Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕ್ಯಾಪ್ಟನ್ ರಾಜಾರಾವ್

ಖ್ಯಾತ ನೀರಾವರಿ ತಜ್ಞರಾದ ಕ್ಯಾಪ್ಟನ್ ರಾಜರಾವ್ ಅವರು, ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಸ್ತಿತ್ವವನ್ನು ಒತ್ತಾಯಿಸಿದವರು. ಕರ್ನಾಟಕ ಸೀನಿಯರ್ ಇಂಜಿನಿಯರ್ಸ್ ಫೋರಂನ ಚೇರ್ಮನ್ ಆಗಿರುವ ರಾಜಾರಾವ್ ಅವರು, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಹಾಳಾಗಿ ಪರಿಸರಕ್ಕೆ ಧಕ್ಕೆಯಾಗುವ ಮುನ್ನ ಡಿಟರ್ಜೆಂಟ್ ಗಳಲ್ಲಿ ಪಾಸ್ಟೇಟ್ ಬಳಕೆಯನ್ನು ನಿಲ್ಲಿಸಿ, ಕೆರೆಗಳನ್ನು ಉಳಿಸಿ ಎಂದು ಎಚ್ಚರಿಕೆ ನೀಡುತ್ತ ಈಗಲೂ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.