Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಡಾ. ಫ.ಗು.ಹಳಕಟ್ಟಿ

ವಚನ ಪಿತಾಮಹ ಫ.ಗು.ಹಳಕಟ್ಟಿಯವರು ೧೨ನೆಯ ಶತಮಾನದ ವಚನ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನಾ ತಾಡವೋಲೆಗಳಿಂದ ಸಂಗ್ರಹಿಸಿದ್ದ ವಚನಗಳನ್ನು ಮತ್ತು ಅದರ ಭಾವಾರ್ಥಗಳನ್ನು ಡಾ|| ಕಲಬುರ್ಗಿಯವರ ಸಂಪಾದಕತ್ವದಲ್ಲಿ ಸುಮಾರು ೧೦,೦೦೦ ಪುಟಗಳ ೧೫ ಸಂಪುಟಗಳಲ್ಲಿ ಹೊರತಂದಿದೆ.
ನಾಲ್ಕು ಶತಮಾನಗಳ ವಿಜಯಪುರವನ್ನು ಆಳಿದ ಆದಿಲ್ ಶಾಹಿಗಳ ಇತಿಹಾಸವನ್ನು ಈ ಸಂಸ್ಥೆ ಕನ್ನಡಕ್ಕೆ ಅನುವಾದಿಸಿ ೧೮ ಸಂಪುಟಗಳ ಪ್ರಕಟಣೆಗೆ ಕನ್ನಡ ಸಂಸ್ಕೃತಿ ಇಲಾಖೆ ನೆರವಿನಡಿ ಕ್ರಮವಹಿಸಿದ್ದು ಆರು ಸಂಪುಟ ಪ್ರಕಟವಾಗಿದ್ದು, ಉಳಿದವು ಪ್ರಕಟಣೆಗೆ ಸಿದ್ಧವಾಗಿವೆ.
ಹಂಪಿ ವಿವಿ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರವು ಈಗಾಗಲೇ ಎಂಟು ವಿದ್ಯಾರ್ಥಿಗಳ ಸಂಶೋಧನೆ ಪೂರ್ಣತೆಗೆ ನೆರವಾಗಿದ್ದು, ಹಲವರು ಸಂಶೋಧನೆ ಕೈಗೊಳ್ಳಲು ಕೇಂದ್ರ ಕಾರ್ಯನಿರತವಾಗಿದೆ.