Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸುಮಿತ್ರಮ್ಮ ಕುಂದಾಪುರ

ಗುಬ್ಬಿ ಕಂಪನಿಯಿಂದ ಅರಳಿದ ಕಲಾ ಕುಸುಮಗಳಲ್ಲಿ ಒಬ್ಬರಾಗಿ ಐದಾರು ದಶಕಗಳಿಂದ ಅಭಿನಯ ಕಾಯಕದಲ್ಲಿರುವ ಹಿರಿಯ ಜೀವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು.
ಗುಬ್ಬಿ ಕಂಪನಿಯ ಕುರುಕ್ಷೇತ್ರ ನಾಟಕದಲ್ಲಿ ರುಕ್ಕಿಣಿ ಪಾತ್ರ ವಹಿಸಿದಾಗ ಸುಮಿತ್ರಮ್ಮ ಅವರ ವಯಸ್ಸು ೧೪, ಶೇಷಾಚಾರ್ಯರ ಕಂಪನಿ, ಗುಡಿಗೇರಿ ಕಂಪನಿ, ಗೋಕಾಕ್ ನಾಟಕ ಕಂಪನಿ, ಕೆ.ಬಿ.ಆರ್.
ಡ್ರಾಮ ಕಂಪನಿಗಳಲ್ಲಿ ಅಭಿನಯಿಸಿದ ಸುಮಿತ್ರಮ್ಮನವರು ಶ್ರೀ ವಿಜಯಮಾಲಾ ನಾಟ್ಯ ಸಂಘ ಕುಂದಾಪುರ ಎಂಬ ಸ್ವಂತ ಕಂಪನಿಯನ್ನು ೮ ವರ್ಷ ನಡೆಸಿದವರು.
ಡಾ. ರಾಜ್‌ಕುಮಾರ್ ಅವರೊಂದಿಗೆ ನಾಟಕಗಳಲ್ಲಿ ಪಾತ್ರವಹಿಸಿರುವ ಸುಮಿತ್ರಮ್ಮ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳಲ್ಲಿ ರಕ್ತ ರಾತ್ರಿ, ಸಂಸಾರ ನೌಕೆ, ಪ್ರೇಮಲೀಲಾ ಕುರುಕ್ಷೇತ್ರ ಪ್ರಮುಖವಾದವು. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು ೭೫ರ ಇಳಿವಯಸ್ಸಿನಲ್ಲೂ ರಂಗದ ಮೇಲೆ ಕ್ರಿಯಾಶೀಲೆ.