Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಡಾ. ಎಚ್. ಎಸ್. ಸಾವಿತ್ರಿ

ಮೂಲತ: ಬೆಂಗಳೂರಿನವರಾದ ಡಾ. ಸಾವಿತ್ರಿ ಅವರು ಸಸ್ಯಗಳ ವೈರಸ್ ಗಳನ್ನು ಕುರಿತು ಸಂಶೋಧನೆ ನಡೆಸಿದವರು. ಇವರು ಪ್ರಯೋಗ ಶಾಲೆಯಲ್ಲಿ ಕಂಡು ಹಿಡಿದ ಮೊದಲ ವೈರಸ್ ‘ಜಿನೋಮ್’ ಇವರದ್ದೆಂದರೆ ಉತ್ತೇಕ್ಷೆಯಲ್ಲ. ಜೀವರಸಾಯನ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ೧೯೭೭ ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಐ.ಐ.ಎಸ್ಸಿಯಲ್ಲಿ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಿರುವ ಸಾವಿತ್ರಿಯವರು ಮನುಷ್ಯರ ವಂಶವಾಹಿನಿಯನ್ನೂ ಕುರಿತು ಸಂಶೋಧನೆ ಮಾಡಿದ್ದಾರೆ. ಸುಮಾರು ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಜೀವರಸಾಯನ ಶಾಸ್ತ್ರ’ವಿಭಾಗದ ‘ಚೇರ್ ಪರ್ಸನ್’ಆಗಿಯೂ ಕಾರ್ಯನಿರ್ವಹಿಸಿದ್ದಾರೆ.