Categories
ಯಕ್ಷಗಾನ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಯಕ್ಷಗಾನ ಅರ್ಥಧಾರಿಕೆಯಲ್ಲಿ ಅಪಾರ ನೈಪುಣ್ಯತೆ ಪಡೆದಿರುವ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿಗಳು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಸಾಹಿತಿ, ಪುರಾಣ ಪ್ರವಚನಕಾರ ಹಾಗೂ ಕೃಷಿಕರಾಗಿಯೂ ಸಾಧನೆಗೈದಿದ್ದಾರೆ.
ಯಕ್ಷಗಾನ ಅರ್ಥ ವಿವರಿಸುವಲ್ಲಿ ಕಳೆದ ಮೂರೂವರೆ ದಶಕಗಳಿಂದ ನಿರತರಾಗಿರುವ ಇವರು ಹಲವಾರು ಅರ್ಥಪೂರ್ಣ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಏಕಾಂಕ ನಾಟಕಗಳು, ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಉದ್ದಂಥ, ಮೊದಲಾದ ಕೃತಿಗಳನ್ನು ಕೊಟ್ಟಿರುವ ಶಾಸ್ತ್ರಿಗಳು ಯಕ್ಷಗಾನ ಭಾಗವತಿಕೆಯಲ್ಲಿಯೂ ಕೆಲವು ಕಾಲ ಸೇವೆ ಸಲ್ಲಿಸಿದವರು.
ಅರ್ಥಗಾರಿಕೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.