Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಾಲತಿ ಸುಧೀರ್

ಮೋಡಿ ಮಾಡುವ ಕಂಠ, ಭಾವನಾತ್ಮಕ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುವ ಕಲಾವಿದೆ ಶ್ರೀಮತಿ ಮಾಲತಿ ಸುಧೀರ್ ಅವರು.
ಮಾಲತಿ ಅವರದು ಕಲಾವಿದರ ಕುಟುಂಬ. ಪತಿ ಸುಧೀರ್ ಅವರೂ ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿದ್ದವರು. ಈಗ ಅವರ ಪುತ್ರರೂ ಚಿತ್ರರಂಗದಲ್ಲಿರುವರು.
೧೯೭೭ರಲ್ಲಿ ವೃತ್ತಿ ರಂಗಭೂಮಿಗೆ ಪ್ರವೇಶ ಮಾಡಿದ ಕಳೆದ ೩೦ ವರ್ಷಗಳಿಂದ ವೃತ್ತಿ ರಂಗಭೂಮಿ ಸಂಘಟಕಿಯಾಗಿ ಮತ್ತು ನಟಿಯಾಗಿ ಅವರು ಕ್ರಿಯಾಶೀಲರು. ಅವರು ಸುಳ್ಯದ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಗುಡಿಗೇರಿಯ ಶ್ರೀಸಂಗಮೇಶ್ವರ ನಾಟ್ಯ ಸಂಘ, ಕಮತಗಿಯ ಶ್ರೀಹುಚ್ಚೇಶ್ವರ ನಾಟ್ಯ ಸಂಘ ಹಾಗೂ ಮಿನುಗುತಾರೆ ಮಿತ್ರ ಮಂಡಳಿಗಳ
ಮೂಲಕ ನಟಿಯಾಗಿ ಬೆಳೆದವರು.
೧೯೯೮ರಲ್ಲಿ ಸುಧೀರ್ ಅವರು ಆರಂಭಿಸಿದ ‘ಕರ್ನಾಟಕ ಕಲಾವೈಭವ ಸಂಘ’ದ ಜವಾಬ್ದಾರಿ ಈಗ ಅವರ ಹೆಗಲ ಮೇಲಿದೆ. ವೃತ್ತಿ ರಂಗಭೂಮಿಯ ಉಳಿವಿನ ಜತೆಜತೆಗೆ ತಮ್ಮ ಕಲಾ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸುತ್ತಿರುವ ಒಬ್ಬ ಸಮರ್ಥ ರಂಗ ಸಂಘಟಕಿ.
ಕುರುಕ್ಷೇತ್ರ, ರಕ್ತರಾತ್ರಿ, ಸಿಂಧೂರ ಲಕ್ಷ್ಮಣ, ಗೌಡರ ಗದ್ದಲ, ಭೂಮಿ ತೂಕದ ಹೆಣ್ಣು, ವರ ನೋಡಿ ಹೆಣ್ಣು ಕೊಡು- ಅವರು ಅಭಿನಯಿಸಿರುವ ಕೆಲ ನಾಟಕಗಳು, ಅವುಗಳಲ್ಲಿ ಅವರು ನಿರ್ವಹಿಸಿರುವ ಪಾತ್ರಗಳಲ್ಲಿ ಪ್ರಮುಖವಾದವು- ದೌಪತಿ, ಮದಹಂಸ, ಗಂಗಾ ಮತ್ತು ಶೈಲಜಾ.
ತಮ್ಮ ಅದ್ಭುತ ಪ್ರತಿಭೆಯಿಂದ ರಂಗಭೂಮಿ ಕಲಾವಿದೆಯಾಗಿ ಜನರ ಮೆಚ್ಚುಗೆಗೆ ಪಾತ್ರರಾದವರು ಶ್ರೀಮತಿ ಮಾಲತಿ ಸುಧೀರ್.