Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಎಂ. ನಿರಂಜನ್

೨೧ರ ಹರೆಯದ ನಿರಂಜನ್ ಮುಕುಂದನ್ ಅವರು ಅಂತರರಾಷ್ಟ್ರೀಯ ಅಂಗವಿಕಲ ಈಜು ಸ್ಪರ್ಧೆಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಈಜು ಪಟು, ಅಂಗವೈಕಲ್ಯದಿಂದ ಹಲವಾರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ನಿರಂಜನ್ ವೈದ್ಯರ ಸಲಹೆಯಂತೆ ಈಜಿನ ಕೊಳಕ್ಕೆ ಇಳಿದವರು. ಈಜುಗಾರಿಕೆಯಲ್ಲಿ ಪ್ರಾವೀಣ್ಯತೆ ಸಂಪಾದಿಸಿದರು.
ಅಂಗವೈಕಲ್ಯವನ್ನು ಮರೆತು ಛಲದಿಂದ ಈಜು ಸ್ಪರ್ಧೆಗಳಲ್ಲಿ ಭಾಗಿಯಾಗತೊಡಗಿದ ನಿರಂಜನ್ ಅವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆಯಲಾರಂಭಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅನೇಕ ಜಾಗತಿಕ ಪ್ಯಾರಾ ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಪಾಲುಗೊಂಡ ನಿರಂಜನ್ ೨೦೧೪ರಲ್ಲಿ ಲಂಡನಿನಲ್ಲಿ ನಡೆದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಮೂರು ಚಿನ್ನವೂ ಸೇರಿದಂತೆ ಎಂಟು ಪದಕಗಳನ್ನು ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ವಿನಯಕುಮಾರ್

ಕರ್ನಾಟಕದ ಕ್ರಿಕೆಟ್ ತಂಡದ ನಾಯಕರಾಗಿ, ಎರಡು ಬಾರಿ ರಣಜಿ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಭಾರತದ ಎಲ್ಲ ಪ್ರಮುಖ ಕ್ರಿಕೆಟ್ ವಲಯ ಹಾಗೂ ಅಂತರರಾಜ್ಯ ಕ್ರಿಕೆಟ್ ಟೂರ್ನಿಗಳನ್ನು ಗೆದ್ದುಕೊಟ್ಟ ವಿನಯಕುಮಾರ್ ಮಧ್ಯಮವೇಗದ ಬೌಲರ್. ಭಾರತ ತಂಡದಲ್ಲಿಯೂ ಅವಕಾಶ ಪಡೆದಿದ್ದು, ಪ್ರಸ್ತುತ ದೇಶೀಯ ಕ್ರಿಕೆಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿನಯಕುಮಾರ್ ಭವಿಷ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಲಕ್ಷಣಗಳನ್ನು ತೋರುತ್ತಿದ್ದಾರೆ.
“ದಾವಣಗೆರೆ ಎಕ್ಸ್ ಪ್ರೆಸ್” ಎಂದೇ ಖ್ಯಾತರಾದ ವಿನಯಕುಮಾರ್ ಭಾರತ ತಂಡದ ಭರವಸೆಯ ಮಧ್ಯಮವೇಗಿ ಬೌಲರ್.

Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಪಾಂಡಂಡ ಎಂ. ಕುಟ್ಟಪ್ಪ

ದೇಶದ ಹಾಕಿ ಕ್ರೀಡಾರಂಗಕ್ಕೆ ಗಣನೀಯ ಕೊಡುಗೆ ನೀಡಿರುವ ಕೊಡಗು ಪ್ರದೇಶದಲ್ಲಿ ಕೌಟುಂಬಿಕ ಹಾಕಿ ಉತ್ಸವವನ್ನು ಹುಟ್ಟು ಹಾಕಿದ ವ್ಯಕ್ತಿ ಪಾಂಡಂಡ.ಎಂ.ಕುಟ್ಟಪ್ಪ ಅವರು.
ಶಾಲಾ ಶಿಕ್ಷಕರಾಗಿದ್ದು, ನಂತರ ಬ್ಯಾಂಕ್ ನೌಕರಿಗೆ ಸೇರಿದ ಕುಟ್ಟಪ್ಪ, ನಿವೃತ್ತಿಯ ನಂತರ ತಮ್ಮ ಸ್ವಂತ ಸ್ಥಳವಾದ ಕೊಡಗಿಗೆ ವಾಪಸಾಗಿ ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ತಾಳಿ ಕೌಟುಂಬಿಕ ಹಾಕಿ ಪಂದ್ಯಾಟಗಳನ್ನು ಆರಂಭಿಸಲು ಶ್ರಮಿಸಿದರು.
ಕಳೆದ ಹದಿನೇಳು ವರ್ಷಗಳಿಂದ ಯಶಸ್ವಿಯಾಗಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವ ಕುಟ್ಟಪ್ಪನವರು ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವಲ್ಲಿ ಸಹಕರಿಸಿದ್ದಾರೆ. ಲಿಮ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ ಆಗುವ ಮೂಲಕ ದೇಶ-ವಿದೇಶ ಗಮನ ಸೆಳೆದಿರುವ ಈ ಹಾಕಿ ಉತ್ಸವದಲ್ಲಿ ಪ್ರಸ್ತುತ ಎರಡು ನೂರ ಇಪ್ಪತ್ತೈದು ತಂಡಗಳು ಪಾಲುಗೊಳ್ಳುತ್ತಿದ್ದು, ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರತಿ ವರ್ಷ ಸುಮಾರು ೨೫,೦೦೦ ಜನ ಆಗಮಿಸುತ್ತಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಚಿನ್ನದ ಪದಕವೂ ಸೇರಿದಂತೆ ಅನೇಕ ಗೌರವಗಳು ಪಾಂಡಂಡ.ಎಂ.ಕುಟ್ಟಪ್ಪನವರಿಗೆ ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಎಸ್. ನಾಗಣ್ಣ

ತುಮಕೂರು ಜಿಲ್ಲೆಯವರಾದ ನಾಗಣ್ಣ ಅವರು ಶಿಕ್ಷಕರಾಗಿದ್ದು ನಂತರ ಪತ್ರಿಕೋದ್ಯಮದತ್ತ ಬಂದವರು. ತುಮಕೂರಿನಲ್ಲಿ ಪ್ರಜಾಪ್ರಗತಿ ವಾರ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗಣ್ಣ ನಂತರ ಪ್ರಜಾಪ್ರಗತಿ ಪತ್ರಿಕೆಯನ್ನು ದೈನಿಕವಾಗಿ ಪರಿವರ್ತಿಸಿದರು.
ಮೊಳೆಯಚ್ಚಿನಲ್ಲಿ ಮುದ್ರಣವಾಗುತ್ತಿದ್ದ ಪ್ರಜಾಪ್ರಗತಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆಯನ್ನು ಅಳವಡಿಸಿಕೊಂಡು ಈಗ ಮುನ್ನಡೆಯುತ್ತಿದೆ. ಇದರ ಸಂಪಾದಕರಾಗಿ ವೃತ್ತಿಪರತೆ ಪಡೆದುಕೊಂಡ ನಾಗಣ್ಣ ಅವರು ಪ್ರಜಾಪ್ರಗತಿ ದಿನಪತ್ರಿಕೆಯನ್ನು ಚಿತ್ರದುರ್ಗ ಹಾಗೂ ದಾವಣಗೆರೆ ಆವೃತ್ತಿಗಳನ್ನಾಗಿ ಪ್ರಕಟಿಸಲು ಕಾರಣರಾದರು.
ಪ್ರಜಾಪ್ರಗತಿ ದೈನಿಕದ ರುವಾರಿಗಳಾದ ನಾಗಣ್ಣ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಹನುಮಂತ ಹೂಗಾರ

ನಾಲ್ಕು ದಶಕಗಳ ಕಾಲ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಹಾಯಕ ಸಂಪಾದಕರಾಗಿ ನಿವೃತ್ತರಾದ ಹಿರಿಯ ಪತ್ರಿಕೋದ್ಯಮಿಗಳು. ಹನುಮಂತ ಭೀಮಪ್ಪ
ಹೂಗಾರ ಅವರು.
ಹುಬ್ಬಳ್ಳಿಯವರಾದ ಹನುಮಂತ ಹೂಗಾರ್ ಅವರು ವಿಶ್ವವಾಣಿ, ವಿಶಾಲ ಕರ್ನಾಟಕ, ನೇತಾಜಿ, ಲೋಕವಾಣಿ ಪತ್ರಿಕೆಗಳಲ್ಲಿ ಸಹಾಯಕ ಸಂಪಾದಕ, ಮುಖ್ಯವರದಿಗಾರ, ವಿಶೇಷ ಬಾತ್ಮೀದಾರರಾಗಿ ಕಾರ್ಯ ನಿರ್ವಹಿಸಿದರು.
ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ಹನುಮಂತ ಹೂಗಾರ್ ಪತ್ರಿಕೋದ್ಯಮದ ಎಲ್ಲಾ ಒಳಹೊರಗುಗಳನ್ನು ಬಲ್ಲವರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ನಾಗಮಣಿ ಎಸ್.ರಾವ್

ಮುದ್ರಣ ಹಾಗೂ ವಿದ್ಯುನ್ಮಾನ ಎರಡೂ ಕ್ಷೇತ್ರಗಳಲ್ಲೂ ಕಾರ್ಯನಿರತ ಪತ್ರಕರ್ತರು ಎನಿಸಿಕೊಂಡ ಮೊದಲ ಮಹಿಳೆ ಶ್ರೀಮತಿ ನಾಗಮಣಿ.ಎಸ್.ರಾವ್ ಅವರು. ತಾಯಿನಾಡು ಪತ್ರಿಕೆಯಲ್ಲಿ ಕೆಲಸ ಮಾಡುವುದರ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ನಾಗಮಣಿ ಎಸ್.ರಾವ್ ಅವರು ಹೆಸರು ಮಾಡಿದ್ದು ಆಕಾಶವಾಣಿಯ ಸುದ್ದಿ ವಿಭಾಗದ ಭಾತೀದಾರರು ಹಾಗೂ ವಾರ್ತಾ ವಾಚಕರಾಗಿ, ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನೀಡುವ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಿಭಾಗವನ್ನು ಸಮರ್ಥವಾಗಿ ಕಟ್ಟುವಲ್ಲಿ ಶ್ರಮಿಸಿದವರಲ್ಲಿ ನಾಗಮಣಿ.ಎಸ್.ರಾವ್ ಅವರು ಪ್ರಮುಖರು.
ಕರ್ನಾಟಕ ಲೇಖಕಿಯರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಾಗಮಣಿ ಎಸ್.ರಾವ್ ಅವರು ಪ್ರದೇಶ ಸಮಾಚಾರ ಓದುವುದರಲ್ಲಿ ಪಂಡಿತ ಪಾಮರರಿಬ್ಬರ ಮೆಚ್ಚುಗೆ ಪಡೆದವರು. ಸಾಹಿತ್ಯ ಕೃತಿಗಳನ್ನೂ ರಚಿಸಿರುವ ಇವರು ಟಿಎಸ್ಸಾರ್ ಪ್ರಶಸ್ತಿಯೂ ಸೇರಿದಂತೆ ಹಲವಾರು ವೃತ್ತಿ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಪ್ರೊ. ಹೆಚ್.ಎಸ್. ಈಶ್ವರ್

ಮಲೆನಾಡಿನಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿಯೂ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ|| ಎಚ್.ಎಸ್.ಈಶ್ವರ್ ಅವರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದವರು. ಪತ್ರಿಕೋದ್ಯಮ ಬೋಧಕರಾಗಿ ಶೈಕ್ಷಣಿಕ ವಲಯದಲ್ಲಿ ಜನಪ್ರಿಯರಾದ ಡಾ|| ಎಚ್.ಎಸ್.ಈಶ್ವರ್ ಮೂಲಭೂತವಾಗಿ ಮನಶಾಸ್ತ್ರಜ್ಞರು.
ವಿದೇಶಗಳಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾನಿಲಯ ಸಂವಹನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು.
ಮಾಧ್ಯಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಬಹಳ ಕೆಲಸ ಮಾಡಿರುವ ಡಾ|| ಎಚ್.ಎಸ್.ಈಶ್ವರ್ ಅವರು ಅನೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಮಾಧ್ಯಮ ಕುರಿತಂತೆ ಹಲವಾರು ಮೌಲ್ಯಯುತ ಬರವಣಿಗೆ ಮಾಡಿರುವ ಇವರು ಶ್ರೇಷ್ಠ ವಾಗಿ ಕೂಡ ಹೌದು. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕಲ್ಲೇ ಶಿವೋತ್ತಮ ರಾವ್

ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿರುವ ಕಲ್ಲೇ ಶಿವೋತ್ತಮರಾವ್ ಅವರು ಪ್ರಜಾವಾಣಿ ಸಂಯುಕ್ತ ಕರ್ನಾಟಕ ವಿಶಾಲ ಕರ್ನಾಟಕ ಪತ್ರಿಕೆಗಳ ಸಂಪಾದಕ ವರ್ಗದ ನೇತೃತ್ವ ವಹಿಸಿ ಕಾರ್ಯ ನಿರ್ವಹಿಸಿದ್ದಾರೆ.
ಹಿಂದೂ ದೈನಿಕದ ಹಂಗಾಮಿ ವರದಿಗಾರರಾಗಿ ಹಾಗೂ ಎನ್ಲೈಟ್ ಇಂಗ್ಲಿಷ್ ವಾರಪತ್ರಿಕೆಯ ಕರ್ನಾಟಕ ಬ್ಯೂರೋ ಚೀಫ್ ಆಗಿ ಕೆಲಸ ಮಾಡಿದ ಅನುಭವ ಇರುವ ಕಲ್ಲೇ ಶಿವೋತ್ತಮರಾವ್ ಅವರು ಪತ್ರಿಕಾ ಲೋಕದ ದಿಗ್ಗಜರಲ್ಲೊಬ್ಬರಾದ ಬಿ.ಎನ್.ಗುಪ್ತಾ ಅವರ ಸಂಪಾದಕತ್ವದ ಜನಪ್ರಗತಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಂತರ ಸಂಪಾದಕ ಹಾಗೂ ಮುದ್ರಕರಾಗಿ ಒಟ್ಟು ಹದಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೈ ಆಡಿಸಿರುವ ಕಲ್ಲೇ ಶಿವೋತ್ತಮರಾವ್ ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ವಿಶ್ವದ ವಿದ್ಯಮಾನಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಹೊತ್ತುಕೊಂಡಿದ್ದರು. ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಪ್ರೌಢ ಪ್ರಭುತ್ವ ಹೊಂದಿರುವ ಕಲ್ಲೇ ಶಿವೋತ್ತಮ ರಾವ್ ತಮ್ಮ ಹದಿನಾಲ್ಕನೆಯ ವಯಸ್ಸಿನಿಂದ ಪತ್ರಿಕೋದ್ಯಮದ ಒಡನಾಟದಲ್ಲಿರುವವರು.

Categories
ಜಾನಪದ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮರೆಮ್ಮ ಬಸಣ್ಣ ಶಿರವಾಟ

ಪುರಾಣ ಪುಣ್ಯಕಥೆಗಳನ್ನು ಹಾಗೂ ಐತಿಹಾಸಿಕ ಮಹತ್ವದ ಪ್ರಜಾನಾಯಕರ ಬದುಕಿನ ಕಥೆಗಳನ್ನು ಶಕ್ತಿಶಾಲಿ ಜನಪದ ಮಾಧ್ಯಮವಾದ ಬುರಕಥಾ ಮೂಲಕ ಪ್ರಸ್ತುತ ಪಡಿಸುತ್ತ ಐದು ದಶಕಗಳನ್ನು ಸವೆಸಿರುವ ಮರೆಮ್ಮ ಬಸಣ್ಣ ಶಿರವಾಟಿ ಅವರು ಪ್ರಸಿದ್ಧ ಬುರಕಥಾ
ಕಲಾವಿದರು.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಜನದನಿಯಾದ ಬುರಕಥೆಯನ್ನು ಜನತೆಯ ನಡುವೆ ಹರಡಿಸುತ್ತ, ಜನಸ್ತೋಮವನ್ನು ಸೆಳೆದಿರುವ ಮಾರಿಯಮ್ಮನವರು, ಕರ್ನಾಟಕ ಹಾಗೂ ತೆಲಂಗಾಣ ಪ್ರಾಂತ್ಯಗಳಲ್ಲಿ ಬಹು ಜನಪ್ರಿಯ ಹಾಡುಗಾರ್ತಿ.
ನೆನಪಿನ ಶಕ್ತಿಯಿಂದಲೇ ೭೦ಕ್ಕೂ ಹೆಚ್ಚು ಪ್ರಸಂಗಗಳನ್ನು ಹಾಡುವ ಮರೆಮ್ಮ ಅವರ ಸಿರಿಕಂಠದಿಂದ ಕಥೆಗಳನ್ನು ಜನರಿಗೆ ಮುಟ್ಟಿಸುವ ಪ್ರತಿಭಾವಂತೆ. ಈಕೆ ಇಳಿವಯಸ್ಸಿನಲ್ಲಿಯೂ ಶಿಷ್ಯ ಪರಂಪರೆಯ ಮೂಲಕ ತನ್ನ ತಂಡದೊಡನೆ ಬುರಕಥಾ ಪ್ರಕಾರವನ್ನು ಜೀವಂತವಾಗಿಟ್ಟಿರುವ ಕಲಾವಿದೆಯಾಗಿದ್ದು, ಈಕೆಯ ಬಗ್ಗೆ ಪಿ.ಎಚ್.ಡಿ. ಸಂಶೋಧನೆ ಸಹ ನಡೆದಿರುವುದು ಉಲ್ಲೇಖನಾರ್ಹ.

Categories
ಜಾನಪದ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಗುರುಲಿಂಗಪ್ಪ ವೀರ ಸಂಗಪ್ಪ ಕರಡಿ

೧೫ನೇ ವಯಸ್ಸಿಗೆ ಕರಡಿ ಮಜಲು ಕಲಾಕ್ಷೇತ್ರಕ್ಕೆ ಕಾಲಿಟ್ಟ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರು ನಿರಂತರವಾಗಿ ಆರು ದಶಕಗಳಿಂದ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುತ್ತ ಬದುಕು ಸಾಗಿಸುತ್ತಿದ್ದಾರೆ. ಮಲ್ಲಿಕಾರ್ಜುನ ಅಸುಂಡಿಯವರಿಂದ ಸಂಗೀತ ದೀಕ್ಷೆ ಪಡೆದ ವೀರಸಂಗಪ್ಪನವರು ಇದನ್ನು ಕಲೆ ಹಾಗೂ ದೈವಿಕ ಕಾರ್ಯವೆಂದು ಭಾವಿಸಿ ಅದರೊಂದು ಅವಿನಾಭಾವ ಅನುಸಂಧಾನ ಕೈಗೊಂಡಿದ್ದಾರೆ.
ಕರಡಿ ಮಜಲು ಕಲೆಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ವೀರಸಂಗಪ್ಪ ಕರಡಿ ಅವರು ಕರ್ನಾಟಕದ ಬಹುತೇಕ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕರಡಿ ಮಜಲು ಕಲೆಯನ್ನು ಮುಂದಿನ ಪೀಳಿಗೆಗೂ ಕರೆದೊಯ್ಯುವ ನಿಟ್ಟಿನಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಗುರುಲಿಂಗಪ್ಪ ವೀರಸಂಗಪ್ಪನವರು ಕರ್ನಾಟಕ ಜಾನಪದ ಅಕಾಡೆಮಿ, ಜಾನಪದ ಲೋಕ ಪ್ರಶಸ್ತಿ, ಲೋಕೋತ್ಸವ ಪ್ರಶಸ್ತಿ ಹೀಗೆ ಹಲವಾರು ಗೌರವಗಳನ್ನು ಪಡೆದಿದ್ದು, ಸಾರ್ಕ್, ದಕ್ಷಿಣ ವಲಯ ಸಾಂಸ್ಕೃತಿಕ ಉತ್ಸವ, ಭಾರತ ಅಂತರರಾಷ್ಟ್ರೀಯ ಸಂಗೀತ ಮಹೋತ್ಸವ ಸೇರಿದಂತೆ ಅನೇಕ ಪ್ರತಿಷ್ಟಿತ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಪ್ರದರ್ಶಿಸಿದ ಹೆಗ್ಗಳಿಕೆ ಇವರದು.

Categories
ಜಾನಪದ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಹನೀಫಾ ಎಂ.ಶೇಖ್

ಕಲಬುರ್ಗಿ ಜಿಲ್ಲೆಯವರಾದ ಹನೀಫಾ ಶೇಖ್ ಜಾನಪದ, ತತ್ವಪದ ಹಾಗೂ ವಚನಗಳ ಹಾಡುಗಾರಿಕೆಗೆ ಪ್ರಸಿದ್ದರು. ಬಾಲ್ಯದಲ್ಲಿ ಹತ್ತು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ನಂತರ ಹಿಂದೂಸ್ಥಾನಿ ಗುರುಗಳಲ್ಲಿಯೂ ಕಲಿತ ಹನೀಫಾ ಅವರು ಜಾನಪದ ಗೀತೆಗಳ ಗಾಯನ ಕಾಯಕವನ್ನು ಆಯ್ಕೆ ಮಾಡಿಕೊಂಡರು.
ಮೂರು ದಶಕಗಳಿಂದ ಜನಪದ ಕಲೆಯನ್ನು ಬದುಕಾಗಿಸಿಕೊಂಡಿರುವ ಈ ಕಲಾವಿದೆ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಡುಗಳನ್ನು ಹಳ್ಳಿಗಾಡಿನಲ್ಲಿ ಹಾಡುವ ಪರಿಪಾಠವಿಟ್ಟುಕೊಂಡಿದ್ದಾರೆ.
ಜಾನಪದ ಕೋಗಿಲೆ ಎಂದೇ ಖ್ಯಾತರಾಗಿರುವ ಹನೀಫಾ ಶೇಖ್ ಅವರಿಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ಗೌರವಗಳನ್ನಿತ್ತು ಗೌರವಿಸಿದೆ.

Categories
ಜಾನಪದ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕೆಂಚಮಾದೇಗೌಡ

ಆಕರ್ಷಕ ವೇಷ ಭೂಷಣಗಳಿಂದ ಸೆಳೆಯುವ ಗೊರವರ ಕಲೆಯನ್ನು ಚಿಕ್ಕಂದಿನಲ್ಲಿಯೇ ಕಲಿತು ಕುಣಿತ ಆರಂಭಿಸಿದ ಕೆಂಚಮಾದೇಗೌಡ ಈ ಜಾನಪದ ಕಲೆಯ ವೈವಿಧ್ಯತೆಯನ್ನು ನಾಡಿಗೆಲ್ಲ ಹಂಚುವ ಕಾಯಕದಲ್ಲಿ ನಿರತರಾಗಿದ್ದಾರೆ.
ಗೊರವರ ಕುಣಿತಕ್ಕೆ ಅಗತ್ಯವಾದ ಎಲ್ಲ ಗತ್ತು ಗಮ್ಮತ್ತುಗಳನ್ನು ತಿಳಿದುಕೊಂಡಿರುವ ಕೆಂಚಮಾದೇಗೌಡ ಕಣ್ಮನ ಸೆಳೆಯುವಂತೆ ಕುಣಿಯುವ ಅಪರೂಪದ ಕಲಾವಿದ. ಗೊರವ ಕುಣಿತದ ಪ್ರದರ್ಶನವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸಿರುವ ಕೆಂಚಮಾದೇಗೌಡ, ಹೊಸ ಪೀಳಿಗೆಯ ಗೊರವರ ಕುಣಿತ ಕಲಾವಿದರನ್ನು ತಯಾರು ಮಾಡುವಲ್ಲಿ ನಿರತರಾಗಿದ್ದಾರೆ. ಈ ಜನಪದ ಕಲೆಗೆ ಜೀವ ತುಂಬುತ್ತಿರುವ ಕೆಂಚಮಾದೇಗೌಡರಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸಂದಿದೆ.

Categories
ಜಾನಪದ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಅಪ್ಪಗೆರೆ ತಿಮ್ಮರಾಜು

ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಅಜ್ಜಿಯ ಜನಪದ ಹಾಡಿನ ಮೋಡಿಗೆ ಒಳಗಾಗಿ ಮುಂದೆ ಗಾಯಕರಾಗಿ ಬಹು ಎತ್ತರಕ್ಕೆ ಬೆಳೆದವರು. ಇವರು ತತ್ವಪದಗಳ ಬಗ್ಗೆ ಡಿ.ಲಿಟ್ ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಮೂಲಧಾಟಿಯ ಜನಪದ ಗೀತೆಗಳಿಗೆ ಜೀವಂತಿಕೆ ತುಂಬಿದ ಅಪರೂಪದ ಗಾಯಕರಲ್ಲಿ ಒಬ್ಬರಾದ ಅಪ್ಪಗೆರೆ ತಿಮ್ಮರಾಜು ಗ್ರಾಮೀಣ ಭಾಗಗಳಲ್ಲಿ ಈಗಲೂ ಹಾಡುವ ಅನೇಕ ಗೀತೆಗಳನ್ನು ಸಂಗ್ರಹಿಸಿ ಅದಕ್ಕೊಂದು ಹೊಸ ರೂಪವನ್ನು ಕೊಟ್ಟಿದ್ದಾರೆ.
ದೇಶದ ತುಂಬ ತಮ್ಮ ಸಿರಿಕಂಠದಿಂದ ಮೋಡಿ ಮಾಡಿರುವ ಇವರು ವಿದೇಶಗಳಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಮನ ಸೂರೆಗೊಂಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಿರಿಪಾಡ್ಡನ

ರಾಮಕ್ಕ ಮುಗ್ಗನ್ತಿ

ಅಕ್ಷರ ಅರಿಯದಿದ್ದರೂ ಮುವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ಡನ ಕಾವ್ಯಗಳನ್ನು, ಹದಿನೈದಕ್ಕೂ ಹೆಚ್ಚು ‘ಕವಿತೆಗಳನ್ನು ನೆನಪಿನಾಳದಲ್ಲಿ ಹುದುಗಿಸಿಕೊಂಡು ನಿರಂತರವಾಗಿ ಹೇಳುವ ಅಪರೂಪದ ಹಾಡುಗಾರ್ತಿ ಶ್ರೀಮತಿ ರಾಮಕ್ಕ ಮುಗ್ಗರಿಸ ಅವರು.
ಪಾಡ್ಡನ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡ ರಾಮಕ್ಕ ಮುಖ್ಯ ಗಾಯಕಿಯಾಗಿ, ಕವಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಯಾವುದೇ ಸಿನಿಮಾ ಕಥೆಯನ್ನಾಗಲಿ ಪಾಡ್ಡನ ರೂಪದಲ್ಲಿ ಕಟ್ಟಿ ಹೇಳುವ ನಿಮಣೆ ರಾಮಕ್ಕ ಪಾಡ್ಡನ ಸಿರಿಯನ್ನು ಕಲಿತದ್ದು ಗದ್ದೆಗಳಲ್ಲಿ ನಾಟಿ ಕೆಲಸ ಮಾಡುವಾಗ,
ಪಾಡ್ಡನ ಹಾಡುವುದರಲ್ಲಿ ಐದಾರು ದಶಕಗಳನ್ನು ಕಳೆದಿರುವ ರಾಮಕ್ಕ ಇಂದಿಗೂ ಉತ್ಸಾಹದ ಬುಗ್ಗೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಡಾ. ಫ.ಗು.ಹಳಕಟ್ಟಿ

ವಚನ ಪಿತಾಮಹ ಫ.ಗು.ಹಳಕಟ್ಟಿಯವರು ೧೨ನೆಯ ಶತಮಾನದ ವಚನ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನಾ ತಾಡವೋಲೆಗಳಿಂದ ಸಂಗ್ರಹಿಸಿದ್ದ ವಚನಗಳನ್ನು ಮತ್ತು ಅದರ ಭಾವಾರ್ಥಗಳನ್ನು ಡಾ|| ಕಲಬುರ್ಗಿಯವರ ಸಂಪಾದಕತ್ವದಲ್ಲಿ ಸುಮಾರು ೧೦,೦೦೦ ಪುಟಗಳ ೧೫ ಸಂಪುಟಗಳಲ್ಲಿ ಹೊರತಂದಿದೆ.
ನಾಲ್ಕು ಶತಮಾನಗಳ ವಿಜಯಪುರವನ್ನು ಆಳಿದ ಆದಿಲ್ ಶಾಹಿಗಳ ಇತಿಹಾಸವನ್ನು ಈ ಸಂಸ್ಥೆ ಕನ್ನಡಕ್ಕೆ ಅನುವಾದಿಸಿ ೧೮ ಸಂಪುಟಗಳ ಪ್ರಕಟಣೆಗೆ ಕನ್ನಡ ಸಂಸ್ಕೃತಿ ಇಲಾಖೆ ನೆರವಿನಡಿ ಕ್ರಮವಹಿಸಿದ್ದು ಆರು ಸಂಪುಟ ಪ್ರಕಟವಾಗಿದ್ದು, ಉಳಿದವು ಪ್ರಕಟಣೆಗೆ ಸಿದ್ಧವಾಗಿವೆ.
ಹಂಪಿ ವಿವಿ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರವು ಈಗಾಗಲೇ ಎಂಟು ವಿದ್ಯಾರ್ಥಿಗಳ ಸಂಶೋಧನೆ ಪೂರ್ಣತೆಗೆ ನೆರವಾಗಿದ್ದು, ಹಲವರು ಸಂಶೋಧನೆ ಕೈಗೊಳ್ಳಲು ಕೇಂದ್ರ ಕಾರ್ಯನಿರತವಾಗಿದೆ.

Categories
ಕಾನೂನು ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ನ್ಯಾ. ಎ.ಜೆ. ಸದಾಶಿವ

ಎ.ಜೆ. ಸದಾಶಿವ ಅವರು ಗ್ರಾಮೀಣ ಪ್ರತಿಭೆ. ಯಶಸ್ವಿ ವಕೀಲರಾಗಿ ನ್ಯಾಯಾಧೀಶರಾಗಿ ನಿವೃತ್ತಿ ನಂತರ ಹಲವು ತನಿಖಾ ಆಯೋಗಗಳ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಕಾರ್ಯಾನುಭವದ ಹಿನ್ನೆಲೆಯಲ್ಲಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ.
ಒಳಮೀಸಲಾತಿ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಸದಾಶಿವ ಅವರು ನ್ಯಾಯಾಂಗ ಕುರಿತ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಹವ್ಯಾಸಿ ರಂಗಭೂಮಿಯ ಕಲಾವಿದರಾಗಿಯೂ ದುಡಿದಿದ್ದಾರೆ.
ಹಲವು ಸಮಾಜಸೇವಾ ಸಂಸ್ಥೆಗಳೊಂದಿಗೆ ಸಕ್ರಿಯರಾಗಿರುವ ಸದಾಶಿವ ಅವರು ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಅಕೈ ಪದ್ಮಶಾಲಿ

ಗಂಡಾಗಿದ್ದು ನಂತರ ಹೆಣ್ಣಾದ ಅಕೈ ಪದ್ಮಶಾಲಿ ಇಂದು ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿರುವ ಸಂಗಮ ಸಂಸ್ಥೆಯ ಪದಾಧಿಕಾರಿಗಳಲ್ಲೊಬ್ಬರು. ಸಮಾಜ ತೃತೀಯ ಲಿಂಗಿಗಳ ಬಗ್ಗೆ ತೋರುತ್ತಿರುವ ಅನಾದರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸಂಗಮ ಸಂಸ್ಥೆಯಿಂದ ತೃತೀಯ ಲಿಂಗಿಗಳ ಸಂಘಟನೆ ಮಾಡುವ ಹೊಣೆ ಹೊತ್ತುಕೊಂಡಿರುವ ಅಕೈ ಪದ್ಮಶಾಲಿ ರಾಜ್ಯ ಹಾಗೂ ರಾಷ್ಟ್ರದ ತೃತೀಯ ಲಿಂಗಿಗಳ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ದೇಶದಲ್ಲಿಯೇ ಮೊಟ್ಟಮೊದಲ ಮೋಟಾರು ಚಾಲನಾ ಪರವಾನಗಿಯನ್ನು ಹೆಣ್ಣೆಂದು ಪಡೆದುಕೊಂಡ ಅಕೈ ಪದ್ಮಶಾಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಉತ್ತಮ ಗಾಯಕಿ ಎನಿಸಿಕೊಂಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಆರ್.ಆರ್. ಪದಕಿ

ಜನಸಾಮಾನ್ಯರ ಬದುಕಿನ ಅತ್ಯವಶ್ಯಕ ಸೌಲಭ್ಯವಾದ ಆರೋಗ್ಯ ನಿರ್ವಹಣೆಯಲ್ಲಿ ಸುಧೀರ್ಘವಾದ ೬೦ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ವೈದ್ಯರು. ಡಾ|| ಆರ್.ಆರ್.ಪದಕಿ.
ಮುದ್ದೇಬಿಹಾಳದಲ್ಲಿ ವೈದ್ಯಕೀಯ ಸೇವೆಗಳನ್ನು ಆರಂಭಿಸಿ ರೋಗ ಪತ್ತೆ ಹಚ್ಚುವಲ್ಲಿ ನಿಪುಣತೆ ಸಾಧಿಸಿದ ಆ.ಆ.ಪದಕಿ ಅನೇಕ ರೋಗಿಗಳು ಶೀಘ್ರವಾಗಿ ಗುಣಮುಖವಾಗುವಂತೆ ನೋಡಿಕೊಂಡರು.
ಅಶಕ್ತರು ಹಾಗೂ ಬಡವರಿಗೆ ಉಚಿತವಾದ ಆರೋಗ್ಯ ನೆರವು ನೀಡುವುದನ್ನು ಮೊದಲಿನಿಂದಲೂ ರೂಢಿಸಿಕೊಂಡ ಪದಕಿಯವರು ಅನೇಕ ಆರೋಗ್ಯ ಶಿಬಿರಗಳನ್ನು ವ್ಯವಸ್ಥೆ ಮಾಡಿದವರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೀರಾ ಶ್ರೀನಿವಾಸ ಶಾನಭಾಗ

ಶ್ರೀಮತಿ ಮೀರಾ ಶ್ರೀನಿವಾಸ ಶಾನಭಾಗ ಅವರು ವೃತ್ತಿಜೀವನದ ಒತ್ತಡಗಳ ನಡುವೆಯೂ ಸಾಮಾಜಿಕ ಸೇವಾ ಕಾರ್ಯವನ್ನು ಪ್ರವೃತ್ತಿಯಾಗಿ ಕೈಗೊಂಡವರು. ನಿವೃತ್ತಿಯ ನಂತರ ಪೂರ್ಣ ವೇಳೆಯನ್ನು ಸಮಾಜದ ಕೈಂಕರ್ಯದಲ್ಲಿ ತೊಡಗಿಸಿದ್ದಾರೆ.
ಸ್ವಂತ ಜಮೀನನ್ನು ಸಾರ್ವಜನಿಕ ಕಾರ್ಯಗಳಿಗೆ ದಾನ ನೀಡಿರುವುದೇ ಅಲ್ಲದೆ ಜನರಲ್ಲಿ ಧಾರ್ಮಿಕ ಚಿಂತನೆಗಳನ್ನು ರೂಢಿಸುವ ಸಲುವಾಗಿ ಮಠ, ಮಂದಿರಗಳನ್ನು ಸ್ಥಾಪಿಸಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ನೆರವಾಗುತ್ತಿರುವ ಮೀರಾ ಶಾನಭಾಗ ಜೀವನ ಸಂಧ್ಯಾಕಾಲದಲ್ಲಿ ಗೌರವದ ಬದುಕನ್ನು ಬಾಳಲು ಅನುವಾಗುವಂತೆ ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ.
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಮೀರಾ ಅವರು ಸಮಾಜದ ಮೂಲ ಅವಶ್ಯಕತೆಗಳಾದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಕಾಲಿನ್ ಕುಮಾರ್

ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಶ್ರೀಮತಿ ಕಾರಿನ್ ಕುಮಾರ್ ೧೯೭೮ರಲ್ಲಿ ವಿಮೋಚನಾ ಎಂಬ ಮಹತ್ವದ ಸ್ತ್ರೀವಾದಿ ಸಂಘಟನೆಯನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಆಸರೆಯಾಗಿದ್ದಾರೆ.
ಕಳೆದ ನಲವತ್ತೂರು ವರ್ಷಗಳಿಂದ ಹಲವಾರು ಸ್ತ್ರೀಪರವಾದ ಚಿಂತನೆಗಳನ್ನು ಪ್ರಚಾರ ಮಾಡುತ್ತ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳೇ ಅಲ್ಲದೆ ಮಹಿಳೆಯರ ಆರ್ಥಿಕಾಭಿವೃದ್ಧಿಗೂ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಉತ್ತರ ಆಫ್ರಿಕಾ ಹಾಗೂ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಗಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಬಹುಮುಖ ಅಭಿವೃದ್ಧಿಗೆ ನೆರವಾಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಎಸ್. ಹೆಳವರ್

ಅಲೆಮಾರಿ ಜನಾಂಗಕ್ಕೆ ಸೇರಿದ ಹೆಳವ ಪಿಚ್ಚಗುಂಟಲು ಸಮುದಾಯಕ್ಕೆ ಸೇರಿದ ಎಂ.ಎಸ್.ಹೆಳವ ಈ ಜನಾಂಗದಲ್ಲಿ ಮೊದಲ ಪದವೀಧರ ಹಾಗೂ ಮೊಟ್ಟಮೊದಲ ವಕೀಲರು. ವಿಜಯಪುರ ಜಿಲ್ಲೆಗೆ ಸೇರಿದವರಾದ ಎಂ.ಎಸ್.ಹೆಳವ ಸ್ವಂತ ಪರಿಶ್ರಮದಿಂದ ಉಚಿತ ವಿದ್ಯಾರ್ಥಿ ನಿಲಯಗಳಲ್ಲಿ ವಾಸ ಮಾಡುತ್ತ, ವಿಜ್ಞಾನ ಪದವಿಯನ್ನು ಹಾಗೂ ಕಾನೂನು ಪದವಿಯನ್ನು ಪಡೆದವರು.
ಕೇವಲ ೫೩,೦೦೦ ಜನಸಂಖ್ಯೆ ಉಳ್ಳ ಪಿಚ್ಚಗುಂಟಲು ಜನಾಂಗದ ಎಂ.ಎಸ್.ಹೆಳವರ್ ಅವರು ನಂತರ ವಕೀಲಿಕೆ ಕೈಗೊಂಡರು. ಡಿ.ದೇವರಾಜ ಅರಸು ಅವರ ಮಾರ್ಗದರ್ಶನದಲ್ಲಿ ಸಮಾಜಸೇವೆಗೆ ಕಾಲಿಟ್ಟ ಹೆಳವರ್, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಜಿಲ್ಲಾ ಹಾಗೂ ತಾಲೂಕು ನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿರುವ ಎಂ.ಎಸ್. ಹೆಳವರ್ ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಅಲೆಮಾರಿ ಜನಾಂಗಕ್ಕಾಗಿ ಪುಟ್ಟ ಗ್ರಾಮಗಳನ್ನು ಸರ್ಕಾರದ ನೆರವಿನಿಂದ ಅಸ್ಥಿತ್ವಕ್ಕೆ ತಂದರು. ಅಲೆಮಾರಿ ಜನಾಂಗದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಲವು ಬಗೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯರಾಗಿರುವ ಹೆಳವರ್ ಅವರು ಅಲೆಮಾರಿ ಜನಾಂಗಗಳಿಗೆ ಸಂವಿಧಾನದ ಸವಲತ್ತುಗಳನ್ನು ಕೊಡಿಸುವಲ್ಲಿ ಈಗಲೂ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶಾರದಾ ರಾಜಣ್ಣ

ರಾಮನಗರ ಜಿಲ್ಲೆಯಲ್ಲಿ ಹುಟ್ಟಿ ಪ್ರಸ್ತುತ ಅಮೆರಿಕದಲ್ಲಿ ವಾಸವಾಗಿರುವ ಪದವೀಧರೆ ಶ್ರೀಮತಿ ಶಾರದಾ ರಾಜಣ್ಣ ಅವರು ವೃತ್ತಿಯಿಂದ ಕಂಪ್ಯೂಟರ್ ತಜ್ಞರು, ಅಮೆರಿಕದಲ್ಲಿ ಕೆ.ಆರ್.ಎಸ್. ಎಂಬ ಸಮಾಜಸೇವಾ ಸಂಸ್ಥೆಯನ್ನು ರಚಿಸಿಕೊಂಡು, ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದವರು.
ಕೆ.ಆರ್.ಎಸ್.ಸಂಸ್ಥೆಯ ಮೂಲಕ ಭಾರತದ ಗಾಮೀಣ ಭಾಗಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ವಿದ್ಯಾಭ್ಯಾಸ, ಆರೋಗ್ಯ, ಆಹಾರಗಳನ್ನು ಒದಗಿಸಲು ಪ್ರತ್ಯೇಕ ಕಾರ್ಯಕ್ರಮಗಳನ್ನು ಇವರು ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಅನೇಕ ಗ್ರಾಮಗಳನ್ನು ದತ್ತುಸ್ವೀಕಾರ ಮಾಡಿದ್ದಾರೆ. ಶಾಲಾ ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಮಹಿಳೆಯರಿಗೆ ಕಿರು ಸಾಲಗಳ ವಿತರಣೆ, ಗ್ರಂಥಾಲಯಗಳ ಸ್ಥಾಪನೆ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮೊದಲಾದ ಕಾರ್ಯಕ್ರಮಗಳನ್ನು ಶಾರದಾ ರಾಜಣ್ಣ ಅವರು ತಮ್ಮ ಟ್ರಸ್ಟ್ ಮೂಲಕ ನಿರ್ವಹಿಸುತ್ತಿದ್ದಾರೆ.
ಯುವ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ದೊರಕಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಇವರು ವಿದ್ಯಾರ್ಥಿ ನಿಲಯಗಳನ್ನು ಬೆಂಗಳೂರು, ತುಮಕೂರು, ಮೊದಲಾದ ಜಿಲ್ಲೆಗಳಲ್ಲಿ ಸ್ಥಾಪಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗಾಗಿಯೂ ಶ್ರಮಿಸಿರುವ ಅನಿವಾಸಿ ಭಾರತೀಯ ಶಾರದಾ ರಾಜಣ್ಣ ನೆರವು ನೀಡಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್. ತಿಪ್ಪೇಸ್ವಾಮಿ

ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರಲ್ಲಿ ಒಬ್ಬರಾದ ಎಸ್.ತಿಪ್ಪೇಸ್ವಾಮಿ ದೇಶ ವಿದೇಶಗಳ ಅನೇಕ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಚಿತ್ರಗಳ ಕ್ಯಾಮೆರಾಮನ್ ಆಗಿಯೂ ಸೇವೆ ಸಲ್ಲಿಸಿರುವ ತಿಪ್ಪೇಸ್ವಾಮಿ ಅವರು ಅನೇಕ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಂವಹನ ಮಾಧ್ಯಮದ ವಿದ್ಯಾರ್ಥಿಗಳಿಗೆ ಗೌರವ ಉಪನ್ಯಾಸಕರಾಗಿ ಕೆಲಸ ಮಾಡಿರುವ ಇವರು ಸಿನಿಮಾ ಪತ್ರಿಕೋದ್ಯಮದಲ್ಲಿಯೂ ಛಾಯಾಗ್ರಾಹಕ ಹಾಗೂ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪತ್ರಕರ್ತರಾಗಿ ೨೫ ವರ್ಷಗಳಿಂದ ನಾಡಿನ ಹಲವಾರು ಪತ್ರಿಕೆಗಳಿಗೆ ಹಾಗೂ ಚೆನೈನಿಂದ ಪ್ರಕಟವಾಗುತ್ತಿದ್ದ ಸಿನಿಮಾ ಹಾಗೂ ಮಹಿಳಾ ಮಾಸಪತ್ರಿಕೆಗಳಿಗೂ ಇವರು ಛಾಯಾಚಿತ್ರಗಳನ್ನು ಒದಗಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಫಕೀರಡ್ಡೆಪ್ಪ ಭೀ. ಗದ್ದಿಕೇರಿ

ಸ್ವಾತಂತ್ರ್ಯ ಚಳುವಳಿ ಹಾಗೂ ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಪಾಲುಗೊಂಡು ಗಾಂಧೀ ಪ್ರಣೀತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ತಮ್ಮ ಗ್ರಾಮದಲ್ಲೇ ಖಾದಿ ಉದ್ಯೋಗ ಕೇಂದ್ರ ಸ್ಥಾಪಿಸಿ ಯುವಕರಿಗೆ ದುಡಿಯಲು ಅವಕಾಶ ಒದಗಿಸಿದವರು ಕೃಷಿಕ ಗದ್ದಿಕೇರಿ ಅವರು
ಅಕ್ಷರ ವಂಚಿತ ಬಡಮಕ್ಕಳ ವಿದ್ಯಾರ್ಜನೆಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದೆ ಅಲ್ಲದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಡವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಪ್ರವೇಶ ದೊರಕಿಸಿಕೊಟ್ಟು ಅವರ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟವರು ಫಕೀರಡ್ಡೆಪ್ಪ ಭೀಮರಡ್ಡೆಪ್ಪ ಗದ್ದಿಕೇರಿ.
ತಮ್ಮ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹಣವನ್ನು ಗದ್ದಿಕೇರಿ ಅವರು ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ದಾಸೋಹಕ್ಕಾಗಿ ನೀಡಿದೇ ಅಲ್ಲದೆ ಸ್ವಾವಲಂಬನೆಯ ಉದ್ಯೋಗ ನಡೆಸಿಕೊಳ್ಳಲು ಆರ್ಥಿಕ ನೆರವು ನೀಡುವಲ್ಲಿ ಸಹಾಯ ಮಾಡಿರುವುದು ಅನುಕರಣೀಯ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಲಕ್ಷ್ಮಣ್ ತೆಲಗಾವಿ

ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಲಕ್ಷ್ಮಣ ತೆಲಗಾವಿ ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆ ಅನನ್ಯ. ಚಿತ್ರದುರ್ಗದವರಾದ ಲಕ್ಷ್ಮಣ ತೆಲಗಾವಿ ಚಿತ್ರದುರ್ಗದ ಅಮೂಲಾಗ್ರ ಸಂಶೋಧನೆ ನಡೆಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ತೆಲಗಾವಿಯವರು ಕರ್ನಾಟಕದ ಚಾರಿತ್ರಿಕ ಪುಟಗಳನ್ನು ಸಮರ್ಥ ಸಂಶೋಧನೆ ಹಾಗೂ ಉತ್ಪನನದ ಮೂಲಕ ಕಟ್ಟಿಕೊಟ್ಟಿದ್ದು, ಅವು ಅತ್ಯಂತ ಶ್ರೇಷ್ಠ ಆಕರಗಳಾಗಿವೆ. ಸಂಶೋಧನೆ ಹಾಗೂ ಸಾಹಿತ್ಯವನ್ನು ಬೆಸುಗೆ ಮಾಡಿರುವ ಲಕ್ಷ್ಮಣ ತೆಲಗಾವಿಯವರು ಕರ್ನಾಟಕ ಇತಿಹಾಸಕ್ಕೆ ಕೊಟ್ಟಿರುವ ಕೊಡುಗೆ ಅತ್ಯಂತ ಗಮನಾರ್ಹ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹು ಉಪಯೋಗಿ ಸಂಶೋಧನಾ ವಿಭಾಗವನ್ನು ರೂಪಿಸಿರುವ ಲಕ್ಷ್ಮಣ ತೆಲಗಾವಿ ಅವರು ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಅಕರಗಳನ್ನು ಮತ್ತು ಮಾರ್ಗದರ್ಶನ ನೀಡುವವರಲ್ಲಿ ಪ್ರಮುಖರೆನಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಹೆಚ್.ಎಸ್. ಪಾಟೀಲ

ಹಿಂದುಳಿದ ಕೊಪ್ಪಳ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಹೆಚ್.ಎಸ್.ಪಾಟೀಲ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿದ್ದು, ಸಾಹಿತ್ಯ ಸಮ್ಮೇಳನ ಸ್ವಾಗತ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ತಳಮಳ ಪತ್ರಿಕೆಗೆ ಅನೇಕ ಲೇಖನಗಳನ್ನು ಬರೆದಿರುವ ಇವರು ಹನ್ನೊಂದು ಕೃತಿಗಳನ್ನು ರಚಿಸಿದ್ದು, ಏಳು ಕೃತಿಗಳನ್ನು ಸಂಪಾದಿಸಿದ್ದಾರೆ.
ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಶನಿಮಹದೇವಪ್ಪ

ನಾಡಿನ ಅನೇಕ ವೃತ್ತಿ ನಾಟಕ ಸಂಸ್ಥೆಗಳು ಹಾಗೂ ಹವ್ಯಾಸಿ ನಾಟಕ ಸಂಘಗಳಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಮಹದೇವಪ್ಪ ‘ರಾಜ ವಿಕ್ರಮ’ ನಾಟಕದಲ್ಲಿ ಶನಿದೇವರ ಪಾತ್ರವನ್ನು ಹೆಚ್ಚು ಬಾರಿ ಮಾಡಿದರಿಂದ ಶನಿಮಹದೇವಪ್ಪ ಎಂದೇ ಹೆಸರಾದರು. ಮಂಡ್ಯ ಜಿಲ್ಲೆಯ ಬೆಳಕವಾಡಿಯವರಾದ ಶನಿಮಹದೇವಪ್ಪ ಧರ್ಮಸ್ಥಳ ಮಹಾತ್ಮ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ೩೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಖಳನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಭಕ್ತ ಕುಂಬಾರ, ಬಡವರ ಬಂಧು, ದೇವತಾ ಮನುಷ್ಯ, ಭಕ್ತ ಪ್ರಹ್ಲಾದ, ನನ್ನ ಶಪಥ ಈ ಚಿತ್ರಗಳಲ್ಲಿ ಶನಿಮಹದೇವಪ್ಪನವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಿರ್ವಹಿಸಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಾಧು ಕೋಕಿಲ

ವಾದ್ಯಗೋಷ್ಟಿಯಲ್ಲಿ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರಾಗಿದ್ದ ಸಗಾಯ್ ರಾಜ್ ಇಂದು ಸಾಧುಕೋಕಿಲಾ ಆಗಿ ಕನ್ನಡದ ಜನಪ್ರಿಯ ಚಲನಚಿತ್ರ ನಿರ್ದೇಶಕರು, ಸಂಗೀತ ನಿರ್ದೇಶಕರು, ನಟ ಹಾಗೂ ಹಿನ್ನೆಲೆ ಗಾಯಕರಾಗಿ ಪ್ರಸಿದ್ದರು.
ಸಾಧುಕೋಕಿಲಾ ಮೊದಲಿಗೆ ಸಂಗೀತ ಸಂಯೋಜಕರಾಗಿದ್ದು, ನಂತರ ಚಿತ್ರ ನಿರ್ದೇಶಕರಾಗಿ ಉಪೇಂದ್ರ ಅವರ ಚಿತ್ರಗಳನ್ನು ನಿರ್ದೇಶಿಸಿದರು. ಹಾಸ್ಯ ಪಾತ್ರಗಳಿಗೆ ಹೊಸ ರೂಪ ಕೊಟ್ಟ ಸಾಧುಕೋಕಿಲಾ ನಾಯಕ ನಟರಾಗಿಯೂ ಚಿತ್ರಗಳಲ್ಲಿ ಅಭಿನಯಿಸಿದರು.
ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಎರಡೂ ಪ್ರಕಾರಗಳಲ್ಲಿ ನೈಪುಣ್ಯತೆ ಪಡೆದಿರುವ ಸಾಧು ಕೋಕಿಲಾ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ಆಡುಭಾಷೆಗೆ ಸಂಗೀತವನ್ನು ಸಂಯೋಜಿಸುವ ಕಲೆಯಲ್ಲಿ ಗಮನಾರ್ಹ ಸಾಧನೆ ಸಾಧುಕೋಕಿಲಾ ಅವರದು.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸದಾಶಿವ ಬ್ರಹ್ಮಾವರ

ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಂತರ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಸದಾಶಿವ ಬ್ರಹ್ಮಾವರ ಅವರು ೫ ದಶಕಗಳಿಂದ ನಿರಂತರವಾಗಿ ಚಲನಚಿತ್ರ ಕ್ಷೇತ್ರದಲ್ಲಿದ್ದಾರೆ.
ಚಲನಚಿತ್ರಗಳಲ್ಲಿ ಪೋಷಕಪಾತ್ರಗಳಲ್ಲಿ ಅಭಿನಯಿಸುತ್ತಾ ಪ್ರೇಕ್ಷಕರ ಗಮನ ಸೆಳೆದಿರುವ ಸದಾಶಿವ ಬ್ರಹ್ಮಾವರ್ ಅವರು ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಪಾತ್ರ ಪುಟ್ಟದಾಗಲಿ ದೊಡ್ಡದಾಗಲಿ ಸಮರ್ಥವಾಗಿ ಅಭಿನಯಿಸುವ ಅಪರೂಪದ ಕಲಾವಿದರಲ್ಲಿ ಒಬ್ಬರಾದ ಸದಾಶಿವ ಬ್ರಹ್ಮಾವರ್ ಇಳಿ ವಯಸ್ಸಿನಲ್ಲಿಯೂ ಜೀವನಕ್ಕಾಗಿ ಅಭಿನಯ ಕಲೆಯನ್ನು ನಂಬಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಾಹುಕಾರ್ ಜಾನಕಿ

ಕನ್ನಡ ಚಿತ್ರರಂಗದ ಮೂಲಕ ಚಲನಚಿತ್ರ ಜಗತ್ತಿಗೆ ಕಾಲಿಟ್ಟ ಸಾಹುಕಾರ್ ಜಾನಕಿ ೧೯೫೦ ಹಾಗೂ ೬೦ ನೇ ದಶಕಗಳಲ್ಲಿ ಕನ್ನಡದ ಅನೇಕ ಚಿತ್ರಗಳ ನಾಯಕ ನಟಿಯಾಗಿದ್ದವರು. ಮದರಾಸ್ ನಲ್ಲಿ ದಕ್ಷಿಣ ಭಾರತದ ಚಲನಚಿತ್ರ ಉದ್ಯಮ ನೆಲೆನಿಂತಿದ್ದ ಸಂದರ್ಭದಲ್ಲಿ ಸಾಹುಕಾರ್ ಜಾನಕಿ ತಮಿಳು ಹಾಗೂ ತೆಲುಗು ಚಿತ್ರಗಳ ಜನಪ್ರಿಯ ಕಲಾವಿದೆಯಾಗಿ ಹೊರಹೊಮ್ಮಿದರು.
ಕನ್ನಡದ ಡಾ|| ರಾಜ್ಕುಮಾರ್, ತಮಿಳಿನ ಎಮ್.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ತೆಲುಗಿನ ಎನ್. ಟಿ. ರಾಮರಾವ್, ಆರ್. ನಾಗೇಶ್ವರರಾವ್. ಸೇರಿದಂತೆ ಎಲ್ಲಾ ದಕ್ಷಿಣ ಭಾಷೆಗಳ ಪ್ರಮುಖ ನಾಯಕನಟರೊಂದಿಗೆ ಅಭಿನಯಿಸಿರುವ ಖ್ಯಾತಿ ಸಾಹುಕಾರ್ ಜಾನಕಿಯವರದು.
ಮುನ್ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಪಾತ್ರನಿರ್ವಹಿಸಿರುವ ಸಾಹುಕಾರ್ ಜಾನಕಿಯವರು ಚಲನಚಿತ್ರ ಉದ್ಯಮದಿಂದ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್.ಕೆ. ಸರೋಜ

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಮಹಿಳಾ ರೇಡಿಯಾಲಜಿಸ್ಟ್ ಎನಿಸಿಕೊಂಡ ಡಾ|| ಸರೋಜ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ನ್ಯೂಕ್ಲಿಯರ್ ಮೆಡಿಸನ್ಲ್ಲಿ ಉನ್ನತ ಪದವಿ ಪಡೆದ ಮೊದಲ ಮಹಿಳೆ. ಇವರು ಕರ್ನಾಟಕದ ಪ್ರಥಮ ನ್ಯೂಕ್ಲಿಯರ್ ಮೆಡಿಸನ್ ಉನ್ನತ ಶಿಕ್ಷಣ ಪಡೆದ ವೈದ್ಯರು.
ಮುಂಬೈನ ಬಾಬಾ ರಿಸಚ್ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಇವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂಕ್ಲಿಯ ವೈದ್ಯಕೀಯ ವಿಭಾಗವನ್ನು ಸ್ಥಾಪಿಸಿದರು. ನಮ್ಮ ರಾಜ್ಯದಲ್ಲಿ ನ್ಯೂಕ್ಲಿಯರ್ ವಿಭಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಇದು. ಗೌರಿಬಿದನೂರು ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಕಾಲೇಜು ದಿನಗಳಲ್ಲಿ ಎನ್ ಸಿಸಿ ಕೆಡೆಟ್ ಆಗಿದ್ದು ಭೂಕಂಪ ಮೊದಲಾದ ಪ್ರಾಕೃತಿಕ ದುರಂತಗಳ ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ ಡಾ|| ಸರೋಜ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನ ನ್ಯೂಕ್ಲಿಯ ಮೆಡಿಸನ್ ವಿಭಾಗದ ಮುಖ್ಯಸ್ಥೆಯಾಗಿದ್ದರು.
ಆರೋಗ್ಯ ರಕ್ಷಣೆಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಶಿಭಿರಗಳನ್ನು ಆಯೋಜಿಸಿದ್ದ ಡಾ|| ಆರ್. ಕೆ. ಸರೋಜರವರು ಮಾಧ್ಯಮಗಳ ಮೂಲಕ ಆರೋಗ್ಯ ರಕ್ಷಣೆ ಕುರಿತಂತೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಪ್ರೊ. ಅಬ್ದುಲ್ ಅಜೀಜ್

ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜ ಶಿಕ್ಷಣದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಸಮಾಜ ವಿಜ್ಞಾನಿಗಳಲ್ಲಿ ಡಾ|| ಅಬ್ದುಲ್ ಅಜೀಜ್ ಅವರು ಅಗ್ರಮಾನ್ಯರು. ಕೋಲಾರದವರಾದ ಇವರು ಅರ್ಥಶಾಸ್ತ್ರವನ್ನು ಅಭ್ಯಾಸ ಮಾಡಿದ್ದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ.
ಬೆಂಗಳೂರಿನಲ್ಲಿರುವ ಐಸೆಕ್ (ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡಿದ ಅಬ್ದುಲ್ ಅಜೀಜ್ ಅವರು ಹಲವು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ದಶಕಗಳಿಂದ ಗ್ರಾಮೀಣಾಭಿವೃದ್ಧಿ, ಪ್ರಾದೇಶಿಕ ಅಸಮಾನತೆ, ಅಭಿವೃದ್ಧಿ ವಿಕೇಂದ್ರೀಕರಣ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸುತ್ತ ಬಂದಿರುವ ಅಬ್ದುಲ್ ಅಜೀಜ್ ಅವರು ಕರ್ನಾಟಕ ಸರ್ಕಾರದ ಅನೇಕ ಕಾರ್ಯಕ್ರಮಗಳಿಗೆ ಪ್ರಮುಖ ನೀತಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಇವರು ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಎ.ಎಸ್. ಕಿರಣ್ಕುಮಾರ್

ಇಸ್ರೋ ವಿಜ್ಞಾನಿಯಾಗಿದ್ದು ಎ.ಎಸ್. ಕಿರಣ್ ಕುಮಾರ್ ಅವರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ದೇಶವಿದೇಶಗಳಲ್ಲಿ ಹೆಸರು ಮಾಡಿದ್ದು, ಪ್ರಸ್ಥುತ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಕಾರ್ಯಾವಧಿಯಲ್ಲಿ ಅನ್ನೋ ಸ್ಯಾಟ್ ಎಂಬ ಉಪಗ್ರಹವೂ ಸೇರಿದಂತೆ ಹತ್ತು ಹಲವು ಆರೋಗ್ಯ, ಶಿಕ್ಷಣ ಸಂಬಂಧಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸುವಲ್ಲಿ ಇಸ್ರೋ ಸಫಲವಾಗಿದೆ. MOM ಮಿಷನ್ ನೊಂದಿಗೂ ಕಿರಣಕುಮಾರ್ ಅವರ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮುತ್ತಣ್ಣ ಪೂಜಾರ

ಕುರಿ ಹಿಂಡಿನೊಂದಿಗೆ ಊರೂರು ಸುತ್ತುವ ಪ್ರವೃತ್ತಿಯ ಮುತ್ತಣ್ಣ ಪೂಜಾರ್ ಕೆಲದಿನಗಳ ನಂತರ ಒಂದೇ ಕಡೆ ನೆಲೆ ನಿಂತು ಜಮೀನು ಖರೀದಿಸಿ ಬೇಸಾಯ ಆರಂಭಿಸಿ ಯಶಸ್ಸು ಗಳಿಸಿದವರು.
ಸತತ ಪರಿಶ್ರಮ ಹಾಗೂ ಹೊಸ ದಾರಿಗಳನ್ನು ಅರಿತುಕೊಂಡ ಮುತ್ತಣ್ಣ ಪೂಜಾ ಈಗ ಮುವ್ವತ್ತಾರು ಎಕರೆ ಭೂಮಿಯನ್ನು ನಂದನವನವನ್ನಾಗಿ ಮಾಡಿದ್ದು, ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಭತ್ತ, ಕಬ್ಬು, ತೋಟಗಾರಿಕೆ ಬೆಳೆಗಳು ಹಾಗೂ ಜೇನು,ಮೀನು ಸಾಕಾಣಿಕೆಯನ್ನು ಕೈಗೊಂಡಿದ್ದಾರೆ.
ರಸಗೊಬ್ಬರಗಳ ಬಳಕೆಯಿಂದ ದೂರವಿರುವ ಮುತ್ತಣ್ಣ, ತಮ್ಮ ಜಮೀನಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಮಾಡುವುದೇ ಅಲ್ಲದೆ, ನೂರಾರು ಕುರಿಗಳನ್ನು ಮೇಯಿಸಿ, ಅದರ ಹಿಕ್ಕೆಯನ್ನು ಬೇಸಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಬನ್ನೂರು ಕೃಷ್ಣಪ್ಪ

ಬೇಸಾಯ ಹೆಚ್ಚಿನ ಬಂಡವಾಳವನ್ನು ಬೇಡುವ ಈ ಕಾಲದಲ್ಲಿ ಶೂನ್ಯ ಬಂಡವಾಳದಿಂದ ನೈಸರ್ಗಿಕ ಬೆಳೆ ತೆಗೆದು ಆದಾಯ ಸಂಪಾದಿಸುವ ದೇಸೀಯ ಮಾರ್ಗವನ್ನು ಕಂಡುಕೊಂಡವರು ಬನ್ನೂರು ಕೃಷ್ಣಪ್ಪ.
ಸಹಜ ಕೃಷಿ ತಜ್ಞ ಸುಭಾಶ ಪಾಲೇಕಾರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಔಷಧೋಪಚಾರ ಹಾಗೂ ಗೊಬ್ಬರಗಳನ್ನು ಬಳಸಿ, ಸಹಜ ಕೃಷಿಯತ್ತ ಮರಳುವ ಮಾರ್ಗದಲ್ಲಿರುವ ಬನ್ನೂರು ಕೃಷ್ಣಪ್ಪ ಫಲವತ್ತಾದ ಭೂಮಿಗೆ ಯಾವುದೇ ಕುತ್ತಾಗದಂತೆ ಸಾವಯವ ಕೃಷಿಯಿಂದ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಡಾ. ಮಲ್ಲಣ್ಣ ನಾಗರಾಳ

ನೀರಿನ ಕೊರತೆಯನ್ನು ನೀಗಿಸಿ, ಲಭ್ಯ ನೀರನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಬೇಸಾಯ ಮಾಡುವ ಪದ್ಧತಿಗಳನ್ನು ರೂಢಿಗೆ ತರುವಲ್ಲಿ ಯಶ ಸಾಧಿಸಿದ ತಜ್ಞರಾದ ಹುನಗುಂದದ ಡಾ|| ಮಲ್ಲಣ್ಣ ನಾಗರಾಳ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ.
ಮಣ್ಣು ಹಾಗೂ ನೀರನ್ನು ಜತನದಿಂದ ಕಾಪಾಡುವುದರ ಮೂಲಕ ಉತ್ತಮವಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ಉಪಯೋಗಿಸುವ ಪರಿಪಾಠವನ್ನು ನಮ್ಮ ಪೂರ್ವಜರು ಇಟ್ಟುಕೊಂಡಿದ್ದರಿಂದ ಬೇಸಾಯವೊಂದೇ ಮೂಲಾಧಾರವಾಗಿತ್ತು. ಇದನ್ನು ನಿರ್ಲಕ್ಷಿಸಿದ್ದರಿಂದ ಕೃಷಿ ವಲಯ ಸಾಕಷ್ಟು ಪೆಟ್ಟು ತಿಂದಿದೆ ಎನ್ನುವ ಮಲ್ಲಣ್ಣ ನಾಗರಾಳ ಹಳೆಯ ವಿಧಾನಗಳಿಂದಲೇ ಕೃಷಿ ಮಾಡುವ ಮೂಲಕ ಹಳೆಯ ಯಶಸ್ಸನ್ನು ಇಂದಿನ ಕಾಲಕ್ಕೆ ನಿಜ ಮಾಡಿ ತೋರಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಡಾ. ಪ್ರಕಾಶ್ ಭಟ್

ಹಳ್ಳಿಗಾಡಿನ ಅಭಿವೃದ್ಧಿಯಲ್ಲಿ ಸಮುದಾಯ ಸಂಪೂರ್ಣವಾಗಿ ಪಾಲುಗೊಳ್ಳುವುದು ಹಾಗೂ ಕೃಷಿ ಕ್ಷೇತ್ರದಲ್ಲಿ ಸಬಲೀಕರಣ ಮಾಡುವ ಉದ್ದೇಶದಿಂದ ಧಾರವಾಡದಲ್ಲಿ ಸ್ಥಾಪನೆಗೊಂಡಿರುವ SCOPE ಎಂಬ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಡಾ|| ಪ್ರಕಾಶ ಭಟ್.
ಗ್ರಾಮೀಣ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಜನತೆಗೆ ಅರಿವು ಮೂಡಿಸುವ ಹಾಗೂ ಆರ್ಥಿಕ ಚೈತನ್ಯವನ್ನು ರೂಪಿಸಿಕೊಳ್ಳಲು ಮಾರ್ಗಗಳನ್ನು ಸಿದ್ಧ ಮಾಡುವ ಕಾರ್ಯಕ್ರಮಗಳನ್ನು ಡಾ|| ಪ್ರಕಾಶ ಭಟ್ ಅವರು ತಮ್ಮ ಸ್ಕೋಪ್ ಸಂಸ್ಥೆ ಮೂಲಕ ಅನುಷ್ಠಾನಗೊಳಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಸಿ. ತಮ್ಮಣ್ಣಾಚಾರ್

ಎಚ್.ಸಿ.ತಮ್ಮಣ್ಣಾಚಾರ್ ಅವರು ಕಳೆದ ಆರು ದಶಕಗಳಿಂದಲೂ ಸೂತ್ರದ ಗೊಂಬೆ ಕಲಾ ಪ್ರದರ್ಶನದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಅವರು ತಮ್ಮ ತಂದೆಯವರಿಂದ ಪರಂಪರಾನುಗತವಾಗಿ ಬಂದ ಸೂತ್ರದ ಗೊಂಬೆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದು, ಅದರಲ್ಲಿ ವಿಶೇಷ ಪರಿಣತಿಯನ್ನು ಸಾಧಿಸಿದ್ದಾರೆ.
ಸೂತ್ರದ ಗೊಂಬೆ ನಾಟಕಗಳನ್ನು ತಯಾರಿಸಿ ಪ್ರದರ್ಶನಗಳಿಗೆ ಅಣಿಗೊಳಿಸುವ ಕಾಯಕದಲ್ಲಿ ತೊಡಗಿರುವ ತಮ್ಮಣ್ಣಾಚಾರ್ ಬಣ್ಣ ಬಣ್ಣದ ಗೊಂಬೆಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.

Categories
ಬಯಲಾಟ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಕ್ರವ್ವ ಯಲ್ಲವ್ವ ಪಾತ್ರೋಟ

ಅಜ್ಜಿ ಗಂಗವ್ವ ಹಾಗೂ ತಾಯಿ ಯಲ್ಲಪ್ಪಾ ಪಾತ್ರೋಟ ಇವರಿಂದ ಬಯಲಾಟ, ಸಣ್ಣಾಟ ಕಲೆಯನ್ನು ಕಲಿತು ನೈಪುಣ್ಯತೆಯನ್ನು ಸಾಧಿಸಿದ ಕಲಾವಿದೆ ಸಕ್ರವ್ವ ಯಲ್ಲವ್ವ ಪಾತ್ರೋಟ ಅವರು.
ಬೆಳಗಾವಿಯಲ್ಲಿ ತಮ್ಮದೇ ಆದ ಸ್ವಂತ ತಂಡ ಕಟ್ಟಿಕೊಂಡು ನಾಡಿನುದ್ದಕ್ಕೂ ಈ ಕಲೆಯನ್ನು ಮುಂದುವರಿಸುತ್ತಿರುವ ಇವರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಸಂಶೋಧನಾ ಕೇಂದ್ರದಿಂದ ದೊಡ್ಡಾಟ ಉತ್ಸವದಲ್ಲಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಲೋಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Categories
ಯಕ್ಷಗಾನ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಯಕ್ಷಗಾನ ಅರ್ಥಧಾರಿಕೆಯಲ್ಲಿ ಅಪಾರ ನೈಪುಣ್ಯತೆ ಪಡೆದಿರುವ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿಗಳು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಸಾಹಿತಿ, ಪುರಾಣ ಪ್ರವಚನಕಾರ ಹಾಗೂ ಕೃಷಿಕರಾಗಿಯೂ ಸಾಧನೆಗೈದಿದ್ದಾರೆ.
ಯಕ್ಷಗಾನ ಅರ್ಥ ವಿವರಿಸುವಲ್ಲಿ ಕಳೆದ ಮೂರೂವರೆ ದಶಕಗಳಿಂದ ನಿರತರಾಗಿರುವ ಇವರು ಹಲವಾರು ಅರ್ಥಪೂರ್ಣ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಏಕಾಂಕ ನಾಟಕಗಳು, ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಉದ್ದಂಥ, ಮೊದಲಾದ ಕೃತಿಗಳನ್ನು ಕೊಟ್ಟಿರುವ ಶಾಸ್ತ್ರಿಗಳು ಯಕ್ಷಗಾನ ಭಾಗವತಿಕೆಯಲ್ಲಿಯೂ ಕೆಲವು ಕಾಲ ಸೇವೆ ಸಲ್ಲಿಸಿದವರು.
ಅರ್ಥಗಾರಿಕೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

Categories
ಯಕ್ಷಗಾನ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮಾರ್ಗೋಳಿ ಗೋವಿಂದ ಶೇರೇಗಾರ

ಯಕ್ಷಗಾನದಲ್ಲಿ ಮಹಿಳಾ ಪಾತ್ರಗಳಿಗೆ ಮಹತ್ವ ದೊರಕಿಸಿಕೊಟ್ಟ ಮೊದಲ ದೇವಿ ಪಾತ್ರಧಾರಿಗಳಾದ ಮಾರ್ಗೋಳಿ ಗೋವಿಂದ ಸೇರೆಗಾರ್ ಅವರು ನಿರಂತರವಾಗಿ ಐದು ದಶಕಗಳ ಕಾಲ ತೆಂಕುತಿಟ್ಟು ಯಕ್ಷಗಾನದಲ್ಲಿ ಜನಪ್ರಿಯ ಕಲಾವಿದರಾಗಿದ್ದವರು.
ಬಡಗು ತಿಟ್ಟಿನಲ್ಲಿಯೂ ಹೆಸರು ಮಾಡಿದ ಅವರು ನಿರಂತರವಾಗಿ ಪ್ರಸಿದ್ಧ ಯಕ್ಷಗಾನ ಮೇಳಗಳು ಹಾಗೂ ನುರಿತ ಕಲಾವಿದರೊಂದಿಗೆ ವೇಷ ಕಟ್ಟಿದ ಗೋವಿಂದ ಶೇರೆಗಾರ್ ಪ್ರತಿಭಾವಂತ ಯಕ್ಷಗಾನ ಕಲಾವಿದರಲ್ಲೊಬ್ಬರು.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಎಸ್. ಮರಿಸ್ವಾಮಿ

ಶಿಲ್ಪಕಲಾ ಶಿಕ್ಷಣವನ್ನು ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಪಡೆದುಕೊಂಡ ಎಸ್. ಮರಿಸ್ವಾಮಿ ಯವರು ವಿವಿಧ ಬಗೆಯ ವೈವಿಧ್ಯಮಯ ಶಿಲ್ಪಗಳನ್ನು ರೂಪಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.
ಈ ವರೆಗೂ ೧೨೦ ಕ್ಕೂ ಹೆಚ್ಚು ದೇವಾನುದೇವತೆಗಳ ಹಾಗೂ ಸಾಮಾಜಿಕ ಪರಿವರ್ತಕರ ಶಿಲ್ಪಗಳನ್ನು ಕೆತ್ತಿದ್ದು ಇದಕ್ಕಾಗಿ ಅನೇಕ ಬಹುಮಾನ ಹಾಗೂ ಗೌರವ ಪುರಸ್ಕಾರಗಳನ್ನು ಎಸ್. ಮರಿಸ್ವಾಮಿ ಪಡೆದಿದ್ದಾರೆ.
ವೈವಿಧ್ಯಮಯವಾದ ಶಿಲ್ಪಗಳನ್ನು ಸೃಷ್ಟಿಸುವಲ್ಲಿ ಕೌಶಲ್ಯ ಪಡೆದಿರುವ ಸಾತನೂರಿನ ಶಿಲ್ಪಿ ಎಸ್.ಮರಿಸ್ವಾಮಿಯವರಿಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಡಾ|| ಬಿ. ಆರ್. ಅಂಬೇಡ್ಕರ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮಲ್ಲಪ್ಪ ಮಳೆಯಪ್ಪ ಬಡಿಗೇರ

ಪರಂಪರಾನುಗತವಾಗಿ ಬಂದ ಕಾಷ್ಟಶಿಲ್ಪವನ್ನು ಮುಂದುವರೆಸಿರುವ ಮಲ್ಲಪ್ಪ ಮಳೆಯಪ್ಪ ಬಡಿಗೇರ ಅವರು ರಾಜ್ಯದ ಹೆಸರಾಂತ ರಥಶಿಲ್ಪಿಗಳಲ್ಲೊಬ್ಬರು. ದಕ್ಷಿಣ ಭಾರತದಾದ್ಯಂತ ವಿಭಿನ್ನ ಬಗೆಯ ಮತ್ತು ವಿವಿಧ ಅಳತೆಗಳ ರಥಗಳನ್ನು ಸೂಕ್ಷ್ಮ ಕುಸುರಿ ಕೆಲಸದೊಂದಿಗೆ ನಿರ್ಮಿಸಿಕೊಟ್ಟಿರುವ ಮಲ್ಲಪ್ಪ ರಥ ನಿರ್ಮಾಣದಲ್ಲಿ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತ
ಬಂದವರು.
ಅನೇಕ ವಿಶಿಷ್ಟ ಬಗೆಯ ವಿಭಿನ್ನ ವಿನ್ಯಾಸಗಳ ರಥಗಳನ್ನು ತಯಾರಿಸಿರುವ ಮಲ್ಲಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದವರು. ಕಟ್ಟಿಗೆ ಕೆತ್ತನೆಯ ಕೆಲಸದಲ್ಲಿ ಹೆಚ್ಚು ಮಂದಿ ಆಸಕ್ತಿ ವಹಿಸಬೇಕೆಂಬ ಉದ್ದೇಶದಿಂದ ೨೫ಕ್ಕೂ ಹೆಚ್ಚು ಕೆತ್ತನೆಯ ಉಚಿತ ಶಿಬಿರಗಳನ್ನು ನಡೆಸಿಕೊಟ್ಟಿರುವ ಮಲ್ಲಪ್ಪನವರು ಶಿಷ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ.
ರಥಶಿಲ್ಪದಲ್ಲಿ ನೈಪುಣ್ಯತೆ ಪಡೆದಿರುವ ಮಲ್ಲಪ್ಪ ಬಡಿಗೇರ ವಿಗ್ರಹ ಹಾಗೂ ಕಲಾಮೂರ್ತಿಗಳನ್ನು ತಯಾರಿಸುವಲ್ಲಿಯೂ ಪ್ರತಿಭಾವಂತರು. ಅನೇಕ ಉತ್ಸವಮೂರ್ತಿಗಳನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ಅವರದು.

Categories
ಚಿತ್ರಕಲೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಪಿ.ಎಸ್. ಕಡೇಮನಿ

ಗ್ರಾಮೀಣ ಪರಿಸರದ ದೃಶ್ಯಗಳನ್ನು ಚಿತ್ರಿಸುವಲ್ಲಿ ನೈಪುಣ್ಯತೆ ಸಾಧಿಸಿರುವ ಪೊನ್ನಪ್ಪ ಎಸ್.ಕಡೇಮನಿಯವರು ಚಿತ್ರಕಲಾ ಉಪನ್ಯಾಸಕರಾಗಿ ಕೆಲಸ ಮಾಡಿದವರು. ಕಲಾಶಿಕ್ಷಣವನ್ನು ಧಾರವಾಡ, ವಿಜಯಪುರ ಹಾಗೂ ಹಂಪಿಗಳಲ್ಲಿ ಪಡೆದುಕೊಂಡ ಇವರು ಕಲಾಉಪನ್ಯಾಸಕರಾಗಿ ವಿಜಯಪುರದ ಶ್ರೀಸಿದ್ದೇಶ್ವರ ಚಿತ್ರ ಕಲಾ ಮಹಾವಿದ್ಯಾಲಯದಲ್ಲಿ ಕೆಲಸ ಆರಂಭಿಸಿ ಅಲ್ಲಿಯೇ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು.
ಹಳ್ಳಿಗಾಡಿನ ವಾಸ್ತವ ಚಿತ್ರಣವನ್ನು ಜಲವರ್ಣ ಹಾಗೂ ತೈಲವರ್ಣಗಳಲ್ಲಿ ಚಿತ್ರಿಸುವುದನ್ನು ಕರಗತ ಮಾಡಿಕೊಂಡಿರುವ ಇವರು ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಮೈಸೂರು ದಸರಾ ಕಲಾಪ್ರದರ್ಶನದಲ್ಲಿ ಪುರಸ್ಕೃತರಾಗಿರುವ ಪೊನ್ನಪ್ಪ ಅವರು ಭಾವಚಿತ್ರಗಳನ್ನು ರಚಿಸುವಲ್ಲಿ ಬಹುಖ್ಯಾತಿ ಪಡೆದಿದ್ದಾರೆ.

Categories
ಚಿತ್ರಕಲೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕಮಲಾಕ್ಷಿ ಎಂ.ಜೆ.

ಚಿಕ್ಕ ವಯಸ್ಸಿನಿಂದಲೇ ಆಸಕ್ತಿ ಬೆಳೆಸಿಕೊಂಡು ಕಲಾಭ್ಯಾಸ ಮಾಡಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಪದವಿ, ಬರೋಡಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಎಂ.ಜೆ.ಕಮಲಾಕ್ಷಿ ಅವರು ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.
ಮೈಸೂರು ಸಾಂಪ್ರದಾಯಿಕ ಕಲೆ ತೊಗಲು ಗೊಂಬೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಚಿತ್ರ ಕಲಾವಿದೆ ಕಮಲಾಕ್ಷಿ ಅವರು ಕಲಾಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ನಾಡಿನ ಪ್ರಸಿದ್ಧ ಕಲಾ ಕೇಂದ್ರವಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿರುವ ಇವರು ಗೃಹ ವಿಜ್ಞಾನದಲ್ಲಿ ಪದವೀಧರರು.
ಸಾಂಪ್ರದಾಯಿಕ ಕಲೆಯನ್ನು ಸಮಕಾಲೀನ ಕಲೆಯೊಂದಿಗೆ ಮೇಲೈಸುವ ಕೃತಿಗಳನ್ನು ಅನೇಕ ಮಾಧ್ಯಮಗಳಲ್ಲಿ ರಚಿಸಿರುವ ಕಮಲಾಕ್ಷಿ ಅವರು ಶ್ರವಣಬೆಳಗೊಳದ ಜೈನ ಮಠದ ಭಿತ್ತಿ ಚಿತ್ರಗಳ ಪ್ರತಿಕೃತಿಗಳನ್ನು ಮಾಡಿಸುವಲ್ಲಿ ಮೌಲ್ಯಯುತ ಕೆಲಸ ಮಾಡಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಚಿತ್ರಾ ವೇಣುಗೋಪಾಲ್

ಕರ್ನಾಟಕದ ಅಗ್ರಮಾನ್ಯ ಕಥಕ್ ನರ್ತಕಿಯರಲ್ಲಿ ಒಬ್ಬರಾದ ಚಿತ್ರಾ ವೇಣುಗೋಪಾಲ್ ಹೆಸರಾಂತ ಕಥಕ್ ನೃತ್ಯಪಟು ಮಾಯಾರಾವ್ ಅವರಿಂದ ಶಿಕ್ಷಣ ಪಡೆವರು. ನಾಟ್ಯ ಸರಸ್ವತಿ ನೃತ್ಯಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಚಿತ್ರಾ ಅವರು ಶಂಭು ಮಹಾರಾಜರಿಂದ ಕಥಕ್ ನೃತ್ಯದಲ್ಲಿ ಹೆಚ್ಚಿನ ತರಬೇತಿ ಪಡೆದರಲ್ಲದೆ ಡಾಗರ್ ಸಹೋದರರಿಂದ ಸಂಗೀತಾಭ್ಯಾಸವನ್ನೂ ಮಾಡಿದರು.
ಕಥಕ್ ನೃತ್ಯ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ಚಿತ್ರಾ ವೇಣುಗೋಪಾಲ್ ಅವರಿಗೆ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶೋಭ.ಆರ್. ಹುಂಖಲಗೋಳ

ಸ್ನಾತಕೋತ್ತರ ಸಂಗೀತ ಪದವಿಯಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ಶೋಭಾ.ಆರ್.ಹುಯಿಲಗೋಳ ಅವರು ತಮ್ಮ ತಂದೆಯವರಿಂದ ಎಳೆಯ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಣೆ ಹೊಂದಿದವರು, ವಿದ್ವತ್ತಿನಲ್ಲಿ ಎರಡನೆಯ ಬ್ಯಾಂಕ್ ಪಡೆದು ಹಿಂದೂಸ್ಥಾನಿ ಸಂಗೀತವನ್ನು ಪಂಡಿತ್ ವೆಂಕಟೇಶಕುಮಾರ್ ಅವರಲ್ಲಿ ಅಭ್ಯಾಸ ಮಾಡಿದ ಇವರು ತಮ್ಮದೇ ಆದ ‘ರಾಜೀವ ಪುರಂಧರೆ ಸಂಗೀತ ಸಂಸ್ಥೆ’ಯ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಹಲವು ಕಡೆಗಳಲ್ಲಿ ಸಂಗೀತ ತರಬೇತಿ ನೀಡುತ್ತ ಬಂದಿರುವ ಶೋಭಾ ಅವರು ಗೀತ ರಾಮಾಯಣ, ವಿಶ್ವಾಮಿತ್ರ ಮೇನಕೆ, ಮೊದಲಾದ ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಂಗ ಗೀತೆಗಳ ಬಗ್ಗೆಯೂ ವಿಶೇಷ ತರಬೇತಿಯನ್ನು ರಂಗದಿಗ್ಗಜರಾದ ಏಣಗಿ ಬಾಳಪ್ಪನವರಿಂದ ಪಡೆದುಕೊಂಡಿರುವ ಶೋಭಾ ಅವರು ಆಕಾಶವಾಣಿಯ ಏ-ಗ್ರೇಡ್ ಕಲಾವಿದೆ.
ಅನೇಕ ಸಂಗೀತ ಕಾರ್ಯಕ್ರಮಗಳಿಗೆ ನಿರ್ದೇಶನ ನೀಡಿರುವ ಇವರು ರಂಗಗೀತೆ ಹಾಗೂ ಶಾಸ್ತ್ರೀಯ ಸಂಗೀತ ರೂಪಕಗಳ ಧ್ವನಿಸುರುಳಿಗಳನ್ನು ರೂಪಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಶ್ರೀಮತಿ ಶೋಭಾ.ಆರ್.ಹುಯಿಲಗೋಳ ಅವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀರಾಮುಲು

ತಂದೆಯವರಿಂದಲೇ ಕುಟುಂಬ ಕಲೆಯಾದ ನಾದಸ್ವರವನ್ನು ಅಭ್ಯಾಸ ಮಾಡಿದ ಕೋಲಾರ ಶ್ರೀರಾಮುಲು ಅವರು ನಂತರದ ವರ್ಷಗಳಲ್ಲಿ ದಕ್ಷಿಣ ಭಾರತದ ಕೆಲವು ಹಿರಿಯ ವಿದ್ವಾಂಸರಲ್ಲಿ ಹೆಚ್ಚಿನ ತರಬೇತು ಪಡೆದುಕೊಂಡರು.
ಹಲವು ಉತ್ಸವಗಳು, ಸಂಗೀತ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಪ್ರತಿಭಾವಂತ ನಾದಸ್ವರ ವಾದಕ ಶ್ರೀರಾಮುಲು ಅವರು ಹಲವು ವರ್ಷಗಳಿಂದ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಟಿತ ಗೌರವ ಪುರಸ್ಕಾರಗಳಿಗೆ ನಾದಸ್ವರ ವಾದಕ ಶ್ರೀರಾಮುಲು ಅವರು ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಖಾಸೀಂಸಾಬ್ ಜಮಾದಾ

ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನ್ನು ಇಷ್ಟಪಡದ ತಂದೆಯ ಮನೆಯಿಂದ ಹೊರಬಂದ ಖಾಸೀಂಸಾಬ್ ಜಮಾದಾರ್ ನಾಟಕ, ಕಥಕ್ ನೃತ್ಯ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ನಂತರ ಗುರುಕುಲ ಪದ್ದತಿಯಲ್ಲಿ ಕಥಕ್ ಹಾಗೂ ತಬಲಾ ಶಿಕ್ಷಣವನ್ನು ಪಡೆಯಲಾರಂಭಿಸಿದ ಖಾಸೀಂಸಾಬ್ ಜಮಾದಾ ಅವರಿಗೆ ಮೊದಮೊದಲು ಬೆಂಬಲ ಕೊಟ್ಟವರು ಬೈಲಹೊಂಗಲದ ಪಂಡಿತ್ ಚಿನ್ನಯ್ಯಶಾಸ್ತ್ರಿಗಳು.
ಕಥಕ್ ಹಾಗೂ ತಬಲಾ ಅಭ್ಯಾಸವನ್ನು ಗುರುಕುಲ ಪದ್ಧತಿಯಲ್ಲಿ ಪಡೆದುಕೊಂಡ ಜಮಾದಾರ್ ಹಸಿರು ಚಿಮ್ಮುವ ದಾಂಡೇಲಿಯಲ್ಲಿ ನೆಲೆಗೊಂಡರು. ತಬಲಾ ವಾದಕರಾಗಿ ತಮ್ಮನ್ನು ಗುರುತಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಬಲಾ ವಾದನ ಮಾಡುತ್ತಿದ್ದ ಇವರು ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ಅನಿವಾರ್ಯವಾದರು.
ತಾವು ಕಲಿತ ತಬಲಾ ಕಲೆಯನ್ನು ಸತತ ೫೧ ತಾಸುಗಳ ಕಚೇರಿ ನೀಡುವ ಮೂಲಕ ವಿಶ್ವದಾಖಲೆ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ದಾಖಲಾದ ಕಾಸೀಂಸಾಬ್ ಆಸಕ್ತರಿಗಾಗಿ ತಬಲಾ ಕಲೆಯನ್ನು ಕಲಿಸತೊಡಗಿದರು. ತಬಲಾ ತರಬೇತಿ ಪಡೆದ ಹಲವಾರು ಶಿಷ್ಯರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆಕಾಶವಾಣಿಯಲ್ಲಿಯೂ ಕೆಲ ಕಾಲ ತಬಲಾ ವಾದಕರಾಗಿದ್ದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಲೋಕೇಶದಾಸ್

ನಾಲ್ಕು ದಶಕಗಳಿಂದ ಕಥಾಕೀರ್ತನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಎಲ್.ಎಸ್.ಲೋಕೇಶ ದಾಸ್ (ಶ್ರೀಶ ವಿಠಲದಾಸರು) ಅವರು ಭದ್ರಗಿರಿ ಅಚ್ಯುತದಾಸರಲ್ಲಿ ಶಿಷ್ಯವೃತ್ತಿ ಮಾಡಿದವರು.
ಹರಿಕಥೆ ಪ್ರಚಾರ ಮಂಡಳಿಯ ಮೂಲಕ ನಾಡಿನಾದ್ಯಂತ ಕಥಾ ಕೀರ್ತನವನ್ನು ಪ್ರಚುರಗೊಳಿಸಿದ ಲೋಕೇಶದಾಸರು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದ ಧರ್ಮಪ್ರಚಾರ ಪರಿಷತ್ತಿನ ಗೌರವ ಕೀರ್ತನಕಾರನಾಗಿ ದುಡಿದಿರುವ ಲೋಕೇಶದಾಸರು ಆಕಾಶವಾಣಿ, ದೂರದರ್ಶನಗಳ ಮೂಲಕವೂ ಹರಿಕಥೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ವಿದ್ಯಾ ಸಂಸ್ಥೆಗಳಲ್ಲಿ ಕಥಾ ಕೀರ್ತನ ಗೌರವ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿರುವ ಲೋಕೇಶದಾಸರು ಕಥಾ ಕೀರ್ತನೆಯ ಪ್ರಚಾರ, ಕಲಿಕಾ ಕೇಂದ್ರಗಳ ಸ್ಥಾಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ವೀಣಾ ಅದವಾನಿ

ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದ ತಮ್ಮ ತಾಯಿ ಉಳೇಬೀಡು ರಂಗಮ್ಮನವರ ಪ್ರೇರಣೆಯಿಂದ ರಂಗಭೂಮಿ ಪ್ರವೇಶ ಮಾಡಿದ ವೀಣಾ ಆದವಾನಿ ಕರ್ನಾಟಕ ಹಾಗೂ ಆಂಧ್ರ ಗಡಿನಾಡಿನಲ್ಲಿ ಹೆಸರಾಂತ ನಟಿ.
ಬಾಲ್ಯದಿಂದಲೇ ನಾಟಕಗಳಲ್ಲಿ ಪಾತ್ರವಹಿಸಲು ಆರಂಭಿಸಿದ ವೀಣಾ ಅವರು ಭರತನಾಟ್ಯದಲ್ಲಿಯೂ ಶಿಕ್ಷಣ ಪಡೆದುಕೊಂಡಿದ್ದರಿಂದ ನಾಟ್ಯ ಹಾಗೂ ನಟನೆಯ ಹೊಸ ಅಭಿನಯ ಶೈಲಿಯನ್ನು ರೂಢಿಸಿಕೊಂಡು ಜನಪ್ರಿಯತೆ ಪಡೆದರು.
ವೀರ ಅಭಿಮನ್ಯು, ರಕ್ತರಾತ್ರಿ, ಉಳವಿ ಚನ್ನಬಸವೇಶ್ವರ, ಮೌನೇಶ್ವರ ಮಹಾತ್ಮ, ನಾಟ್ಯ ರಾಣಿ ಹೀಗೆ ನೂರಾರು ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಸಂಖ್ಯ ಪ್ರದರ್ಶನಗಳನ್ನು ನೀಡಿದ ಇವರು ನೃತ್ಯ ಶಿಕ್ಷಣದ ಜೊತೆಗೆ ಗ್ರಾಮೀಣ ನಾಟಕಗಳಲ್ಲಿ ಬಿಡುವಿಲ್ಲದ ನಟಿ ಎನ್ನಿಸಿಕೊಂಡರು. ವೀಣಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಂಜೀವಪ್ಪ ಗಟ್ಟೂರು

ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳನ್ನು ಸೊಗಸಾಗಿ ಅಭಿನಯಿಸುತ್ತ, ಹೆಸರು ಪಡೆದವರು ಸಂಜೀವಪ್ಪ.ಆರ್.ಗಣ್ಣೂರ್ ಅವರು.
ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದಲ್ಲಿ ಹದಿನಾರನೆಯ ವಯಸ್ಸಿನಿಂದಲೇ ಸಂಗೀತ ಹಾಗೂ ನಾಟಕಗಳಲ್ಲಿ ಸಕ್ರಿಯರಾಗಿದ್ದ ಸಂಜೀವಪ್ಪ ಅರವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಅಕ್ಕಮಹಾದೇವಿ, ತವರುಮನೆ, ಮಲಮಗಳು, ನಂಬೆಕ್ಕ, ರತ್ನಹಾರ, ಆದವಾನಿ ಲಕ್ಷ್ಮಮ್ಮ, ಹೀಗೆ ಹಲವಾರು ನಾಟಕಗಳಲ್ಲಿ ಮಹಿಳಾ ಪಾತ್ರಗಳ ಮೂಲಕ ಮನಸೂರೆಗೊಂಡಿರುವ ಸಂಜೀವಪ್ಪ ದಂತಕತೆಯಾಗಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಗೌರವ ಲಭಿಸಿದೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮುಕ್ತಾಜ್ ಬೇಗಂ

ಗುಡಿಗೇರಿ ನಾಟಕ ಕಂಪೆನಿ, ಸೂಡಿ ನಾಟಕ ಕಂಪೆನಿ ಸೇರಿದಂತೆ ಹಲವಾರು ವೃತ್ತಿ ನಾಟಕ ಕಂಪೆನಿಗಳಲ್ಲಿ ನಲವತ್ತು ವರ್ಷಗಳ ಕಾಲ ಕಲಾವಿದೆಯಾಗಿ ಸೇವೆ ಸಲ್ಲಿಸಿರುವ ಮುಮ್ರಾಜ್ ಬೇಗಂ ಅವರ ಮೊದಲ ಹೆಸರು ಲಲಿತಾ. ಆರಂಭದಿಂದಲೂ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಮಮ್ರಾಜ್ ಬೇಗಂ ಅವರ ಹಿರಿಮೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕೆ. ಕರಿಯಪ್ಪ ಮಾಸ್ತರ್

ಹಿಂದೂಸ್ಥಾನಿ, ಸುಗಮ ಸಂಗೀತಗಳಲ್ಲಿ ನಿಪುಣರಾದ ಕೆ.ಕರಿಯಪ್ಪ ಮಾಸ್ತರ್ ಉತ್ತಮವಾದ ಹಾರ್ಮೋನಿಯಂ ವಾದಕರೂ ಕೂಡ. ತಮ್ಮ ಕಲಾನಿಕೇತನ ಸಂಗೀತ ವಿದ್ಯಾಲಯದ ಮೂಲಕ ಸಂಗೀತ ಶಿಕ್ಷಣ ನೀಡುತ್ತಿರುವ ಕರಿಯಪ್ಪ ‘ಸಂಗೀತ ಸಿಂಚನ ಎಂಬ ತಂಡದ ಮುಖೇನ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಸಂಗೀತ ಶಿಕ್ಷಣದ ಜೊತೆಗೆ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಇವರು ಅನೇಕ ಧ್ವನಿಸುರುಳಿಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ತತ್ವಪದ, ದಾಸರಪದ, ಹಾಗೂ ವಚನ ಗಾಯನಗಳಲ್ಲಿಯೂ ನೈಪುಣ್ಯತೆ ಪಡೆದಿರುವ ಕರಿಯಪ್ಪ ಮಾಸ್ತ ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಮೈಸೂರಿನ ರಂಗಾಯಣದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವ ಕರಿಯಪ್ಪ ಮಾಸ್ಟರ್ ಅವರಿಗೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಸಂದಿದೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಜಿ. ಸೋಮಶೇಖರ ರಾವ್

ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕಲಾವಿದರಾಗಿ ಅನುಭವವಿರುವ ಎಚ್.ಜಿ.ಸೋಮಶೇಖರರಾವ್ ಬಾಲನಟನಾಗಿ ರಂಗಭೂಮಿಗೆ ಕಾಲಿಟ್ಟರು. ವಿದ್ಯಾರ್ಥಿ ಜೀವನದಲ್ಲಿಯೇ ಅಭಿನಯ ಹಾಗೂ ನಿರ್ದೇಶನದಿಂದ ನಾಟಕ ಕ್ಷೇತ್ರದೊಂದಿಗೆ ಸಂಬಂಧವಿರಿಸಿಕೊಂಡ ಅವರು ನಂತರದ ದಿನಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಇವರು ಆರೂವರೆ ದಶಕಗಳಿಂದ ಬಣ್ಣದ ಬದುಕಿನೊಡನೆ ಸಂಬಂಧ ಇಟ್ಟುಕೊಂಡಿದ್ದಾರೆ. ರಂಗಭೂಮಿಯ ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸೋಮಣ್ಣ ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಗಮನಾರ್ಹವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಟನೆಯೇ ಅಲ್ಲದೆ, ಚಿತ್ರ ಕಥಾರಚನೆಯಲ್ಲಿಯೂ ಕೈಯಾಡಿಸಿರುವ ಸೋಮಶೇಖರರಾವ್ ಕಿರುತೆರೆಯಲ್ಲಿಯೂ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೋಮಣ್ಣನ ಸ್ಟಾಕ್ ಎಂಬ ಆತ್ಮ ಕಥನವನ್ನು ಬರೆದಿರುವ ಇವರು ಅನೇಕ ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯೂ ಸೇರಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಹೆಚ್.ಎಲ್. ಕೇಶವಮೂರ್ತಿ

ಮಂಡ್ಯ ಶೈಲಿಯ ಭಾಷೆಯನ್ನು ಬಳಸಿಕೊಂಡು ಹಾಸ್ಯ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟ ಎಚ್.ಎಲ್.ಕೇಶವಮೂರ್ತಿ ಅವರು. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಿಸುವ ಇವರು ಸಮಕಾಲೀನ ಸಮಸ್ಯೆಗಳನ್ನು ಹಾಸ್ಯದ ಮೂಲಕ ಉಣ ಬಡಿಸುವಲ್ಲಿ ಸಿದ್ಧಹಸ್ತರು. ಲಂಕೇಶ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಎಚ್.ಎಲ್.ಕೇಶವಮೂರ್ತಿ ರೈತ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡವರು. ನಗುವ ಗುಳಿಗೆಗಳನ್ನು ಬರಹಗಳ ಮೂಲಕ ಮನಸ್ಸಿನಾಳಕ್ಕೆ ಇಳಿಸುವ ಮಂಡ್ಯ ಆಡುಭಾಷೆಯಲ್ಲಿ ಕೇಶವ ಮೂರ್ತಿಯವರು ರಾಜಕೀಯ ವಿಡಂಬನೆಗಳನ್ನು ಹೆಚ್ಚು ಬರೆದಿದ್ದಾರೆ.
ಜನಪರ ಆಂದೋಲನಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಆಕರ್ಷಕವಾಗಿ ನಗೆಯುಕ್ಕಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಇವರ ಅನೇಕ ಹಾಸ್ಯ ಬರೆಹ ಸಂಕಲನಗಳು ಪ್ರಕಟವಾಗಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ವೀರೇಂದ್ರ ಸಿಂಪಿ

ಲಲಿತ ಪ್ರಬಂಧಗಳ ಮೂಲಕ ನಾಡಿನ ಗಮನ ಸೆಳೆದಿರುವ ವೀರೇಂದ್ರ ಸಿಂಪಿ ಅವರು ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರು. ಕಾಲೇಜು ದಿನಗಳಲ್ಲಿಯೇ ಕಥೆ, ಅನುವಾದಗಳಲ್ಲಿ ಆಸಕ್ತಿ ಹೊಂದಿದ್ದ ಇವರು ನಂತರ ಲಲಿತ ಪ್ರಬಂಧ ರಚನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದರು.
ಅನೇಕ ಪ್ರಬಂಧ ಕೃತಿಗಳನ್ನು ಬರೆದಿರುವ ವೀರೇಂದ್ರ ಸಿಂಪಿ ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಹಲವು ಇಂಗ್ಲಿಷ್ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಇವರು ಅನೇಕ ಜಿಲ್ಲಾ ದರ್ಶನಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿಗಳ ಜೀವನಚರಿತ್ರೆಯನ್ನು ಬರೆದಿರುವ ಸಿಂಪಿಯವರು ರಚಿಸಿದ ಕೃತಿಗಳು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಾಗಿವೆ. ಇವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ವಿಶ್ವವಿದ್ಯಾಲಯಗಳು ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಅಲ್ಯಾಂಬ ಪಟ್ಟಾಭಿ

ಕನ್ನಡದ ಹಿರಿಯ ಬರಹಗಾರ್ತಿಯರಲ್ಲಿ ಒಬ್ಬರಾದ ಆಲ್ಯಾಂಬ ಪಟ್ಟಾಭಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕ ಪದವೀಧರರು. ಸಾಹಿತ್ಯದಲ್ಲಿ ಬೃಹತ್ ಕಾದಂಬರಿಯೊಂದಿಗೆ ಕಾಲಿಟ್ಟ ಆರಾಂಬ ಅವರು ಈವರೆಗೆ ೩೪ ಕಾದಂಬರಿಗಳನ್ನು ರಚಿಸಿದ್ದಾರೆ.
ಜನಪ್ರಿಯ ಕಾದಂಬರಿಗಳನ್ನು ನೀಡುವುದರ ಜೊತೆಗೆ ನೂರಾರು ಸಣ್ಣ ಕತೆಗಳನ್ನು ರಚಿಸಿದ ಹಿರಿಮೆ ಆರಾಂಬ ಅವರದು. ಶಿಶು ಸಾಹಿತ್ಯದಲ್ಲಿಯೂ ಕೆಲಸ ಮಾಡಿರುವ ಇವರು ಹನ್ನೆರಡು ಶಿಶು ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಕನ್ನಡವೇ ಅಲ್ಲದೆ ದಕ್ಷಿಣದ ಎಲ್ಲ ಭಾಷೆಗಳಲ್ಲಿಯೂ ಚಲನಚಿತ್ರಗಳಾಗಿ ಮೂಡಿ ಬಂದಿವೆ.
ಸ್ವತಃ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳ ನಿಪುಣೆಯಾದ ಆಲ್ಯಾಂಬ ಪಟ್ಟಾಭಿಯವರು ಟೆನ್ನಿಸಿನಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರಲ್ಲದೆ ಟೆನಿಸ್ ಕುರಿತಂತೆ ಮಾಹಿತಿ ಪೂರ್ಣ ಕೃತಿಯೊಂದನ್ನು ಅವರು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿನದತ್ತ ದೇಸಾ

ಕಾವ್ಯ ಸೃಷ್ಠಿಯನ್ನು ಅತ್ಯಂತ ಸುಲಲಿತವಾಗಿ ಜನಮನ ಮುಟ್ಟುವಂತೆ ರೂಪಿಸಿರುವ ಜಿನದತ್ತ ದೇಸಾಯಿಯವರು ಈವರೆಗೆ ಹದಿನೇಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಕಾವ್ಯದೊಂದಿಗೆ ಏಳು ಸಾಹಿತ್ಯ ಕೃತಿಗಳನ್ನು ಸಂಪಾದಿಸಿರುವ ದೇಸಾಯಿಯವರ ಲೇಖನಿಯಲ್ಲಿ ಈವರೆಗೆ ಒಡಮೂಡಿರುವ ಕೃತಿಗಳು ಇಪ್ಪತ್ನಾಲ್ಕು. ಸಾಹಿತ್ಯ ರಚನೆಯ ಜೊತೆಜೊತೆಯಲ್ಲಿಯೇ ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಇಳಿವಯಸ್ಸಿನ ಜಿನದತ್ತ ದೇಸಾಯಿಯವರಿಗೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನ, ದಕ್ಷಿಣ ಭಾರತ ಜೈನ ಸಭಾ ನೀಡುವ ಆಚಾರ್ಯ ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಕಾಂತಾವರ ಕರ್ನಾಟಕ ಸಂಘದ ೨೦೧೦ನೆ ಸಾಲಿನ ವಾರ್ಷಿಕ ಗೌರವವೂ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕದ ಗಡಿನಾಡಿನಲ್ಲಿ ನಾಡು-ನುಡಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ರಚಿಸಿರುವ ಗಡಿ ಸಲಹಾ ಸಮಿತಿಯ ಸದಸ್ಯರಾಗಿಯೂ ಜಿನದತ್ತ ದೇಸಾಯಿಯವರು ಸೇವೆ ಸಲ್ಲಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕೆ.ಜಿ. ನಾಗರಾಜಪ್ಪ

ತುಮಕೂರು ಜಿಲ್ಲೆಯ ಕಲ್ಲೂರಿನವರಾದ ಕೆ.ಜಿ.ನಾಗರಾಜಪ್ಪ ಕಾಲೇಜು ಅಧ್ಯಾಪಕರಾಗಿದ್ದು, ನಂತರ ಪ್ರಾಧ್ಯಾಪಕರಾದವರು. ಸಂಶೋಧಕರಾಗಿ ಹೆಸರು ಮಾಡಿರುವ ಇವರು ಕುವೆಂಪು ವಿಶ್ವವಿದ್ಯಾನಿಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೇವಾಂಗ ಜನಾಂಗದ ಬಗ್ಗೆ ವಿಶೇಷ ಸಂಶೋಧನೆ ನಡೆಸಿರುವ ಪ್ರೊ. ಕೆ.ಜಿ.ನಾಗರಾಜಪ್ಪ ಅವರು ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ ಪುರಸ್ಕೃತರು. ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿರುವ ಹಿರಿಮೆ ನಾಗರಾಜಪ್ಪನವರದು.