Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಮುನಿವೆಂಕಟಪ್ಪ ಸಂಜಪ್ಪ

ಭಾರತೀಯ ಸಸ್ಯ ಸರ್ವೇಕ್ಷಣಾ ನಿರ್ದೇಶಕರಾದ ಎಸ್.ಸಂಜಪ್ಪ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದವರು. ಪ್ರಸಕ್ತ ಸಿ.ಎಸ್.ಐ.ಆರ್ ವಿಜ್ಞಾನಿಯಾಗಿರುವ ಎಸ್.ಸಂಜಪ್ಪ ಅವರು ರಾಷ್ಟ್ರೀಯ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಸಂಜಪ್ಪ ಅವರು ಟಾನಮಿ ಸಂಶೋಧನೆಯಲ್ಲಿ ಪರಿಣತರು.

ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಸ್ಯ ಶಾಸ್ತ್ರಜ್ಞರಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಸಂಜಪ್ಪ ಅವರು ಸಸ್ಯಶಾಸ್ತ್ರಕ್ಕೆ ಮುವ್ವತ್ತೈದು ನೂತನ ಪ್ರಬೇಧಗಳನ್ನು ಪತ್ತೆ ಹಚ್ಚಿಕೊಟ್ಟವರು. ಹಲವಾರು ಸಸ್ಯಶಾಸ್ತ್ರ ಕೃತಿಗಳ ರಚನಾಕಾರರಾದ ಸಂಜಪ್ಪ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಇವರಿಗೆ ಪ್ರತಿಷ್ಠಿತ ಬಿ.ವಿ.ಶಿವರಂಜನ್ ಚಿನ್ನದ ಪದಕ, ಡಾ|| ಜಿ.ಪಾಣಿಗ್ರಾಹಿ ಸ್ಮರಣ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಜಾನಕಿ ಅಮ್ಮಾಳ್ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಎಂ.ಆರ್.ಶ್ರೀನಿವಾಸನ್

ರಾಷ್ಟ್ರದ ಅಣುಶಕ್ತಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಎಂ.ಆರ್.ಶ್ರೀನಿವಾಸನ್ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಕೇಂದ್ರ ಸರ್ಕಾರದ ಅಣು ಇಂಧನ ಇಲಾಖೆಗೆ ಕಾಲಿಟ್ಟರು.

ದೇಶದ ಮೊಟ್ಟಮೊದಲ ಅಣುಇಂಧನ ಕೇಂದ್ರದ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶ್ರೀನಿವಾಸನ್ ಅವರು ನಂತರ ಮದರಾಸಿನ ಅಣುವಿದ್ಯುತ್ ಕೇಂದ್ರದ ನೇತೃತ್ವ ವಹಿಸಿದವರು. ಭಾರತದ ಅಣು ಇಂಧನ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಅಣು ಇಂಧನ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸನ್ ಭಾರತೀಯ ನ್ಯೂಕ್ಲಿಯ ಪವರ್ ಕಾರ್ಪೋರೇಷನ್‌ ಸ್ಥಾಪಕ ಅಧ್ಯಕ್ಷರು.

ದೇಶದ ಎಲ್ಲ ನ್ಯೂಕ್ಲಿಯರ್ ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀನಿವಾಸನ್ ಗ್ಯಾಸ್ ಟರ್ಬೈನ್ ತಂತ್ರಜ್ಞಾನದಲ್ಲಿಯೂ ನೈಪುಣ್ಯತೆ ಪಡೆದವರು. ದೇಶದ ಪ್ರತಿಷ್ಠಿತ ಪದ್ಮವಿಭೂಷಣ, ಭಾರತೀಯ ಇಚಿಜಿನಿಯರಿಂಗ್ ಇನ್ಸಿಟ್ಯೂಟಿನ ಶ್ರೇಷ್ಠ ವಿನ್ಯಾಸಕಾರ, ಹೋಮಿ ಬಾಬಾ ಪ್ರಶಸ್ತಿ ಸೇರಿದಂತೆ ಹಲವಾರು ದೇಶವಿದೇಶಗಳ ಉನ್ನತ ಗೌರವ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಅಬ್ದುಲ್ ಅಜೀಜ್

ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜ ಶಿಕ್ಷಣದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಸಮಾಜ ವಿಜ್ಞಾನಿಗಳಲ್ಲಿ ಡಾ|| ಅಬ್ದುಲ್ ಅಜೀಜ್ ಅವರು ಅಗ್ರಮಾನ್ಯರು. ಕೋಲಾರದವರಾದ ಇವರು ಅರ್ಥಶಾಸ್ತ್ರವನ್ನು ಅಭ್ಯಾಸ ಮಾಡಿದ್ದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ.
ಬೆಂಗಳೂರಿನಲ್ಲಿರುವ ಐಸೆಕ್ (ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡಿದ ಅಬ್ದುಲ್ ಅಜೀಜ್ ಅವರು ಹಲವು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ದಶಕಗಳಿಂದ ಗ್ರಾಮೀಣಾಭಿವೃದ್ಧಿ, ಪ್ರಾದೇಶಿಕ ಅಸಮಾನತೆ, ಅಭಿವೃದ್ಧಿ ವಿಕೇಂದ್ರೀಕರಣ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸುತ್ತ ಬಂದಿರುವ ಅಬ್ದುಲ್ ಅಜೀಜ್ ಅವರು ಕರ್ನಾಟಕ ಸರ್ಕಾರದ ಅನೇಕ ಕಾರ್ಯಕ್ರಮಗಳಿಗೆ ಪ್ರಮುಖ ನೀತಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಇವರು ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಎ.ಎಸ್. ಕಿರಣ್ಕುಮಾರ್

ಇಸ್ರೋ ವಿಜ್ಞಾನಿಯಾಗಿದ್ದು ಎ.ಎಸ್. ಕಿರಣ್ ಕುಮಾರ್ ಅವರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ದೇಶವಿದೇಶಗಳಲ್ಲಿ ಹೆಸರು ಮಾಡಿದ್ದು, ಪ್ರಸ್ಥುತ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಕಾರ್ಯಾವಧಿಯಲ್ಲಿ ಅನ್ನೋ ಸ್ಯಾಟ್ ಎಂಬ ಉಪಗ್ರಹವೂ ಸೇರಿದಂತೆ ಹತ್ತು ಹಲವು ಆರೋಗ್ಯ, ಶಿಕ್ಷಣ ಸಂಬಂಧಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸುವಲ್ಲಿ ಇಸ್ರೋ ಸಫಲವಾಗಿದೆ. MOM ಮಿಷನ್ ನೊಂದಿಗೂ ಕಿರಣಕುಮಾರ್ ಅವರ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಪಿ. ಬಲರಾಮ್

ಮಾಲಿಕ್ಯುಲರ್ ಬಯೋಫಿಜಿಕ್ಸ್ ಹಾಗೂ ಬಯೋಆರಾನಿಕ್ ಕೆಮೆಸ್ಟ್ರಿಗಳಲ್ಲಿ ವಿಶೇಷ ತಜ್ಞರಾಗಿರುವ ಖ್ಯಾತ ವಿಜ್ಞಾನಿಗಳು ಪ್ರೊ. ಪಿ. ಬಲರಾಮ್ ಅವರು.
ಐ.ಐ.ಟಿ. ಕಾನಪುರ ದಿಂದ ಎಂ.ಎಸ್‌ಸಿ ಪದವಿ ಹಾಗೂ ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಗಳಿಕೆ.
ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಮತ್ತು ಥರ್ಡ್‌ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆಗಳ ಫೆಲೋ.
ಸುಮಾರು ೪೦೦ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದು ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಉಪನ್ಯಾಸಗಳನ್ನು ನೀಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ‘ಎಡಿಟೋರಿಯಲ್ ಬೋರ್ಡ್ಸ್ ಆಫ್ ಜರ್ನಲ್ಸ್ ನಲ್ಲಿ ಸೇವೆಸಲ್ಲಿಕೆ. ಭಾರತ ಸರ್ಕಾರದ ಅನೇಕ ಸಮಿತಿಗಳಲ್ಲಿ ಸದಸ್ಯರು.
ಶಾಂತಿ ಸ್ವರೂಪ ಭಟ್ನಾಗರ್ ಬಹುಮಾನ, ಜಿ.ಡಿ. ಬಿರ್ಲಾ ಪ್ರಶಸ್ತಿ, ಅಲುಮ್ಮಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಶ್ರೀಯುತರ ಅನನ್ಯ ಸಾಧನೆಗೆ ಅನೇಕಾನೇಕ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ. ೧೯೯೫ ರಿಂದ ‘ಕರೆಂಟ್ ಸೈನ್ಸ್’ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಕೆ.
ಪ್ರಸ್ತುತ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ನ ನಿರ್ದೇಶಕರು, ಪ್ರಧಾನ ಮಂತ್ರಿಗಳ ವಿಜ್ಞಾನ ಸಲಹಾ ಮಂಡಳಿ ಮತ್ತು ಕೇಂದ್ರ ಮಂತ್ರಿಮಂಡಳದ ವಿಜ್ಞಾನ ಸಲಹಾಸಮಿತಿಯ ಸದಸ್ಯರಾಗಿದ್ದಾರೆ ಪ್ರಸಿದ್ಧ ವಿಜ್ಞಾನಿ ಪ್ರೊ. ಪಿ. ಬಲರಾಮ್ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಎಂ. ಅಣ್ಣಾದೊರೈ

ಭಾರತದ ಯಶಸ್ವಿ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗೆ ಶ್ರಮಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳಲ್ಲಿ ಪ್ರಮುಖವಾಗಿ ನಿಲ್ಲುವ ವಿಜ್ಞಾನಿ ಎಂ. ಅಣ್ಣಾದೊರೈ
ಚೆನ್ನೈನಲ್ಲಿ ೧೯೫೮ರ ಜುಲೈ ೨ರಂದು ಜನನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಸೂಚನೆ ನೀಡಿದವರು. ಕೊಯಮತ್ತೂರಿನ ಪಿಎಸ್‌ಜಿ ತಾಂತ್ರಿಕ ಕಾಲೇಜಿನಲ್ಲಿ ಅಫ್ರೆಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಇ ಪದವೀಧರರು.
೧೯೮೨ರಲ್ಲಿ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರ ಸೇರುವ ಮೂಲಕ ವೃತ್ತಿ ಬದುಕಿನ ಆರಂಭ. ಸ್ಯಾಟಲೈಟ್ ಸಿಮ್ಯುಲೇಟರ್ ಅಭಿವೃದ್ಧಿ ಪಡಿಸಿದ ತಂಡದ ನಾಯಕತ್ವ, ಐಆರ್‌ಎಸ್‌-೧ಎ, ಐಆರ್‌ಎಸ್-೧ಬಿ, ಇನ್ಸಾಟ್ – ೨ಎ ಮತ್ತು ಇನ್ಸಾಟ್ -೨ಬಿ ಉಪಗ್ರಹ ಕಾರ್ಯಾಚರಣೆಯ ತಂಡದ ವ್ಯವಸ್ಥಾಪಕರು.
ಇನ್ಸಾಟ್ ಸರಣಿಯ ೨ಸಿ, ೨ಡಿ, ೩ಬಿ, ೨೪, ೩೫, ಜಿಸ್ಯಾಟ್-೧ ಉಪಗ್ರಹಣ ಉಡಾವಣೆಯ ಯೋಜನೆಯ ನಿರ್ದೇಶಕರು. ೨೦೦೪ರಲ್ಲಿ ನಡೆದ ಚಂದ್ರಯಾನ-೧ರ ಸಿದ್ಧತೆಯ ಯೋಜನಾ ನಿರ್ದೇಶಕರಾಗಿದ್ದ ಅವರು ಇತ್ತೀಚೆಗಷ್ಟೇ ಯಶಸ್ವಿಯಾಗಿ ನಡೆದ ಚಂದ್ರಯಾನ-೧ ಕಾರ್ಯಾಚರಣೆಯಲ್ಲಿಯೂ ಮುಂದಾಳತ್ವ ವಹಿಸಿದ್ದರು.
ಉಪಗ್ರಹ ಉಡಾವಣಾ ಕಾರ್ಯಾಚರಣೆ, ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತಂತೆ ಇದುವರೆಗೂ ಅವರು ಮಂಡಿಸಿದ ಪ್ರಬಂಧಗಳ ಸಂಖ್ಯೆ ಸುಮಾರು ೫೫. ಉಪಗ್ರಹ ಉಡಾವಣೆ ಯೋಜನೆಯಲ್ಲಿನ ಕೊಡುಗೆಗಾಗಿ ಇಸ್ರೋದ ಪ್ರಮಾಣಪತ್ರ, ವಿಕ್ರಮ್ ಸಾರಾಭಾಯಿ ಸಂಶೋಧನಾ ಪ್ರಶಸ್ತಿ, ಇನ್ಸಾಟ್ ೨೩ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ತಂಡವನ್ನು ಮುನ್ನೆಡೆಸಿದ ಸಾಧನೆಗಾಗಿ ಪ್ರಶಸ್ತಿಗಳು ಸಂದಿವೆ.
ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದ ನಾಡಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಶ್ರೀ ಎಂ. ಅಣ್ಣಾದೊರೈ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಎಸ್.ಕೆ. ಶಿವಕುಮಾರ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು ಶ್ರೀರಂಗಪಟ್ಟಣ ಕೃಷ್ಣಮೂರ್ತಿ ಶಿವಕುಮಾರ್.
೧೯೯೮ರಿಂದಲೂ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್‌ವರ್ಕ್‌ನ ನಿರ್ದೇಶಕರು. ದೂರ ಸಂವೇದಿ ಉಪಗ್ರಹಗಳ ನಿರ್ವಹಣೆ, ನಿಯಂತ್ರಣ ಘಟಕದ ಮುಖ್ಯಸ್ಥರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮದಲ್ಲಿ ೧೯೫೩ ಮಾರ್ಚ್‌ ೧೭ರಂದು ಜನನ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್‌ಸಿ, ತದನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಬಿ.ಇ., ಎಂ.ಟೆಕ್ ಪದವಿ.
ಇಸ್ರೋದ ಅನೇಕ ಯಶಸ್ಸಿನಲ್ಲಿ ಭಾಗಿಯಾಗಿರುವ ಶ್ರೀಯುತರು ಇಸ್ರೋ ಅಭಿವೃದ್ಧಿಪಡಿಸಿದ ಪೂರ್ಣ ದೇಶಿ ತಂತ್ರಜ್ಞಾನದ ೧೦೦ ಅಡಿ ಸುತ್ತಳತೆಯ ಅಂತರಿಕ್ಷ ಜಾಲ ಆ್ಯಂಟೆನಾ ಅಭಿವೃದ್ಧಿಪಡಿಸುವ ಯೋಜನಾ ನಿರ್ದೇಶಕರೂ ಹೌದು. ಭಾರತದ ಪ್ರಥಮ ಚಂದ್ರಯಾನ-೧ ಯೋಜನೆಗೆ ನೆರವಾಗುವುದರ ಜೊತೆಗೆ ಭವಿಷ್ಯದ ಅಂತರಿಕ್ಷ ಯಾತ್ರೆಗಳಿಗೂ ಈ ಆ್ಯಂಟೆನಾ ಸಹಕಾರಿ.
ಶ್ರೀಯುತರು ಇಸ್ರೋ ಉಪಗ್ರಹ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದು ಭಾಸ್ಕರ, ಆ್ಯಪಲ್, ಐಆರ್‌ಎಸ್ ಮತ್ತು ಇನ್ಸಾಟ್‌ ಉಪಗ್ರಹ ಉಡಾವಣೆ ಕಾರ್ಯಕ್ರಮಗಳಲ್ಲೂ ಭಾಗಿ.
ಭಾರತೀಯ ರಾಷ್ಟ್ರೀಯ ದೂರ ಸಂವೇದಿ ಪ್ರಶಸ್ತಿ, ಬಾಹ್ಯಾಕಾಶ ಮೂಲಸೌಕರ್ಯ ನಿರ್ವಹಣೆಯ ದಕ್ಷತೆಗಾಗಿ ಇಸ್ರೋ ಮೆರಿಟ್ ಅವಾರ್ಡ್‌ ಸಂದಿವೆ. ಅಂತರಿಕ್ಷ ಕ್ಷೇತ್ರದಲ್ಲಿ ಸ್ವಾಯತ್ತತೆ ಪಡೆಯುವ ಸಂಬಂಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ೪೦೦ ವಿಜ್ಞಾನಿಗಳ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸತತವಾಗಿ ಸೇವೆ ಸಲ್ಲಿಸುತ್ತಿರುವ ಪ್ರಯೋಗಶೀಲ ವಿಜ್ಞಾನಿ ಶ್ರೀ ಎಸ್.ಕೆ.ಶಿವಕುಮಾರ್.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಪಿ.ಕೆ. ಶೆಟ್ಟಿ

ಹಲವಾರು ವರ್ಷಗಳಿಂದ ಕೃಷಿ ವಿಜ್ಞಾನಿ ಹಾಗೂ ಪಲಸರ ವಿಜ್ಞಾನಿಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಮ್ಮನ್ನು ಸಂಶೋಧನೆ ಹಾಗೂ ಬೋಧನೆಯಲ್ಲಿ ತೊಡಲಿಸಿಕೊಂಡವರು ಪ್ರೊ. ಪಿ.ಕೆ. ಶೆಟ್ಟಿ ಅವರು. ಸಂಶೋಧನೆಯ ಜೊತೆಗೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಗುತ್ತಿರುವ ತಲತಗತಿಯ ಬೆಳವಣಿಗೆಗಳ ಬಗ್ಗೆ ಅಲವು ಮತ್ತು ಆಸಕ್ತಿ ಮೂಡಿಸಲು ಪಲಿಸರ ಸ್ನೇಹಿ ಕೃಷಿ ಪದ್ಧತಿ ಬಳಕೆಯ ಬಗ್ಗೆ ಬೆಳಕು ಚೆಲ್ಲಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಪಲಸರ ಸಂರಕ್ಷಣೆಯ ಬಗ್ಗೆ ಜನತೆಗೆ ಅಲವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಪಲಸರಕ್ಕೆ ಹಾನಿಕಾರಕವಾದ ಮತ್ತು ಪಲಸರದಲ್ಲಿ ಬಹುಸಮಯ ಇರಬಹುದಾದ ಒಂದು ರಾಸಾಯನಿಕ ಕೀಟನಾಶಕವನ್ನು ಸೂಕ್ಷ್ಮಜೀವಿಯ ಸಹಾಯದಿಂದ ಬೇರ್ಪಡಿಸಿ ಪಲಸರ ಪೂರಕವಾದ ರಾಸಾಯನಿಕವಾಗಿ ಮಾರ್ಪಾಟು ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಭಾರತದ ಕೃಷಿ ಬೆಳೆಗಳ ಸಂರಕ್ಷಣೆ ಕುಲಿತಂತೆ ಹನ್ನೆರಡು ರಾಜ್ಯಗಳಲ್ಲಿ ಆಳವಾದ ಅಧ್ಯಯನ ಕೈಗೊಂಡು ಸಮಗ್ರ ಕೃಷಿ ವಿವರಗಳು ಒಂದೇ ಕಡೆ ಸಿಗುವಂತಹ ಸಾಪ್ಟವೇರ್ ಅಭಿವೃದ್ಧಿ ಪಡಿಸಿದ್ದಾರೆ
ದೇಶ-ವಿದೇಶದ ಸಂಶೋಧನಾ ನಿಯತಕಾಅಕೆಗಳಲ್ಲಿ ಹಲವಾರು ವೈಜ್ಞಾನಿಕ ಲೇಖನಗಳನ್ನು, ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಪ್ರೊ. ಪಿ.ಕೆ. ಶೆಟ್ಟಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಪ್ರೊ. ಪಿ.ಕೆ. ಶೆಟ್ಟಿ ಅವರು ಪ್ರಸ್ತುತ ಬೆಂಗಳೂಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಂಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಯೋಗಶಾಅ ಸಂಶೋಧನಾತ್ಮಕ ವಿಜ್ಞಾನಿ ಪ್ರೊ. ಪಿ.ಕೆ. ಶೆಟ್ಟಿ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಜಿ. ಟಿ. ನಾರಾಯಣರಾವ್

ವಿಜ್ಞಾನ ಸಾಹಿತ್ಯ ರಚನೆ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಬರೆಹಗಳಲ್ಲ ತೊಡಗಿಸಿಕೊಂಡಿರುವವರು ಶ್ರೀ ಗುಡ್ಡೆಹಿತ್ತು ತಿಮ್ಮಪ್ಪಯ್ಯ ನಾರಾಯಣರಾವ್ ಅವರು. ೧೯೨೬ರಲ್ಲಿ ಮಡಿಕೇಲಿಯಲ್ಲಿ ಜನನ. ಮದರಾಸು ವಿಶ್ವವಿದ್ಯಾನಿಲಯದಿಂದ ೧೯೪೭ರಲ್ಲಿ ಗಣಿತ ಎಂ.ಎ. ಪದವಿ. ಮಂಗಳೂರು, ಮಡಿಕೇಲ, ಬೆಂಗಳೂರುಗಳಲ್ಲಿ ೧೯೪೭ ರಿಂದ ೧೯೬೯ರ ವರೆಗೆ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಕೆ. ೧೯೬೯ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ ೧೯೮೬ರಲ್ಲಿ ನಿವೃತ್ತಿ . ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಬಗೆಗೆ ಆಳವಾದ ಜ್ಞಾನ. ಸಂಗೀತ ನೃತ್ಯಗಳ ಬಗೆಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅನೇಕ ಲೇಖನಗಳ ರಚನೆ, ‘ಶ್ರುತಗಾನ’ ಸಂಗೀತ ಮತ್ತು ನೃತ್ಯ ಲೇಖನಗಳಿಗೆ ಮೀಸಲಾದ ಕೃತಿ. ಇದರ ವಿಸ್ತ್ರತ ಆವೃತ್ತಿ ‘ಸಂಗೀತ ರಸನಿಮಿಷಗಳು’ ಕೃತಿ.
ಐನ್ಸ್ಟೀನ್ ಬಾಳೆದಲಿಲ್ಲ (ವೈಜ್ಞಾನಿಕ ಜೀವನ ಚಲತ್ರೆ) ಕುವೆಂಪು ದರ್ಶನ ಸಂದರ್ಶನ, (ಕುವೆಂಪು ಕುಲತ ಕೃತಿ) ಕೃಷ್ಣ ವಿವರಗಳು (ಬ್ಲಾಕ್ ಹೋಲ್ಸ್) ಕೊಪರ್ನಿಕಸ್ ಕಾಂತಿ (ಖಗೋಳ ವಿಜ್ಞಾನೇತಿಹಾಸ) ವೈಜ್ಞಾನಿಕ ಮನೋಧರ್ಮ, ಸಪ್ತಸಾಗರದಾಚೆಯಲ್ಲೋ, (ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್, (ವೈಜ್ಞಾನಿಕ ಜೀವನ ಚಲತ್ರೆ), ಸೈಂಟಿಫಿಕ್ ಟೆಂಪರ್, ಐತ್ ಗ್ರೇಟ್ ಮೈಂಡ್ಸ್ ಮುಂತಾದವು. ಶ್ರೀ ಜಿ. ಟಿ. ನಾರಾಯಣರಾವ್ ಅವರ ಪ್ರಮುಖ ಕೃತಿಗಳು. ಇಂಗ್ಲಿಷ್ನಿಂದ ಕನ್ನಡಕ್ಕೆ ಹಲವು ಕೃತಿಗಳ ಅನುವಾದಿಸಿದ್ದಾರೆ. ಕನ್ನಡ ಸಾಹಿತ್ಯ ಪಲಷತ್ತು ಕರ್ನಾಟಕ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಂದ ಅನೇಕ ಕೃತಿಗಳಿಗೆ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಕ್ತ ಪೂರ್ಣಕಾಲ ವಿಜ್ಞಾನ ವಾಹ್ಮಯ ರಚನೆಯಲ್ಲಿ ಮಗ್ನವಾಗಿರುವ, ಹಿಲಯ ವಿದ್ವಾಂಸರು ಶ್ರೀ ಜಿ. ಟಿ. ನಾರಾಯಣ ರಾವ್ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಡಿ.ಆರ್.‌ ಬಳೂರಗಿ

ಕನ್ನಡದ ವಿಜ್ಞಾನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಆಯಾಮಗಳಲ್ಲಿ ಕೃಷಿಗೈದ ವಿಶೇಷ ತಜ್ಞರು ಡಿ.ಆರ್.ಬಳೂರಗಿ, ಬರಹಗಾರ, ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ, ಆಡಳಿತಗಾರರಾಗಿ ಅವರದ್ದು ಅಳಿಸಲಾಗದ ಹೆಜ್ಜೆಗುರುತು. ಧಾರವಾಡದ ದೈತ್ಯ ಪ್ರತಿಭೆ ಡಿ.ಆರ್.ಬಳೂರಗಿ ಕರ್ನಾಟಕ ವಿವಿಯ ಎಂಎಸ್ಸಿ ಪದವೀಧರರು. ರಾಯಚೂರಿನ ಎಲ್.ಐ.ಡಿ. ಕಾಲೇಜಿನ ಮೂರು ದಶಕಗಳ ಕಾಲ ಅಧ್ಯಾಪಕ, ಗುಲ್ಬರ್ಗಾ ವಿವಿ ಸಹಾಯಕ ಕುಲಸಚಿವ, ಬೆಳಗಾವಿ ವಿಜ್ಞಾನಕೇಂದ್ರದ ನಿರ್ದೇಶಕ, ಹಂಪಿ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ೩೮ ಸೃಜನ ಕೃತಿಗಳು, ಮೂರು ಅನುವಾದ, ೭ ಸಂಪಾದಿತ ಕೃತಿಗಳು ವಿಜ್ಞಾನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಕರ್ನಾಟಕ ರಾಜ್ಯ ವಿಜ್ಞಾನಪರಿಷತ್ತಿನ ಸ್ಥಾಪಕ ಸದಸ್ಯ, ಮಾಸಪತ್ರಿಕೆಯ ಸಂಪಾದಕಮಂಡಲ ಸದಸ್ಯ, ಸಂಪನ್ಮೂಲವ್ಯಕ್ತಿಯಾಗಿ ೧೦೦ಕ್ಕೂ ಹೆಚ್ಚು ವಿಜ್ಞಾನ ಕಾರ್ಯಾಗಾರಗಳ ಆಯೋಜನೆ, ವಿಜ್ಞಾನ ಬೋಧನೋಪಕರಣಗಳ ವಿನ್ಯಾಸ, ಹಲವು ಶಾಲೆಗಳಲ್ಲಿ ವಿಜ್ಞಾನಕೇಂದ್ರಗಳ ಸ್ಥಾಪನೆ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಲಹೆಗಾರ, ಸಾವಿರಾರು ಶಿಕ್ಷಕರಿಗಾಗಿ ಕಾರ್ಯಾಗಾರ, ನವಕರ್ನಾಟಕ ಪಬ್ಲಿಕೇಷನ್ಸ್‌ಗೆ ೩೦ ಪುಸ್ತಕಗಳ ಮಾಲಿಕೆ ಸಿದ್ಧಪಡಿಸುವಿಕೆ, ೫೦ಕ್ಕೂ ಹೆಚ್ಚು ರೇಡಿಯೋ ಉಪನ್ಯಾಸ ಮುಂತಾದ ಅಮೂಲ್ಯ ಕೊಡುಗೆಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಅಸೀಮ ಸಾಧಕರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಗೋವರ್ಧನ್ ಮೆಸ್ತಾ

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಜೈವಿಕ ರಸಾಯನಶಾಸ್ತ್ರದ ಪ್ರೊಫೆಸರ್ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವವರು ಶ್ರೀ ಗೋವರ್ಧನ್ ಮೆಹ್ರಾಅವರು.
ಜೂನ್ ೨೬, ೧೯೪೩ರಲ್ಲಿ ಜೋದ್ಪುರದಲ್ಲಿ ಜನನ. ೧೯೬೩ರಲ್ಲಿ ರಾಜಾಸ್ತಾನ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ., ೧೯೬೬ರಲ್ಲಿ ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ, ೧೯೬೭ – ೬೯ರಲ್ಲಿ ಮಿಚಿಗನ್ ಸ್ಟೇಟ್ ಮತ್ತು ದಿ ಓಹಿಯಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಡಿ.ಎಸ್ (ಪೋಸ್ಟ್ ಡಾಕ್ಟರಲ್ ರೀಸರ್ಚ್ ಪದವಿ). ೧೯೬೯ರಿಂದ ಇಲ್ಲಿಯವರೆಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿಯೂ, ಯುಎಸ್ಎ, ಫ್ರಾನ್ಸ್, ತೈವಾನ್, ಯುಕೆ, ಪ್ಯಾರಿಸ್, ಫ್ಲೋರಿಡಾ, ಜಪಾನ್, ಜರ್ಮನಿ ಮುಂತಾದ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಂತರ ರಾಷ್ಟ್ರೀಯ ಪತ್ರಿಕೆಗಳಲ್ಲಿ ೩೮೦ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶ್ವಾದ್ಯಂತ ವಿವಿಧ ಕಡೆಗಳಲ್ಲಿ ೨೦೦ ಉಪನ್ಯಾಸಗಳನ್ನು ನೀಡಿದ್ದಾರೆ.
೧೯೭೮ ರಿಂದ ೨೦೦೪ರವರೆಗೆ ಇವರನ್ನು ಅರಸಿ ಬಂದಿರುವ ಪದಕ, ಪ್ರಶಸ್ತಿ ಮತ್ತು ಬಹುಮಾನಗಳು ಅಸಂಖ್ಯಾತ, ಎಫ್.ಎನ್.ಎ., ಎಫ್.ಎ.ಎಸ್ಸಿ, ಎಫ್.ಎನ್.ಎ.ಎಸ್ಸಿ, ಎಫ್.ಆರ್.ಎಸ್.ಸಿ, ಟಿ.ಡಬ್ಲ್ಯು.ಎ.ಎಸ್, ಫೆಲೋಶಿಫ್ ಗಳು ಡಾ. ಗೋವರ್ಧನ್ ಮೆಹ್ವಾ ಅವರನ್ನರಸಿ ಬಂದಿದೆ.
ಶ್ರೀಯುತರು ಹಲವು ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿದ್ದು ಜೈವಿಕ ರಸಾಯನ ವಿಜ್ಞಾನದ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದವರು ಶ್ರೀ ಗೋವರ್ಧನ್ ಮೆಹ್ರಾ ಅವರು

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಐ.ವಿ. ಜಗದೀಶ್

ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಬ್ಲೂಚಿಪ್ ತಂತ್ರಜ್ಞಾನ ಉದ್ದಿಮೆಯಲ್ಲಿ ದೂರದರ್ಶಿತ್ವವುಳ್ಳ ತಂತ್ರಜ್ಞರು ಶ್ರೀ ಬಿ.ವಿ. ಜಗದೀಶ್ ಅವರು.
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಲೆಕ್ನಿಕಲ್ ಇಂಜಿನಿಯರಿಂಗ್ ಪದವಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ತಂತ್ರಜ್ಞರು ನೆಟ್‌ಲರ್‌ನ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಸ್ಥೆಗೆ ಉತ್ತಮ ದರ್ಜೆಯ ಪ್ರತಿಭಾನ್ವಿತ ಇಂಜಿನಿಯರ್‌ಗಳನ್ನು ಸೇರಿಸಿಕೊಳ್ಳುವ ಮೂಲಕ ಕಂಪೆನಿಯು ಪ್ರಗತಿಪಥದಲ್ಲಿ ನಡೆಯಲು ಅನುಭವಿ ಮಾರ್ಗದರ್ಶನ ನೀಡಿದ್ದಾರೆ. ಇಂದು ಸ್ಪರ್ಧಾತ್ಮಕವಾಗಿರುವ ಬ್ಲೂಚಿಪ್ ಸೆಂಟರ್‌ನಲ್ಲಿ ಬಂಡವಾಳ ಹೂಡಿಕೆಗಾಗಿ ಬಂಡವಾಳದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಯುತರು ನೆಟ್‌ಸ್ಕಲರ್‌ಗೆ ಮೊದಲು ಎಡಸ್ ಕಮ್ಯುನಿಕೇಷನ್ಸ್‌ನ ಸಹಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅಂತರ್‌ಜಾಲ ಮಾರುಕಟ್ಟೆಯಲ್ಲಿ ಕಂಪನಿ ಬೆಳೆಯಲು ಸಹಕಾರ ನೀಡಿದ್ದಾರೆ. ಎನ್ನೊಡನ್‌ಗೆ ಮೊದಲು ಫೌರೆಸ್ ಎಂಬ ಸಾಫ್ಟ್‌ವೇರ್ ಸಲಹಾ ಕಂಪನಿಯ ಸಹಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ನಾವೆಲ್ ಮತ್ತು ತ್ರಿಕಾಮ್ ಕಾರ್ಪೊರೇಷನ್ ಅಲ್ಲದೆ ವ್ಯವಸ್ಥಾಪನೆ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಮಾಹಿತಿ ತಂತ್ರಜ್ಞಾನ ಮತ್ತು ವಾಣಿಜ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿರುವ ಶ್ರೀ ಜಗದೀಶ ಅವರು ಭಾರತ ಮತ್ತು ಅಮೆರಿಕ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವ ಮಾನವತಾವಾದಿ.
ತಂತ್ರಜ್ಞಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಪ್ರತಿಭಾವಂತ ಮಾಹಿತಿ ತಂತ್ರಜ್ಞಾನ ತಜ್ಞ ಶ್ರೀ ಬಿ.ವಿ. ಜಗದೀಶ್ ಅವರು.