Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಮುನಿವೆಂಕಟಪ್ಪ ಸಂಜಪ್ಪ

ಭಾರತೀಯ ಸಸ್ಯ ಸರ್ವೇಕ್ಷಣಾ ನಿರ್ದೇಶಕರಾದ ಎಸ್.ಸಂಜಪ್ಪ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದವರು. ಪ್ರಸಕ್ತ ಸಿ.ಎಸ್.ಐ.ಆರ್ ವಿಜ್ಞಾನಿಯಾಗಿರುವ ಎಸ್.ಸಂಜಪ್ಪ ಅವರು ರಾಷ್ಟ್ರೀಯ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಸಂಜಪ್ಪ ಅವರು ಟಾನಮಿ ಸಂಶೋಧನೆಯಲ್ಲಿ ಪರಿಣತರು.

ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಸ್ಯ ಶಾಸ್ತ್ರಜ್ಞರಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಸಂಜಪ್ಪ ಅವರು ಸಸ್ಯಶಾಸ್ತ್ರಕ್ಕೆ ಮುವ್ವತ್ತೈದು ನೂತನ ಪ್ರಬೇಧಗಳನ್ನು ಪತ್ತೆ ಹಚ್ಚಿಕೊಟ್ಟವರು. ಹಲವಾರು ಸಸ್ಯಶಾಸ್ತ್ರ ಕೃತಿಗಳ ರಚನಾಕಾರರಾದ ಸಂಜಪ್ಪ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಇವರಿಗೆ ಪ್ರತಿಷ್ಠಿತ ಬಿ.ವಿ.ಶಿವರಂಜನ್ ಚಿನ್ನದ ಪದಕ, ಡಾ|| ಜಿ.ಪಾಣಿಗ್ರಾಹಿ ಸ್ಮರಣ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಜಾನಕಿ ಅಮ್ಮಾಳ್ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.