Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಸಿ. ವಿ. ಕೇಶವಮೂರ್ತಿ

‘ಭಾರತೀಯ ಸಂವಿಧಾನದ ತಿದ್ದುಪಡಿಯ ಸಾಮರ್ಥ್ಯ ಮತ್ತು ಶಕ್ತಿಗಳ ಮೂಲ ಸ್ವರೂಪದ ಸಿದ್ಧಾಂತ’ ಪುಸ್ತಕದ ಲೇಖಕರಾದ ಶ್ರೀ ಸಿ. ವಿ. ಕೇಶವಮೂರ್ತಿಯವರು ಹಿರಿಯ ವಕೀಲರು. ಮೈಸೂರಿನವರಾದ ಇವರು ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು,ಕಾರ್ಯದರ್ಶಿಗಳು, ಮೇಲ್ವಿಚಾರಕರು, ಕಾನೂನು ಸಲಹೆಗಾರರು ಹಾಗೂ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಸ್ಥಾನವೊಂದರ ಧರ್ಮದರ್ಶಿಯೂ ಆಗಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಬನಶಂಕರಿ ಮಹಿಳಾ ಸಮಾಜ

ಬೆಂಗಳೂರಿನಲ್ಲಿ ೧೯೭೩ ರಲ್ಲಿ ಆರಂಭಗೊಂಡ ಬನಶಂಕರಿ ಮಹಿಳಾ ಸಮಾಜ ಸಕ್ರಿಯವಾಗಿ ಧಾರ್ಮಿಕ,ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಮಹಿಳಾ ಸಮಾಜವು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮ, ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಕಾರ್ಯಕ್ರಮ, ಅರೋಗ್ಯ ಜಾಗೃತಿ,ಮನೆ ಮದ್ದು,ಅಡುಗೆ ಕಾರ್ಯಕ್ರಮ,ಕಾನೂನು ಅರಿವು, ಪರಿಸರ ಸಂರಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮಹಿಳೆಯರಿಗೆ ನೆರವಾಗುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಸ್ಟೆಪ್ ಒನ್

‘ಸ್ಟೆಪ್ ಒನ್ ಟು ಸ್ಟಾಪ್ ಕೋವಿಡ್’ಅನ್ನುವ ಶಿರೋನಾಮೆಯಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ, ಕೋವಿಡ್ ನ ವಿರುದ್ಧ ದೊಡ್ಡ ಸಮರ ಸಾರಿದೆ. ಇಡಿ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-೧೯ ರ ವಿರುದ್ಧವೇ ಸಜ್ಜಾದ ಈ ಸಂಸ್ಥೆ ಸುಮಾರು ೭೦೦೦ ಡಾಕ್ಟರ್ ಗಳ ಸಹಕಾರ ಹೊಂದಿದ್ದು ೧೦೦೦ ಕ್ಕೂ ಹೆಚ್ಚು ಸ್ವಯಂಸ್ಥೆವಕರನ್ನು ಒಳಗೊಂಡಿದೆ. ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳು ಒಗ್ಗೂಡಿ ಸಾರ್ವಜನಿಕ ಆರೋಗ್ಯ ಜಾಗೃತಿ ಹಾಗೂ ರಕ್ಷಣೆಯ ಭಾರ ಹೊರುವುದೇ ಸ್ಟೆಪ್ ಒನ್ ಸಂಸ್ಥೆಯ ಪರಿಕಲ್ಪನೆ. ಸಾರ್ವಜನಿಕರ ಅಗತ್ಯಕ್ಕಾಗಿ ಟೋಲ್ ಫ್ರೀ ಸಹಾಯವಾಣಿ ಇದ್ದು, ಸಂಸ್ಥೆ ಸಹಾಯಕ್ಕೆ ಧಾವಿಸುತ್ತದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅದಮ್ಯ ಚೇತನ

ಅನ್ನ-ಅಕ್ಷರ,ಆರೋಗ್ಯ-ಪ್ರಕೃತಿ-ಸಂಸ್ಕೃತಿ ಎಂಬ ಪ್ರಮುಖ ಧೈಯಗಳಡಿಯಲ್ಲಿ ಸೇವಾನಿರತವಾಗಿರುವ ಸಂಸ್ಥೆ ಅದಮ್ಯ ಚೇತನ. ೧೯೯೭ ರಲ್ಲಿ ಆರಂಭವಾದ ಈ ಸಂಸ್ಥೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಡಿಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಶಾಲಾಮಕ್ಕಳ ಹಸಿವನ್ನು ನೀಗಿಸಲು ‘ಅನ್ನಪೂರ್ಣ’ಬಿಸಿಯೂಟದ ಯೋಜನೆಯಡಿಯಲ್ಲಿ ಬೆಂಗಳೂರು, ಹುಬ್ಬಳ್ಳಿ,ಕಲಬುರಗಿ, ಅಡುಗೆ ಕೇಂದ್ರಗಳಿಂದ ಶುಚಿಯಾದ ಪೌಷ್ಟಿಕವಾದ ಮಧ್ಯಾಹ್ನದ ಬಿಸಿಯೂಟವನ್ನು ಉಣಬಡಿಸುತ್ತಿದೆ. ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ಜೊತೆಗೆ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಅಲೆಯ ಸಂದರ್ಭದಲ್ಲಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ, ಸಾವಿರಾರು ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಅದಮ್ಯ ಚೇತನವು ಗ್ರಾಮಗಳನ್ನು ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಸಬಲೀಕರಿಸಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿದೆ. ಜೊತೆಗೆ ಸಸ್ಯಾಗ್ರಹ ಯೋಜನೆಯಡಿಯಲ್ಲಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್

೧೯೯೪ ರಲ್ಲಿ ಆರಂಭಗೊಂಡ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್, ಸೇವಾ ಮನೋಭಾವದ ದೃಷ್ಟಿಯಿಂದ ಪ್ರಮುಖವಾಗಿ ವಿಶೇಷಚೇತನರ ಅನುಕೂಲಕ್ಕಾಗಿಯೇ ಸಮರ್ಪಿಸಿಕೊಂಡ ಸಂಸ್ಥೆ. ಹುಬ್ಬಳ್ಳಿಯಲ್ಲಿ ನೆಲೆ ನಿಂತಿರುವ ಈ ಸಂಸ್ಥೆ, ೧೯೯೭ ರಿಂದ ೪೦ ಸಾವಿರಕ್ಕೂ ಹೆಚ್ಚು ಕೃತಕ ಅಂಗಗಳನ್ನು ನೀಡಿ ಮಾನವೀಯತೆ ಮೆರೆದಿದೆ. ಸಂಸ್ಥೆಯಿಂದ ಕೃತಕ ಅಂಗ ಪಡೆದುಕೊಂಡ ಕರ್ನಾಟಕ, ಆಂಧ್ರ ಹಾಗೂ ಗೋವಾದ ಫಲಾನುಭವಿಗಳು ಸ್ವಾವಲಂಬನೆಯ ಬದುಕು ನಡೆಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣಾಶ್ರಮ ಮಂಗಳೂರು

೧೯೪೭ರಲ್ಲಿ ಆರಂಭವಾದ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮ, ಸುಮಾರು ಆರು ದಶಕಗಳಿಂದ ಸಮಾಜದಲ್ಲಿ ಧರ್ಮ ಮತ್ತು ಆಧ್ಯಾತ್ಮದ ಬೀಜವನ್ನು ಬಿತ್ತುವಲ್ಲಿ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅಕ್ಷರ, ಆಶ್ರಯ ಮತ್ತು ಅನ್ನ ನೀಡುವ ಉದ್ದೇಶದಿಂದ ಆರಂಭಗೊಂಡ ಈ ಆಶ್ರಮ, ಧ್ಯಾನ, ಭಜನೆ, ಪ್ರಾರ್ಥನೆಗಳ ಮೂಲಕ ಶಾಂತಿ ನೆಮ್ಮದಿ ನೀಡುವಲ್ಲಿ ಯಶಸ್ವಿಯಾಗಿದೆ. ಯೋಗ, ಶಿಕ್ಷಣಗಳ ಮೂಲಕ ಸಮಾಜದ ಹಾಗೂ ಜನರ ಮಾನಸಿಕ ಸ್ವಾಸ್ಥ ಕಾಪಾಡುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ

ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬ ಆಶಯದಲ್ಲಿ ಆರಂಭಗೊಂಡ ಸಂಸ್ಥೆ. ಶೈಕ್ಷಣಿಕ ದೃಷ್ಟಿಕೋನದಿಂದ ಸಂಸ್ಥೆ ಇಲ್ಲಿಯವರೆಗೆ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ೧೯೯೯ ರಲ್ಲಿ ರಜತ ಮಹೋತ್ಸವ ಕಂಡಿರುವ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ
ಮಾಡಿದೆ.
೧೯೭೪ ರಲ್ಲಿ ಆರಂಭಗೊಂಡ ಈ ಸಂಸ್ಥೆ ಇದೀಗ ಸುಮಾರು ೩೫ ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯು ಅತ್ಯಂತ ಕ್ರಿಯಾಶೀಲವಾಗಿದ್ದು ೨೦೨೪ ರಲ್ಲಿ ಸುವರ್ಣ ಮಹೋತ್ಸವ ಕಾಣಲಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕರ್ನಾಟಕ ಹಿಮೋಫೀಲಿಯಾ ಸೊಸೈಟಿ

ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವವರ ಕ್ಷೇಮಾಭಿವೃದ್ಧಿಗಾಗಿ ೧೯೯೦ ರಲ್ಲಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಆರಂಭಗೊಂಡು ಎರಡೂವರೆ ದಶಕಗಳು ಕಳೆದಿವೆ. ಹಿಮೋಫೀಲಿಯ ಕಾಯಿಲೆಯನ್ನು ಗುಣಪಡಿಸದೇ ಹೋದರೆ ಶಾಶ್ವತ ಊನಕ್ಕೆ ತುತ್ತಾಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿತವಾಯಿತು.
ಮಾನವೀಯ ನೆಲೆಯಲ್ಲಿ ಶುರುವಾದ ಹಿಮೊಫೀಲಿಯ ಸೊಸೈಟಿ, ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುತ್ತಿದೆ. ಸಾವಿರಾರು ಜನ ಹಿಮೋಫೀಲಿಯಾಕ್ಕೆ ತುತ್ತಾದವರು ಇಲ್ಲಿ ಗುಣವಾಗಿ ಸಂತಸದ ಬದುಕನ್ನ ನಡೆಸುತ್ತಿದ್ದಾರೆ. ನಿಸ್ವಾರ್ಥ ಮತ್ತು ನಿರಪೇಕ್ಷೆಯಿಂದ ನಡೆಯುತ್ತಿರುವ ಈ ಸಂಸ್ಥೆಗೆ ಸಾರ್ವಜನಿಕರು, ದಾನಿಗಳು ಹಾಗೂ ಸಂಘ ಸಂಸ್ಥೆಗಳಿಂದ ಬೆಂಬಲ ಸಿಗುತ್ತಿದೆ. ಸೊಸೈಟಿಗಾಗಿ ಸಹಾಯಾರ್ಥ ಪ್ರದರ್ಶನಗಳನ್ನು ಶ್ರೀ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶ್ರೀಮತಿ ಸಂಗೀತಾಕಟ್ಟ, ಶ್ರೀಮತಿ ಉಷಾ ಉತ್ತುಪ್, ಮುಂತಾದವರು ನೀಡಿ ಮಾನವೀಯತೆ ಮೆರೆದಿದ್ದಾರೆ.

Categories
ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ

ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸುಮಾರು ಎಳು ದಶಕಗಳಿಂದ ಅಂಧ ಮತ್ತು ಅನಾಥರ ಬಾಳಿಗೆ ಬೆಳಕಾಗಿದೆ. ಈ ಪುಣ್ಯಾಶ್ರಮಕ್ಕೆ ಚೇತನರಾಗಿದ್ದವರು ಪಂ.ಪಂಚಾಕ್ಷರಿ ಗವಾಯಿಗಳು. ಹುಟ್ಟು ಕುರುಡರಾಗಿದ್ದ ಪಂಚಾಕ್ಷರಿ ಗವಾಯಿಗಳ ನಂತರ ಈ ವೀರೇಶ್ವರ ಪುಣ್ಯಾಶ್ರಮಕ್ಕೆ ಕಣ್ಣಾದವರು ಶ್ರೀ ಪುಟ್ಟರಾಜ ಗವಾಯಿಗಳು.
ಸುಮಾರು ೭೦೦ ಅಂಧ, ಅನಾಥ, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತ್ರಿವಿಧ ದಾಸೋಹ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತದೆ. ಅಂಧ ಮಕ್ಕಳಿಗೆ ಜೀವನ ಸಾಗಿಸಲು ಹಾಗೂ ಆತ್ಮವಿಶ್ವಾಸ ತುಂಬುವುದಕ್ಕೆ ಸಂಗೀತವನ್ನು ಕಲಿಸಲಾಗುತ್ತದೆ. ಇಲ್ಲಿ ಆಳವಾಗಿ ಅಧ್ಯಯನ ಮಾಡಿದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಅಭ್ಯಾಸ ನಡೆಯುತ್ತಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವವಾಹಿನಿ (ಸಂಸ್ಥೆ)

ಬಿಲ್ಲವ ಸಮುದಾಯದ ಯುವಕರ ಅಭ್ಯುದಯಕ್ಕಾಗಿ ಕ್ರಿಯಾಶೀಲವಾಗಿರುವ ಸಂಸ್ಥೆ ಯುವವಾಹಿನಿ, ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ವಿಸ್ತಾರಗೊಂಡು ಕಾರ್ಯಚಲಿಸುತ್ತಿರುವ ಯುವಕರ ಪಡೆ. ಬಿಲ್ಲವ ಸಮುದಾಯದ ಯುವಕರು ಒಗ್ಗೂಡಿ ೧೯೮೭ರಲ್ಲಿ ಸ್ಥಾಪಿಸಿದ ಸಂಸ್ಥೆ ಯುವವಾಹಿನಿ. ಸಮಾವೇಶದ ಮೂಲಕ ಲೋಕಾರ್ಪಣೆಗೊಂಡ ಸಂಸ್ಥೆ ಬಿಲ್ಲವ ಜನಾಂಗದ ಯುವಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ವೆಚ್ಚ ಭರಿಸುತ್ತಿದೆ. ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಕ್ಕೆ ಇಂಬು ನೀಡುತ್ತಿದೆ. ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಇರುವ ಸಮುದಾಯದ ಯುವಕರ ಸಂಘಟನೆ, ವಿದ್ಯಾನಿಧಿ ಟ್ರಸ್ಟ್‌ ಮೂಲಕ ೨೪೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ, ಸೂರು ಇಲ್ಲದವರಿಗಾಗಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣ, ಬಡಹೆಣ್ಣುಮಕ್ಕಳಿಗೆ ಉಚಿತ ತಾಳಿಭಾಗ್ಯ, ವಧು-ವರಾನ್ವೇಷಣೆಗೆ ನೆರವು, ಕೋವಿಡ್ ಸಂದರ್ಭದಲ್ಲಿ ಅರ್ಹ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ, ಆಸ್ಪತ್ರೆಯಲ್ಲಿದ್ದ ಕಾರ್ಮಿಕರಿಗೆ ಒಂದು ತಿಂಗಳವರೆಗೆ ಉಚಿತ ಆಹಾರ ವಿತರಣೆ, ಪ್ರತಿವರ್ಷ ಕೆಸರುಗದ್ದೆ ಕ್ರೀಡಾಕೂಟ, ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮುಂತಾದ ಹಲವು ಬಗೆಯ ಸಮುದಾಯದ ಹಿತರಕ್ಷಣಾ ಚಟುವಟಿಕೆಗಳಲ್ಲಿ ಯುವವಾಹಿನಿ ನಿರತವಾಗಿದೆ. ಬರೋಬ್ಬರಿ ೩೫ ಘಟಕಗಳನ್ನು ಹೊಂದಿರುವ ಸಂಸ್ಥೆ ಅಧ್ಯಕ್ಷರಾದಿಯಾಗಿ ಎಲ್ಲರ ಅಧಿಕಾರವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಗೆ ಇಂಬು ಕೊಟ್ಟಿದೆ. ಯುವಕರ ಕಲ್ಯಾಣಕ್ಕೆ ದುಡಿಯುತ್ತಿರುವ ಯುವವಾಹಿನಿ ಮಾದರಿ ಸೇವಾಸಂಸ್ಥೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ (ಸಂಸ್ಥೆ)

ಆರೋಗ್ಯ ಕ್ಷೇತ್ರದ ಮಾರಣಾಂತಿಕ ಕಾಯಿಲೆ ಪೀಡಿತ ಮಕ್ಕಳ ಶುಶೂಷೆಯಲ್ಲಿ ಸಕ್ರಿಯವಾಗಿರುವ ಸೇವಾನಿಧಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ. ನೂರಾರು ಮಕ್ಕಳ ಬಾಳಿನ ಜೀವರಕ್ಷಕಕೇಂದ್ರ, ತಲಸೇಮಿಯಾ ಹಾಗೂ ಹೀಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ೨೦೧೭ರಲ್ಲಿ ಬಾಗಲಕೋಟ ಜಿಲ್ಲೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ‘ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ’ ಅಸ್ತಿತ್ವಕ್ಕೆ ಬಂತು. ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ಈ ಸೊಸೈಟಿ ಬಾಗಲಕೋಟೆಯಲ್ಲಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪ್ರಾಮಾಣಿಕ ಕಾಳಜಿಯಿಂದ ಅವಿರತವಾಗಿ ಶ್ರಮಿಸುತ್ತಿದೆ. ಸುಮಾರು ೧೦೯ ಮಕ್ಕಳು ಚಿಕಿತ್ಸೆಗಾಗಿ ನೋಂದಾಯಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವುದು ವಿಶೇಷ, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಮಕ್ಕಳಿಗೂ ಉಚಿತ ಸೇವೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುವ ಕಡೆ ಹಾಗೂ ಸಾರ್ವಜನಿಕರಲ್ಲಿ ತಲಸೇಮಿಯಾ ಮತ್ತು ಹಿಮೋಫೀಲಿಯಾ ಕಾಯಿಲೆಯ ಬಗ್ಗೆ ತಿಳವಳಿಕೆ ಮೂಡಿಸಲು ಅನೇಕ ಶಿಖರಗಳನ್ನು ಸೊಸೈಟಿ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ತಲಸೇಮಿಯಾ ಪೀಡಿತ ಮಕ್ಕಳಿಗೆ ಉಚಿತ ರಕ್ತವರ್ಗಾವಣೆ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುತ್ತಿರುವ ಸೊಸೈಟಿ ರಕ್ತಭಂಡಾರವನ್ನೂ ಹೊಂದಿದ್ದು ಮಾನವೀಯ ಸೇವೆಯಿಂದಾಗಿ ನೊಂದ ಮಕ್ಕಳ ಮೊಗದಲ್ಲಿ ನಗು ಚಿಮ್ಮಿಸಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಸುಮನಾ ಫೌಂಡೇಶನ್ (ಸಂಸ್ಥೆ)

ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿಶಿಷ್ಟ ಸಂಸ್ಥೆ ಸುಮನಾ ಫೌಂಡೇಶನ್, ನಾಡು-ನುಡಿ ರಕ್ಷಣೆ, ಜನಹಿತಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಪರೂಪದ ಸೇವಾಕೇಂದ್ರ, ಸಾಮಾಜಿಕ ಸೇವಾಬದ್ಧತೆಯೊಂದಿಗೆ ೨೦೧೨ರಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸ್ಥಾಪನೆಗೊಂಡ ಸುಮನಾ ಫೌಂಡೇಶನ್‌ನ ರೂವಾರಿ ಡಾ. ಸುನೀತಾ ಮಂಜುನಾಥ್, ಸ್ವಚ್ಛಭಾರತ ಅಭಿಯಾನದೊಂದಿಗೆ ತನ್ನ ಸೇವಾಯಾನ ಆರಂಭಿಸಿದ ಸಂಸ್ಥೆ ಬೆಂಗಳೂರಿನ ರಸ್ತೆಗಳ ಬದಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿದೆ. ೧೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಖರಗಳು, ೧೦ ಸಾವಿರ ಆಯುಷ್ಮಾನ್‌ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಿಕೊಡುವಿಕೆ, ೫೦೯ಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿನಿತ್ಯ ೫೦೦ರಿಂದ ಒಂದು ಸಾವಿರ ಮಂದಿ ಬಡವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ, ನೂರಾರು ಬಸ್ ತಂಗುದಾಣಗಳಿಗೆ ಹೊಸ ರೂಪ, ಕಡುಬಡವರಿಗೆ ಮನೆಗಳ ನಿರ್ಮಾಣ, ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ವಿತರಣೆ, ತರಕಾರಿ ಸರಬರಾಜು, ಪರಿಸರಸ್ನೇಹಿ ಗಣಪತಿಗಳ ತಯಾರಿಗೆ ಪ್ರೋತ್ಸಾಹ, ಸೈಕಲ್‍ ರ‍್ಯಾಲಿ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ, ರುದ್ರಭೂಮಿ ಸ್ವಚ್ಛತೆ ಫೌಂಡೇಶನ್‌ನ ಜನಮುಖಿ ಕಾರ್ಯಗಳು. ಸ್ವತಃ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುನೀತಾ ಮಂಜುನಾಥ್‌ ಅವರು ಪ್ರತಿ ವರ್ಷ ೩೦ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಸೇವೆಗೆ ಸಂದ ಸತ್ಫಲವಾಗಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ), ಧರ್ಮಸ್ಥಳ

ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ನಿರತ ಮೈಲಿಗಲ್ಲಿನ ಸಂಸ್ಥೆ ಧರ್ಮೋತ್ಥಾನ ಟ್ರಸ್ಟ್ (ರಿ), ಪುರಾತನ ಸ್ಮಾರಕಗಳ ರಕ್ಷಣೆಯಲ್ಲೂ ತೊಡಗಿರುವ ಸಮಾಜಸೇವಾ ಸಂಸ್ಥೆ.
ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ರಕ್ಷಣೆ ಬಲುಮುಖ್ಯವೆಂಬ ಸದಾಶಯದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಸಂಸ್ಥೆ ‘ಧರ್ಮೋತ್ಥಾನ ಟ್ರಸ್ಟ್’. ಕೆಲವೇ ವರ್ಷಗಳಲ್ಲಿ ರಾಜ್ಯದ ೨೫ ಜಿಲ್ಲೆಗಳಲ್ಲಿ ಒಟ್ಟು ೨೫೩ ಪುರಾತನ, ಶಿಥಿಲಗೊಂಡ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಿದ ಹೆಗ್ಗಳಿಕೆ ಈ ಟ್ರಸ್ಟ್ನದ್ದು. ಟ್ರಸ್ಟ್ನ ಸಂರಕ್ಷಣಾ ಕಾರ್ಯದ ಗುಣಮಟ್ಟ ಹಾಗೂ ಪ್ರಗತಿ ಪರಿಶೀಲಿಸಿ ಸಹಭಾಗಿತ್ವದ ಸಂಸ್ಥೆಯೆಂದು ಸರ್ಕಾರದಿಂದ ಮಾನ್ಯತೆ, ವಾರ್ಷಿಕ ಕ್ರಿಯಾಯೋಜನೆಯಡಿ ಅನುದಾನ ಬಿಡುಗಡೆ, ರಾಜ್ಯದುದ್ದಗಲಕ್ಕೂ ಶಿಥಿಲಗೊಳ್ಳುತ್ತಿರುವ ಅನೇಕ ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವ ಹೆಗ್ಗುರಿಯಿಂದ ಮುನ್ನಡೆದಿರುವ ಟ್ರಸ್ಟ್ನ ಸಾಮಾಜಿಕ-ಧಾರ್ಮಿಕ ಕೈಂಕರ್ಯ ಪ್ರಶಂಸನೀಯವೂ ಹೌದು, ಮಾದರಿಯೂ ಸಹ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ

ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಪ್ಪಟ ಕನ್ನಡದ ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆಯೇ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ವಚನ ಅಧ್ಯಯನ ಕೇಂದ್ರ

ವಚನ ಸಾಹಿತ್ಯದ ಅಭ್ಯಾಸಿಗಳಿಗೆ, ಸಂಶೋಧಕರಿಗೆ ಪೂರಕ ಸಾಮಗ್ರಿಯನ್ನು ಒದಗಿಸುವುದಕ್ಕಾಗಿ ಆರಂಭಿಸಲಾದ ವಚನ ಅಧ್ಯಯನ ಕೇಂದ್ರ ಪ್ರಾತಿನಿಧಿಕ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದೆ.

ಈ ಅಧ್ಯಯನ ಕೇಂದ್ರದಲ್ಲಿ ಈಗಾಗಲೇ ಎಪ್ಪತ್ತೊಂಭತ್ತಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಅಭ್ಯಾಸ ಮಾಡಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದು, ಇಲ್ಲಿ ಕಳೆದ ಒಂಭೈನೂರು ವರ್ಷಗಳಲ್ಲಿ ರಚಿತವಾದ ಶರಣರ ಅಪರೂಪದ ಸಾಹಿತ್ಯ ಗ್ರಂಥಗಳನ್ನು ಸಂಗ್ರಹಿಸಲಾಗಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವ ಬ್ರಿಗೇಡ್

ಕೆರೆಗಳ ಸಂರಕ್ಷಣೆ, ಕಲ್ಯಾಣಿಗಳ ಜೀರ್ಣೋದ್ದಾರದಂತಹ ಸಮಾಜಮುಖಿ ಕಾರ್ಯದಲ್ಲಿ ಅನವರತ ನಿರತವಾಗಿರುವ ಅಪ್ಪಟ ಕನ್ನಡ ಸಂಸ್ಥೆ ಯುವ ಬ್ರಿಗೇಡ್, ಯುವ ಸಮುದಾಯದ ಹೊಸ ಆಶಾಕಿರಣ.
ಯುವಕರ ಶಿಕ್ಷಣ, ಸಮಾಜದ ಸ್ವಾಸ್ಥ ರಕ್ಷಣೆ, ಸಾಮರಸ್ಯ ಕಾಪಾಡುವಿಕೆಯಂತಹ ಮಹತ್ತರ ಧೈಯಗಳೊಂದಿಗೆ ಸ್ಥಾಪಿತವಾದ ಸಂಸ್ಥೆ ‘ಯುವ ಬ್ರಿಗೇಡ್’, ಲೇಖಕ, ವಾಗ್ನಿ, ಸಮಾಜಮುಖಿ ಚಕ್ರವರ್ತಿ ಸೂಲಿಬೆಲೆ ಸ್ಥಾಪಿಸಿದ ಈ ಸಂಸ್ಥೆ ಅಲ್ಪಾವಧಿಯಲ್ಲಿ ಕೈಗೊಂಡ ಕೈಂಕರ್ಯಗಳು ಅನೇಕಾನೇಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಕೊಟ್ಟ ಕೊಡುಗೆ ಅಪಾರ. ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಕಲ್ಯಾಣಿಗಳ ಜೀರ್ಣೋದ್ದಾರ, ಕಾವೇರಿ, ನೇತ್ರಾವತಿ, ಭೀಮಾ, ಕಪಿಲೆ ಸೇರಿದಂತೆ ೮ ನದಿಗಳ ಸ್ವಚ್ಛಗೊಳಿಸುವಿಕೆ, ಮಳೆನೀರು ಸಂಗ್ರಹಣೆಯ ಮಹತ್ವ ಪಸರಿಸುವಿಕೆ, ಹುತಾತ್ಮ ಯೋಧರ ಸ್ಮರಣೆ, ಪ್ರವಾಹ ಪೀಡಿತರಿಗೆ ನೆರವು, ಕಾರ್ಗಿಲ್ ವಿಜಯ ದಿನದ ಆಚರಣೆ, ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿ, ಕನ್ನಡ ಕಲೆ, ಸಂಸ್ಕೃತಿ ಕುರಿತ ಪ್ರವಚನ-ನೃತ್ಯ ಮಾಲಿಕೆ, ಪರಭಾಷಿಕರಿಗೆ ಕನ್ನಡ ಕಲಿಸುವಿಕೆ, ಸ್ವಚ್ಛ ಭಾರತ ಯೋಜನೆಯ ಅನುಷ್ಠಾನ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಕೊರೊನಾ ಪೀಡಿತರು-ಸಂತ್ರಸ್ತರಿಗೆ ಮಾನವೀಯ ನೆರವು, ಗ್ರಾಮಸ್ವರಾಜ್ಯ ಕಲ್ಪನೆಯ ಸಾಕಾರ ಮುಂತಾದ ಹತ್ತಾರು ಸಮಾಜಸೇವಾ ಕಾರ್ಯಗಳಲ್ಲಿ ನಿರತವಾಗಿರುವ ಯುವ ಬ್ರಿಗೇಡ್ ನಾಡಿನ ಹೆಮ್ಮೆಯ ಮಾದರಿ ಯುವ ಸಂಸ್ಥೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ದಿ ಬೆಟರ್ ಇಂಡಿಯಾ

ಉತ್ತಮ ಭಾರತ ನಿರ್ಮಾಣಕ್ಕಾಗಿ ಮಿಡಿದು ದುಡಿಯುತ್ತಿರುವ ಹೆಮ್ಮೆಯ ಸುದ್ದಿಸಂಸ್ಥೆ ‘ದಿ ಬೆಟರ್ ಇಂಡಿಯಾ’. ಸತ್ಯ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುತ್ತಿರುವ ವೆಬ್ ತಾಣ.
ಸಿವಿಲ್ ಎಂಜಿನಿಯರಿಂಗ್ ಪದವಿ ಹಾಗೂ ವಾಣಿಜ್ಯ ಆಡಳಿತದ ಸ್ನಾತಕೋತ್ತರ ಪದವೀಧರಾದ ಬೆಂಗಳೂರು ಮೂಲದ ಧೀಮಂತ್ ಪರೇಖ್ ಮತ್ತು ಅನುರಾಧ ಪರೇಖ್ರವರು ದಿ ಬೆಟರ್ ಇಂಡಿಯಾದ ಸಂಸ್ಥಾಪಕರು. ಸುಳ್ಳು ಮತ್ತು ಸಮಾಜವಿರೋಧಿ ಸುದ್ದಿ ಮಾಧ್ಯಮಗಳಿಂದ ಬೇಸತ್ತು ಸತ್ಯ, ಸಕಾರಾತ್ಮಕ, ಸಮಾಜಮುಖಿ ಪತ್ರಿಕೋದ್ಯಮದ ಕನಸು ಹೊತ್ತು ೨೦೦೮ರಲ್ಲಿ ಆರಂಭಿಸಲಾದ ಈ ಸುದ್ದಿ ವೆಬ್ ತಾಣ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ನಿರ್ಲಕ್ಷಿತ ಭಾರತೀಯ ಕಲೆ, ಗ್ರಾಮೀಣ ಭಾಗದ ಅನಕ್ಷರತೆ, ಸಮಸ್ಯೆಗಳನ್ನು ಬಿಂಬಿಸುತ್ತಾ ಬಂದಿರುವ ಸಂಸ್ಥೆ ಅನೇಕ ಹಳ್ಳಿಗಳಿಗೆ ತನ್ನ ವರದಿಗಳಿಂದ ನೀರು, ವಿದ್ಯುತ್ಗಳು ದೊರೆಯುವಂತೆ ಮಾಡಿದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಸರ್ಕಾರದ ಅವೈಜ್ಞಾನಿಕ ನೀತಿಗಳ ಬಗ್ಗೆ ಬೆಳಕು ಚೆಲ್ಲಿ ಆಡಳಿತಗಾರರ ಕಣ್ಣು ತೆರೆಸಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಶ್ರೀಸಾಮಾನ್ಯರಿಗೆ ಪರಿಹಾರ ದೊರಕಿಸಿರುವ ದಿ ಬೆಟರ್ ಇಂಡಿಯಾ ಸಂಸ್ಥೆ ವಿಶ್ವಾದ್ಯಂತ ೯ ಕೋಟಿ ಜನರನ್ನು ತಲುಪುತ್ತಿದ್ದು ಸಮಾಜಮುಖಿ ಕೈಂಕರ್ಯದಲ್ಲಿ ಸಾರ್ಥಕತೆ ಕಂಡಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ

ಯೋಗ ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ-ಪೋಷಣೆಗೆ ಶ್ರಮಿಸುತ್ತಿರುವ ವಿಶಿಷ್ಟ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಪಾರಂಪರಿಕ ಯೋಗ ಪದ್ಧತಿಯ ಪ್ರಸಾರಕ್ಕಾಗಿಯೇ ಮುಡಿಪಿರುವ ಸಂಘಟನೆ.
ತುಮಕೂರಿನಲ್ಲಿ ನೆಲೆನಿಂತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯು ೧೯೮೦ರಲ್ಲಿ ಪ್ರಾರಂಭಗೊಂಡಿತು. ಯೋಗ ಗುರು ಅ.ರಾ.ರಾಮಸ್ವಾಮಿ ಅವರು ಈ ಸಂಸ್ಥೆಯ ರೂವಾರಿಗಳು. ಪುಟ್ಟ ಯೋಗ ತರಗತಿ ರೂಪದಲ್ಲಿ ಮೈದೆಳೆದ ಸಂಸ್ಥೆ ಆನಂತರ ಬೃಹದಾಕಾರವಾಗಿ ಮೈಚಾಚಿ ನಿಂತಿದ್ದು ಇತಿಹಾಸ. ಮಲ್ಲಾಡಿಹಳ್ಳಿಯ ರಾಘವೇಂದ್ರ ಮಹಾಸ್ವಾಮಿಗಳು, ವಿಶ್ವವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ರೂಪತೆಳೆದ ಈ ಸಂಸ್ಥೆಯದ್ದು ಸಂಸ್ಕಾರ, ಸಂಘಟನೆ ಮತ್ತು ಸೇವೆಯೇ ಮುಖ್ಯಗುರಿ. ಸರಿಸುಮಾರು ೪೦ ವರ್ಷಗಳಿಂದಲೂ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವುದು ಸ್ಮರಣಾರ್ಹ. ರಾಜ್ಯವೊಂದರಲ್ಲೇ ೯೦೦ ಶಾಖೆ ಮಾತ್ರವಲ್ಲದೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಶಾಖೆ ಹೊಂದಿರುವ ಸಮಿತಿಯಲ್ಲಿ ಈವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ತಯಾರಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿಕೊಡಲಾಗಿದ್ದು ಆ ಮೂಲಕ ಯುವಜನತೆಯ ಮಾನಸಿಕ-ದೈಹಿಕ ಆರೋಗ್ಯದ ಸುಸ್ಥಿರತೆಗೆ ಅಪೂರ್ವ ಕಾಣೆ ನೀಡಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವ ವಿಷಯ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಊರಮ್ಮದೇವಿ ಸೇವಾ ಟ್ರಸ್ಟ್

ದೇವದಾಸಿಯರ ಬಾಳಲ್ಲಿ ಸ್ವಾಭಿಮಾನದ ಬೆಳಕು ಹರಿಸಿದ ಸಂಸ್ಥೆ ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ ಉದ್ಯೋಗಿಗಳಾಗಿ ಹೊಸ ಬದುಕು ಕಂಡುಕೊಂಡ ನಿರ್ಭಾಗ್ಯರು.
ಬಳ್ಳಾರಿ ಜಿಲ್ಲೆಯ ೧೦,೫೪೦ ಮಾಜಿ ದೇವದಾಸಿಯರ ಪೈಕಿ ಕೂಡ್ಲಿಗಿಯಲ್ಲೇ ಅಗ್ರಪಾಲು, ಈ ಮಾಜಿ ದೇವದಾಸಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಜಿಲ್ಲಾಡಳಿದಿಂದ ಶೇಂಗಾ ಚಿಕ್ಕಿ ತಯಾರಿಕಾ ಘಟಕ ಸ್ಥಾಪಿಸಿ ಉದ್ಯೋಗಿನಿ ಯೋಜನೆಯಡಿ ಸಾಲ ಒದಗಿಸುವಿಕೆ. ಆ ಘಟಕದ ನಿರ್ವಹಣೆಯ ಹೊಣೆ ಹೊತ್ತಿದ್ದು ದೇವದಾಸಿ ಸ್ವಾವಲಂಬನ ಕೇಂದ್ರ ಮುಂದಿನದ್ದು ಪರಿಶ್ರಮಕ್ಕೆ ದೊರೆತ ಯಶಸ್ಸಿನ ಕಥೆ. ನಿತ್ಯ ನಾಲ್ಕು ಸಾವಿರ ಚಿಕ್ಕಿ ತಯಾರಿಕೆಯಲ್ಲಿ ತೊಡಗಿರುವ ಕೇಂದ್ರದ ಮಾಜಿ ದೇವದಾಸಿಯರು ತಾಲ್ಲೂಕಿನ ೩೦೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಚಿಕ್ಕಿ ಪೂರೈಸುತ್ತಿರುವುದು ವಿಶೇಷ, ಮಾಸಿಕ ೭ ಲಕ್ಷ ಚಿಕ್ಕಿಗೆ ಬೇಡಿಕೆಯಿದ್ದು ಆ ಬೇಡಿಕೆ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ಮಾಜಿ ದೇವದಾಸಿಯರ ಶ್ರಮದಾನಕ್ಕೆ ಇದೀಗ ಪ್ರಶಸ್ತಿಯಿಂದ ಸಾರ್ಥಕತೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯೂತ್ ಫಾರ್ ಸೇವಾ

ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಆಂದೋಲನದ ರೂವಾರಿ ಯೂತ್ ಫಾರ್ ಸೇವಾ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರವ್ಯಾಪಿ ಸಕ್ರಿಯವಾಗಿರುವ ಸ್ವಯಂಸೇವಾ ಸಂಸ್ಥೆ.
ಬೆಂಗಳೂರಿನಲ್ಲಿ ನೆಲೆನಿಂತಿರುವ ಯುತ್ ಫಾರ್ ಸೇವಾ ಸ್ಥಾಪನೆಯಾಗಿದ್ದು ೨೦೦೭ರಲ್ಲಿ, ಸ್ವಯಂಸೇವಾ ಸಂಸ್ಕೃತಿಯನ್ನು ಪಸರಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಸ್ಥೆಯ ಪರಮೋದ್ದೇಶ. ದೇಶದ ೧೨ ರಾಜ್ಯಗಳ ೪೨ ನಗರಗಳು ಒಂದು ಲಕ್ಷದ ಹದಿನೈದು ಸಾವಿರ ಸ್ವಯಂಸೇವಕರನ್ನೊಳಗೊಂಡ ವಿಶಾಲ ಜಾಲ ಹೊಂದಿರುವ ಯೂತ್ ಫಾರ್ ಸೇವಾ ಯುವಕರನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರದ ಯೋಜನೆಗಳ ಬೇರಿಗೆ ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ ೬,೭೮,೪೫೦ ಮಂದಿ ಫಲಾನುಭವಿಗಳನ್ನು ತಲುಪಿರುವ ಸಂಸ್ಥೆ ೧೬,೭೨೨ ವಿದ್ಯಾರ್ಥಿಗಳಿಗೆ ತರಬೇತಿ, ೫೦೦೦ಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ೧೮, ೨೭೯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಉಚಿತ ವೈದ್ಯಕೀಯ ನೆರವನ್ನೂ ಒದಗಿಸುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೀಡಾದ ೬,೪೫,೭೬೦ ಜನರಿಗೆ ನೆರವಾಗಿದ್ದು ೧,೩೫,೪೦೫ ಮಂದಿಗೆ ಆಹಾರದ ಕಿಟ್ಗಳನ್ನು ನೀಡಿ ಮಾನವೀಯತೆ ಮೆರೆದಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್

ಕಲಾರಕ್ಷಣೆ ಮತ್ತು ಕಲಾವಿದರ ಪೋಷಣೆಯಲ್ಲಿ ಅವಿರತ ಶ್ರಮ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯದ್ದು. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಧೀಮಂತ ಸಂಸ್ಥೆ.
ಕರ್ನಾಟಕ ಕಲಾರಂಗದ ಪ್ರಮುಖ ಸಂಸ್ಥೆಯೆನಿಸಿರುವ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರುವಾಸಿ. ಬಹಮುಖ ಪ್ರತಿಭೆ ರಾಘವೇಂದ್ರ ಜೆ.ಪ್ರಭಾತ್‌ ಅವರ ಕಲ್ಪನೆಯ ಕೂಸು. ಆಧ್ಯಾತ್ಮ, ತತ್ವ, ಸಾಹಿತ್ಯ, ಸಂಗೀತ, ನೃತ್ಯ, ನೃತ್ಯನಾಟಕ, ಪತ್ರಿಕೋದ್ಯಮ. ಹೀಗೆ ಹತ್ತು ಹಲವು ಮುಖದ ಕಲೆಯ ಪರಿಚಯವಿರುವ ರಾಘವೇಂದ್ರ ಪ್ರಭಾತ್ ಪ್ರಖರ ವಾಗ್ನಿ, ರಂಗನಟ, ನಿರ್ದೇಶಕ ಮತ್ತು ನೃತ್ಯ ನಾಟಕಗಳ ರಚನಕಾರರು.ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಮೆರಿಕಾ, ಯುರೋಪ್, ಸಿಂಗಪುರ, ಮಲೇಷಿಯ ಮುಂತಾದ ಪೌರಾತ್ಯ ದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಪ್ರವಾಸ ಕೈಗೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ರಾಘವೇಂದ್ರದ ಹೆಗ್ಗಳಿಕೆ. ನೃತ್ಯ ಕ್ಷೇತ್ರಕ್ಕೆ ರಾಘವೇಂದ್ರರಂತೆ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯದ್ದು ಮಹತ್ವದ ಕೊಡುಗೆ. ಸಂಸ್ಥೆಯ ‘ಶ್ರೀ ಕೃಷ್ಣಕಮಲಾನಾಥ್’ ಎಂಬ ವರ್ಣವು ಜಗತ್ತಿನಾದ್ಯಂತ ಎಲ್ಲಾ ನರ್ತಕರು ಪ್ರದರ್ಶಿಸುವ ಜನಪ್ರಿಯ ಆಕೃತಿಯಾಗಿರುವುದು ವಿಶೇಷ. ಕಲಾವನದ ಮಂದಾರಪುಷ್ಟವಾಗಿ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ತನ್ನ ಸುಗಂಧವನ್ನೂ ಬೀರುತ್ತಲೇ ಇರುವುದು ಸಾಂಸ್ಕೃತಿಕ ಹೆಗ್ಗುರುತು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವ ಮಹತ್ತಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾಕೇಂದ್ರ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಸ್ವಾಮಿ ಸಿದ್ದೇಶ್ವರಾನಾಂದ ಸ್ವಾಮಿ ಅವರು ೧೯೨೫ರಲ್ಲಿ ಸ್ಥಾಪಿಸಿದ ಈ ಸಂಸ್ಥೆಗೆ ೧೯೩೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನೀಡಿದ ಅನುದಾನದಿಂದ ಸ್ವಂತಕಟ್ಟಡದ ಸ್ಥಾಪನೆ. ಸ್ವಾಮೀಜಿಗಳ ಪಾಲಿಗೆ ಪ್ರತಿಷ್ಠಿತ ವೇದಾಂತ ಅಧ್ಯಯನ ಕೇಂದ್ರವಾಗಿದ್ದ ಆಶ್ರಮ ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ. ರಾಷ್ಟ್ರಕವಿ ಕುವೆಂಪು ಅವರು ಬಾಲ್ಯದಲ್ಲಿ ಇಲ್ಲಿಯೇ ಕಲಿತದ್ದು ವಿಶೇಷ. ಸಂಸ್ಥೆಯು ವಿವೇಕ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿವರ್ಷ ೩೫೦ ರಿಂದ ೫೦೦ ವಿದ್ಯಾರ್ಥಿಗಳು ಶಿಕ್ಷಿತರಾಗುತ್ತಿರುವುದು ಮಹತ್ವದ ಸಾಧನೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು ೯ ಶಾಲೆಗಳನ್ನು ನಡೆಸುತ್ತಿರುವ ಎಲ್ಲೆಡೆ ಮಕ್ಕಳಲ್ಲಿ ಬದುಕಿನ ನೈತಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ. ಸಂಸ್ಥೆಯಲ್ಲಿ ಕಲಿತ ಮಕ್ಕಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು ಶಿಸ್ತು-ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ. ಸಂಸ್ಥೆಯು ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಶತಮಾನದ ಅಂಚಿನಲ್ಲಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಿವಪ್ಪ ಭರಮಪ್ಪ ಅದರಗುಂಚಿ

ಕರ್ನಾಟಕ ಗ್ರಾಮೀಣ ರಂಗಭೂಮಿಯಲ್ಲಿ ನಾಲ್ಕು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ರಂಗಪ್ರಕಾರವನ್ನು ವಿಸ್ತರಿಸುತ್ತಿರುವ, ಕಲಾವಿದ, ರಂಗ ಸಂಘಟಕ ಶಿವಪ್ಪ ಭರಮಪ್ಪ ಅದರಗುಂಚಿ,

ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕೃತಿಕ ನಾಟ್ಯ ಸಂಘ, ಕಲಘಟಗಿ ಎಂಬ ಸಂಸ್ಥೆಯನ್ನು ಆರಂಭಿಸಿ, ಪೌರಾಣಿಕ ಐತಿಹಾಸಿಕ, ಭಕ್ತಿ ಪ್ರಧಾನ ಮತ್ತು ಸಾಮಾಜಿಕ ನಾಟಕಗಳನ್ನು ರಾಜ್ಯದುದ್ದಕ್ಕೂ ಅಭಿನಯಿಸುತ್ತಿರುವ ಶಿವಪ್ಪ ಅವರು ಅನೇಕ ನಾಟಕಗಳ ನಿರ್ದೇಶಕರು.

ರೇಣುಕಾ ಮಹಾತ್ಮ, ರಕ್ತರಾತ್ರಿ, ಜಗಜ್ಯೋತಿ ಬಸವೇಶ್ವರ, ಸಿಂಧೂರ ಲಕ್ಷ್ಮಣ ಮೊದಲಾದ ನೂರಾರು ನಾಟಕಗಳನ್ನು ಪ್ರಯೋಗಿಸಿರುವ ಇವರು ಗ್ರಾಮೀಣ ರಂಗಭೂಮಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥತೆಯಿಂದ ರೋಗಿಗಳ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಬೆಂಗಳೂರಿನ ರಂಗದೊರೆ ಸ್ಮಾರಕ ಆಸ್ಪತ್ರೆ
ಶ್ರೀ ಶೃಂಗೇರಿ ಶಾರದಾಪೀಠ ಪರಮಪೂಜ್ಯ ಜಗದ್ಗುರುಗಳಾದ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ದೂರದೃಷ್ಟಿಯ ಸಂಕಲ್ಪದಲ್ಲಿ ಪ್ರಾರಂಭಿಸಲ್ಪಟ್ಟಿರುವ ರಂಗದೊರೆ ಸ್ಮಾರಕ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸುಸಜ್ಜಿತ ಆಸ್ಪತ್ರೆಯಾಗಿದೆ. ಸವಲತ್ತು, ವಿಶೇಷ ಪರಿಣಿತಿ, ತಜ್ಞವೈದ್ಯರ ನಿರಂತರ ಸಲಹೆ-ಸೂಚನೆ, ಮಾರ್ಗದರ್ಶನ ಮತ್ತು ಅನುಭವದ ಸಂಪರ್ಕ ಸಾಧನದಿಂಧಾಗಿ ರಾಜ್ಯದ ವಿಶೇಷ ಆಸ್ಪತ್ರೆಯಾಗಿ ಸ್ಥಾನ ಪಡೆದಿದೆ. ಚಿಕಿತ್ಸೆ, ವೈದ್ಯೋಪಚಾರಗಳೆಲ್ಲವೂ ಇಲ್ಲಿ ‘ಸೇವೆ’ಯೇ. ರೋಗಿಗಳ ಸಮುದಾಯದ ಸೇವೆಯಲ್ಲಿ ಒಂದು ದಶಕದ ಹೆಜ್ಜೆಗುರುತು ಈ ಆಸ್ಪತ್ರೆಯದ್ದು. ವ್ಯಾಪಾರಿ ಮನೋಭಾವವಿಲ್ಲದೆ, ವೈದ್ಯೋಪಚಾರವನ್ನು ಶ್ರೀಸಾಮಾನ್ಯನಿಗೆ ಸುಲಭ ದರದಲ್ಲಿ ಒದಗಿಸಿದ ಹೆಗ್ಗಳಿಕೆ ಈ ಆಸ್ಪತ್ರೆಯದ್ದಾಗಿದ್ದು ಮಾದರಿಯಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನೆಲೆ ಫೌಂಡೇಶನ್ (ಸಂಸ್ಥೆ)

ಅನಾಥ ಮಕ್ಕಳ ಪುನರ್ವಸತಿಯ ಮಾನವೀಯ ಕಾರ್ಯದಲ್ಲಿ ಸಕ್ರಿಯವಾಗಿರುವ ವಿಶಿಷ್ಟ ಸೇವಾಕೇಂದ್ರ ನೆಲೆ ಫೌಂಡೇಶನ್, ಸಂಸ್ಕಾರ ಶಿಕ್ಷಣ ಮತ್ತು ವಸತಿ ಸೌಲಭ್ಯಧಾರಣೆಯ ಸಂಸ್ಥೆ. ಜೀವನದಲ್ಲಿ ಪೋಷಕರ ಪ್ರೀತಿ, ಅಕ್ಷರದ ಆಸರೆ ಮತ್ತು ಬದುಕಿನ ಭರವಸೆಗಳ ನೆಲೆಯೇ ಇಲ್ಲದವರಿಗೆ ಅಕ್ಷರ, ವಸತಿ ಮತ್ತು ವಾತ್ಸಲ್ಯದ ನೆಲೆ ಒದಗಿಸುವ ಉದ್ದೇಶದಿಂದ ೨೦೦೦ರಲ್ಲಿ ನರೇಂದ್ರ ಅವರಿಂದ ಸ್ಥಾಪಿತವಾದ ನೆಲೆ ಫೌಂಡೇಶನ್, ಎರಡು ದಶಕಗಳಿಂದಲೂ ತನ್ನ ಅನಾಥ ಮಕ್ಕಳ ಬದುಕನ್ನು ಹಸನಾಗಿಸುವ ಕೆಲಸದಲ್ಲಿ ಅವಿರತ ನಿರತವಾಗಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ಕಾರ್ಯಾರಂಭ ಮಾಡಿದ ಸಂಸ್ಥೆ ೨೦ ವರ್ಷಗಳಲ್ಲಿ ಬೆಂಗಳೂರಿನಲ್ಲಿನ ಐದು ಕೇಂದ್ರಗಳೂ ಸೇರಿದಂತೆ ರಾಜ್ಯದಲ್ಲಿ ಹತ್ತು ಘಟಕಗಳನ್ನು ಹೊಂದಿದೆ. ೨೮೯ ಅನಾಥ ಮಕ್ಕಳನ್ನು ಸಲುಹುತ್ತಿರುವ ನೆಲೆ ಫೌಂಡೇಶನ್ ಈ ವರ್ಷದಿಂದ ಮತ್ತೂ ೧೦೩ ಮಕ್ಕಳನ್ನು ತನ್ನ ಪಾಲನೆಯ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಸಾರ್ವಜನಿಕ ದೇಣಿಗೆ ಮತ್ತು ಉದಾರಿಗಳ ನೆರವಿನಲ್ಲಿ ಆರ್ಥಿಕವಾಗಿ ಹಿಂದುಳಿದ, ಅನಾಥ ಹಾಗೂ ಏಕಷೋಷಕ ಮಕ್ಕಳಿಗೆ ಆದ್ಯತೆ ಮೇರೆಗೆ ಉಚಿತವಾಗಿ ಸಂಸ್ಕಾರಯುತ ಶಿಕ್ಷಣ ಮತ್ತು ವಸತಿಯನ್ನು ನೀಡುತ್ತಿದೆ. ಆ ಮೂಲಕ ಅನಾಥ ಮಕ್ಕಳು ಸಮಾಜಘಾತುಕರಾಗಿ ಪರಿವರ್ತನೆ ಆಗದಂತೆ ತಡೆಯುವ ಸತ್ಕಾರ್ಯದಲ್ಲಿ ನೆಲೆ ಫೌಂಡೇಶನ್ ನಿರಂತರವಾಗಿ ಶ್ರಮಿಸುತ್ತಿದ್ದು ಅನಾಥ ಮಕ್ಕಳ ಪುನರ್ವಸತಿಯಲ್ಲಿ ಮಾದರಿಯಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಮ್ಮನೆ-ಸುಮ್ಮನೆ (ಸಂಸ್ಥೆ)

ಅನಾಥರ ಬಾಳು ಬೆಳಗುವ ಸತ್ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯರ ಅಪರೂಪದ ಸಂಸ್ಥೆ ನಮ್ಮನೆ-ಸುಮ್ಮನೆ. ನಿರ್ಗತಿಕರ ಪಾಲಿಗೆ ಆಶ್ರಯಧಾತು, ಲೈಂಗಿಕ ಅಲ್ಪಸಂಖ್ಯಾತರಿಗೆ ರಕ್ಷಕ, ವಿಶ್ವದಲ್ಲೇ ಮೊದಲೆಂಬ ಹಿರಿಮೆಯ ಸೇವಾಸಂಸ್ಥೆ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮಂಗಳಮುಖಿಯರ ಬದುಕು ನಿಜಕ್ಕೂ ಘೋರ, ಜೀವನನಿರ್ವಹಣೆಗೆ ಅವರು ಪಡುವ ಪಾಡು ವರ್ಣಿಸಲಸದಳ. ಅಂತಹ ಶೋಷಿತ ಮಂಗಳಮುಖಿಯರು ಸಮಾಜಮುಖಿಗಳಾಗಿ ಕಾರ್ಯನಿರ್ವಹಿಸಲೆಂದು ಸ್ಥಾಪಿಸಿದ ವಿನೂತನ, ವಿಶ್ವದಲ್ಲೇ ಮೊದಲೆನ್ನಲಾದ ಸಂಸ್ಥೆ ‘ನಮ್ಮನೆ ಸುಮ್ಮನೆ’. ನಕ್ಷತ್ರ ಗೋಳ ಮತ್ತವರ ಸ್ನೇಹಿತರಾದ ಮಿಲನ, ಸೌಂದರ್ಯ, ರೇಷ್ಮಾ, ತನುಶ್ರೀ ಈ ಸಂಸ್ಥೆಯ ಸಂಸ್ಥಾಪಕರು. ಬ್ಯೂಟಿಪಾರ್ಲ‌ರ್‌ವೊಂದರನ್ನು ನಡೆಸುತ್ತಿರುವ ಈ ಐವರು ಆ ಕಸುಬಿನಲ್ಲಿ ಬರುವ ಹಣದ ಒಂದು ಭಾಗವನ್ನು ವ್ಯಯಿಸಿ ಈ ನಿರಾಶ್ರಿತರ ಕೇಂದ್ರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ಬೀದಿಬದಿಯಲ್ಲಿ ಸೂರಿಲ್ಲದೆ ಪಡಿಪಾಟಲು ಪಡುತ್ತಿರುವ ಅನಾಥರು, ನಿರ್ಗತಿಕರು, ಅಂಗವಿಕಲರು, ಬುದ್ಧಿಮಾಂದ್ಯರಿಗೆ ಜೀವನಕ್ಕೆ ನಮ್ಮನೆ ಸುಮ್ಮನೆ’ಯೇ ಆಸರೆ. ಉಚಿತ ಊಟ, ವಸತಿ ಮತ್ತು ವಿದ್ಯಾಭ್ಯಾಸ ಕಲ್ಪಿಸುತ್ತಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಚಾರ. ಗುಲ್ಬರ್ಗದವರಾದ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಈ ಐವರು ನಡೆಸುತ್ತಿರುವ ಈ ಸಂಸ್ಥೆ ೧೦೦ಕ್ಕೂ ಹೆಚ್ಚು ನಿರಾಶ್ರಿತರಿಗೆ ಆಸರೆಯಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಮಂಗಳಮುಖಿಯರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿದೆ. ಹೊಸ ಜೀವನ ಕಟ್ಟಿಕೊಳ್ಳಲು ಕೈಲಾದ ಸಹಾಯವನ್ನೂ ಮಾಡಿದ್ದು ಮಂಗಳಮುಖಿಯರನ್ನು ಕಡೆಗಣಿಸುವ ಸಮಾಜಕ್ಕೆ ತಮ್ಮದೇ ಸೇವೆಯ ಮೂಲಕ ಹೊಸ ಸಂದೇಶ ರವಾನಿಸಿರುವ ‘ನಮ್ಮನೆ ಸುಮ್ಮನೆ’ ಮಾದರಿ ಸೇವಾಕೇಂದ್ರ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಲಿಂಗಾಯತ ಪ್ರಗತಿಶೀಲ ಸಂಘ, ಗದಗ

ನಾಡಿನ ಹೆಮ್ಮೆಯ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಗದಗಿನ ಲಿಂಗಾಯತ ಪ್ರಗತಿಶೀಲ ಸಂಘ. ಬಹುರೂಪಿ ಸಾಧನೆಗೈದು ದಾಖಲೆ ಬರೆದ ಸೇವಾಸಂಸ್ಥೆ-ಗದಲಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಂಗಸಂಸ್ಥೆಯಾದ ಲಿಂಗಾಯತ ಪ್ರಗತಿಶೀಲ ಸಂಘ ಸ್ಥಾಪನೆಯಾಗಿದ್ದು ೧೯೭೦ರಲ್ಲಿ. ಅಪ್ಪಣ್ಣ ಮಾನ್ವಿ, ಪಿ.ಎಸ್.ಸಂಶಿಮಠ ಮತ್ತಿತರ ಸಮಾನಮನಸ್ಕ ಸ್ನೇಹಿತರು ಸ್ಥಾಪಿಸಿದ ಈ ಸಂಸ್ಥೆ ೧೯೭೨ರಿಂದ ಸತತ ೫೧ ವರ್ಷಗಳಿಂದ ಜನಮಾನಸವನ್ನು ತಿದ್ದಿ ಸಾಂಸ್ಕೃತಿಕ ಪರಿಸರ ನಿರ್ಮಿಸುವ ಘನಕಾರ್ಯದಲ್ಲಿ ತೊಡಗಿದೆ. ಪ್ರತಿ ಸೋಮವಾರ ನಡೆಯುವ ಶಿವಾನುಭವ ಕಾರ್ಯಕ್ರಮ ಸಂಘದ ಹೆಜ್ಜೆಗುರುತು. ೫೧ ವರ್ಷಗಳಿಂದ ಒಂದು ವಾರವೂ ನಿಲ್ಲದಂತೆ ಪ್ರತಿ ಸೋಮವಾರ ೨೬೧೦ ಶಿವಾನನುಭವ ಗೋಷ್ಠಿ ನಡೆಸಿರುವುದು ಚಾರಿತ್ರಿಕದಾಖಲೆ. ನಾಡಿನ ಸರ್ವಕ್ಷೇತ್ರದ ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಬೆಳಗಿರುವುದು ವಿಶೇಷ. ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ರಕ್ತದಾನ, ನೇತ್ರದಾನಶಿಬಿರ, ಜಾನಪದ, ರಂಗಭೂಮಿ, ಕೃಷಿಮೇಳಗಳು ಮತ್ತು ಕಮ್ಮಟಗಳನ್ನು ನಿರಂತರವಾಗಿ ನಡೆಸುತ್ತಿರುವುದು ಮಾದರಿ ನಡೆ.ಮಠಗಳು ಧರ್ಮದಾಚೆಗೆ ಜನಮನವನ್ನು ಕಟ್ಟಬೇಕೆಂಬ ಲೋಕಮಾತನ್ನು ನಿಜವಾಗಿಸಿದ ಲಿಂಗಾಯತ ಪ್ರಗತಿಶೀಲ ಸಂಘದ ನಮ್ಮ ನಡುವಿರುವ ಹೆಮ್ಮೆಯ ಸೇವಾಕೇಂದ್ರ.

Categories
ಕನ್ನಡ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಾಂತಿ ಕುಟೀರ

ಶಾಂತಿ ಕುಟೀರ ಸಂಸ್ಥೆಯು ನಾಡಿನ ಅಸಂಖ್ಯಾತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತಿರುವ ಸಂಸ್ಥೆಗಳಲ್ಲೊಂದು. ಈ ಆಧ್ಯಾತ್ಮಿಕ ಸಂಸ್ಥೆಯನ್ನು ಆರಂಭಿಸಿದ ಶ್ರೀ ಗಣಪತರಾವ ಮಹಾರಾಜರಿಗೆ ಈಗ ನೂರು ವರ್ಷ

ಲೌಕಿಕ ಶಿಕ್ಷಣ ಪಡೆದರೂ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡ ಗಣಪತರಾವ್ ಮಹಾರಾಜರು ಆಧ್ಯಾತ್ಮ ಸಾಧನೆಯಿಂದ ಹೊಸ ಹಾದಿಯನ್ನು ಹುಡುಕಿಕೊಟ್ಟರಲ್ಲದೆ ಅದನ್ನು ಸಮರ್ಥವಾಗಿ ಮುಂದುವರೆಸಲು ಅನುಕೂಲವಾಗುಂತೆ ವಿಜಾಪುರ ಜಿಲ್ಲೆಯ ಕನ್ನೂರಿನಲ್ಲಿ ಶಾಂತಿ ಕುಟೀರವನ್ನು ಸ್ಥಾಪಿಸಿದರು. ಐದು ದಶಕಗಳ ಕಾಲ ಅಸಂಖ್ಯಾತ ಶಿಷ್ಯರಿಗೆ ನಾಮಮಂತ್ರವನ್ನು ಉಪದೇಶಿಸಿದ ಶ್ರೀ ಗಣಪತರಾವ್ ಮಹಾರಾಜ್ ಹಲವು ಮೌಲ್ಯಯುತ ಗ್ರಂಥಗಳನ್ನು ರಚಿಸಿರುವುದೇ ಅಲ್ಲದೇ ಸತತವಾಗಿ ತಮ್ಮ ಪ್ರವಚನಗಳಿಂದ ಅಸಂಖ್ಯಾತ ಜನರನ್ನು ತಲುಪಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕನ್ನಡ ಸಾಹಿತ್ಯ ಪರಿಷತ್ತು

೧೯೧೫ರಲ್ಲಿ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದ ಫಲವಾಗಿ ನಾಡಿಗೆ ದೊರಕಿದ ಹಲವು ಪ್ರಗತಿಪರ ಸಂಸ್ಥೆಗಳಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸ್ಥಾಪಿಸಿದ ಸಂಸ್ಥೆ, ಕಾಲಾಂತರದಲ್ಲಿ ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಂಡಿತು.

ಕರ್ನಾಟಕ ಏಕೀಕರಣವೂ ಸೇರಿದಂತೆ, ಕನ್ನಡ ನಿಘಂಟು, ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್, ಮಹಾಜನ ವರದಿ, ಸರೋಜಿನಿ ಮಹಿಷಿ ವರದಿ, ಗೋಕಾಕ್ ಚಳುವಳಿಯಂತಹ ಸಂದರ್ಭಗಳಲ್ಲಿ ಹೋರಾಟದ ಮುಂಚೂಣಿಯಲ್ಲಿತ್ತು.

ಕನ್ನಡ ಭಾಷೆ ಹಾಗೂ ಬದುಕಿನ ಹಾದಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಭಾಷೆಯ ತಳಹದಿಯ ಮೇಲೆ ಒಂದು ಶತಮಾನದಷ್ಟು ಕಾಲ ಜೀವಂತವಾಗಿರುವ ಸಂಸ್ಥೆ ಇಡೀ ಭಾರತದಲ್ಲಿ ಇದೊಂದೇ ಆಗಿದೆ. ನೂರು ವರುಷ ಕಂಡಿರುವ ಕ.ಸಾ.ಪ. ಈಗ ತನ್ನ ಕಾರ್ಯಚಟುವಟಿಕೆಗಳನ್ನು ಹಳ್ಳಿಯವರೆಗೆ ವಿಸ್ತರಿಸಿದೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಡಾ. ಫ.ಗು.ಹಳಕಟ್ಟಿ

ವಚನ ಪಿತಾಮಹ ಫ.ಗು.ಹಳಕಟ್ಟಿಯವರು ೧೨ನೆಯ ಶತಮಾನದ ವಚನ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನಾ ತಾಡವೋಲೆಗಳಿಂದ ಸಂಗ್ರಹಿಸಿದ್ದ ವಚನಗಳನ್ನು ಮತ್ತು ಅದರ ಭಾವಾರ್ಥಗಳನ್ನು ಡಾ|| ಕಲಬುರ್ಗಿಯವರ ಸಂಪಾದಕತ್ವದಲ್ಲಿ ಸುಮಾರು ೧೦,೦೦೦ ಪುಟಗಳ ೧೫ ಸಂಪುಟಗಳಲ್ಲಿ ಹೊರತಂದಿದೆ.
ನಾಲ್ಕು ಶತಮಾನಗಳ ವಿಜಯಪುರವನ್ನು ಆಳಿದ ಆದಿಲ್ ಶಾಹಿಗಳ ಇತಿಹಾಸವನ್ನು ಈ ಸಂಸ್ಥೆ ಕನ್ನಡಕ್ಕೆ ಅನುವಾದಿಸಿ ೧೮ ಸಂಪುಟಗಳ ಪ್ರಕಟಣೆಗೆ ಕನ್ನಡ ಸಂಸ್ಕೃತಿ ಇಲಾಖೆ ನೆರವಿನಡಿ ಕ್ರಮವಹಿಸಿದ್ದು ಆರು ಸಂಪುಟ ಪ್ರಕಟವಾಗಿದ್ದು, ಉಳಿದವು ಪ್ರಕಟಣೆಗೆ ಸಿದ್ಧವಾಗಿವೆ.
ಹಂಪಿ ವಿವಿ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರವು ಈಗಾಗಲೇ ಎಂಟು ವಿದ್ಯಾರ್ಥಿಗಳ ಸಂಶೋಧನೆ ಪೂರ್ಣತೆಗೆ ನೆರವಾಗಿದ್ದು, ಹಲವರು ಸಂಶೋಧನೆ ಕೈಗೊಳ್ಳಲು ಕೇಂದ್ರ ಕಾರ್ಯನಿರತವಾಗಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಶಿರಡಿ ಸಾಯಿ ಮಂಡಳಿ

ಜಾತಿ ಮತ ಭೇದವೆಣಿಸದೆ ಸಮಾಜ ಸೇವಾ ಧರ್ಮವನ್ನು ಕಳೆದ ೬೨ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.
ಒಂದು ಭಜನೆ ಮಂಡಳಿಯ ರೂಪದಲ್ಲಿ ಪ್ರಾರಂಭವಾದ ಈ ಸಂಸ್ಥೆ ಒಂದು ಸ್ವಂತ ಕಟ್ಟಡ ಹೊಂದಲು ಸುಮಾರು ೫೦ ವರ್ಷಗಳು ಬೇಕಾಯಿತು. ಶ್ರೀ ಶಿರಡಿ ಸಾಯಿಬಾಬಾ ಅವರ ಸರಳ ಜೀವನ, ಉನ್ನತ ಚಿಂತನೆ, ಸಾಮಾಜಿಕ ಕಳಕಳಿಗಳಿಂದಾಗಿ ಹಲವಾರು ಯೋಜನೆಗಳು ಈ ಸಂಸ್ಥೆಯಲ್ಲಿ ರೂಪು ಪಡೆದು ಕಾರ್ಯನಿರ್ವಹಿಸುತ್ತಿವೆ. ಅನ್ನಬ್ರಹ್ಮ ಯೋಜನೆಯಡಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ, ಆರೋಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪರೀಕ್ಷಾ ಶಿಬಿರಗಳು, ಕಣ್ಣಿನ ಶಸ್ತ್ರ ಚಿಕಿತ್ಸೆ, ಮುಂತಾದ 2. ಪ್ರಯೋಜನಗಳನ್ನು ಸಾವಿರಾರು ಜನರು ಪಡೆದುಕೊಂಡಿರುತ್ತಾರೆ. ವಿದ್ಯಾಶಾರದೆ ಯೋಜನೆಯಡಿ ಎಂಟು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ, ಲೇಖನ ಸಾಮಗ್ರಿಗಳ ವಿತರಣೆ, ಪ್ರತಿಭಾ ವಿದ್ಯಾರ್ಥಿ ವೇತನ, ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇವಲ್ಲದೆ ಅಂಧ ಮಕ್ಕಳ ಶಾಲೆಗೆ ನಗದು ನೆರವು, ವೃದ್ಧಾಶ್ರಮಗಳಿಗೆ ಉಚಿತ ವಸ್ತ್ರ, ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ, ಅಂಗವಿಕಲರಿಗೆ ಟ್ರೈಸಿಕಲ್ಗಳ ವಿತರಣೆ, ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಇದು.
ಆರು ದಶಕಗಳಿಂದ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಅಪೂರ್ವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ೧೯೪೨ರಲ್ಲಿ ಪಂ. ಪಂಚಾಕ್ಷರಿ ಗವಾಯಿಗಳಿಂದ ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ ಇದು ದಾನಿ ಬಸರಿಗಿಡದ ವೀರಪ್ಪನವರು ದಾನವಾಗಿ ನೀಡಿದ ಗದಗಿನ ಮಸಾರಿಯಲ್ಲಿ ಆರಂಭಗೊಂಡಿತು. ಅಂಧ ಕಲಾವಿದರಿಗೆ ವಿಶೇಷವಾಗಿ ಶಿಕ್ಷಣ ನೀಡಲು ಸ್ಥಾಪಿಸಿದ ಈ ಸಂಸ್ಥೆ ಇತರರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತು.ಹೀಗಾಗಿ ಈ ಸಂಸ್ಥೆಯಿಂದ ಆನೇಕ ಗಾಯಕರು ಪ್ರಸಿದ್ಧಿಗೆ ಬಂದಿದ್ದಾರೆ ಸರ್ವಶ್ರೀ ಅರ್ಜುನ ಸಾ ನಾಕೋಡ, ಸಿದ್ದರಾಮ ಜಂಬಲದಿನ್ನಿ, ಅರ್.ವಿ ಶೇಷಾದ್ರಿ ಗವಾಯಿ, ಸೋಮನಾಥ ಮರಡೂರ ಚಂದ್ರಶೇಖರ್ ಸ್ವಾಮಿ ಪುರಾಣೀಕ ಮಠ ಮುಂತಾದವರು ಪ್ರಮುಖರು.
ಅಂಧಗಾಯಕ ವಾಧಕ ಡಾ|| ಪುಟ್ಟರಾಜಕವಿ ಗವಾಯಿಗಳು ಪುಣ್ಯಾಶ್ರಮ ಸೇರಿದಾಗ ತಮಗೆ ಸರಿಯಾದ ಉತ್ತರಾಧಿಕಾರಿಯಾಗುನೆಂಬ ನಂಬಿಕೆ ಬಂದು ಆತನಿಗೆ ಆಶ್ರಮದ ಸಕಲ ಉಸ್ತುವಾರಿಯನ್ನು ವಹಿಸಿದರು ೧೯೪೫ರಲ್ಲಿ ಪಂಚಾಕ್ಷರಿ ಗವಾಯಿಗಳು ಶಿವೈಕ್ಯರಾದ ನಂತರ ಪುಟ್ಟರಾಜ ಗವಾಯಿಗಳೇ ಅದರ ಅಧಿಕಾರ ವಹಿಸಿಕೊಂಡರು. ಆಶ್ರಮ ಇದ್ದ ಸ್ಥಳದಲ್ಲಿ ಪಂಚಾಕ್ಷರಿ ಗವಾಯಿಗಳ ಸಮಾಧಿ ಮಾಡಿ ಪ್ರಸ್ತುತ ಇರುವ ಕಟ್ಟಡದಲ್ಲಿ ಆಶ್ರಮ ಸ್ಥಾಪಿತವಾಯಿತು. ಪುಟ್ಟರಾಜ ಗವಾಯಿಗಳ ಸತತ ಪರಿಶ್ರಮದ ಫಲವಾಗಿ ಇಂದು ಇದು ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು ಅಲ್ಲಿನ ಶಿಷ್ಯ ಪರಂಪರೆಯಿಂದ ಭಾರತಾದ್ಯಂತ ಅನೇಕ ಶಾಖೆಗಳನ್ನು ಹೊಂದಿದ, ಆನೇಕ ಶೈಕ್ಷಣಿಕ ಅಂಗ ಸಂಸ್ಥೆಗಳನ್ನು ಹೊಂದಿದೆ.
ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಅಂಧ ವಸತಿಗೃಹ ಪಿ.ಪಿ.ಜಿ. ವಸತಿ ಬೈಲ್ ಶಾಲೆ, ಸಂಸ್ಕೃತ ಪಾಠಶಾಲೆ, ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠಶಾಲೆ, ಪಿ.ಪಿ.ಜಿ. ಕಲಾ ಮಹಾವಿದ್ಯಾಲಯ, ಸಂಗೀತ ಮಹಾವಿದ್ಯಾಲಯ ಮುಂತಾದ ಸಂಸ್ಥೆಗಳು ಗದಗಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಶ್ರೀವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಅಮೇರಿಕದ ರೋಟರಿ ಸಂಸ್ಥೆಯ ನೆರವಿನಿಂದ ೨೫ ಲಕ್ಷರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ಗೃಹವೊಂದನ್ನು ಅಂಧ ಮಕ್ಕಳಿಗಾಗಿಯೇ ನಿರ್ಮಿಸಲಾಗಿದೆ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತಮ್ಮ ೮೭ರ ಹರೆಯದಲ್ಲಿಯೂ ಸನ್ಯಾಸ ಧರ್ಮವನ್ನು ಪರಿಗ್ರಹಿಸಿ ಆಹರ್ನಿಶಿ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಈ ಸಂಗೀತ ಮಹಾವಿದ್ಯಾಲಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಸಂಸ್ಥೆಯಾಗಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕರುಣಾಶ್ರಯ

ಕ್ಯಾನ್ಸರ್ ರೋಗಿಗಳಿಗೆ ರೋಗ ಉಲ್ಬಣ ಹಂತವನ್ನು ಮುಟ್ಟಿದಾಗ ಅವರನ್ನು ನೋಡಿಕೊಳ್ಳಲೆಂದೇ ೧೯೯೯ರಲ್ಲಿ ರೂಪಿತವಾದ ಸಂಸ್ಥೆ ‘ಕರುಣಾಶ್ರಯ’.
ಕ್ಯಾನ್ಸರ್ ರೋಗಿಗಳ ಅಂತಿಮ ಕ್ಷಣಗಳಲ್ಲಿ ಪ್ರೀತಿಯ ಆರೈಕೆ, ಸಂತೈಕೆಗಳು ಅಗತ್ಯ. ಇದನ್ನು ಕರುಣಾಶ್ರಯ ಸಂಸ್ಥೆಯು ಜಾತಿ, ಮತ, ಲಿಂಗ ಮತ್ತು ಆರ್ಥಿಕ ಸ್ಥಾನಮಾನವನ್ನು ಲಕ್ಷಿಸದೆ, ಪೂರ್ಣವಾಗಿ ಉಚಿತವಾಗಿ ನೋಡಿಕೊಳ್ಳುತ್ತದೆ. ಮಧ್ಯಮವರ್ಗದವರ ಪಾಲಿಗೆ ವರದಾನವಾಗಿರುವ ಆಶ್ರಯ ತಾಣ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಂದಲ್ಲದೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮುಂತಾದ ದೂರದ ಪ್ರದೇಶಗಳಿಂದಲೂ ರೋಗಿಗಳು ‘ಕರುಣಾಶ್ರಯ ಕ್ಕೆ ಬರುತ್ತಾರೆ.
ಕರುಣಾಶ್ರಯ ಸಂಸ್ಥೆ ರೋಗಿಗಳಲ್ಲದೆ, ರೋಗಿಯ ಅಂತಿಮ ಕ್ಷಣಗಳಲ್ಲಿ ಕುಟುಂಬ ವರ್ಗದವರಿಗೂ ಸಾಂತ್ವನ ನೀಡುತ್ತದೆ. ಶಾಂತಿ ಮತ್ತು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವ ಕರುಣಾಶ್ರಯ ಸಂಸ್ಥೆಯಲ್ಲಿ ೫೦ ಒಳರೋಗಿಗಳನ್ನು ಹೊಂದುವ ಸೌಕರ್ಯವಿದೆ.
ಸಂಸ್ಥೆಯು ೩೮೦೦ಕ್ಕೂ ಹೆಚ್ಚು ಸಂಖ್ಯೆಯ ರೋಗಿಗಳನ್ನು ನೋಡಿಕೊಂಡಿದೆ. ಅದರಲ್ಲಿ ೨೭೦೦ ತಮ್ಮ ಬದುಕಿನ ಅಂತ್ಯದಲ್ಲಿ ಶಾಂತಿ, ನೆಮ್ಮದಿಯ ದಿನಗಳನ್ನು ಕಳೆದಿದ್ದಾರೆ.
ಕರುಣಾಶ್ರಯವು ಭಾರತೀಯ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಶಾಖೆ ಮತ್ತು ಇಂದಿರಾನಗರದ ರೋಟರಿ ಕ್ಲಬ್ಗಳ ಜಂಟಿ ಯೋಜನೆಯಿಂದ

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ರಾಮಸೇವಾ ಮಂಡಲಿ

ಕಳೆದ ೬೩ ವರ್ಷಗಳಿಂದ ಶಾಸ್ತ್ರೀಯ ಸಂಗೀತೋತ್ಸವವನ್ನು ನಿರಂತರವಾಗಿ ನಡೆಸುತ್ತ ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುತ್ತಿರುವ ಜನಪ್ರಿಯ ಸಂಸ್ಥೆ ಶ್ರೀ ರಾಮಸೇವಾ ಮಂಡಲಿ.

೧೯೩೯ನೆಯ ಇಸವಿಯಲ್ಲಿ ಶ್ರೀ ಎಸ್ ವಿ ನಾರಾಯಣಸ್ವಾಮಿರಾವ್ ಅವರಿಂದ ಸ್ಥಾಪಿತವಾಯಿತು. ಸ್ವಾತಂತ್ರ್ಯ ಪೂರ್ವ ದಶಕಗಳಲ್ಲಿ ಹಳೇ ಮೈಸೂರಿನ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರಮುಖವಾದುದು ರಾಮನವಮಿ, ಬೆಂಗಳೂರಿನ

ಚಾಮರಾಜಪೇಟೆ ಬಡಾವಣೆಯ ಹಾದಿ ಬದಿಯ ಒಂದು ಸಣ್ಣ ಚಪ್ಪರದಲ್ಲಿ ಜನ್ಮತಾಳಿದ ಶ್ರೀರಾಮಸೇವಾ ಮಂಡಲಿ ಇಂದು

ದೇಶಾದ್ಯಂತ ಸಂಗೀತ ವಿದ್ವಾಂಸರ, ಕೇಳುಗರ ಮೆಚ್ಚುಗೆಯನ್ನು, ಮನ್ನಣೆಯನ್ನು ಗಳಿಸಿಕೊಂಡಿದೆ. ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿರುವುದು ಮಂಡಲಿಗೆ ಸಂದ ಗೌರವ.

ಶ್ರೀರಾಮ ಸೇವಾ ಮಂಡಲಿಯಲ್ಲಿ ಸಂಗೀತ ಕಚೇರಿ ನೀಡಿದ ವೀಣೆ ದೊರೆಸ್ವಾಮಿ ಅಯ್ಯಂಗಾರ್, ಹೊನ್ನಪ್ಪ ಭಾಗವತರ್, ಎಂ ಎಸ್ ಸುಬ್ಬುಲಕ್ಷ್ಮಿ, ಪಂಡಿತ ಭೀಮಸೇನ ಜೋಷಿ, ಉಸ್ತಾದ್ ಬಡೇಗುಲಾಂ ಅಲಿಖಾನ್, ಉಸ್ತಾದ್ ಬಿಸ್ಮಿಲ್ಲಾಖಾನ್, ಪಂಡಿತ್ ರವಿಶಂಕರ್, ಕೆ ಜೆ ಏಸುದಾಸ್, ಶೀರ್‌ಕಾಳಿ ಗೋವಿಂದರಾಜನ್, ಮಹಾರಾಜಪುರಂ ಸಂತಾನಂ, ಚಿಟ್ಟಿಬಾಬು, ಅಮೆರಿಕಾದವರಾದ ಜಾನ್ ಬಿ ಹಿಗ್ಗಿನ್ಸ್ ಮೊದಲಾದ ಹಿರಿಯರ ಪರಂಪರೆಯೇ ಇದೆ.

ವರ್ಷದಿಂದ ವರ್ಷಕ್ಕೆ ಮಂಡಲಿಯ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ೧೫ ದಿನ ನಡೆಯುತ್ತಿದ್ದ ಸಂಗೀತ ಕಾಠ್ಯಕ್ರಮಗಳು ೬೩ ದಿನಗಳವರೆಗೂ ವಿಸ್ತಾರಗೊಂಡಿದೆ.

ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ – ಹೀಗೆ ಉಭಯಪ್ರಕಾರಗಳ ಕಲಾ ರಸದೌತಣ ಉಣಿಸುವುದು ಮಂಡಲಿಯ ವೈಶಿಷ್ಟ್ಯ.

ಆಧ್ಯಾತ್ಮಿಕತೆ ಮತ್ತು ಸಂಗೀತ ಎರಡೂ ಮೇಲೈಸಿದ ಒಂದು ವಿಶಿಷ್ಟವಾದ ವೇದಿಕೆ ಶ್ರೀ ರಾಮಸೇವಾ ಮಂಡಲಿ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ವಿಮೋಚನಾ ದೇವದಾಸಿ ಪುನರ್ವಸತಿ ಸಂಘ

ದೇವದಾಸಿಯರನ್ನು ಶೋಷಣೆಯ ಸಂಕೋಲೆಗಳಿಂದ ಕಳಚಿ, ಅವರಿಗೆ ಆರೋಗ್ಯಪೂರ್ಣ ಜೀವನ ಕಲ್ಪಿಸಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಾಮಾಜಿಕ ಪರಿವರ್ತನೆಯ ಸಾರ್ಥಕ ಕಾರ್ಯವನ್ನು ಮಾಡುತ್ತಿರುವ ವಿನೂತನ ಸಂಸ್ಥೆ ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಘ,

ಶತಶತಮಾನಗಳಿಂದ ಬೆಳೆದು ಬೇರೂರಿ ನಿಂತ ಸಮಾಜದ ಒಂದು ಅನಿಷ್ಟ ಪರಂಪರೆ ‘ದೇವದಾಸಿ’ ಪದ್ಧತಿ. ದೇವದಾಸಿ ಮುಗ್ಧ ಹೆಣ್ಣುಮಕ್ಕಳ ಮನವೊಲಿಸಿ, ವಿಶ್ವಾಸ ಗಳಿಸಿ ಅವರನ್ನು ಸನ್ಮಾರ್ಗಕ್ಕೆ ಹಚ್ಚುವ ಕಠಿಣ ಕಾರ್ಯವನ್ನು ಅನೇಕ ಅಡಚಣೆಗಳನ್ನು ಎದುರಿಸಿಯೂ ಸಂಘವು ಕಳೆದ ೧೬ ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದೆ.

‘ವಿಮೋಚನೆ ವಿಮೋಚನೆ’, ‘ಕತ್ತಲೆ ಕಳೆದ ಬೆಳಕು’, ‘ಮುಳ್ಳುದಾರಿಯಲ್ಲಿ ಬಿರಿದ ಹೂಗಳು’, ‘ಹರಕೆಯ ಹೆಣ್ಣು’, ‘ಮುತ್ತು ಕಟ್ಟಲಿಲ್ಲ ಮುತ್ತೈದೆಯಾದಳು’, ‘ಅವ್ವಾ ನಾ ದೇವದಾಸಿ ಆಗಾಕ ಒಲ್ಲೆ’ ಮೊದಲಾದ ೪೧ ಪ್ರಕಟಣೆಗಳನ್ನು ಹೊರ ತಂದ ಸಾಧನೆ ಇದರದು.

ಶಾಲಾ ಸಮುಚ್ಚಯ, ವಸತಿ ಸಮುಚ್ಚಯ, ಗ್ರಂಥಭಂಡಾರ, ಹಾಸ್ಟೆಲು, ಆಟದ ಮೈದಾನ, ಈಜುಕೊಳ, ಚಿಕಿತ್ಸಾಲಯ, ಶುಶೂಷಾ ಶಿಕ್ಷಣಸಂಸ್ಥೆ, ಗೃಹಕೈಗಾರಿಕೆಗಾಗಿ ಶೆಡ್ಡುಗಳು, ಸಹಕಾರಿ-ಸಂಘ ಸ್ಥಾಪನೆ, ಜನತಾ ಬಜಾರ್ ವ್ಯವಸ್ಥೆ ಮೊದಲಾದ ಯೋಜನೆಗಳ ಜೊತೆಗೆ ಲೈಂಗಿಕ ಶಿಕ್ಷಣ, ಗುಡಿ ಕೈಗಾರಿಕೆ, ಹೈನುಗಾರಿಕೆ, ಬೆರಳಚ್ಚು ಮುದ್ರಣ, ತಿಳಿವಳಿಕೆ ಶಿಬಿರ, ವೈದ್ಯಕೀಯ ನೆರವು, ಊಟ, ವಸತಿ ಏರ್ಪಾಟು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಅಸಹಾಯಕ ಹೆಣ್ಣುಮಕ್ಕಳಿಗೆ

ಆಶಾಕಿರಣವಾಗಿದೆ.

ಕೀಳು ಪರಂಪರೆಯೊಂದಕ್ಕೆ ಬಲಿಯಾಗಿ, ದಾರುಣ ಬದುಕು ಸಾಗಿಸುತ್ತಿರುವ ಜನಾಂಗದ ಪುನರುತ್ಥಾನಕ್ಕಾಗಿ ರಚನಾತ್ಮಕ ಕಾರ್ಯ ಕೈಗೊಂಡಿರುವ ಹಲವು ಹೃದಯವಂತರ ಸಂಸ್ಥೆ ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘ’.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಕ್ಕ

‘ಅಕ್ಕ’ ಎಂದೇ ಪ್ರಸಿದ್ಧವಾಗಿರುವ  “ ಅಮೆರಿಕದ ಕನ್ನಡ ಕೂಟಗಳ ಆಗರ” (Association of Kannada Kootas of America) ವಿದೇಶದಲ್ಲಿ ಕನ್ನಡ ಸಂಸ್ಕೃತಿಯ ಪ್ರಸಾರಕ್ಕೆ ಕಂಕಣ ತೊಟ್ಟಿರುವ ಸಂಸ್ಥೆ.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶದ ಕನ್ನಡಿಗರು ಸಂಯುಕ್ತವಾಗಿ ೧೯೯೮ರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಆರಂಭಗೊಂಡ ಅನತಿ ಕಾಲದಲ್ಲೇ ಹಿರಿದನ್ನು ಸಾಧಿಸಿದ ಗರಿಮೆಯನ್ನು ತನ್ನದಾಗಿಸಿಕೊಂಡಿದೆ. ೧೯೯೮ರಲ್ಲಿ ಫೀನಿಕ್ಸ್‌ ನಗರದಲ್ಲಿ ನಡೆದ ಕನ್ನಡಿಗರ ಸಮ್ಮೇಳನ ಹಾಗೂ ಅನಂತರ ಹೂಸ್ಟನ್‌ನಲ್ಲಿ ನಡೆದ ‘ವಿಶ್ವಸಹಸ್ರಮಾನ ಸಮ್ಮೇಳನಗಳು’ ಈ ಸಂಸ್ಥೆಯ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಹೊರರಾಷ್ಟ್ರದ ಕನ್ನಡಿಗರಿಗೆ ಹಾಗೂ ನೆರೆಹೊರೆಯ ಕನ್ನಡೇತರರಿಗೆ ಪರಿಚಯಿಸುವ ನಿಟ್ಟಿನಲ್ಲಿ, ಹಲವು ಅತ್ಯುತ್ತಮ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ದಾಖಲನೀಯ.

ಅಮೆರಿಕದ ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು ಒಂದೆಡೆಗೆ ತಂದು ಸೂಕ್ತ ವೇದಿಕೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು; ಕರ್ನಾಟಕದ ಸಾಹಿತಿ ಕಲಾವಿದರನ್ನು ಗೌರವಿಸುವುದು, ಕರ್ನಾಟಕಕ್ಕೆ ಭೇಟಿ ನೀಡುವ ಅಮೆರಿಕದಲ್ಲಿರುವ ಕನ್ನಡಿಗರಿಗೆ ಸೂಕ್ತ ಅವಕಾಶ, ಸಲಹೆ ಹಾಗೂ ಮಾರ್ಗದರ್ಶನ ನೀಡುವುದು; ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯಕ್ಕೆ ಅನುವು ಮಾಡಿಕೊಡುವುದು ‘ಅಕ್ಕ’ ಸಂಸ್ಥೆಯ ಹಿರಿಯಾಸೆಯಾಗಿದೆ. ಕರ್ನಾಟಕದ ಗುಡ್ಡಗಾಡುಗಳಲ್ಲಿ ವಾಸವಾಗಿರುವ ಕನ್ನಡಿಗರ ಅಭಿವೃದ್ಧಿಯ ಉದ್ದೇಶದಿಂದ ಅವರ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈ ಸಂಸ್ಥೆಯ ಸಾಮಾಜಿಕ ಕಳಕಳಿಗೆ ನಿದರ್ಶನವಾಗಿದೆ.

ಶ್ರೀ ಜಯಸ್ವಾಮಿ, ಶ್ರೀ ಕುಮಾರಸ್ವಾಮಿ, ಶ್ರೀ ಸೀತಾವಿ ರಾಮಯ್ಯ ಮುಂತಾದವರ ಆಸಕ್ತಿಯ ಫಲವಾದ ಅಕ್ಕ ಕನ್ನಡ ನಾಡಿನ ಭಾಷೆ ಹಾಗೂ ಸಂಸ್ಕೃತಿಯ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ, ಜವಾಬ್ದಾರಿಯುತ ಸಂಸ್ಥೆಯಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಮೃತ ಶಿಶು ನಿವಾಸ ಸಂಸ್ಥೆ

ಅನಾಥ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮಾನವೀಯ ಕಾರ್ಯದಲ್ಲಿ ತನ್ಮಯವಾಗಿರುವ ಸಂಸ್ಥೆ ಅಮೃತ ಶಿಶು ನಿವಾಸ, ಸೇವಾಕಾರ್ಯದಲ್ಲಿ ಅಮೃತಮಹೋತ್ಸವವನ್ನು ದಾಟಿ ಮುನ್ನುಗ್ಗುತ್ತಿರುವ ದಯಾಕೇಂದ್ರ, ಬೆಂಗಳೂರಿನ ಬಸವನಗುಡಿಯ ಹೆಗ್ಗುರುತು ಅಮೃತ ಶಿಶು ನಿವಾಸ, ಅನಾಥ ಮಕ್ಕಳ ಲಾಲನೆ ಪಾಲನೆಗೆಂದೇ ೧೯೪೨ರಲ್ಲಿ ಸ್ಥಾಪಿತವಾದ ಸೇವಾಸಂಸ್ಥೆ (೧೯೪೫ರಲ್ಲಿ ಸೊಸೈಟಿಯಾಗಿ ನೋಂದಾಯಿಸ್ಪಟ್ಟಿದೆ. ಪಾರಸ್ಕಲ್ ಪಟೇಲ, ಸುಶೀಲಾ ಚಿಂತೋಪಂತ್‌, ಡಾ. ಶಂಕರಾಂಬಾಟ್ ಸಂಸ್ಥೆಯ ಸಂಸ್ಥಾಪಕರು. ಗಂಜಾಂ ಭೀಮಾಜ ಮತ್ತು ಎಂ.ಸಿ.ಜಯದೇವ್‌ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಪುಣ್ಯಾತ್ಮರು. ಸಮಾಜದಲ್ಲಿ ತ್ಯಜಿಸಲ್ಪಟ್ಟ ಹಾಗೂ ಅದೃಷ್ಟಹೀನ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವು ನೀಡುವುದು ಸಂಸ್ಥೆಯ ಮೂಲಗುರಿ. ಸಂಸ್ಥೆಯ ಸೇವಾಸತ್ಕಾರ್ಯವನ್ನು ೧೯೫೭ದಲ್ಲಿ ಅಂದಿನ ಮೈಸೂರು ಸರ್ಕಾರ ಬಸವನಗುಡಿಯಲ್ಲಿ ೨೫ ಗುಂಟೆ ಜಾಗವನ್ನು ನೀಡಿದ್ದು ವಿಶೇಷ. ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಸ್ಟೀಸ್ ಜುವೆನೈಲ್ ಆಕ್ಟ್ ಮೂಲಕ ಮಕ್ಕಳ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು ನೂರಾರು ಮಕ್ಕಳ ಬಾಳು ಬೆಳಗಿದೆ. ಪ್ರಸ್ತುತ ಶಿಶು ನಿವಾಸದಲ್ಲಿ ೫೦ ಮಕ್ಕಳು ಪಾಲನೆಯಲ್ಲಿದ್ದಾರೆ. ೧೮ ವರ್ಷದ ಬಳಿಕ ಮಕ್ಕಳಿಗೆ ಸ್ವಾವಲಂಬಿಗಳಾಗಲು ಕೌಶಲ್ಯ ತರಬೇತಿಯನ್ನೂ ನೀಡುತ್ತಿರುವ ಸಂಸ್ಥೆ ಬೆಂಗಳೂರಿನ ದೊಡ್ಡಮಾವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಬಾಲಕಿಯರ ವಸತಿ ನಿಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಅಮೃತಮಹೋತ್ಸವ ದಾಟಿ ೮೦ನೇ ವಸಂತಕ್ಕೆ ಕಾಲಿಟ್ಟಿರುವ ಈ ಮಕ್ಕಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದು ಸೇವೆಯ ಅನಂತ ರೂಪಕ್ಕೆ ಸಾಕ್ಷಿಯಾಗಿದೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅಗಡಿ ತೋಟ ಸಂಸ್ಥೆ

ಹಾವೇರಿ ಜಿಲ್ಲೆಯಲ್ಲಿ ನೆಲೆನಿಂತಿರುವ ಅಗಡಿ ತೋಟ ಸಾವಯವ ಕೃಷಿ ಪದ್ಧತಿ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ. ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ, ಹಾವೇರಿ ಜಿಲ್ಲೆ ಕುನ್ನೂರು ಗ್ರಾಮದ ಹಚ್ಚಹಸಿರಿನ ಪರಿಸರದಲ್ಲಿರುವ ಅಗಡಿ ತೋಟವನ್ನು ಜಯದೇವ್‌ ಅಗಡಿ ಅವರು ೨೦೦೦ರಲ್ಲಿ ಸ್ಥಾಪಿಸಿದರು. ಸಾವಯವ ಕೃಷಿಯನ್ನು ಉತ್ತೇಜಿಸುವುದು, ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ನೈಸರ್ಗಿಕ ಸಾವಯವ ಆಹಾರ ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದು ಸಂಸ್ಥೆಯ ಪ್ರಮುಖ ಧ್ಯೇಯ. ಗೋಡಂಬಿ ಮತ್ತು ಅಡಿಕೆ ಕೃಷಿಯೊಂದಿಗೆ ನಲವತ್ತು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ‘ಅಗಡಿತೋಟ’ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಸಾವಯವ ಆರೋಗ್ಯವಾಗಿರಿ ಎಂಬ ಮಂತ್ರವನ್ನು ಪಠಿಸುತ್ತಲಿದೆ. ಹಳ್ಳಿ, ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಜೀವನಶೈಲಿಯನ್ನು ಸ್ವಂತವಾಗಿ ಅನುಭವಿಸಲು ಶಿಕ್ಷಣ ನೀಡುತ್ತಲೇ ಅಳಿವಿನಂಚಿನಲ್ಲಿರುವ ೧೦೦೦ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳನ್ನು ತೋಟದಲ್ಲಿ ನೆಡಲಾಗಿದೆ. ಮೆಕ್ಕೆಜೋಳ, ಸೋಯಾಬಿನ್ ಮತ್ತು ಭತ್ತದ ಕೃಷಿಯ ಹೊರತಾಗಿ ಬದನೆ, ಟೊಮೊಟೊ, ಬೀನ್ಸ್ ಮತ್ತು ಕೊತ್ತಂಬರಿಯನ್ನೂ ಬೆಳೆಯಲಾಗುತ್ತಿದೆ. ತೋಟದಲ್ಲಿ ಪರಿಸರ ಹಾನಿ ಮಾಡುವ ಸರ್ವ ಚಟುವಟಿಕೆಗಳನ್ನೂ ನಿಷೇಧಿಸಲಾಗಿದ್ದು ಇದೊಂದು ಮಾದರಿ ಸಾವಯವ ಕೃಷಿ ತೋಟವಾಗಿ ಗಮನ ಸೆಳೆದಿದೆ. ತೋಟದ ಸಂಸ್ಥಾಪಕ ಜಯದೇವ್‌ ಅಗಡಿ ಅವರು ಕೃಷಿಪಂಡಿತ್‌, ಕೃಷಿರತ್ನ ಮುಂತಾದ ಪ್ರಶಸ್ತಿಗಳಿಂದ ಭೂಷಿತರಾಗಿದ್ದಾರೆ.