Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಮೂಹ ಮಾದ್ಯಮ

ಪ್ರೊ. ಹೆಚ್.ಎಸ್. ಈಶ್ವರ್

ಮಲೆನಾಡಿನಲ್ಲಿ ಹುಟ್ಟಿ ದೇಶ ವಿದೇಶಗಳಲ್ಲಿಯೂ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ|| ಎಚ್.ಎಸ್.ಈಶ್ವರ್ ಅವರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದವರು. ಪತ್ರಿಕೋದ್ಯಮ ಬೋಧಕರಾಗಿ ಶೈಕ್ಷಣಿಕ ವಲಯದಲ್ಲಿ ಜನಪ್ರಿಯರಾದ ಡಾ|| ಎಚ್.ಎಸ್.ಈಶ್ವರ್ ಮೂಲಭೂತವಾಗಿ ಮನಶಾಸ್ತ್ರಜ್ಞರು.
ವಿದೇಶಗಳಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾನಿಲಯ ಸಂವಹನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು.
ಮಾಧ್ಯಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಬಹಳ ಕೆಲಸ ಮಾಡಿರುವ ಡಾ|| ಎಚ್.ಎಸ್.ಈಶ್ವರ್ ಅವರು ಅನೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಮಾಧ್ಯಮ ಕುರಿತಂತೆ ಹಲವಾರು ಮೌಲ್ಯಯುತ ಬರವಣಿಗೆ ಮಾಡಿರುವ ಇವರು ಶ್ರೇಷ್ಠ ವಾಗಿ ಕೂಡ ಹೌದು. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.