತೋಲಿಸುತ್ತಾ ಮಕ್ಕಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ವೈದ್ಯರು.
ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿರುವ ಡಾ. ರಾಜನ್ ಐವತ್ತು ಸಾವಿರಕ್ಕೂ ಹೆಚ್ಚು ಮಕ್ಕಳಗೆ ಉಚಿತ ರೋಗ ಪ್ರತಿಬಂಧಕ ಲಸಿಕೆ ಹಾಕಿದ್ದಾರೆ. ಕೊಳಚೆ ಪ್ರದೇಶಗಳ ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿಶೇಷ ಪ್ರಯತ್ನ ನಡೆಸಿರುವ ಇವರು ೧೦೦ಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ರಕ್ಷಣೆ ಕುಲತು ತಿಳುವಳಿಕೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿಯೇ ಮಕ್ಕಳಿಗೆ ಉಪಯುಕ್ತವಾದಂತಹ ಗ್ರಂಥಾಲಯವನ್ನು ಆರಂಭಿಸಿರುವ ಡಾ. ರಾಜನ್ ದೇಶಪಾಂಡೆ ಅವರು ನವಜಾತ ಶಿಶುಗಳ ತೀವ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದವರು. ಪೂರ್ವ ಆಫ್ರಿಕಾದಲ್ಲಿ ಮಕ್ಕಳ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಅಲತುಕೊಳ್ಳಲು ಭೇಟಿ ನೀಡಿದ್ದ ಭಾರತೀಯ ತಂಡದ ನೇತೃತ್ವ ವಹಿಸಿದ್ದ ಡಾ. ರಾಜನ್ ಅವರ ತಂಡ ಉಗಾಂಡದಲ್ಲಿ ೫೦೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಹೆಗ್ಗಆಕೆಗೆ ಪಾತ್ರವಾಗಿದೆ. ಆಫ್ರಿಕಾ ಜನರ ದುಃಖ ದುಮ್ಮಾನಗಳನ್ನು ನಿವಾಲಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆ ಸಲ್ಲಿಸಿರುವ ಡಾ. ರಾಜನ್ ದೇಶಪಾಂಡೆ ಅವರು ಮಕ್ಕಳ ಅಕಾಡೆಮಿಯನ್ನು ಧಾರವಾಡದಲ್ಲಿ ಆರಂಭಿಸಿ ಮಕ್ಕಳ ಆರೋಗ್ಯ ಜಾಗೃತಿ ಶಿರಗಳನ್ನು ನಿಯತವಾಗಿ ಏರ್ಪಡಿಸುತ್ತಾ ಬಂದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಹಾಗೂ ಮಕ್ಕಳ ವೈದ್ಯಕೀಯ ಸಂಘದ ಪದಾಧಿಕಾಲಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜನ್ ದೇಶಪಾಂಡೆ ಅವರು ಅಮೆಲಕಾ, ಇಂಗ್ಲೆಂಡ್ ಮೊದಲಾದ ದೇಶಗಳ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಹಾಗೂ ಬಡಮಕ್ಕಳ ಬಗ್ಗೆ ಕಳಕಆಯುಳ್ಳ ಸೇವಾಮನೋಭಾವದ ಮಕ್ಕಳ ತಜ್ಞರು ಡಾ. ರಾಜನ್ ದೇಶಪಾಂಡೆ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೆ.ವಿ. ದೇವಾಡಿಗ

ಅಂತರರಾಷ್ಟ್ರೀಯ ಖ್ಯಾತಿಯ, ನಾಡಿನ ಪ್ರಸಿದ್ಧ ನರರೋಗ ತಜ್ಞರಲ್ಲಿ ಒಬ್ಬರು ಡಾ. ಕೆ.ವಿ. ದೇವಾಡಿಗ ಅವರು.
೧೯೩೬ರಲ್ಲಿ ಜನನ. ಮದರಾಸಿನಲ್ಲಿ ವೈದ್ಯಕೀಯ ಪದವಿ ಪಡೆದು ದೆಹ ಹಾಗೂ ವೆಲ್ಲೂರುಗಳಲ್ಲಿ ಉನ್ನತ ಪದವಿಗಳನ್ನು ಪಡೆದ ಡಾ. ಕೆ.ವಿ. ದೇವಾಡಿಗ ಅವರು ಹೆಚ್ಚಿನ ತರಬೇತಿ ಪಡೆದಿದ್ದು ಇಂಗ್ಲೆಂಡ್ ಹಾಗೂ ಅಮೆಲಕ ದೇಶಗಳಲ್ಲ. ದೆಹಲಿಯ ಗೋವಿಂದ ವಲ್ಲಭಪಂತ್ ಆಸ್ಪತ್ರೆಯ ನರರೋಗ ವಿಜ್ಞಾನ ವಿಭಾಗದ ಅಜಸ್ಟಾರ್ ಆಗಿ ಕಾರ್ಯನಿರ್ವಹಿಸಿರುವ ಡಾ. ಕೆ.ವಿ. ದೇವಾಡಿಗ ಅವರು ವೆಲ್ಲೂಲಿನ ಸಿ.ಎಂ.ಸಿ. ಆಸ್ಪತ್ರೆ, ಮಣಿಪಾಲದ ಕಸ್ತೂಲಬಾ ಆಸ್ಪತ್ರೆ ಹಾಗೂ ಮಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನರರೋಗ ವಿಭಾಗದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ದೇಶ ಹಾಗೂ ವಿದೇಶಗಳ ಹಲವಾರು ವೈದ್ಯಕೀಯ ನಿಯತಕಾಅಕೆಗಳಲ್ಲಿ ೮೦ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಡಾ. ಕೆ.ವಿ. ದೇವಾಡಿಗ ಅಮೆಲಕ ಕಾಲೇಜ್ ಆಫ್ ಸರ್ಜನ್, ರಾಯಲ್ ಸೊಸೈಟಿ ಆಫ್ ಮೆಡಿಸನ್ ಸಂಸ್ಥೆ (ಲಂಡನ್)ಯ ಫೆಲೋ, ಅಂತರಾಷ್ಟ್ರೀಯ ಸರ್ಜನ್ ಕಾಲೇಜಿನ ಫೆಲೋ ಹೀಗೆ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಫೆಲೋ ಆಗಿ ಕಾರ್ಯನಿರ್ವಹಿಸಿದ್ದು ಅಮೆಲಕಾದ ನರರೋಗ ತಜ್ಞರ ಕಾಂಗ್ರೆಸ್ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆಯ ಮಂಗಳೂರು ಶಾಖೆಯ ಅಧ್ಯಕ್ಷರಾಗಿದ್ದ ಡಾ. ದೇವಾಡಿಗ ಕರ್ನಾಟಕ ನರರೋಗ ಸೊಸೈಟಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಕಾಲೇಜು ದಿನಗಳಲ್ಲಿ ಕ್ರಿಕೆಟ್, ಗಾಲ್ಫ್, ಬ್ಯಾಸ್ಕೆಟ್ ಬಾಲ್ಗಳಲ್ಲೂ ಸಕ್ರಿಯವಾಗಿದ್ದ ಡಾ. ಕೆ.ವಿ. ದೇವಾಡಿಗ ಅವರು ಪ್ರಸ್ತುತ ಮಂಗಳೂಲಿನಲ್ಲಿ ನರರೋಗ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ಹೆಸರಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡುತ್ತಿರುವ ಪ್ರಸಿದ್ಧ ನರರೋಗ ತಜ್ಞರು ಡಾ. ಕೆ.ವಿ. ದೇವಾಡಿಗ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

– ಡಾ. ಶರಣ್ ಶಿವರಾಜ್ ಪಾಟೀಲ್

ಮಕ್ಕಳ ಮೂಳೆ ತೊಂದರೆ ಕುಲಿತಂತೆ ವಿಶೇಷ ಅಧ್ಯಯನ ನಡೆಸಿ, ಮೂಳೆಶಾಸ್ತ್ರದಲ್ಲಿ
ವಿಶೇಷ ಪಲಣತಿ ಪಡೆದವರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.
ರಾಯಚೂಲಿನ ಮಲಾಂದ್ಕಲ್ ಗ್ರಾಮಕ್ಕೆ ಸೇರಿದವರಾದ ಡಾ. ಶರಣ್ ಶಿವರಾಜ್ ಪಾಟೀಲ್ ಪ್ರಸ್ತುತ ಬೆಂಗಳೂಲಿನ ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷರು.
೧೯೬೫ರಲ್ಲಿ ಜನನ. ಗುಲ್ಬರ್ಗಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ಡಾ. ಶರಣ್ ಮಣಿಪಾಲದ ಕಸ್ತೂಲಬಾ ವೈದ್ಯಕೀಯ ಕಾಲೇಜಿನಲ್ಲಿ ಮೂಳೆಶಾಸ್ತ್ರದಲ್ಲಿ ವಿಶೇಷ ತರಬೇತಿ ಪಡೆದವರಲ್ಲದೆ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.
ಬೆಂಗಳೂಲಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಡಾ. ಶರಣ್ ಬ್ರಿಟನ್ಗೆ ತೆರಳಿ ಅಲ್ಲಿಯ ಅನೇಕ ಆಸ್ಪತ್ರೆಗಳಲ್ಲಿ ಅನುಭವ ಪಡೆದರು.
ಮತ್ತೆ ಸ್ವದೇಶಕ್ಕೆ ವಾಪಸ್ಸಾದ ಡಾ. ಶರಣ್ ಮಕ್ಕಳ ಮೂಳೆ ಸಮಸ್ಯೆ ಕುಲತಂತೆ ವಿಶೇಷ ತಜ್ಞರೆಂದು ಹೆಸರು ಮಾಡಿ ರಾಜ್ಯ ಹಾಗೂ ರಾಷ್ಟ್ರದ ಸುಮಾರು ೫,೦೦೦ಕ್ಕೂ ಹೆಚ್ಚು ಮೂಳೆ ಚಿಕಿತ್ಸೆಗಳನ್ನು ನಡೆಸಿ ಹೆಸರಾದವರು. ಮೂಳೆಶಾಸ್ತ್ರಕ್ಕೆ ಪ್ರತ್ಯೇಕವಾದ ಸುಸಜ್ಜಿತ ಆಸ್ಪತ್ರೆಯೊಂದನ್ನು ಆರಂಭಿಸಬೇಕೆಂಬ ಡಾ. ಶರಣ್ ಶಿವರಾಜ್ ಪಾಟೀಲ್ ಅವರ ಇಚ್ಛೆ ೨೦೦೬ರಲ್ಲಿ ಪೂರೈಸಿತು. ನಾರಾಯಣ ಹೆಲ್ತ್ ಸಿಟಿಯಲ್ಲಿ ಡಾ. ಶರಣ್ ನೇತೃತ್ವದ ಸ್ಪರ್ಶ್ ಆಸ್ಪತ್ರೆ ಆರಂಭವಾಗಿದ್ದು, ಮೂಳೆ ರೋಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆ ಇದಾಗಿದೆ. ಕೀಲುನೋವು, ಬೆನ್ನುಹುಲಿ ತೊಂದರೆ, ಮೂಳೆಗಳ ಸಮಸ್ಯೆ, ಮಂಡಿಚಿಪ್ಟಿನ ನೋವು ಮೊದಲಾದ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಡಾ. ಶರಣ್ ಅವರ ಸ್ಪರ್ಶ್ ಆಸ್ಪತ್ರೆ ಗ್ರಾಮೀಣ ಪ್ರದೇಶಗಳಲ್ಲಿ ಕೀಲುನೋವು ಚಿಕಿತ್ಸಾ ಶಿರಗಳನ್ನು ಏರ್ಪಡಿಸುತ್ತಿದೆ.
ವೈದ್ಯಕೀಯ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಅನುಭವ ಪಡೆದಿರುವ ಡಾ. ಶರಣ್ ದೇಶವಿದೇಶಗಳ ಅನೇಕ ಸಮ್ಮೇಳನಗಳಲ್ಲಿ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರು ಅತ್ಯುತ್ತಮ ಚಿಕಿತ್ಸೆ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಡಾ. ಶರಣ್ ಅವರು ಅನೇಕ ವೈದ್ಯಕೀಯ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಯುವ ವೈದ್ಯರಾಗಿ ಅನೇಕ ಸಾಧನೆಗಳನ್ನು ಮಾಡಿರುವ ಡಾ. ಶರಣ್ ಶಿವರಾಜ್ ಪಾಟೀಲ್ ಅವಲಗೆ ಭಾರತೀಯ ವೈದ್ಯಕೀಯ ಸಂಸ್ಥೆಯ ಪ್ರೊ ಗೋಪಾಲಕೃಷ್ಣ ಸ್ಮಾರಕ ಬಹುಮಾನವು ಸೇಲದಂತೆ ಅನೇಕ ಗೌರವ, ಸನ್ಮಾನಗಳು ಸಂದಿವೆ. ನಾಡಿನ ಪ್ರಸಿದ್ಧ ಮೂಳೆ ತಜ್ಞರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹೆಚ್. ನಾಗರಾಜ್

ಹಳ್ಳಿಗಾಡಿನಿಂದ ನಗರಕ್ಕೆ ಬಂದು ವೈದ್ಯಕೀಯ ವ್ಯಾಸಂಗ ನಡೆಸಿ, ಗ್ರಾಮೀಣ ಭಾಗದ ಆರೋಗ್ಯ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಹಲವಾರು ಕಾರ್ಯಕ್ರಮಗಳನ್ನು
ಹಾಕಿಕೊಂಡ ವೈದ್ಯರು ಡಾ. ಹೆಚ್.ಕೆ. ನಾಗರಾಜು ಅವರು.
೧೯೪೫ರಲ್ಲಿ ಜನನ. ಬೆಂಗಳೂರು ವೈದ್ಯಕೀಯ ವಿದ್ಯಾಲಯದಿಂದ ಎಂಬಿಬಿಎಸ್ ಪದವಿ, ಎಂ.ಎಸ್ (ಜನರಲ್ ಸರ್ಜಲಿ), ಎಂ.ಸಿಹೆಚ್. (ಯುರಾಲಜಿ), ಎಫ್.ಐ.ಸಿ.ಎಸ್. ಪದವಿಗಳನ್ನು ಪಡೆದವರು. ನಾಡಿನ ಮೂತ್ರಶಾಸ್ತ್ರ ವೈದ್ಯರಲ್ಲಿ ಹೆಸರು ಮಾಡಿರುವ ಡಾ. ಹೆಚ್.ಕೆ. ನಾಗರಾಜು ಅವರು ಪ್ರಸ್ತುತ ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಮೂತ್ರಕೋಶ ತಜ್ಞರು.
ವಿದ್ಯಾರ್ಥಿ ದೆಸೆಯಿಂದಲೂ ಹಳ್ಳಿಗಾಡಿನ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಬಗ್ಗೆ ಹಲವಾರು ಶಿಖರಗಳನ್ನು ಏರ್ಪಡಿಸುತ್ತಾ ಬಂದಿರುವ ಡಾ. ನಾಗರಾಜು ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸುವ ಯಂತ್ರಗಳನ್ನು ತಮ್ಮ ಧರ್ಮಾರ್ಥ ಸಂಸ್ಥೆಯಲ್ಲಿ ಸ್ಥಾಪಿಸಿ ಚಿಕಿತ್ಸೆ ನೀಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮೂತ್ರಪಿಂಡಗಳಲ್ಲಿ ಕಲ್ಲು ಇರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ತಮ್ಮ ಸಂಸ್ಥೆಯ ಸಂಚಾಲ ಆಸ್ಪತ್ರೆಯನ್ನು ನಿಗಱತ ಅವಧಿಯಲ್ಲಿ ಕೊಂಡೊಯ್ದು ಶಿರಗಳನ್ನು ನಡೆಸಿ ಅಗತ್ಯ ಚಿಕಿತ್ಸೆಗಳನ್ನು ಡಾ. ನಾಗರಾಜ್ ಅವರು ನೀಡುತ್ತಿದ್ದಾರೆ. ತಮ್ಮ ವೃತ್ತಿ ಕೌಶಲ್ಯಕ್ಕಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ಏಳು ಚಿನ್ನದ ಪದಕಗಳನ್ನು ಪಡೆದಿರುವ ಡಾ. ನಾಗರಾಜ್ ಅವರು ದೇಶವಿದೇಶಗಳ ಅನೇಕ ವೈದ್ಯಕೀಯ ಸಂಸ್ಥೆ ಹಾಗೂ ವೈದ್ಯಕೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ವೈದ್ಯಕೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಯುರಾಲಜಿ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದಿರುವ, ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿದ್ದು ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದವರು ಡಾ. ಹೆಚ್.ಕೆ. ನಾಗರಾಜ್ ಅವರು

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್

ಅಲೆಮಾಲ ರಾಜಗೊಂಡ ಬುಡಕಟ್ಟಿನ ಮಹಾನ್ ಚೇತನ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರು.
ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ತಮ್ಮ ಜೀವಿತಾವಧಿಯಲ್ಲಿ ಬಹುತೇಕ ಎಲ್ಲ ರಾಜ್ಯಗಳಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶಗಳ ಬೆಟ್ಟಗುಡ್ಡಗಳನ್ನು ಸುತ್ತಾಡಿ, ವನಸ್ಪತಿಗಳಿಂದ ಸಂಗ್ರಹಿಸಿದ ಔಷಧಿಗಳನ್ನು ತಯಾರು ಮಾಡಿ ದೇಸೀ ವೈದ್ಯಪದ್ಧತಿಗೆ ನೀಡಿರುವ ಕೊಡುಗೆ ಬಹುಪ್ರಮುಖವಾದುದು. ಅವರ ಈಲನ ನೆಲೆ ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಗ್ರಾಮ.
ಸುಮಾರು ೧೩೦ ವರ್ಷ ವಯಸ್ಸಿನ ಈ ಹಿಲಯಜ್ಜಿ ತಯಾರು ಮಾಡಿ ಕೊಡುತ್ತಿರುವ ದೇಸಿ ಔಷಧಿಗಳ ಪಟ್ಟಿ ಬಹುದೊಡ್ಡದು. ಅನೇಕ ರೋಗಗಳಿಗೆ ಸಮರ್ಥವಾದ ಔಷಧಿ ನೀಡುವ ಅಪರೂಪದ ಈ ವಯೋವೃದ್ಧೆ 2 . ಆಡುಭಾಷೆಯಲ್ಲಿ ನಾಟಿವೈದ್ಯೆ.
ಅನೇಕಲಂದ ಪರೀಕ್ಷಿಸಲ್ಪಟ್ಟು ಸಕರಾತ್ಮಕವಾದ ಫತಾಂಶ ಕಂಡಿರುವ ಈ ಹಿಲಯಜ್ಜಿಯ ಔಷಧೋಪಚಾರಕ್ಕೆ ಮನಸೋತು ಇವರ ರಾಜಗೊಂಡ ಅಲೆಮಾಲ ಕುಟುಂಬಗಳಿಗೆ ಹಲಹರ ತಾಲೂಕಿನ ಹಳ್ಳಿಯೊಂದರಲ್ಲಿ ನೆಲೆ ಒದಗಿಸಲು ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.
ಅಲೆಮಾಲ ಕುಟುಂಬಗಳ ಹಿತರಕ್ಷಣೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ನಡೆದಾಡುವ ಜನಪದ ವೈದ್ಯೆ ತಮ್ಮ ಕುಟುಂಬ ಹಾಗೂ ನೆಂಟಲಷ್ಟರೊಂದಿಗೆ ಈಗ ಒಂದೆಡೆ ನೆಲೆನಿಂತು ತಮ್ಮ ಪಾರಂಪಲಕ ವೈದ್ಯಪದ್ಧತಿಯಿಂದ ಈಗಲೂ ಸ್ಥಳೀಯ ಜನರ ಖಾಯಿಲೆ ಕಸಾಲೆಗಳನ್ನು ಹೋಗಲಾಡಿಸುತ್ತಿರುವ ಈ ಸಿಲಯಣ್ಣ ನಾಡು ಕಂಡ ಅಪರೂಪದ ಪ್ರತಿಭೆ.
ಬುಡಕಟ್ಟು ಜನಾಂಗದ ಜೀವಂತಿಕೆಗೆ ಸಾಕ್ಷಿಯಾಗಿರುವ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿದ್ದು ಗೊಂಡ ಬುಡಕಟ್ಟನ ಪತ್ರಿಕೆ ಗೊಂಡಾವನಾ ದರ್ಶನದಲ್ಲಿ ಸವಿವರವಾದ ಲೇಖನವೊಂದು ೧೩೦ ವರ್ಷದ ಈಕೆಯ ದೀರ್ಘ ವಯಸ್ಸಿನ ಜೀವನ ಸಾಧನೆಯನ್ನು ಸುದೀರ್ಘವಾಗಿ ಪ್ರಕಟಿಸಿದೆ.
ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ತಮ್ಮ ಪಲಭ್ರಮದಿಂದ ರೂಢಿಸಿಕೊಂಡು ಬಂದಿರುವ ದೇಸಿ ವೈದ್ಯಪದ್ಧತಿಯನ್ನು ಮುಂದಿನ ಪೀಳಿಗೆಯ ಉಪಯೋಗಕ್ಕೂ ಸಿದ್ಧಮಾಡಿಕೊಟ್ಟರುವ ಇವಯಸ್ಸಿನ ನಡೆದಾಡುವ ಜಾನಪದ ಸಿಲ ಶ್ರೀಮತಿ ಫೈನಿ ಲಾಲಸಿಂಗ್ ಜಾಮಕರ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಬ್ದುಲ್ ಖಾಅಕ್

ಕರ್ನಾಟಕದ ಉರ್ದು ಪತ್ರಿಕೋದ್ಯಮದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಸರಾಂತ ಪತ್ರಕರ್ತರು ಶ್ರೀ ಅಬ್ದುಲ್ ಖಾಅತ್ ಅವರು. ಉರ್ದು ಪತ್ರಿಕೆಗಳಾದ ಸಾಲಾರ್, ಅಜಾದ್, ಆಲಮ್ಬರ್ದಾರ್ಗಳಲ್ಲಿ ಕೆಲಸ ಮಾಡಿರುವ ಅಬ್ದುಲ್ ಖಾಅಕ್ ಪ್ರಸ್ತುತ ಡೈಅಪಾಸ್ಬಾನ್ ಪತ್ರಿಕೆಯ ಮುಖ್ಯ ವರದಿಗಾರರು.
ಉರ್ದು ಪತ್ರಿಕೋದ್ಯಮದಲ್ಲಿ ಶೋಧನಾ ವರದಿಗೆ ಹೊಸ ಆಯಾಮ ನೀಡಿದ ಅಬ್ದುಲ್ ಖಾಅಕ್ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಬಗ್ಗೆ ಜನತೆಯಲ್ಲಿ ಅಲವು ಮೂಡಿಸುವ ಹಲವಾರು ವರದಿಗಳನ್ನು ಮಾಡಿ ಪ್ರಸಿದ್ಧಿ ಪಡೆದ ಹೆಗ್ಗಆಕೆ ಶ್ರೀಯುತರದು.
ದುರ್ಬಲ ವರ್ಗದವರ ಏಳಿಗೆಗಾಗಿ ಸರ್ಕಾರ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಲೇಖನಗಳನ್ನು ಬರೆದಿರುವ ಅಬ್ದುಲ್ ಖಾಅಕ್ ಅವರು ಅಲ್ಪಸಂಖ್ಯಾತ ಸಮಾಜದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಒಳನೋಟಗಳನ್ನು ತಮ್ಮ ಬರವಣಿಗೆಯಲ್ಲಿ
ಮೂಡಿಸಿದವರು.
ಕರ್ನಾಟಕ ಉರ್ದು ಅಕಾಡೆಮಿಯಿಂದ ಅತ್ಯುತ್ತಮ ಉರ್ದು ಪತ್ರಿಕೋದ್ಯಮಿ ಸೇಲದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅಬ್ದುಲ್ ಖಾಅಕ್ ಅವರು ಅಖಿಲ ಭಾರತ ಸ್ವಾಮಿ ತನ್ಜೀಮ್ ಸಂಸ್ಥೆಯ ಗೌರವವನ್ನು ಪಡೆದಿದ್ದಾರೆ.
ಉರ್ದು ಪತ್ರಿಕೋದ್ಯಮ ಹಾಗೂ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಅಬ್ದುಲ್ ಖಾಅಕ್ ಅವರು ಹಲವಾರು ಮಾನವೀಯ ವರದಿಗಳನ್ನು ಮಾಡುವುದರ ಮೂಲಕ ಜನತೆಯ ಮನಗೆದ್ದಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಎಸ್. ಪೊನ್ನಪ್ಪ

ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ ಪಡೆದು ವ್ಯಂಗ್ಯಚಿತ್ರಕಾರರಾಗಿರ ಖ್ಯಾತರಾದವರು ಶ್ರೀ ಎನ್.ಎಸ್. ಪೊನ್ನಪ್ಪ ಅವರು, ನಾಡಿನ ಹೆಸರಾಂತ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಪೊನ್ನಪ್ಪ ಕೊಡಗಿನವರು. ಕಾಲೇಜು ದಿನಗಳಿಂದಲೇ ವ್ಯಂಗ್ಯಚಿತ್ರ ಬಿಡಿಸುವ ಹವ್ಯಾಸ ಹಚ್ಚಿಕೊಂಡಿದ್ದ ಪೊನ್ನಪ್ಪ ಷಿಕಾಗೋದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ವ್ಯಂಗ್ಯಚಿತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟರು. ಇಂಡಿಯಾ ಟುಡೇನಲ್ಲ ವ್ಯಂಗ್ಯಚಿತ್ರಗಳನ್ನು ಪ್ರಕಟಸಲಾರಂಭಿಸಿದ ಪೊನ್ನಪ್ಪ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಅಂಕಣವನ್ನು ಬರೆಯಲಾರಂಭಿಸಿ ಅದನ್ನ ತಮ್ಮ ವೃತ್ತಿಯನ್ನಾಗಿಸಿಕೊಂಡರು.
ಪೊನ್ನಪ್ಪ ಅವರ ವ್ಯಂಗ್ಯಚಿತ್ರಗಳು ಟೈಮ್ಸ್ ಆಫ್ ಇಂಡಿಯಾ, ಕರೆಂಟ್, ಇಂಡಿಯಾ ಟುಡೇ, ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ವಿದೇಶಿ ನಿಯತಕಾಲಿಕೆಗಳಲ್ಲೂ ಪ್ರಕಟಗೊಳ್ಳುತ್ತಿವೆ.
ದೇಶ-ವಿದೇಶಗಳ ಪತ್ರಿಕೆಗಳು ಸೊನ್ನಪ್ಪನವರ ವ್ಯಂಗ್ಯಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಪ್ರತಿಷ್ಠಿತ ಪೆಂಗ್ವಿನ್ ಪ್ರಕಟಿಸಿರುವ ಇಂಡಿಯನ್ ಕಾರ್ಟುನಿಸ್ಟ್, ಜರ್ಮನಿಯ ಥರ್ಲ್ಡ್ವರ್ಲ್ಡ್ ಕಾರ್ಟೂನ್ ಬುಕ್ ಮುಂತಾದ ಕಾರ್ಟೂನ್ ಕೃತಿಗಳಲ್ಲಿ ಸ್ಥಾನ ಪಡೆದಿರುವ ಸೊನ್ನಪ್ಪನವರು ಅಂತರ್ ರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.
ಶ್ರೀ ಎನ್.ಎಸ್. ಪೊನ್ನಪ್ಪ ಅವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಫ್ರಾಂಕ್ ಫರ್ಟ್ ವರ್ಲ್ಡ್ ಕಾರ್ಟೂನಿಸ್ಟ್ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಬಹುಮಾನ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ನಾಡು ಕಂಡ ಅತ್ಯಂತ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರು ಶ್ರೀ ಎನ್.ಎಸ್. ಪೊನ್ನಪ್ಪ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಸರಜೂ ಕಾಟ್ಕರ್

ಪತ್ರಕರ್ತರಾಗಿ, ಸಾಹಿತಿಯಾಗಿ ಯಶಸ್ಸು ಪಡೆದಿರುವ ಬೆಳಗಾವಿಯಲ್ಲಿ ನೆಲೆಸಿರುವ ಪ್ರಸಿದ್ಧ ಪತ್ರಕರ್ತರು ಡಾ. ಸರಜೂ ಕಾಟ್ಕರ್ ಅವರು.
ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಬದುಕು ಆರಂಭಿಸಿದ ಡಾ. ಸರಜೂ ಕಾಟ್ಕರ್ ಈಗ ಬೆಳಗಾವಿಯ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮುಖ್ಯ ವರದಿಗಾರರು.
ಹದಿನೆಂಟಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರು ಶಿವಾಜಿ ಕುಲತಂತೆ ನಡೆಸಿರುವ ಸಂಶೋಧನೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲದೆ, ಪತ್ರಕರ್ತರಾಗಿ ಹಲವಾರು ಮಾನವೀಯ ಹಾಗೂ ಶೋಧನಾ ವರದಿಗಳನ್ನು ನೀಡಿರುವ ಅವರು ಬರೆದ ಹಲವಾರು ವರದಿಗಳು ಸರ್ಕಾರದ ಗಮನ ಸೆಳೆಯಲು ಸಹಕಾಲಯಾಣವೆ.
ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಡಾ. ಸರಜೂ ಹಲವಾರು ಮರಾಠಿ, ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಇವರ ಕೃತಿಗಳಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ವಿದೇಶದಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನಗಳೂ ಸೇಲದಂತೆ ಅನೇಕ ಸಮ್ಮೇಳನಗಳಲ್ಲಿ ಪಾಲ್ಗೊಂಡ ಡಾ. ಸರಜೂ ಕಾಟ್ಕರ್ ಅಲ್ಲ ಮಂಡಿಸಿರುವ ಪ್ರಬಂಧಗಳು ಎಲ್ಲರ ಗಮನ ಸೆಳೆಐವೆ. ಇವರು ಕರ್ನಾಟಕ ಮಾಧ್ಯಮ ಹಾಗೂ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು.
ಗಡಿನಾಡಿನಲ್ಲಿದ್ದು ಪತ್ರಿಕೆ ಮತ್ತು ಸಾಹಿತ್ಯದ ಮೂಲಕ ಕನ್ನಡದ ಕಂಪನ್ನು ಹರಡುತ್ತಿರುವ ಸಾಹಿತಿ ಪತ್ರಿಕೋದ್ಯಮಿ ಡಾ.ಸರಜೂ ಕಾಟ್ಕರ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐ.ಜೆ.ಎಸ್. ಜಾರ್ಜ್

ಭಾರತೀಯ ಇಂಗ್ಲಿಷ್ ಪತ್ರಕರ್ತರಲ್ಲಿ ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು ಅಗ್ರಮಾನ್ಯ
ಹೆಸರು ಪಡೆದವರು. ಪತ್ರಿಕೋದ್ಯಮ ಆರಂಭಿಸಿದ್ದು ಮುಂಬೈನ ಫ್ರಿ ಪ್ರೆಸ್ ಜರ್ನಲ್ ಮೂಲಕ. ನಂತರ ಜಾರ್ಜ್ ಅವರು ಹಾಂಗ್ಕಾಂಗ್ನಲ್ಲಿ ‘ಏಷ್ಯಾವೀಕ್’ ನಿಯತಕಾಲಿಕೆ ಆರಂಭಿಸುವ ಮೂಲಕ ಆಂಗ್ಲ ಪತ್ರಿಕೋದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟರು. ಸರಳ ಹಾಗೂ ನೇರ ಬರವಣಿಗೆಯಿಂದ ಓದುಗರ ಗಮನ ಸೆಳೆದಿರುವ ಜಾರ್ಜ್ ಅವರು ೧೯೮೦ರ ದಶಕದಲ್ಲಿ ಬೆಂಗಳೂರಿನ ಟೈಂಸ್ ಆಫ್ ಡೆಕ್ಕನ್ ಸಲಹೆಗಾರರಾಗಿದ್ದರು. ಇಂಡಿಯನ್ ಎಕ್ಸ್ಪ್ರೆಸ್ನ ಸಲಹೆಗಾರರಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ಜಾರ್ಜ್ ಅವರು ತಮ್ಮ ನೇರ ನುಡಿ ಹಾಗೂ ಅಭಿಪ್ರಾಯಗಳಿಂದ ಅಧಿಕಾರಸ್ತರನ್ನು ಚುಚ್ಚಿದವರು. ಮುಂಜಾನೆ, ಟೈಂಸ್ ಆಫ್ ಡೆಕ್ಕನ್ ಪತ್ರಿಕೆಗಳ ಪ್ರೇರಕ ಶಕ್ತಿ ಆಗಿದ್ದರು.
ದೇಶವಿದೇಶಗಳ ಪತ್ರಿಕಾ ಸಂಘಟನೆಗಳಲ್ಲಿ ಸಲಹೆಗಾರರಾಗಿರುವ ಜಾರ್ಜ್ ಅವರು ಈಗ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿರುವ ಅಂಕಣ ಬಹು ಜನಪ್ರಿಯ. ಇಂಗ್ಲಿಷ್ ಪದಕೋಶದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಜಾರ್ಜ್ ಅವರು ಭಾರತೀಯ ಆಡುಪದಗಳ ಬಗ್ಗೆ ಶಬ್ದಕೋಶ ರಚಿಸಿದ್ದಾರೆ. ರಾಜಕಾರಣಿ ಕೃಷ್ಣ ಮೆನನ್, ಸಂಗೀತಲೋಕದ ತಾರೆ ಎಂ.ಎಸ್. ಸುಬ್ಬಲಕ್ಷ್ಮೀ, ಚಿತ್ರತಾರೆ ವರ್ಣಸ್ದತ್ ಅವರ ಆತ್ಮಕಥನಗಳನ್ನು ಮನೋಜ್ಞವಾಗಿ ಚಿತ್ರಿಸಿರುವ ಜಾರ್ಜ್ ಮುದ್ರಣ ತಂತ್ರಜ್ಞಾನದ ಬಗ್ಗೆ ಪಲಣಿತರು. ದೇಶವಿದೇಶಗಳ ವೃತ್ತಿ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿರುವ ಶ್ರೀ ಟಿ.ಜೆ.ಎಸ್. ಜಾರ್ಜ್ ಕರ್ನಾಟಕದ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತರು.
ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರುವ ಇಂಗ್ಲಿಷ್ ಪತ್ರಕರ್ತರಲ್ಲಿ ಅಪ್ರತಿಮ ಸಾಧನೆ ಮಾಡಿರುವವರು ಶ್ರೀ ಟಿ.ಜೆ.ಎಸ್. ಜಾರ್ಜ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅನಂತನಾಗ್

ಮರಾಠಿ ರಂಗಭೂಮಿಯಲ್ಲಿ ಹೆಸರುಮಾಡಿ ನಂತರ ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ಖ್ಯಾತಿ ಪಡೆದ ಸಂವೇದನಾಶೀಲ ನಟರು ಅನಂತನಾಗ್ ಅವರು. ಹುಟ್ಟಿದ್ದು ಹಸಿರು ಕಡಲ ಮಡಿಲು ಉತ್ತರ ಕನ್ನಡದ ನಾಗರಕಟ್ಟೆಯಲ್ಲ.
ಶ್ರೀ ಅನಂತನಾಗ್ ಅವರು ಕಲಾತ್ಮಕ ಚಿತ್ರಗಳಲ್ಲಿ ಮೊದಲು ಕಾಣಿಸಿಕೊಂಡ ಅನಂತನಾಗ್ ನಂತರ ವಾಣಿಜ್ಯ ಚಿತ್ರಗಳಲ್ಲೂ ನಾಯಕರಾಗಿ ಮಿಂಚಿದವರು. ಅನಂತ್ನಾಗ್ ಅವರ ಮೊದಲ ಚಿತ್ರ ಪಿ. ವಿ. ನಂಜರಾಜ್ ಅರಸ್ ಅವರ ‘ಸಂಕಲ್ಪ’ ಯಾವುದೇ ಪಾತ್ರವಿದ್ದರೂ ಅದಕ್ಕೆ ಜೀವ ತುಂಬುವ ಅನಂತನಾಗ್ ಈವರೆಗೆ ಮಿಂಚಿನ ಓಟ, ಹೊಸನೀರು, ಅವಸ್ಥೆ, ಗಂಗವ್ವ ಗಂಗಾಮಾಯಿ ಚಿತ್ರಗಳ ಅಭಿನಯಕ್ಕಾಗಿ ಮೂರು ಬಾಲ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಾಯಕ ನಟರಾಗಿಯೂ ಹಾಸ್ಯ ಪಾತ್ರಗಳಲ್ಲೂ ಸೈ ಎನ್ನಿಸಿಕೊಂಡಿರುವ ಅನಂತನಾಗ್ ಗಂಭೀರ ಪಾತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಚಂದನದ ಗೊಂಬೆ, ಬೆಂಕಿಯಬಲೆ, ಹಂಸಗೀತೆ, ಬಯಲುದಾಲ, ಗೋಲ್ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಮತದಾನ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಅನಂತನಾಗ್ ಹಿಂದಿ-ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯಲ್ಲೂ ಜನಪ್ರಿಯರು. ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರ ಪಾತ್ರವಂತೂ ಜನಮನದಲ್ಲಿ ಹಚ್ಚಹಸಿರು. ‘ಕನ್ನೇಶ್ವರ ರಾಮ’, ‘ಬರ’, ‘ಮಿಂಚಿನ ಓಟ’, ‘ಬೆಳದಿಂಗಳ ಬಾಲೆ’ ಯಂತಹ ವಿಭಿನ್ನ ಚಿತ್ರಗಳು ಅಭಿನಯ ಪ್ರತಿಭೆಗೆ ಹೊಸ ಆಯಾಮ ನೀಡಿದ ಚಿತ್ರಗಳು
ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಅನಂತನಾಗ್ ಕರ್ನಾಟಕದಲ್ಲಿ ಮಂತ್ರಿಯಾದ ಚಿತ್ರನಟರಲ್ಲೊಬ್ಬರು. ಅದ್ಭುತ ಅಭಿನಯದಿಂದ ಜನಮನವನ್ನು ಸೂರೆಗೊಂಡ ಕನ್ನಡದ ಮೇರುನಟರಲ್ಲೊಬ್ಬರು ಶ್ರೀ ಅನಂತನಾಗ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್

ಚಿತ್ರನಿರ್ಮಾಣದ ಜೊತೆಗೆ ಚಿತ್ರ ವಿತರಣೆಯನ್ನು ಕೈಗೆತ್ತಿಕೊಂಡು ಕನ್ನಡ ಚಿತ್ರೋದ್ಯಮದಲ್ಲಿ ಹೆಸರು ಗಳಿಸಿದವರು ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ಅ ವರು.
ಪ್ರಸಿದ್ಧ ನಟ ಡಾ|| ರಾಜ್ಕುಮಾರ್ರವರ ಪತ್ನಿಯವರಾದ ಪಾರ್ವತಮ್ಮ ರಾಜ್ಕುಮಾರ್ ಅವರು ಹುಟ್ಟಿದ್ದು ಮೈಸೂರು ಸಮೀಪದ ಸಾಅಗ್ರಾಮದಲ್ಲ. ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಹಲವಾರು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರು.
ಹಲವಾರು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಉದ್ಯಮಿಗಳನ್ನು ಬೆಳಕಿಗೆ ತಂದಿರುವ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಅನೇಕ ಜನಪರ ಸಂಘಟನೆಗಳ ಪ್ರೇರಣಾ ಶಕ್ತಿ.
ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳ ಸಹಾಯಾರ್ಥವಾಗಿ ತಮ್ಮ ಕುಟುಂಬ ಸದಸ್ಯರ ಮನರಂಜನಾ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿರುವ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಅಶಕ್ತ ಮಹಿಳೆಯಲಗಾಲ ಮೈಸೂಲನಲ್ಲಿ ಶಕ್ತಿಧಾಮ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಿಸಿದ ಅನೇಕ ಚಲನಚಿತ್ರಗಳು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದು ಈ ಚಿತ್ರಗಳಲ್ಲಿ ಭಾಗವಹಿಸಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ವೈಯಕ್ತಿಕ ಪ್ರಶಸ್ತಿಗಳು ಸಂದಿವೆ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎನ್. ಶಂಕರನಾರಾಯಣಚಾರ

ಶಿಲ್ಪಕಲೆಯ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ, ಶಿಲ್ಪಕಲಾ ಕ್ಷೇತ್ರದಲ್ಲ
ಅದ್ಭುತ ಸಾಧನೆ ಮಾಡಿರುವ ಅಪೂರ್ವ ಕಲಾವಿದರು ಶ್ರೀ ಎಸ್. ಶಂಕರನಾರಾಯಣ
೧೯೩೦ರಲ್ಲಿ ಶಿಲ್ಪಗ್ರಾಮವೆನಿಸಿದ ಶಿವಾರಪಟ್ಟಣದಲ್ಲಿ ಜನನ, ಪ್ರಸಿದ್ಧ ಕಲಾವಿದರಾದ ಸುಜ್ಞಾನಮೂರ್ತಾಚಾರರ ಮಗನಾ? ತಂದೆಯಿಂದಲೇ ಕಲೆಯಲ್ಲಿ ಮಾರ್ಗದರ್ಶನ, ನಂತರ ಬೆಂಗಳೂಲಿನ ಲೀಜನಲ್ ಸೆಂಟರ್ನಲ್ಲಿ ಹೆಚ್ಚಿನ ತರಬೇತಿ. ಪ್ರಸಕ್ತ ಶಿವಾರಪಟ್ಟಣದಲ್ಲಿ ಸಕ್ರಿಯವಾಗಿ ಶಿಲ್ಪರಚನೆ ಮಾಡುತ್ತಿರುವ ಕಲಾವಿದರು.
ಶ್ರೀ ಎಸ್. ಶಂಕರನಾರಾಯಣಚಾರ್ ಅವರ ಕೃತಿಗಳು ಲಂಡನ್, ಅಮೆಲಕ, ಜರ್ಮನ್ ಸೇಲದಂತೆ ಭಾರತಾದ್ಯಂತ ಹಲವಾರು ಸ್ಥಳಗಳಲ್ಲಿ ಸಂಗ್ರಹಿತವಾಗಿವೆ. ದೇವಾನುದೇವತೆಗಳ ಶಿಲ್ಪಗಳಲ್ಲದೆ ಶಿಲಾಬಾಲಿಕೆ, ಭಾವಶಿಲ್ಪ ಮುಂತಾದ ಶಿಲ್ಪಗಳ ರಚನೆಯಲ್ಲೂ ಪರಿಣತರು.
ರಾಷ್ಟ್ರೀಯ ಪ್ರಶಸ್ತಿ, ಅಖಿಲ ಭಾರತ ಕಲೆ ಮತ್ತು ಕರಕುಶಲ ಕಲಾ ಸೊಸೈಟಿಯ ಪ್ರಶಸ್ತಿ, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರು. ಕರ್ನಾಟಕ ಲಲತಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಕೆ.
ದೆಹಲಿ, ಹಲಯಾಣ, ಮುಂಬಯಿ, ಕೊಲ್ಕತ್ತಾ, ನಾಗಪುರ, ಗ್ವಾಲಿಯರ್, ಇಂದೋರ್, ಜಯಪುರ, ವಾರಂಗಲ್, ವಿಜಯವಾಡ, ಮಹಾಬಲಪುರ, ಅಗ್ರಾ, ಪಂಜಾಬ್ ಮುಂತಾದ ಸ್ಥಳಗಳಲ್ಲಿ ನಡೆದ ಕಲಾಮೇಳ ಹಾಗೂ ಕಲಾಶಿರದಲ್ಲಿ ಸಕ್ರಿಯ ಭಾಗವಹಿಸುವಿಕೆ.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುರೇಶ್ ಅರಸ್

ರಾಷ್ಟ್ರದ ಪ್ರತಿಭಾವಂತ ಚಿತ್ರ ಸಂಕಲನಕಾರರಲ್ಲೊಬ್ಬರು ಶ್ರೀ ಸುರೇಶ್ ಅರಸ್ ಅವರು. ೧೫೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನ ಮಾಡಿರುವ ಹಿಲಮೆ ಶ್ರೀಯುತರದು.
ಮಣಿರತ್ನಂ ಅವರ ನಾಯಗನ್ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸುರೇಶ್ ಅರಸ್ ಆರಂಭದ ದಿನಗಳಲ್ಲೇ ಹೆಚ್ಚಾಗಿ ಸಂಕಲನ ಮಾಡಿದ್ದು ಕಲಾತ್ಮಕ ಚಿತ್ರಗಳಿಗೆ.
ಸಂಗಮ ಸಾಕ್ಷಿ, ತುಳು ಚಿತ್ರದ ಮೂಲಕ ಸ್ವತಂತ್ರ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದ ಸುರೇಶ್ ಅರಸ್ ಬ್ಯಾಂಕರ್ ಮಾರ್ಗಯ್ಯ, ಸಂತ ಶಿಶುನಾಳ ಷಲೀಫ, ಬೆಂಕಿ, ಮೂರು ದಾಲಗಳು, ನಕ್ಕಳಾ ರಾಜಕುಮಾಲ, ಮಿಥಿಲೆಯ ಸೀತೆಯರು, ಪಂಚಮವೇದ ಮುಂತಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಸಂಕಲನ ಮಾಡಿದ ಹೆಗ್ಗಆಕೆಗೆ ಪಾತ್ರರು.
ಬೆಂಗಳೂಲಿನಲ್ಲಿ ಜ್ಯೋತಿ ಸಂಕಲನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಅರಸ್ ಪ್ರಸ್ತುತ ಚೆನ್ನೈನಲ್ಲಿ ಅತ್ಯಾಧುನಿಕ ಸಂಕಲನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಚಲನಚಿತ್ರಗಳನ್ನು ಸಂಕಲನ ಮಾಡಿರುವ ಶ್ರೀ ಸುರೇಶ್ ಅರಸ್ ಶ್ರೀಲಂಕಾ, ಮಾಲಷಸ್ ದೇಶಗಳ ಚಲನಚಿತ್ರಗಳನ್ನು ಸಂಕಲನ
ಮಾಡಿದ ಕೀರ್ತಿಗೆ ಭಾಜನರು.
ರಾಜ್ಯಸರ್ಕಾರದಿಂದ ಎರಡು ಬಾಲ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದಿರುವ ಶ್ರೀ ಸುರೇಶ್ ಅರಸ್ ನಾಡು ಕಂಡ ಅತ್ಯುತ್ತಮ ಸಂಕಲನಕಾರ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಎಂ. ಆರ್. ಬಾಳೆಕಾ

ವಾಸ್ತವ ನೆಲೆಯಲ್ಲಿ ಚಿತ್ರ ರಚಿಸುತ್ತ ಅದರಲ್ಲಿಯೇ ಪ್ರಯೋಗಶೀಲತೆ ತೋರುತ್ತ ಯಶಸ್ಸನ್ನು ಗಳಿಸಿದವರು ಶ್ರೀ ಎಂ. ಆರ್. ಬಾಳೆಕಾಯಿ ಅವರು.
ಬೆಳಗಾವಿಯ ಹೆಬ್ಬಾಳದಲ್ಲಿ ೧೯೪೧ರಲ್ಲಿ ಜನನ. ಎರಡನೇ ಬ್ಯಾಂಕ್ ಗಳಸಿ ಚಿತ್ರಕಲೆ ಮತ್ತು ವರ್ಣಚಿತ್ರದಲ್ಲಿ ಡಿಪ್ಲೊಮಾ; ಮೊದಲ ಬ್ಯಾಂಕ್ ಪಡೆದು ಚಿತ್ರಕಲಾ ಶಿಕ್ಷಕರಾಗಿ ತರಬೇತಿ ಹಾಗೂ ಆರ್ ಮಾಸ್ಟರ್ ಪದವಿ, ಗದಗಿನ ವಿಜಯ ಕಲಾ ಮಂದಿರ, ಧಾರವಾಡದ ಕಲಾಶಾಲೆ ಮತ್ತು ಭಾರತಿ ಕಲಾಕೇಂದ್ರದಲ್ಲಿ ವಿದ್ಯಾಭ್ಯಾಸ. ಬಾಣಾವರ, ಅಜ್ಜಂಪುರ, ಹಾಸನ, ತಲಕೆರೆ, ಹೆಬ್ಬಾಳ, ಬೆಂಗಳೂರು, ಧಾರವಾಡ, ಚಿಕ್ಕಮಗಳೂಲಿನಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನ. ಅರಸಿಕೆರೆ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಬಿಜಾಪುರ, ನವದೆಹಲಿಗಳಲ್ಲಿ ಸಮೂಹ ಚಿತ್ರ ಪ್ರದರ್ಶನವಲ್ಲದೆ, ಹಲವಾರು ವಸ್ತುಪ್ರದರ್ಶನ, ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆ.
೧೯೬೭ರಲ್ಲಿ ಹಾಸನದ ಕಲೆ ಮತ್ತು ಕರಕುಶಲ ವಸ್ತುಪ್ರದರ್ಶನದಲ್ಲಿ ಮೊದಲ ಸ್ಥಾನ. ೧೯೬೯ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಎರಡನೇ ಸ್ಥಾನ. ಮುಂತಾದ ಹಲವು ಬಹುಮಾನಗಳಲ್ಲದೆ, ಜಿಲ್ಲಾ ಮಟ್ಟದ ಉತ್ತಮ ಕಲಾಶಿಕ್ಷಕ ಪ್ರಶಸ್ತಿ, ಕರ್ನಾಟಕ ಲಂತಕಲಾ ಅಕಾಡೆಮಿ ವಾರ್ಷಿಕ ಕಲಾವಿದ ಪ್ರಶಸ್ತಿ, ಸೃಷ್ಟಿಶ್ರೀ ಪ್ರಶಸ್ತಿ ಪುರಸ್ಕೃತರು. ಶ್ರೀ ಎಂ. ಆರ್. ಬಾಳೆಕಾಯಿ ಅವರ ಚಿತ್ರಗಳು ಕರ್ನಾಟಕ ಲಲತಕಲಾ ಅಕಾಡೆಮಿ, ಮೈಸೂಲಿನ ಜನಪದ ಸಂಗ್ರಹಾಲಯ, ನವದೆಹಅಯ ರವೀಂದ್ರ ಕಲಾಗ್ಯಾಲಲ, ಧರ್ಮಸ್ಥಳ, ಸ್ಪಿಟ್ಟರ್ಲ್ಯಾಂಡ್, ಅಮೆಲಕ ಹೀಗೆ ಅನೇಕ ಸಂಗ್ರಹಾಲಯಗಳಲ್ಲವೆ.
ಹಲವಾರು ಕಲಾಸಂಸ್ಥೆಗಳಲ್ಲಿ, ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸುವಿಕೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿನ ಶಿಲ್ಪಕಲಾ ಮತ್ತು ಚಿತ್ರಕಲಾ ವಿಭಾಗದಲ್ಲಿ ಅತಿಥಿ ಉಪನ್ಯಾಸಕ, ೨೦೦೨ರ ಕರ್ನಾಟಕ ರಾಜ್ಯ ಕೆ. ವೆಂಕಟಪ್ಪ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಹೀಗೆ ಹಲವಾರು ರೀತಿಯಲ್ಲಿ

Categories
ಯಕ್ಷಗಾನ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಶೀನಪ್ಪ ಭಂಡಾರಿ

ಸ್ತ್ರೀ ಪಾತ್ರಗಳು, ರೌದ್ರಪಾತ್ರಗಳಿಂದ ಯಕ್ಷಗಾನ ರಂಗದಲ್ಲಿ ಮಹತ್ತರ ಸಾಧನೆ ಮಾಡಿದ ಯಕ್ಷಗಾನ ಕಲಾವಿದರು ಶ್ರೀ ಚಿ. ಶೀನಪ್ಪ ಭಂಡಾಲ ಅವರು.
೧೯೨೬ರಲ್ಲಿ ಕಾಸರಗೋಡಿನ ಪೆರಡಾದ ನೆಲ್ಲಕುಂಜದಲ್ಲಿ ಜನನ. ಆರನೆಯ ತರಗತಿ ತನಕ ವಿದ್ಯಾಭ್ಯಾಸ. ಹಿಲಯ ಭಾಗವತ ಶ್ರೀ ಜತ್ತಪ್ಪ ರೈಗಳು ಸೋದರಮಾವ. ಅವಲಂದ ಪ್ರೇರಣೆ ಪಡೆದ ಶ್ರೀ 9. ಶೀನಪ್ಪ ಭಂಡಾಲ ತೆಂಕು ತಿಟ್ಟಿನ ನರ್ತಕರಾದ ದಿವಂಗತ ಕಾವು ಕಣ್ಣನವರು ಕುಣಿತದ ಗುರು. ಕದ್ರಿ ಮೇಳದಿಂದ ಯಕ್ಷಗಾನ ರಂಗಕ್ಕೆ ಪದಾರ್ಪಣ, ನಂತರ ಮುಟ್ಟಿ ಮೇಳದಲ್ಲಿ, ನಂತರ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಹತ್ತೊಂಬತ್ತು ವರ್ಷಗಳು ಸೇವೆ ಸಲ್ಲಿಕೆ. ಸ್ವಂತವಾಗಿ ಬಳ್ಳಂಬೆಟ್ಟು ಮತ್ತು ಆವಿಸುಬ್ರಹ್ಮಣ್ಯ ಮೇಳಗಳ ರಚನೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮುಂತಾದ ಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿಕೆ, ಬನ್ನೂರು ಎಂಬಲ್ಲ ‘ಯಕ್ಷಗಾನ ಕುಟೀರ’ ಸ್ಥಾಪನೆ. ಹಲವಾರು ಶಿಷ್ಯಂಱಲಗೆ ಯಕ್ಷಗಾನ ಶಿಕ್ಷಣ ನೀಡಿಕೆ.
ಭಸ್ಮಾಸುರ, ರಕ್ತಬೀಜ, ಶಿವ, ಅರ್ಜುನ, ಜಲಂಧರ, ತಾಮ್ರಧ್ವಜ, ಕೌರವ, ದೇವೇಂದ್ರ, ಇಂದ್ರಜಿತು ಮೊದಲಾದ ವೇಷಗಳನ್ನು ಅತ್ಯಂತ ಸುಲಭವಾಗಿ ನಿರ್ವಹಿಸುವ ಕೀರ್ತಿಗೆ ಪಾತ್ರರು. ತಾಳಮದ್ದಳೆ ಅರ್ಥಧಾಲಯಾಗಿಯೂ ಅನುಭವ, ತುಳು ಪ್ರಸಂಗಗಳಲ್ಲಿಯೂ ಪಾತ್ರ ವಹಿಸಿ ಪ್ರಸಿದ್ಧಿ ಪಡೆದವರು. ಸೀತಾಕಲ್ಯಾಣ, ಕೌಸಲ್ಯಾ ಪರಿಣಯ ಮುಂತಾದ ರಂಗದಿಂದ ಮರೆಯಾದ ಪ್ರಸಂಗಗಳನ್ನು ಪುನಃ ರಂಗಕ್ಕೆ ತಂದ ಯಶಸ್ವಿಗೆ ಪಾತ್ರರು.
ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಅರ್ಧಶತಮಾನ ಮೇಳಗಳ ಸಂಘಟಕರಾಗಿ, ಅಸಾಧಾರಣ ಪ್ರತಿಭೆಯ ಪ್ರಯೋಗಶೀಲ ಕಲಾವಿದರಾಗಿ ಯಕ್ಷಗಾನ ಕಲಾರಂಗವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯ ಕಲಾವಿದರು ಶ್ರೀ ಶೀನಪ್ಪ ಭಂಡಾಲ ಅವರು.

Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಾಚಾರ್ ಗೋಪಾಲ ನಾಯ್

ತುಳುನಾಡಿನ ಪ್ರಮುಖ ಜನಪದ ಆರಾಧನಾ ಪರಂಪರೆಗಳಲ್ಲೊಂದಾಗಿರುವ ‘ಸಿ’ ಆರಾಧನೆಯಲ್ಲಿನ ‘ಕುಮಾರ’ ಶ್ರೀ ವರಾಚಾರ್ ಗೋಪಾಲ ನಾಯ್ಕ ಅವರು.
ಸಿಲ ಆರಾಧನೆಯಲ್ಲಿ ನಲವತ್ತು ವರ್ಷಗಳಿಂದ ‘ಕುಮಾರ’ನಾಗಿ ಭಾಗವಹಿಸುವಿಕೆ, ಸಿಲ ಸಂಧಿ, ಭೂತಗಳ ಪಾಡ್ಡನ, ಕತಗಳು, ಕತೆಗಳು, ಒಗಟುಗಳು, ಗಾದೆಗಳ ನಿಧಿ.
ಗೋಪಾಲನಾಯ್ಕರ ಪ್ರತಿಭೆಯನ್ನೇ ಆಧಾರವಾಗಿಟ್ಟುಕೊಂಡು ಅನೇಕ ದೇಶೀಯ ಹಾಗೂ ವಿದೇಶೀಯ ವಿದ್ವಾಂಸರು ಸಂಶೋಧನೆ ನಡೆಸುತ್ತಿರುವುದು ಇವರೊಂದು ಜನಪದ ನಿಕ್ಷೇಪ ಎಂಬುದಕ್ಕೆ ನಿದರ್ಶನ.
‘ಗೋಪಾಲ ನಾಯ್ಕ ಜನಪದ ಮಹಾಕಾವ್ಯಗಳ ಹಾಡುಗಾರ ಮತ್ತು ಸಿಲ ಆಚರಣೆಯ ನಾಯಕ’ ಎಂಬ ವಿಷಯದ ಬಗೆಗೆ ವಿಶೇಷ ಸಂಶೋಧನೆ ನಡೆಸುತ್ತಿರುವ ಫಿಲ್ಲೆಂಡಿನ ತೌಲಹಾಂಕೋ, ಅನೇಂ ಹಾಂಕೋ, ತುಳುನಾಡಿನ ಡಾ. ವಿವೇಕ ರೈ, ಡಾ. ಚಿನ್ನಪ್ಪಗೌಡ ಇಂಥ ಸಂಶೋಧಕರು ಹಏನಾರು ಸಾವಿರ ಸಾಲುಗಳೀಗಿಂತಲೂ ಏಸ್ತಾರವಾಗಿರುವ ಸಿಲಿಸುಧೆಯನ್ನು ನಾಯಕರಿಂದ ಸಂಗ್ರಹಿಸಿರುವುದು ಮಹತ್ವದ ಸಂಗತಿ. ಇದು ಇಂಗ್ಲಿಷಿಗೂ ಭಾಷಾಂತರಗೊಂಡಿರುವುದು ಹೆಮ್ಮೆಯ ವಿಷಯ. ಶ್ರೀ ಗೋಪಾಲ ನಾಯ್ಕ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಸಿಲ ಆಚರಣೆ ತಲೆ ತಲಾಂತರದಿಂದ ಆಚರಣೆಯಲ್ಲಿರುವ ಜನಪದ ಆಚರಣಾ ಕಲೆ. ಇವನ್ನು ಪಲಿಸುವ ಜನಪದ ಕಲೆಗಾಲಕೆಯ ಜೀವಂತ ಸಾಕ್ಷಿ ಶ್ರೀ ಗೋಪಾಲನಾಯ್ಕ ಅವರು ಸಿಲ ಮಹಾಕಾವ್ಯವನ್ನು ಮುಖತಃ ಪಠಣ ಪ್ರಾವೀಣ್ಯತೆ ಹಾಗೂ ಹೆಸರಾಂತ ಜನಪದ ಆಶುಕವಿ ಶ್ರೀ ಗೋಪಾಲನಾಯ್ಕ ಅವರು.

Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೈದುಸಾಬ ಲಾಡಖಾನ

ಜನಪ್ರಿಯ ಬಯಲಾಟಗಳಲ್ಲಿ ಒಂದಾದ ಶ್ರೀ ಕೃಷ್ಣ ಪಾರಿಜಾತದಲ್ಲಿ ಶ್ರೀಕೃಷ್ಣನ ಪಾತ್ರದಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡವರು ಮುಗಳಖೇಡದ
ಸೈದು ಸಾಬ ಲಾಡ ಖಾನ ಅವರು.
ಚಿಕ್ಕಂದಿನಿಂದಲೇ ಶ್ರೀಕೃಷ್ಣ ಪಾಲಜಾತದ ಒಲವು ಬೆಳೆಸಿಕೊಂಡ ಶ್ರೀ ಲಾಡಖಾನ ಸೇಲಕೊಂಡದ್ದು ಅಂಗಪ್ಪ ಮಾಸ್ತರ ಹುಡೇದ ಅವರಲ್ಲ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಭಕ್ತಿಪ್ರಧಾನ ನಾಟಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲಾಡ ಖಾನ ಅವರು ಅಂಗಪ್ಪ ಮಾಸ್ತರ ಅಭಿನಯಕ್ಕೆ ಮಾರುಹೋಗಿ ಅವರ ಶಿಷ್ಯರಾದರು. ಮನರಂಜನೆ, ಸಂಗೀತ, ಲಯಗಾಲಕೆ ಹಾಗೂ ಆಧ್ಯಾತ್ಮ ವಿಚಾರಧಾರೆಗಳಿರುವ ಶ್ರೀ ಕೃಷ್ಣ ಪಾಲಜಾತ ಬಯಲಾಟದಲ್ಲಿ ಮುಖ್ಯವಾದ ಶ್ರೀ ಕೃಷ್ಣ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಡಿನ ಗಮನ ಸೆಳೆದ ಸೈದು ಸಾಬ ಲಾಡ ಖಾನ ನಾಲೈದು ಪಾರಿಜಾತ ಕಂಪನಿಗಳಲ್ಲಿ ಶ್ರೀ ಕೃಷ್ಣ ಪಾತ್ರಧಾಲಿಯಾಗಿ ಮಿಂಚಿದರು. ಶ್ರೀ ಕೃಷ್ಣ ಪಾಲಜಾತದಲ್ಲಿ ಮುಖ್ಯಪಾತ್ರವಾದ ಶ್ರೀಕೃಷ್ಣನ ಅಭಿನಯಕ್ಕೆ ಹೊಸ ಆಯಾಮ ಕೊಟ್ಟ ಲಾಡಖಾನರವರು ಅನೇಕಲಗೆ ಶ್ರೀಕೃಷ್ಣನ ಪಾತ್ರದ ಅಭಿನಯವನ್ನು ಹೇಳಿಕೊಟ್ಟರು.
ಎತ್ತರ ನಿಲುವು, ಸುಂದರ ರೂಪದ ಸೈದು ಸಾಬರು ಶ್ರೀ ಕೃಷ್ಣನ ಪಾತ್ರಧಾರಿಯಾಗಿ ತಮ್ಮ ಛಾಪು ಮೂಡಿಸಿದರಲ್ಲದೆ, ನಾಲ್ಕು ದಶಕಗಳ ಕಾಲ ಶ್ರೀ ಕೃಷ್ಣ ಪಾಲಜಾತ ಬಯಲಾಟವನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.
ಕರ್ನಾಟಕವಲ್ಲದೆ, ಮಹಾರಾಷ್ಟ್ರ ರಾಜ್ಯದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಸೈದು ಸಾಬ ಲಾಡ ಖಾನ ಆಕಾಶವಾಣಿ, ದೂರದರ್ಶನಗಳ ಮೂಲಕವೂ ಜನಮಾನಸ ತಲುಪಿದ್ದಾರೆ.
ಅಸಂಖ್ಯ ಅಭಿಮಾನಿಗಳನ್ನು, ನೂರಾರು ಶಿಷ್ಯರನ್ನು ಪಡೆದಿರುವ ಲಾಡ ಖಾನ ಇಂದು ಕೃಷ್ಣ ಪಾಲಜಾತ ಕ್ಷೇತ್ರದಿಂದ ನಿವೃತ್ತರಾದರೂ ಜನಮನದಿಂದ ಈಗಲೂ ದೂರವಾಲಿಲ್ಲ.
ಅದ್ಭುತವಾದ ಅಭಿನಯ ಕೌಶಲ್ಯದಿಂದ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿದ ಕೃಷ್ಣ ಪಾರಿಜಾತದ ಅಪ್ರತಿಮ ಕಲಾವಿದ ಶ್ರೀ ಸೈದು ಸಾಬ ಲಾಡ ಖಾನ ಅವರು.

Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹೊನ್ನಮ್ಮ

ಜನಪದ ಗೀತೆ-ಕಥೆಗಳ ಸಮೃದ್ಧ ಭಂಡಾರ, ಜಾನಪದ ವಿಶ್ವಕೋಶ ಶ್ರೀಮತಿ ಹೊನ್ನಮ್ಮ ಅವರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಚಿನ್ನಾದೇವಿ ಅಗ್ರಹಾರದವರಾದ ಶ್ರೀಮತಿ ಹೊನ್ನಮ್ಮ ಜನಪದ ಕಥೆಗಳ ಲೋಕವನ್ನೇ ಬಿಚ್ಚಿಡಬಲ್ಲರು. ವಿವಿಧ ಆಚರಣೆಗಳು, ಸಂಪ್ರದಾಯ ನಂಬಿಕೆಗಳ ಬಗ್ಗೆ ಅಪಲಮಿತ ಜ್ಞಾನವುಳ್ಳ ಶ್ರೀಮತಿ ಹೊನ್ನಮ್ಮನವರು ಗಾದೆ-ಒಗಟುಗಳ ನಿಕ್ಷೇಪ; ಹೊಲದ ಸೊಪ್ಪು, ಕಾಳುಗಳನ್ನೇ ಬಳಸಿ ವೈವಿಧ್ಯಮಯ ಸಾರುಗಳನ್ನು ತಯಾಲಿಸುವ ಪಾಕತಜ್ಞೆ, ಜನಪದ ಹಾಡುಗಾಲಕೆ, ಮನೆಮದ್ದು, ಸೂಲುತ್ತಿ ಕಾರ್ಯ, ರಂಗೋಲಿ,-ಹೀಗೆ ಬಹುಮುಖ ಪ್ರತಿಭೆಗಳ ಆಗರ.
ಅಗೆದಷ್ಟೂ ಆಳ ಮೊಗೆದಷ್ಟೂ ಶ್ರೀಮಂತ ಜಾನಪದ ವಿವಿಧ ಪ್ರಕಾರಗಳನ್ನು ತೆರೆದಿಡಬಲ್ಲ ವಿಪುಲ ಜೀವನಾನುಭವವುಳ್ಳ ಇಆ ಹರೆಯದ ಶ್ರೀಮತಿ ಹೊನ್ನಮ್ಮನವರ ಜೀವನಗಾಥೆ ಗ್ರಾಮೀಣ ಸಾಂಸ್ಕೃತಿಕ ವರ್ಗದ ಅತ್ಯಪೂರ್ವ ಮಾದಲ. ಶ್ರೀಮತಿ ಹೊನ್ನಮ್ಮನವರ ಜನಪದಜ್ಞಾನಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪಲಷತ್ತಿನ ಪ್ರಶಸ್ತಿ, ಗೌರವ ಸಂದಿವೆ.
ಸನ್ಮಾನ-ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದ “ಜಾನಪದ ಕಣಜ” ಶ್ರೀಮತಿ ಹೊನ್ನಮ್ಮ ಅವರು.

Categories
ಜಾನಪದ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಂತಮ್ಮ ಸಾಬಣ್ಣ ಸುಣ್ಣಗಾರ

ಸಂಪ್ರದಾಯದ ಹಾಡುಗಳ ಗಾಯಕಿಯಾಗಿ ಮೂಲ ಜನಪದ ಮಟ್ಟುಗಳನ್ನು ಹಲವಾರು ಶಿಷ್ಯರಿಗೆ ಧಾರೆ ಎರೆಯುತ್ತಿರುವ ಜನಪದ ಕಲಾವಿದೆ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು.
ಬಾಲ್ಯದಿಂದಲೂ ಜನಪದ ಹಾಡುಗಾಲಕೆಗೆ ಮೀಸಲಿಟ್ಟು ಉತ್ತಮ ಜನಪದ ಗಾಯಕಿ ಎಂಬ ಹೆಸರು ಪಡೆದವರು. ಎಂಬತ್ತೆರಡು ವರ್ಷಗಳ ಇಳಿ ವಯಸ್ಸಿನಲ್ಲೂ ಅದ್ಭುತವಾಗಿ ಹಾಡಬಲ್ಲ ಕರ್ನಾಟಕದ ಹಿಲಿಯ ಜಾನಪದ ಕಲಾವಿದೆ. ಪತಿ ಹಾಡುಗಾಲಕೆ ಹಾಗೂ ಬಯಲಾಟ ಕಲಾವಿದರಾಗಿದ್ದರು. ತಂದೆ ತಾಯಿ ಲಾವಣಿ ಹೇಳುವುದರಲ್ಲಿ ನಿಷ್ಣಾತರು. ಹೀಗೆ ಜನಪದ ಕಲಾವಿದರ ಪರಂಪರೆಯಿಂದ ಬಂದ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು ವೈವಿಧ್ಯಮಯ ಹಾಡುಗಳ ಗಣಿ. ಅಪೂರ್ವ ಕಂಠಶ್ರೀಯಿಂದ ಉತ್ತುಂಗ ಮಟ್ಟವನ್ನು ಮುಟ್ಟದ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು ಲಾವಣಿ ಹೇಳುವುದರಲ್ಲೂ, ಬಯಲಾಟದಲ್ಲೂ ನಿಪುಣೆ. ಪಾರಂಪಲಕ ಕಲೆಗೆ ಮಾಧುರ್ಯವನ್ನು ತುಂಬಿದ ಹೆಗ್ಗಳಿಕೆಗೆ ಪಾತ್ರರು. ೧೯೯೪ರ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಅನಕ್ಷರಸ್ಥೆಯಾದರೂ ಸಂಸ್ಕೃತಿ ಸಂಪನ್ನೆ, ನೆನಪಿನ ಕಣಜ. ಅದ್ಭುತ ಕಂಠಶ್ರೀಯಿಂದ ಜನಪದ ಹಾಡುಗಾಲಕೆಯಿಂದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿರುವ ಜನಪದ ಗಾಯಕಿ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು.

Categories
ನೃತ್ಯ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೀತಾ ದಾತಾರ್

ಎಳೆಯ ವಯಸ್ಸಿನಿಂದಲೇ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶ್ರೀಮತಿ ಗೀತಾ ದಾತಾರ್ ಈಗ ನಾಡಿನ ಹೆಸರಾಂತ ನೃತ್ಯಪಟುಗಳಲ್ಲೊಬ್ಬರು.
ಹಾಸನ ಜಿಲ್ಲೆಯ ಅರಸೀಕೆರೆಯವರಾದ ಗೀತಾ ದಾತಾರ್ ಅವರು ಭರತನಾಟ್ಯ, ಮೋಹಿನಿಅಟ್ಟಂ ಹಾಗೂ ಕುಚುಪುಡಿ ನೃತ್ಯಶೈಲಿಗಳಲ್ಲಿ ಪರಿಣತಿ ಹೊಂದಿದವರು.
ತಾಯಿ ಸ್ನೇಹಪ್ರಭಾರಿಂದ ನೃತ್ಯದ ಮೊದಲ ಪಾಠಗಳನ್ನು ಕಲಿತ ಗೀತಾ ಅವರು ಅಕ್ಕ ಖ್ಯಾತ ನೃತ್ಯಗಾರ್ತಿ ಉಷಾದಾತಾರ್ ಅವರಿಂದ ಅನೇಕ ನೃತ್ಯಶೈಲಗಳಲ್ಲಿ ತರಬೇತಿ ಹೊಂದಿದವರು. ನೃತ್ಯ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಗೀತಾ ಅವರು ಚಿಕ್ಕವಯಸ್ಸಿನಲ್ಲಿಯೇ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಂಡವರು.
ಅರಸೀಕೆರೆಯ ಭರತ ಕಲಾನಿಕೇತನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಗೀತಾ ಅವರು ಅಕ್ಕ ಉಷಾ ಅವರ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಪಾಲ್ಗೊಂಡು ನೋಡುಗರ ಮೆಚ್ಚುಗೆ ಪಡೆದವರು.
ನೃತ್ಯ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಗೀತಾ ದಾತಾರ್ ಅವರು ಅನೇಕ ಕಡೆ ತಮ್ಮ ನೃತ್ಯಶಾಲೆಯ ಶಾಖೆಗಳನ್ನು ತೆರೆದದ್ದು ವಿದ್ಯಾರ್ಥಿಗಳಿಗೆ ನೃತ್ಯದಲ್ಲಿ ತರಬೇತಿ ನೀಡುತ್ತಿದ್ದಾರೆ. ಉತ್ತಮ ನೃತ್ಯಪಟುವೆಂದು ಹೆಸರಾಗಿರುವ ಇವರು ಹಾಡುಗಾರಿಕೆ ಹಾಗೂ ನಟವಾಂಗಗಳಲ್ಲೂ ಪರಿಶ್ರಮ ಪಡೆದವರು.

Categories
ನೃತ್ಯ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಮಾಸ್ಟರ್ ವಿಠಲ್ ಶೆಟ್ಟ

ಕರಾವಳಿ ಜಿಲ್ಲೆಗೆ ರಾಜನ್ ಅಯ್ಯರ್, ರಾಜರತ್ನಂ ಪಿಳ್ಳೆ ಅವರಿಂದ ಹಲದು ಬಂದ ಭರತನಾಟ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರಲ್ಲಿ ಒಬ್ಬರು
ನಾಟ್ಯಾಚಾರ್ಯ ಮಾಸ್ಟರ್ ವಿಠಲ್ ಅವರು.
ಸುಮಾರು ಅರವತ್ತು ವರ್ಷಗಳಿಂದಲೂ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಣವನ್ನು ನೀಡುತ್ತಿರುವ ವಿಠಲ್ ಶೆಟ್ಟಿ ಮಾಸ್ಟರ್ ಏಠಲ್ ಎಂದೇ ಚಿರಪಲಚಿತರು. ಲವಂಗತ ಎಂ.ಎ. ದೇವಾಡಿಗರಿಂದ ಪ್ರಾಥಮಿಕ ನೃತ್ಯಾಭ್ಯಾಸ. ನಂತರ ರಾಜನ್ ಅಯ್ಯರ್ ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ. ೧೯೬೪ರಲ್ಲಿ ನೃತ್ಯ ಕೌಸ್ತುಭ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಅನೇಕ ನೃತ್ಯ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.
೧೯೪೦ಲಿಂದ ನೃತ್ಯರಂಗದಲ್ಲಿ ತಮ್ಮನ್ನು ತೊಡಲಿಸಿಕೊಂಡು ಮಹಾಭಾರತ, ರಾಮಾಯಣ ಕಥೆಗಳ ಆಧಾಲತ ನೃತ್ಯರೂಪಕಗಳು, ಬೈಬಲ್ ಕಥಾಧಾಲತ ನೃತ್ಯ ರೂಪಕಗಳನ್ನು ನೃತ್ಯ ರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಆಕೆ ಶ್ರೀಯುತರದು. ಮಿನಗುತಾರೆ ಕಲ್ಪನಾ,ಉಳ್ಳಾಲ್ ಮೋಹನ್ಕುಮಾರ್,ಡಾ.ಮೋಹನ್ ಆಳ್ವ, ಪ್ರೇಮನಾಥ್ ಮೊದಲಾದವರು ಮಾಸ್ಟರ್ ಏಠಲ್ ಅವರ ಶಿಷ್ಯರು. ದೇಶ್,ಅಠಾಣ, ಯಮನ್ ಮುಂತಾದ ರಾಗಗಳನ್ನು ಬಳಸಿ ಪ್ರದರ್ಶಿಸಿದ ‘ಶಿಯ ಸ್ವಪ್ನ’ ಮಾಸ್ಟರ್ ಏಠಲ್ ಅವರಿಗೆ ವಿಶೇಷ ಹೆಸರು ಗಳಿಸಿಕೊಟ್ಟ ನೃತ್ಯರೂಪಕ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿಯ ಪುರಸ್ಕೃತರಾದ ಮಾಸ್ಟರ್ ಏಠಲ್ ಅವರು ೧೯೮೧ರಲ್ಲಿ ಸ್ವೀಡನ್ ದೇಶದ ಪ್ರಸಿದ್ಧ ಸೇನೇಷಿಯ ವರ್ಲ್ಡ್ ಟೂರ್ಸ್ ಸಂಸ್ಥೆಯ ಆಹ್ವಾನದ ಮೇರೆಗೆ ಸ್ವೀಡನ್ನಿಗೆ ಹೋಗಿ ಸ್ವೀಡನ್, ಸ್ಟೋಖೋಲ್ಡ್, ಓಸ್ತೆ, ಕೋಪೆನ್ ಹೆಗನ್ಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರು. ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕಾರ್ಯನಿರ್ವಹಣೆ, ಮಾಸ್ಟರ್ ವಿಠಲ್ ಅವರಿಗೆ ಶಾಸ್ತ್ರೀಯ ನೃತ್ಯಗಳೀಗಿಂತ ನೃತ್ಯರೂಪಕಗಳತ್ತ ಒಲವು. ಪೃಥ್ವಿರಾಜ ಸಂಯುಕ್ತ, ಸುಕೋಮಲೆ ಸೋಫಿಯಾಳ ಸುವರ್ಣ ಸ್ವಪ್ನ, ಟೆನ್ ಕಮಾಂಡೆಂಟ್ಸ್, ಚಿತ್ರಾಂಗದಾ, ಶಾಕುಂತಲಾ ಮೊದಲಾದ ನೃತ್ಯರೂಪಕಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ.
ಅನೇಕ ಪ್ರಸಿದ್ಧ ನೃತ್ಯರೂಪಕಗಳ ರೂವಾಲಿ ಹಾಗೂ ಎಂಬತ್ತರ ಇವಯಸ್ಸಿನಲ್ಲೂ ನೃತ್ಯಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ನೃತ್ಯ ಕೌಸ್ತುಭ ಮಾಸ್ಟರ್ ಏಠಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಗೌರಾಂಗ ಕೋಡಿಕಲ್

ಸಂಗೀತದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ನಾಡಿನ ಉತ್ತಮ ತಬಲಾ ವಾದಕರು
ಶ್ರೀ ಗೌರಾಂಗ ಕೋಡಿಕಲ್ ಅವರು.
ತಂದೆಯಿಂದ ತಬಲವಾದನದ ಪ್ರಾರಂಭಿಕ ಶಿಕ್ಷಣ. ಅನಂತರ ಮುಂಬನ ಶಶಿಬೆಳ್ಳಾರೆ, ಹೈದರಾಬಾದಿನ ಶೇಕ್ದಾವೂದ್ ಮತ್ತು ಬೆಂಗಳೂಲಿನ ಡಿ.ಎಸ್. ಗರೂಡ ಅವರಲ್ಲಿ ಪ್ರೌಢಶಿಕ್ಷಣ ಪಡೆದು ಗೌರಾಂಗ ಕೋಡಿಕಲ್ ಅವರು ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಗುರುಕುಲಪರಂಪರೆಯಲ್ಲಿ ತಬಲಾವಾದನ ಅಭ್ಯಾಸ ಮಾಡಿದ ಗೌರಾಂಗ ಕೋಡಿಕಲ್ ಅವರು ಬಾಲ್ಯದಲ್ಲೇ ತಬಲಾವಾದನದಿಂದ ಎಲ್ಲರ ಗಮನ ಸೆಳೆದು ನಂತರದ ದಿನಗಳಲ್ಲಿ ಅನೇಕ ಪ್ರಸಿದ್ಧ ಗಾಯಕಲಗೆ, ವಾದಕರಿಗೆ ತಬಲಾ ಸಾಥಿ ನೀಡಿದಒಲಮೆಗೆ ಪಾತ್ರರು.
ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ತಬಲ ಸಾಥಿ ನೀಡಿರುವ ಇವರು ದಿನಕರ ಕೈಕಿಣಿ ಅವರೊಂದಿಗೆ ಅಮೆಲಕ, ಕೆನಡ ಹಾಗೂ ಇಂಗ್ಲೆಂಡ್ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಹಲವಾರು ಕಚೇಲಗಳಲ್ಲಿ ಪಾಲ್ಗೊಂಡಿದ್ದಾರೆ.
ಹವ್ಯಾಸಿ ಕಲಾವಿದರಾದ ಗೌರಾಂಗ ಕೋಡಿಕಲ್ ಅವರು ಬೆಂಗಳೂಲಿನ ಸುರ್ಸಾಗರ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರು.
ತಬಲಾವಾದನದಲ್ಲಿ ಇವರ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೦- ೨೦೦೧ನೇ ಸಾಱನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಕದ ಪ್ರತಿಭಾವಂತ ತಬಲಾ ವಾದಕರಲ್ಲೊಬ್ಬರು ಶ್ರೀ ಗೌರಾಂಗ ಕೋಡಿಕಲ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಬಸಪ್ಪ ಎಚ್. ಭಜಂತ್ರಿ

ಪ್ರಸಿದ್ಧ ಕ್ಲಾಲಿಯೋನೆಟ್ ಹಾಗೂ ಶಹನಾಯಿ ವಾದಕರು ಕರ್ನಾಟಕ ಭೂಷಣ ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು.
ಬಾಗಲಕೋಟೆಜಿಲ್ಲೆ ಹುನಗುಂದ ತಾಲೂಕಿನ ಅಮರಾವತಿ ಗ್ರಾಮದ ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು ತಮ್ಮ ಎಂಟನೆಯ ವಯಸ್ಸಿನಲ್ಲಿ ಸಂಗೀತಲೋಕಕ್ಕೆ ಪ್ರವೇಶ. ಅಜ್ಜ ಫಕೀರಪ್ಪನವರಿಂದ ಕ್ಲಾಲಯೋನೆಟ್ ಕಂಕೆ. ನಂತರ ಪಂಡಿತ ಬಸವರಾಜ ರಾಜಗುರು, ಪಂಚಾಕ್ಷ ಸ್ವಾಮಿ ಮತ್ತಿಗಟ್ಟಿ, ಅರ್ಜುನ್ ಸಾ ನಾಕೋಡ್, ಚನ್ನಬಸಪ್ಪ ಬನ್ನೂರ ಗವಾಯಿ- ಮೊದಲಾದವರಲ್ಲಿ ಸಂಗೀತಾಭ್ಯಾಸ ಹಾಗೂ ಅವರಿಂದ ಮಾರ್ಗದರ್ಶನ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಲಾಲಿಯೋನೆಟ್ ಮತ್ತು ಶಹನಾಯಿ ವಾದನದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕಾಣಿಕೆ ಮಹತ್ವಪೂರ್ಣವಾದುದು. ಹಾಡುಗಾಲಕೆಯಲ್ಲೂ ವಿದ್ವತ್ ಮಾಡಿರುವ ಶ್ರೀ ಬಸಪ್ಪ ಎಚ್. ಭಜಂತ್ರಿ ಮೈಸೂರು ದಸರಾ,ಹಂಪಿ, ಪಟ್ಟದಕಲ್ಲು, ನವರಸಪುರ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ಹಾಗೂ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಶಹನಾಯಿ ನುಡಿಸಿ ಜನಮನ್ನಣೆಗಳಿಸಿರುವ ಕಲಾವಿದರು.
ಹಿಂದೂಸ್ತಾನಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಕ್ಲಾಲಿಯೋನೆಟ್ ಹಾಗೂ ಶಹನಾಯಿಯ ಅಪೂರ್ವ ಸಾಧಕರು ಶ್ರೀ ಬಸಪ್ಪ ಎಚ್. ಭಜಂತ್ರಿ ಅವರು

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಶೇಷಪ್ಪಾ ಗದ್ಗರು

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆ ಮಾಡಿ ನೂರಾರು ಶಿಷ್ಯರನ್ನು ರೂಪಿಸಿದ ಕಿರಾಣಾ ಹಾಗೂ ಗ್ವಾಲಿಯರ್ ಪದ್ಧತಿಯ ಪ್ರಸಿದ್ಧ ಗಾಯಕರು
ತಿಂದ ಶ್ರೀ ಶೇಷಪ್ಪಾ ಗಬ್ಬರು ಅವರು.
೧೯೪೭ರಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬಲಿನಲ್ಲಿ ಜನನ. ಯಕ್ಷಗಾನ ಹಾಗೂ ನಾಟಕ ಸಂಗೀತ ಪರಂಪರೆಯಿಂದ ಬಂದವರು. ಶ್ರೀ ಹಣಮಂತಪ್ಪಾ ಹೀರಾ ಅವರಲ್ಲಿ ಪ್ರಾರಂಭಿಕ ಸಂಗೀತಾಭ್ಯಾಸ. ನಂತರ ಡಾ. ಪುಟ್ಟರಾಜ ಗವಾಯಿಯವರ ವೀರೇಶ್ವರ ಪುಣ್ಯಾಶ್ರಮ ಸಂಗೀತ ಮಹಾವಿದ್ಯಾಲಯದಲ್ಲಿ ಹಏನೈದು ವರ್ಷ ಸಂಗೀತಾಭ್ಯಾಸ ಪಡೆದು ಪಾಂಡಿತ್ಯ ಸಂಪಾದನೆ. ೧೯೮೧ರಿಂದ ಬಸವಕಲ್ಯಾಣದ ಸರಕಾಲ ಪದವಿಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಕೆ. ಬೀದರ್, ಹೈದರಾಬಾದ್, ಗುಲ್ಬರ್ಗಾ, ಬಸವಕಲ್ಯಾಣ ಮುಂತಾದ ಸ್ಥಳಗಳಲ್ಲಿ ಕಾರ್ಯಕ್ರಮ ನೀಡಿಕೆ. ಹೈದರಾಬಾದ್ ಹಾಗೂ ಗುಲ್ಬರ್ಗಾ ಆಕಾಶವಾಣಿ ಕೇಂದ್ರಗಳಿಂದಲೂ ಕಾರ್ಯಕ್ರಮ ಪ್ರಸಾರ.
ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಕ್ತಿ ಸಂಗೀತ ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ಸುಶ್ರಾವ್ಯವಾಗಿ ಹಾಡಿ ಶೋತೃಗಳ ಮನರಂಜಿಸುತ್ತಿರುವ ಶ್ರೀ ಶೇಷಪ್ಪಾ ಗಟ್ಟೂರು ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಸಿದ್ಧರಾಮ ಜಂಬಲದಿನ್ನಿ ಪ್ರಶಸ್ತಿ, ಉತ್ತಮ ಸಂಗೀತ ಶಿಕ್ಷಕರೆಂಬ ಪುರಸ್ಕಾರ, ಅಭಿನಂದನಾ ಗ್ರಂಥ ಅರ್ಪಣೆ ಮುಂತಾದವು ಶ್ರೀ ಶೇಷಪ್ಪಾ ಗಬ್ಬರು ಅವಲಗೆ ಸಂದ ಇತರ ಪ್ರಶಸ್ತಿ ಪುರಸ್ಕಾರಗಳು. ಪ್ರಸಕ್ತ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರು.
ಅಚಲ ಶ್ರದ್ಧೆ, ಸತತ ಸಾಧನೆಯಿಂದ ಸಿದ್ಧಿ ಗಳಿಸಿ, ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಿಂದೂಸ್ತಾನ ಸಂಗೀತ ವಿದ್ವಾಂಸರು ಶ್ರೀ ಶೇಷಪ್ಪಾ ಗಬ್ಬರು ಅವರು.

Categories
ರಂಗಭೂಮಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ

ಕನ್ನಡ ರಂಗಭೂಮಿಯಲ್ಲಿ ನಟಿಯಾಗಿ, ನಾಟಕ ನಿರ್ದೇಶಕಿಯಾಗಿ ಜನಮನ್ನಣೆ ಗಳಿಸಿರುವ ಪ್ರತಿಭಾವಂತ ರಂಗಪ್ರತಿಭೆ ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ ಅವರು.
ಚಿಕ್ಕಂದಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. ಗುಬ್ಬಿ ಕಂಪನಿ, ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಬಾಲ ನಟಿಯಾಗಿ ಅಭಿನಯ. ನಂತರ ಶಾರದಾ ನಾಟಕ ಮಂಡಳಿ, ಹಿರಣ್ಣಯ್ಯ ಮಿತ್ರ ಮಂಡಳಿ, ಹಲಗೇಲಿ ಜಟ್ಟೆಪ್ಪ ಕಂಪನಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯ, ಸಂಪತ್ತಿಗೆ ಸವಾಲ್, ಮಲಮಗಳು, ಕಿತ್ತೂರ ಚೆನ್ನಮ್ಮ, ಸಿಂಧೂರ ಲಕ್ಷ್ಮಣ ಮುಂತಾದ ಹಲವಾರು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು ಆಕಾಶವಾಣಿ ಬಿ.ಹೈ, ಗ್ರೇಡ್ ಕಲಾವಿದೆ. ಸಂಗೀತ ಹಾಗೂ ನೃತ್ಯಕಲೆಗಳನ್ನು ಅಭ್ಯಾಸ ಮಾಡಿರುವ ಶ್ರೀಮತಿ ಸರೋಜಮ್ಮ ಧುತ್ತರಣ ಅವರು ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ರಂಗ ಕಲಾವಿದೆ.
ಉತ್ತರ ಕರ್ನಾಟಕದ ಹೆಸರಾಂತ ನಾಟಕ ರಚನಕಾರರಾದ ಶ್ರೀ ಪಿ.ಬಿ. ಧುತ್ತರಗಿಯವರ ಪತ್ನಿಯಾಗಿ ಹದಿನಾಲ್ಕು ವರ್ಷಗಳಿಂದ ಶ್ರೀ ಅಭಿನವ ಕಲಾರಂಗ ನಾಟಕ ಕಂಪನಿಯನ್ನು ನಡೆಸಿಕೊಂಡು ಬರುತ್ತಿರುವ ಹಿಲಮೆಗೆ ಪಾತ್ರರು. ಶ್ರೀ ಪಿ.ಬಿ. ಧುತ್ತರಣಯವರ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ, ನಾಟಕರಂಗದಲ್ಲಿ ಹೊಸಹೊಸ ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮೂರ್ತಿಗೆ ಭಾಜನರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ನವರಸಗಳನ್ನು ಅದ್ಭುತವಾಗಿ ಅಭಿನಯಿಸಿ ಭಾವಪರವಶಗೊಆಸಬಲ್ಲ ಹಾಗೂ ಕನ್ನಡ ವೃತ್ತಿ ರಂಗಭೂಮಿಯ ಅಭಿಜಾತ ಕಲಾವಿದೆ ನಾಟ್ಯಕಲಾ ಸಂಗೀತರತ್ನ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಲಾಡ ಸಾಹೇಬ

ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿನ ಹಿಲಯ ತಲೆಮಾಲನ ಪ್ರತಿಭಾವಂತ ಕಲಾವಿದರು ಶ್ರೀ ಲಾಡ ಸಾಹೇಬ ಅವರು.
೧೯೧೬ರಲ್ಲಿ ಬಿಜಾಪುರ ಜಿಲ್ಲೆ ಬಾಗಲಕೋಟೆ ತಾಲೂಕಿನ ಅಮೀನಗಡದಲ್ಲಿ ಜನನ. ಎಸ್.ಆರ್. ಕಂಠಿ ನಾಟಕ ಕಂಪನಿಯಿಂದ ನಾಟಕ ರಂಗಕ್ಕೆ ಪದಾರ್ಪಣ. ನಂತರ ಶಿರಹಟ್ಟಿ ವೆಂಕೋಬರಾಯರ ಕಂಪನಿ, ಭಾಗ್ಯದಯ ನಾಟ್ಯ ಸಂಘ, ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ, ಶ್ರೀ ಶೈಲ ನಾಟಕ ಸಂಘ ಮೊದಲಾದ ಹಲವಾರು ವೃತ್ತಿ ನಾಟಕ ಕಂಪನಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯ. ಅಲ್ಲದೆ ಸ್ಥಳೀಯ ಹವ್ಯಾಸಿ ಕಂಪನಿಗಳಲ್ಲಿಯೂ ಅಭಿನಯಿಸಿರುವ ಶ್ರೀ ಲಾಡ ಸಾಹೇಬ ಅವರು ನಟರಾಜ ನಾಟ್ಯ ಸಂಘ ವೃತ್ತಿ ನಾಟಕ ಕಂಪನಿ ಸ್ಥಾಪಕರು. ಶ್ರೀ ಲಾಡ ಸಾಹೇಬ ಅವರು ಅಭಿನಯಿಸಿದ ಕೃಷ್ಣ, ಶಿವಾಜಿ, ನಾರದ ಮೊದಲಾದ ಪೌರಾಣಿಕ ಪಾತ್ರಗಳಲ್ಲದೆ ಪಠಾಣ ಪಾಶ ನಾಟಕದ ಒಕ್ಕಲಗಿತ್ತಿ, ಮಲ್ಲಮ್ಮ ನಾಟಕದ ನಾಗಮ್ಮ, ಪ್ರಪಂಚ ಪರೀಕ್ಷೆ ನಾಟಕದ ದೇವರಾಣಿ ವೈದಲಾದ ಸ್ತ್ರೀಪಾತ್ರಗಳು ಜನಪ್ರಿಯವಾದವು. ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳ ಪ್ರಮುಖ ಪಾತ್ರಗಳಲ್ಲಿಯೂ ಅದ್ಭುತವಾಗಿ ಅಭಿನಯಿಸಿದ ಹೆಗ್ಗಳಿಕೆ ಶ್ರೀಯುತರದು.
ಸುಮಾರು ಎಪ್ಪತ್ತು ವರ್ಷಗಳಗೂ ಹೆಚ್ಚು ಕಾಲ ಕಲಾಸೇವೆಯಲ್ಲಿ ನಿರತರಾದ ಶ್ರೀ ಲಾಡ ಸಾಹೇಬ ಅವರು ತನ್ಮಯತೆಯಿಂದ ಅಭಿಯಿಸಿದ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು.
ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಪುರುಷ ಪಾತ್ರ ಹಾಗೂ ಸ್ತ್ರೀಪಾತ್ರ ಎರಡರಲ್ಲಿಯೂ ಅಭಿನಯಿಸಿ ತಮ್ಮ ಅಭಿನಯ ಕೌಶಲದಿಂದ ಪ್ರೇಕ್ಷಕರ ಮನಸೂರೆಗೊಂಡ ವೃತ್ತಿ ರಂಗಭೂಮಿಯ ಥೀಮಂತ ಕಲಾವಿದರ ಶ್ರೀ ಲಾಡ ಸಾಹೇಬ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಜಿ. ಎನ್. ಚಕ್ರವರ್ತಿ

ಋದ್ವೇದ ಕುಲಿತು ಉನ್ನತ ಮಟ್ಟದ ಅಧ್ಯಯನಕ್ಕೆ ಹೆಸರಾದ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.
೧೯೧೨ರಲ್ಲಿ ಜನನ. ಸಂಸ್ಕೃತದಲ್ಲಿ ಎಂ.ಎ. ಪದವಿ, ಮೈಸೂಲನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ, ನಂತರ ೧೯೪೬ ಲಂದ ೭೨ರ ವರೆಗೆ ಮೈಸೂಲಿನ ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಕೆ. ೧೯೭೨ ಲಂದ ೭೭ರ ವರೆಗೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನಗಳ ವಿಭಾಗದಲ್ಲಿ ಸಂಸ್ಕೃತದ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಕೆ.
ವಿಸ್ತ್ರತ ಟಿಪ್ಪಣಿ ಮತ್ತು ವಿವರಣೆಗಳೊಂದಿಗೆ ಕನ್ನಡದಲ್ಲಿ ಋಗ್ವದ ೩೦ ಸಂಪುಟಗಳ ಸಂಪಾದನೆಯ ಕಾರ್ಯನಿರ್ವಹಣೆ. ಋಕ್ಸಂಹಿತಾ ಸಾರ, ಧರ್ಮಚಕ್ರ, ಋಗ್ ವೇದದಲ್ಲಿ ವಿಶ್ವಸಾಮರಸ್ಯ, ಇತಿಹಾಸ ಪ್ರದೀಪ, ಸಂಸ್ಕೃತ-ಕನ್ನಡ ನಿಘಂಟು – ಪ್ರೊ. ಜಿ. ಎನ್. ಚಕ್ರವರ್ತಿ ಅವರು ರಚಿಸಿದ ಪ್ರಮುಖ ಕೃತಿಗಳು. ಇಂಗ್ಲಿಷಿನಲ್ಲಿ ‘ಐ ಕಾನ್ಸೆಪ್ಟ್ ಆಫ್ ಕಾಸ್ಮಿಕ್ ಹಾರ್ಮೊನಿ ಇನ್ ಲಗ್ವೇದ, ವ್ಯಾಸಾಸ್ ಫಿಲಾಸಫಿ ಆಫ್ ಹಿಸ್ಟಲ, ದಿ ಪ್ರಾಬ್ಲೆಮ್ ಆಫ್ ಈವಿಲ್ ಇನ್ ದಿ ಮಹಾಭಾರತ’ ಕೃತಿಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರು. ಅಲ್ಲದೆ, ವಿವಿಧ ಪತ್ರಿಕೆಗಳಲ್ಲಿ ಶ್ರೀಯುತರ ಲೇಖನಗಳು ಪ್ರಕಟವಾಗಿವೆ.
೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವದ ಪ್ರಶಸ್ತಿ, ಭಾರತೀಯ ವಿದ್ಯಾಭವನದಿಂದ ವೇದರತ್ನ ಪುರಸ್ಕಾರ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ತೊಂಬತ್ತೈದರ ವಯೋವೃದ್ಧರೂ, ಜ್ಞಾನವೃದ್ಧರೂ, ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯಲ್ಲೂ ಪಾಂಡಿತ್ಯ- ಪಡೆಬರುವ ವಿದ್ವಾಂಸರು ಪ್ರೊ. ಜಿ. ಎನ್. ಚಕ್ರವರ್ತಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಮ.ನ. ಜವರಯ್ಯ

ಕಾವ್ಯ, ನಾಟಕ, ಸಣ್ಣಕತೆ, ಕಾದಂಬಲ, ಅನುವಾದ, ವಿಮರ್ಶೆ, ಸಂಶೋಧನೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಹುಮುಖ ಪ್ರತಿಭಾವಂತ ಸಾಹಿತಿ ಡಾ. ಮ.ನ. ಜವರಯ್ಯ ಅವರು.
ಮೈಸೂರು ಸೀಮೆಯ ಲಾವಣಿ ಪಲಣತರಾದ ಶ್ರೀ ಮಲಚಾಮಯ್ಯನವರ ಮಗನಾದ ಡಾ. ಮ.ನ. ಜವರಯ್ಯ ಅವರು ಮನಜ ಎಂದೇ ಪ್ರಸಿದ್ಧರು. ಎಂಎ.ಪಿಹೆಚ್.ಡಿಡಿ.ಅಟ್ಎಲ್ಎಲ್.ಐ ಪದವೀಧರರು. ಇಪ್ಪತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು, ನೂಲಪ್ಪತ್ತಕ್ಕೂ ಹೆಚ್ಚು ಲೇಖನಗಳ ಕರ್ತೃ.
ಭಾರತರತ್ನ ಬಿ.ಆರ್.ಅಂಬೇಡ್ಕರ್ ಅವರನ್ನು ಕುಲತು ಬರೆದ ಗ್ರಂಥಗಳು ಅತ್ಯಂತ ಮಹತ್ವಪೂರ್ಣವಾದವು. ಕೇಳು ಜಗಮಾದಿಗ ಹೊಲೆಯ, ಗುಲಾಮಿ (ಕವನ ಸಂಕಲನಗಳು), ಜಲ(ನಾಟಕ), ಬುರುಡೆಗೆ ಸ್ವರ್ಣ(ನಾಟಕ), ಮಾಲ (ಕಾದಂಬಲ),ದಂತ ವರ್ಗದ ಶರಣರು ಮತ್ತು ಶರಣೆಯರು-ಒಂದು ಅಧ್ಯಯನ, ಅಂಬೇಡ್ಕರ್ ಜೀವನಚಲತ್ರೆ, ಗಾಂಧಿ-ಅಂಬೇಡ್ಕರ್ ಧೈಯ-ಧೋರಣಿ (ಸಂಶೋಧನಾ ಗ್ರಂಥಗಳು), ಜಾತಿ ವಿನಾಶ, ರಾನಡೆ ಗಾಂಧಿ ಮತ್ತು ಜಿನ್ನಾ, ಬುದ್ಧ ಮತ್ತು ಕಾರ್ಲ್ಮಾರ್ಕ್ಸ್(ಅನುವಾದ ಕೃತಿಗಳು) ಮುಂತಾದವು ಡಾ. ಮ.ನ. ಜವರಯ್ಯ ಅವರ ಪ್ರಮುಖ ಕೃತಿಗಳು.
ಜಲ ನಾಟಕಕ್ಕೆ ಮತ್ತು ಮಾಣ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಪರಂಪರೆ ಹಾಗೂ ದಅತ ಬಂಡಾಯ ಸಾಹಿತ್ಯ ಸಮಗ್ರ ಅಧ್ಯಯನ ಗ್ರಂಥಕ್ಕೆ ಕಾವ್ಯಾನಂದ ಪ್ರಶಸ್ತಿ, ಅಂಬೇಡ್ಕರ್ ವಿಚಾರ ಸಾಹಿತ್ಯ ಸಮಗ್ರ ಅಧ್ಯಯನಕ್ಕೆ ವಿಶ್ವ ಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದವು ಡಾ.ಮನಃ ಅವಲಗೆ ಸಂದ ಪ್ರಶಸ್ತಿ ಪುರಸ್ಕಾರಗಳು. ಅಧ್ಯಯನಶೀಲತೆ, ಅವ್ಯಾಹತ ಸಾಹಿತ್ಯ ರಚನೆಯಿಂದ ಕನ್ನಡ ಸಾಹಿತ್ಯಕ್ಕೆ ಮೌಂಕ ಕೊಡುಗೆ ನೀಡಿದವರು ಡಾ. ಮ.ನ. ಜವರಯ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಚಿ. ಶ್ರೀನಿವಾಸರಾಜು

ಪ್ರಗತಿಶೀಲ ಚಿಂತನೆ ಮತ್ತು ವಿಚಾರಧಾರೆಗಳಿಂದ ಕನ್ನಡ ಸಾರಸ್ವತ ಪ್ರಪಂಚದಲ್ಲ ಮಹತ್ವದ ಸ್ಥಾನವನ್ನು ಪಡೆದಿರುವ ವಿಮರ್ಶಕರು ಹಾಗೂ ಚಿಂತಕರು ಪ್ರೊ. ಚಿ. ಶ್ರೀನಿವಾಸರಾಜು ಅವರು. ೧೯೪೧ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನನ. ಎಂ.ಎ.(ಕನ್ನಡ) ಪದವಿ, ಇಂಡಾಲಜಿಯಲ್ಲಿ ಡಿಪ್ಲೋಮಾ ಗಳಿಕೆ. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಕೆ. ಪ್ರೊ. ಚಿ. ಶ್ರೀನಿವಾಸರಾಜು ಅವರು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಿಗೆ ಪಲಪುಷ್ಟಿಯನ್ನು ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಕಟ್ಟಿಸಿ ಪ್ರೋತ್ಸಾಹ ನೀಡಿದ ಹಿಲಮೆಗೆ ಪಾತ್ರರು.
ಐದು ಮೂಕ ನಾಟಕಗಳು, ಮೂರು ಏಕಾಂಕಗಳು, ಹಆಯ ಮೇಲಿನ ಸದ್ದು, ನಿಮ್ಮಮಣ(ನಾಟಕಗಳು); ಛಸನಾಲ ಬಂಧು(ಕವನ ಸಂಕಲನ); ಬಾವಿ ಕಟ್ಟೆಯ ಬಳೀ (ಅನುವಾದ), ಆಗಾಗ(ಲೇಖನಗಳು)- ಮುಂತಾದವು ಪ್ರೊ. ಚಿ. ಶ್ರೀನಿವಾಸರಾಜು ಅವರ ಪ್ರಮುಖ ಕೃತಿಗಳು.
ಪ್ರೊ. ಚಿ. ಶ್ರೀನಿವಾಸರಾಜು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪಲಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸಂಸ ಪ್ರಶಸ್ತಿ, ಮಾನು ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ
ಸಂಕೋಚ ಸ್ವಭಾವದ, ಅಚ್ಚುಕಟ್ಟಾದ ಕೆಲಸಕ್ಕೆ ಹೆಸರಾದ, ಚಿಂತನಪರ ವಿಮರ್ಶಕರು ಹಾಗೂ ಸದ್ದಿಲ್ಲದ ಕನ್ನಡ ಸಾಹಿತ್ಯ ಪಲಚಾರಕರು ಪ್ರೊ. ಚಿ. ಶ್ರೀನಿವಾಸರಾಜು ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ.ಸಿ.ಎನ್. ರಾಮಚಂದ್ರನ್

ಸತತ ಪಲಶ್ರಮ, ಆಳವಾದ ಅಧ್ಯಯನ, ವೈಚಾಲಕ ಮನೋಭಾವ, ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದವರು ಡಾ.ಸಿ.ಎನ್. ರಾಮಚಂದ್ರನ್ ಅವರು.
೧೯೩೬ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಲುಂದ ಗ್ರಾಮದಲ್ಲಿ ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ.ಪದವಿ, ಒಹಾಯೋದ ಮಿಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ, ಅಲ್ಲದೆ ಎಲ್ಎಲ್.ಬಿ ಪದವೀಧರರು. ಸೊಲ್ಲಾಪುರ,ಕೊಲ್ಲಾಪುರ, ಸೊಮಾಲಿಯಾ,ನಿಪ್ಪಾಣಿ, ಅಮೆಲಕ, ಸೌದಿ ಅರೇಬಿಯಾ ಮುಂತಾದ ಸ್ಥಳಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಕೆ. ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್ಗಳ ಸದಸ್ಯರಾಗಿ ವ್ಯಾಪಕ ಅನುಭವ ಗಳಿಕೆ.
ಶೋಧ(ಕಾದಂಬಲ), ಶಿಲ್ಪವಿನ್ಯಾಸ, ಸ್ವರೂಪ, ಸಾಹಿತ್ಯ ವಿಮರ್ಶೆ, ಆಶಯ-ಅಕೃತಿ, ವಸಾಹತೋತ್ತರ ಚಿಂತನೆ(ವಿಮರ್ಶಾ ಕೃತಿಗಳು) ಅಮಾಸ, ಮಲೆ ಮಾದೇಶ್ವರ, ಬೇಟೆಯ ನೆನಪುಗಳು, ಕುವೆಂಪು ೨೧ ಕವನಗಳು(ಇಂಗ್ಲಿಷಿಗೆ ಅನುವಾದಿಸಿದ ಕೃತಿಗಳು) ಸೆಲ್ಫ್ ಕಾನ್ನಿಯಸ್ ಸ್ಟಕ್ಟರ್, ಅಮೆಲಕನ್ ಪೊದ್ರಿ(ಇಂಗ್ಲಿಷ್ ಕೃತಿಗಳು)-ಮುಂತಾದವು ಡಾ. ಸಿ.ಎನ್. ರಾಮಚಂದ್ರನ್ ಅವರ ಪ್ರಮುಖ ಕೃತಿಗಳು.
ಡಾ. ಸಿ.ಎನ್. ರಾಮಚಂದ್ರನ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಇನಾಂದಾರ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಥಾ ಅವಾರ್ಡ್ ಮುಂತಾದ ಪ್ರಶಸ್ತಿಗಳಿಗೆ ಭಾಜನರು.
ಬಹು ಶಿಸ್ತೀಯ ಅಧ್ಯಯನಕ್ಕೆ ಹೆಸರಾದ ಹಾಗೂ ವಿಮರ್ಶೆ, ಅನುವಾದಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದವರು ಡಾ.ಸಿ.ಎನ್. ರಾಮಚಂದ್ರನ್ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಸುಮಿತ್ರಾ ಗಾಂಧಿ ಕುಲಕರ್ಣಿ

ಮಹಾತ್ಮಾಗಾಂಧಿಯವರ ಮೊಮ್ಮಗಳು, ಅಡಳಿತ ಸಾಹಿತ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ದುಡಿದವರು ಶ್ರೀಮತಿ ಸುಮಿತ್ರಾ ಗಾ೦ಛಿ ಕುಲಕರ್ಣಿ ಅವರು. ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡುವ ಮೂಲಕ ಗಮನ ಸೆಳೆದಿರುವ ಸುಮಿತ್ರಾ ಗಾಂಧಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಡನೆ ಮೊದಲ ಬ್ಯಾಂಕ್ ಪಡೆದು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಎಂ.ಎ. ಪದವಿ ಅಂತರ್ ರಾಷ್ಟ್ರೀಯ ಸಂಬಂಧಗಳಲ್ಲಿ ಅಮೆಲಕದ ಕ್ಲಾರ್ಕ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಹಾಗೂ ನಾಗಪುರ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಗಳಿಸಿದವರು. ಹಏನೇಳು ವರ್ಷಗಳ ಕಾಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಕೇಂದ್ರ ಸರ್ಕಾರದ ಯೋಜನಾ ಆಯೋಗ ಹಾಗೂ ಹಣಕಾಸು ಮಂತ್ರಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸುಮಿತ್ರಾ ಗಾಂಧಿ ಕುಲಕರ್ಣಿ ಅವರು ಜನಪ್ರಿಯ ಸಾಹಿತಿ, ತಾತ ಮಹಾತ್ಮಾಗಾಂಧಿಯವರ ಜೀವನ ಚಲತ್ರೆ ರಚಿಸಿರುವ ಇವರು ಅನೇಕ ರಾಜಕೀಯ ವಿಶ್ಲೇಷಣಾ ಲೇಖನಗಳನ್ನು ಬರೆದವರು. ಇವರು ಬರೆದ ‘ಗಾಂಧಿ’ ಕೃತಿ ಅನೇಕ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೀವನ ಚಲತ್ರೆಗಳನ್ನು ರಚಿಸಿರುವ ಇವರು ‘ಅನ್ಮೋಲ್ ವಿರಾಸತ್’ ಎಂಬ ಹಿಂಬ ಕೃತಿಯನ್ನು ಮೂರು ಸಂಪುಟಗಳಲ್ಲಿ ರಚಿಸಿದ್ದಾರೆ.
ರಾಜ್ಯಸಭೆಗೆ ೧೯೭೨ರಲ್ಲಿ ಆಯ್ಕೆಯಾದ ಸುಮಿತ್ರಾಗಾಂಧಿ ಕುಲಕರ್ಣಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಸದಸ್ಯರಾಗಿದ್ದರು. ಫಿಜಿ ದೇಶಕ್ಕೆ ಪ್ರವಾಸಕ್ಕಾಗಿ ಹೋಗಿದ್ದ ಭಾರತೀಯ ಸೌಹಾರ್ದ ನಿಯೋಗದ ಅಧ್ಯಕ್ಷರಾಗಿದ್ದ
ಇವರು ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆ ಕುಲತ ಕೇಂದ್ರ ಸಮಿತಿಯ ಪಲಶೀಲನಾ ಘಟಕದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.