Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಸಿ. ವಿ. ಕೇಶವಮೂರ್ತಿ

‘ಭಾರತೀಯ ಸಂವಿಧಾನದ ತಿದ್ದುಪಡಿಯ ಸಾಮರ್ಥ್ಯ ಮತ್ತು ಶಕ್ತಿಗಳ ಮೂಲ ಸ್ವರೂಪದ ಸಿದ್ಧಾಂತ’ ಪುಸ್ತಕದ ಲೇಖಕರಾದ ಶ್ರೀ ಸಿ. ವಿ. ಕೇಶವಮೂರ್ತಿಯವರು ಹಿರಿಯ ವಕೀಲರು. ಮೈಸೂರಿನವರಾದ ಇವರು ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು,ಕಾರ್ಯದರ್ಶಿಗಳು, ಮೇಲ್ವಿಚಾರಕರು, ಕಾನೂನು ಸಲಹೆಗಾರರು ಹಾಗೂ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಸ್ಥಾನವೊಂದರ ಧರ್ಮದರ್ಶಿಯೂ ಆಗಿದ್ದಾರೆ.