Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಗಂಗಾವತಿ ಪ್ರಾಣೇಶ್

ಬೀಚಿ ಅವರ ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್ ಅವರು ತಮ್ಮ ಹಾಸ್ಯದ ಮಾತುಗಳಿಂದ ಜನರನ್ನು ರಂಜಿಸುತ್ತಾ ಸ್ಟಾ ಂಡಪ್ ಕಾಮಿಡಿ ಅನ್ನುವ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದವರು. ಹಾಸ್ಯದ ಜೊತೆಯಲ್ಲಿಯೇ ಸಮಾಜಕ್ಕೆ ಸಂದೇಶವನ್ನೂ ನೀಡುವ ಕಾಯಕವನ್ನು ಮಾಡುತ್ತ ನಗೆಯ ಚಾಟಿಯಿಂದಲೇ ಜನತೆಯನ್ನು ಎಚ್ಚರಿಸುತ್ತಿದ್ದಾರೆ.

ಪ್ರಾಣೇಶ್ ಅವರ ವೈಶಿಷ್ಟ್ಯತೆಯೆಂದರೆ ಉತ್ತರ ಕರ್ನಾಟಕ ಭಾಷಾ ಶೈಲಿ. ಆ ಸೊಗಡಿನಲ್ಲಿಯೇ ರಂಜಿಸುವ ಇವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟದೆ. ಅಮೇರಿಕಾದ ಅಕ್ಕ ಸಂಸ್ಥೆಯು ಅಲ್ಲಿನ ೧೯ ಪ್ರಮುಖ ನಗರಗಳಲ್ಲಿ ಇವರ ಕಾರ್ಯಕ್ರಮವನ್ನು ಏರ್ಪಡಿಸಿ ಸಂಭ್ರಮಿಸಿದೆ. ಹಾಸ್ಯದ ಕುರಿತ ಸಾಕಷ್ಟು ಪುಸ್ತಕಗಳು, ಸಿ.ಡಿಗಳನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣೇಶ್ ಅವರ ಹಾಸ್ಯಕ್ಕೆ ಅಸಂಖ್ಯಾತ ವೀಕ್ಷಕರಿದ್ದಾರೆ.