Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಪ್ರೊ. ಜಿ. ಯು. ಕುಲಕರ್ಣಿ

ಬೆಂಗಳೂರಿನ ಪ್ರೊ. ಜಿ. ಯು. ಕುಲಕರ್ಣಿ ಹಲವಾರು ಸಂಶೋಧನೆ ಹಾಗೂ ಅವಿಷ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಸಂಶೋಧನೆಗೆ ಸಂಬಂಧಿಸಿದ ಉಪಯುಕ್ತ ಪ್ರಬಂಧಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

ಪ್ರಸ್ತುತ ಜವಾಹರ್ ಲಾಲ್ ನೆಹರು ಮುಂದುವರೆದ ವೈಜ್ಞಾನಿಕ ಸಂಶೋಧನಾ ಕೇಂದ್ರ ಜಕ್ಕೂರಿನಲ್ಲಿ ಅಧ್ಯಕ್ಷರಾಗಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಡಾ. ಎಚ್. ಎಸ್. ಸಾವಿತ್ರಿ

ಮೂಲತ: ಬೆಂಗಳೂರಿನವರಾದ ಡಾ. ಸಾವಿತ್ರಿ ಅವರು ಸಸ್ಯಗಳ ವೈರಸ್ ಗಳನ್ನು ಕುರಿತು ಸಂಶೋಧನೆ ನಡೆಸಿದವರು. ಇವರು ಪ್ರಯೋಗ ಶಾಲೆಯಲ್ಲಿ ಕಂಡು ಹಿಡಿದ ಮೊದಲ ವೈರಸ್ ‘ಜಿನೋಮ್’ ಇವರದ್ದೆಂದರೆ ಉತ್ತೇಕ್ಷೆಯಲ್ಲ. ಜೀವರಸಾಯನ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ೧೯೭೭ ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಐ.ಐ.ಎಸ್ಸಿಯಲ್ಲಿ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಿರುವ ಸಾವಿತ್ರಿಯವರು ಮನುಷ್ಯರ ವಂಶವಾಹಿನಿಯನ್ನೂ ಕುರಿತು ಸಂಶೋಧನೆ ಮಾಡಿದ್ದಾರೆ. ಸುಮಾರು ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಜೀವರಸಾಯನ ಶಾಸ್ತ್ರ’ವಿಭಾಗದ ‘ಚೇರ್ ಪರ್ಸನ್’ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಡಾ|| ಹನುಮಾಕ್ಷಿ ಗೋಗಿ

ಶ್ರೀಮತಿ ಹನುಮಾಕ್ಷಿ ಚಂದಪ್ಪ ಗೋಗಿ ಅವರು ಶಾಸನಗಳನ್ನು ಕುರಿತಂತೆ ಆಳವಾದ ಅಧ್ಯಯ ನಡೆಸಿ ಅನೇಕ ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದಾರೆ.

ಶಾಸನ ಕುರಿತಂತೆ ಅನೇಕ ಸಂಶೋಧನಾ ಕೃತಿಗಳನ್ನು ಸಂಪಾದಿಸಿರುವ ಹಾಗೂ ಪ್ರಬಂಧ ಸಂಕಲನಗಳನ್ನು ಹೊರ ತಂದಿರುವ ಹನುಮಾಕ್ಷಿ ಗೋಗಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ, ಮಲ್ಲಿಕಾ ದತ್ತಿನಿಧಿ ಮೊದಲಾದ ಪ್ರಶಸ್ತಿಗಳ ಪುರಸ್ಕೃತರು. ಸುರಪುರ ತಾಲೂಕು ಹಾಗೂ ಗುಲಬರ್ಗ ಜಿಲ್ಲೆಯ ಶಾಸನಗಳನ್ನು ಕುರಿತು ಇವರು ಸಂಶೋಧನೆ ನಡೆಸಿ ಕೃತಿಗಳನ್ನು ಹೊರತಂದಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯಕ ವಿಚಾರಗೋಷ್ಟಿಗಳಲ್ಲಿ ಪಾಲುಗೊಂಡಿದ್ದು ಮಹಿಳೆಯರ ಸಾಹಿತ್ಯ ಸೃಜನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಪ್ರಕಟಿಸಲು ಪ್ರಕಾಶನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಲಕ್ಷ್ಮಣ್ ತೆಲಗಾವಿ

ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಲಕ್ಷ್ಮಣ ತೆಲಗಾವಿ ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆ ಅನನ್ಯ. ಚಿತ್ರದುರ್ಗದವರಾದ ಲಕ್ಷ್ಮಣ ತೆಲಗಾವಿ ಚಿತ್ರದುರ್ಗದ ಅಮೂಲಾಗ್ರ ಸಂಶೋಧನೆ ನಡೆಸಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ತೆಲಗಾವಿಯವರು ಕರ್ನಾಟಕದ ಚಾರಿತ್ರಿಕ ಪುಟಗಳನ್ನು ಸಮರ್ಥ ಸಂಶೋಧನೆ ಹಾಗೂ ಉತ್ಪನನದ ಮೂಲಕ ಕಟ್ಟಿಕೊಟ್ಟಿದ್ದು, ಅವು ಅತ್ಯಂತ ಶ್ರೇಷ್ಠ ಆಕರಗಳಾಗಿವೆ. ಸಂಶೋಧನೆ ಹಾಗೂ ಸಾಹಿತ್ಯವನ್ನು ಬೆಸುಗೆ ಮಾಡಿರುವ ಲಕ್ಷ್ಮಣ ತೆಲಗಾವಿಯವರು ಕರ್ನಾಟಕ ಇತಿಹಾಸಕ್ಕೆ ಕೊಟ್ಟಿರುವ ಕೊಡುಗೆ ಅತ್ಯಂತ ಗಮನಾರ್ಹ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹು ಉಪಯೋಗಿ ಸಂಶೋಧನಾ ವಿಭಾಗವನ್ನು ರೂಪಿಸಿರುವ ಲಕ್ಷ್ಮಣ ತೆಲಗಾವಿ ಅವರು ಸಾಹಿತ್ಯ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಅಕರಗಳನ್ನು ಮತ್ತು ಮಾರ್ಗದರ್ಶನ ನೀಡುವವರಲ್ಲಿ ಪ್ರಮುಖರೆನಿಸಿದ್ದಾರೆ.