Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕರುಣಾಶ್ರಯ

ಕ್ಯಾನ್ಸರ್ ರೋಗಿಗಳಿಗೆ ರೋಗ ಉಲ್ಬಣ ಹಂತವನ್ನು ಮುಟ್ಟಿದಾಗ ಅವರನ್ನು ನೋಡಿಕೊಳ್ಳಲೆಂದೇ ೧೯೯೯ರಲ್ಲಿ ರೂಪಿತವಾದ ಸಂಸ್ಥೆ ‘ಕರುಣಾಶ್ರಯ’.
ಕ್ಯಾನ್ಸರ್ ರೋಗಿಗಳ ಅಂತಿಮ ಕ್ಷಣಗಳಲ್ಲಿ ಪ್ರೀತಿಯ ಆರೈಕೆ, ಸಂತೈಕೆಗಳು ಅಗತ್ಯ. ಇದನ್ನು ಕರುಣಾಶ್ರಯ ಸಂಸ್ಥೆಯು ಜಾತಿ, ಮತ, ಲಿಂಗ ಮತ್ತು ಆರ್ಥಿಕ ಸ್ಥಾನಮಾನವನ್ನು ಲಕ್ಷಿಸದೆ, ಪೂರ್ಣವಾಗಿ ಉಚಿತವಾಗಿ ನೋಡಿಕೊಳ್ಳುತ್ತದೆ. ಮಧ್ಯಮವರ್ಗದವರ ಪಾಲಿಗೆ ವರದಾನವಾಗಿರುವ ಆಶ್ರಯ ತಾಣ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಂದಲ್ಲದೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮುಂತಾದ ದೂರದ ಪ್ರದೇಶಗಳಿಂದಲೂ ರೋಗಿಗಳು ‘ಕರುಣಾಶ್ರಯ ಕ್ಕೆ ಬರುತ್ತಾರೆ.
ಕರುಣಾಶ್ರಯ ಸಂಸ್ಥೆ ರೋಗಿಗಳಲ್ಲದೆ, ರೋಗಿಯ ಅಂತಿಮ ಕ್ಷಣಗಳಲ್ಲಿ ಕುಟುಂಬ ವರ್ಗದವರಿಗೂ ಸಾಂತ್ವನ ನೀಡುತ್ತದೆ. ಶಾಂತಿ ಮತ್ತು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವ ಕರುಣಾಶ್ರಯ ಸಂಸ್ಥೆಯಲ್ಲಿ ೫೦ ಒಳರೋಗಿಗಳನ್ನು ಹೊಂದುವ ಸೌಕರ್ಯವಿದೆ.
ಸಂಸ್ಥೆಯು ೩೮೦೦ಕ್ಕೂ ಹೆಚ್ಚು ಸಂಖ್ಯೆಯ ರೋಗಿಗಳನ್ನು ನೋಡಿಕೊಂಡಿದೆ. ಅದರಲ್ಲಿ ೨೭೦೦ ತಮ್ಮ ಬದುಕಿನ ಅಂತ್ಯದಲ್ಲಿ ಶಾಂತಿ, ನೆಮ್ಮದಿಯ ದಿನಗಳನ್ನು ಕಳೆದಿದ್ದಾರೆ.
ಕರುಣಾಶ್ರಯವು ಭಾರತೀಯ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಶಾಖೆ ಮತ್ತು ಇಂದಿರಾನಗರದ ರೋಟರಿ ಕ್ಲಬ್ಗಳ ಜಂಟಿ ಯೋಜನೆಯಿಂದ